• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉಪೇಂದ್ರ ಕಟ್ಟುವ ಹೊಸ ಪಕ್ಷ ಯಾವುದು?

TNN Correspondent Posted On August 12, 2017
0


0
Shares
  • Share On Facebook
  • Tweet It

ನಟ, ನಿರ್ಧೇಶಕ ಉಪೇಂದ್ರ ಭಾರತೀಯ ಜನತಾ ಪಾರ್ಟಿ ಸೇರುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇವತ್ತು ತಮ್ಮ ಖಾಸಗಿ ರೆಸಾರ್ಟ್ ಉಪ್ಪೀಸ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಬಿಜೆಪಿ ಸೇರುವ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಾರೆ ಉಪೇಂದ್ರ ಎಂದು ಕೆಲವು ಮಾಧ್ಯಮಗಳಲ್ಲಿ ಗಾಸಿಪ್ ಹರಡಿತ್ತು. ಅದಕ್ಕೆ ಸರಿಯಾಗಿ ಉಪೇಂದ್ರ ಇವತ್ತೆ ಸುದ್ದಿಗೋಷ್ಟಿ ಕೂಡ ಕರೆದಿದ್ದರು.

ತಾನು ರಾಜಕೀಯ ಎಂಟ್ರಿ ಮಾಡುತ್ತೇನೆ ಎಂದು ಹೇಳಿದ್ದು ನಿಜ, ಆದರೆ ತನ್ನ ರಾಜಕೀಯ ಪಕ್ಷದ ನಿರ್ಧಾರವಾಗಿಲ್ಲ. ತಾನು ಹೊಸ ಕಲ್ಪನೆಯಡಿ ಪ್ರಜಾನೀತಿ ಮಾಡಲು ಉದ್ದೇಶಿಸಿದ್ದು ಅದರ ಪ್ರಕಾರ ಮುನ್ನಡೆಯುವುದಾಗಿ ಅವರು ಹೇಳಿದ್ದಾರೆ. ನಮಗೆ ಬೇಕಾಗಿರುವುದು ಜನನಾಯಕರಲ್ಲ, ಹಾಗೇ ಜನಸೇವಕರೂ ಅಲ್ಲ, ನಮಗೆ ಬೇಕಾಗಿರುವುದು ಕಾರ್ಮಿಕರು. ತಾನು ಈ ವರ್ತಮಾನದಲ್ಲಿ ಬದುಕುವವನು, ನಾಳೆಯ ವಿಷಯ ಗೊತ್ತಿಲ್ಲ. ಹೊಸ ಹೊಸ ಐಡಿಯಾ ಇರುವ ಜನರು ನನ್ನೊಂದಿಗೆ ಬರಬೇಕು ಎಂದು ಅವರು ಹೇಳಿದ್ದಾರೆ. ಪೊಲಿಟಿಕಲ್ ಐಡಿಯಾ ಹೇಗಿರಬೇಕು ಎನ್ನುವುದನ್ನು ಜನ ಇಮೇಲ್ ಮೂಲಕ ತಿಳಿಸಬಹುದು ಎಂದು ಉಪೇಂದ್ರ ಮೂರು ಇಮೇಲ್ ಐಡಿಯಾಗಳನ್ನು ಕೊಟ್ಟಿದ್ದಾರೆ.

ಹೊಸಪಕ್ಷ ಕಟ್ಟುತ್ತೀರಾ ಎನ್ನುವ ಪ್ರಶ್ನೆಗೆ ಅದಕ್ಕೆ ನಿಮ್ಮ ಸಲಹೆ ಬೇಕು ಎಂದು ಹೇಳಿದ ಉಪೇಂದ್ರ, ಈಗ ಪಕ್ಷ ಕಟ್ಟಿ ನಂತರ ಅಧಿಕಾರಕ್ಕೆ ಬಂದ ಪಕ್ಷದೊಂದಿಗೆ ವಿಲೀನ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಅದು ಈಗಲೇ ಹೇಳಲು ಹೇಗೆ ಸಾಧ್ಯ ಎಂದು ನಟ ಅಭಿಪ್ರಾಯ ಪಟ್ಟಿದ್ದಾರೆ.
ತಾನು ಎಲ್ಲರ ಅಭಿಪ್ರಾಯ ಪಡೆದು ಮುನ್ನಡೆಯುತ್ತೇನೆ ಎಂದು ಹೇಳಿದ ಉಪೇಂದ್ರ, ಪಾರದಶ್ಯಕವಾಗಿ ನಡೆಯುವ ಮೂವ್ ಮೆಂಟ್ ಬೇಕು ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾರಾಪತ್ನಿ ಪ್ರಿಯಾಂಕ ಅವರು ಬಹಳ ವರ್ಸದಿಂದ ಅವರು ಕನಸು ಕಟ್ಟಿಕೊಂಡಿದ್ದರು, ಅದು ಈಗ ಜಾರಿಗೆ ಬರುತ್ತಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಶೈಲಿಯಲ್ಲಿ ಉಪೇಂದ್ರ ಪಕ್ಷ ಕಟ್ಟುತ್ತಾರಾ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಉಪೇಂದ್ರ ಸುದ್ದಿಗೋಷ್ಟಿಯ ನಡುವೆ ಅಮಿತಾ ಶಾ ಬೆಂಗಳೂರು ಭೇಟಿಯ ಸುದ್ದಿ ಕನ್ನಡ ವಾಹಿನಿಯಲ್ಲಿ ಸೈಡ್ ಲೈನ್ ಆಗಿದೆ

0
Shares
  • Share On Facebook
  • Tweet It




Trending Now
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
Tulunadu News October 21, 2025
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
  • Popular Posts

    • 1
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search