• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇನ್ನು ಸೈಡ್ ಮೀರರ್ ಇಲ್ಲದಿದ್ದರೆ 500 ರೂ ದಂಡ!!

Hanumantha Kamath Posted On April 13, 2021


  • Share On Facebook
  • Tweet It

ನಮ್ಮ ಎಲ್ಲಾ ಜಾಗೃತ ಅಂಕಣದ ಹಿತೈಷಿಗಳಿಗೆ ಹೊಸ ವರುಷ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರುಷ ಎಂದ ಕೂಡಲೇ ಹೊಸ ನಿಯಮಗಳು ಬರಲು ಶುರುವಾಗುತ್ತಿದೆ. ಅದರಲ್ಲಿ ಈಗ ಬರುತ್ತಿರುವ ನಿಯಮದ ಬಗ್ಗೆ ಬೈಕ್ ಸವಾರರು ಶಾಕ್ ಅನುಭವಿಸಿದ್ದಾರೆ. ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಆಗಾಗ ಸರಕಾರದಿಂದ ಬೇರೆ ಬೇರೆ ನಿಯಮಗಳು ಜಾರಿಗೆ ಬರುತ್ತಲೇ ಇರುತ್ತವೆ. ಈಗ ಬಂದಿರುವ ಹೊಸ ನಿಯಮ ಏನೆಂದರೆ ದ್ವಿಚಕ್ರ ವಾಹನಗಳಿಗೆ ಸೈಡ್ ಮೀರರ್ ಇಲ್ಲದಿದ್ದರೆ ಅಂತವರಿಗೆ ಐನೂರು ರೂಪಾಯಿ ದಂಡ ಎನ್ನುವಂತಹ ಆದೇಶ ಜಾರಿಗೆ ಬಂದಂತಿದೆ. ನಾನು ಟ್ರಾಫಿಕ್ ರೂಲ್ಸ್ ಆಗಲಿ, ರೋಡ್ ರೂಲ್ಸ್ ಆಗಲಿ ಮಾಡುವುದಕ್ಕೆ ವಿರೋಧ ಇಲ್ಲ. ಆದರೆ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಮಾತ್ರ ಕಾನೂನು ನಿಯಮಗಳು ಅದೇ ವಾಹನ ಸವಾರರು ಬಳಸುವ ರಸ್ತೆಗಳಿಗೆ ಯಾಕೆ ಇರುವುದಿಲ್ಲ. ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ನಿಂತು ವಾಹನ ಸವಾರರನ್ನು ಅಡ್ಡ ಹಾಕಿ ಹೆಲ್ಮೆಟ್ ಹಾಕಿದ್ದಾರಾ, ತ್ರಿಬಲ್ ರೈಡ್ ಹೋಗುತ್ತಾರಾ, ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದಾರಾ, ಓನ್ ವೇಯಲ್ಲಿ ಹೋಗುತ್ತಿದ್ದಾರಾ, ಅದು ಇದೆಯಾ, ಇದು ಇದೆಯಾ ಎಂದು ಚೆಕ್ ಮಾಡಿ ಫೈನ್ ಹಾಕುತ್ತಾರೆ. ಅದು ಓಕೆ. ತಪ್ಪು ಮಾಡಿದವರು ದಂಡ ಕಟ್ಟಲಿ. ಆದರೆ ತಪ್ಪು ಒಂದೇ ಕಡೆಯಿಂದ ಮಾತ್ರ ಆಗುತ್ತಿದೆ ಎಂದು ಯಾಕೆ ಸರಕಾರ ತೀರ್ಮಾನಿಸುತ್ತದೆ. ಮೊದಲನೇಯದಾಗಿ ಎಷ್ಟೋ ರಸ್ತೆಗಳು ಸರಿ ಇರುವುದಿಲ್ಲ. ಎರಡನೇಯದಾಗಿ ಇರುವ ರಸ್ತೆಗಳಲ್ಲಿ ಹಂಪ್ ಎಲ್ಲಿ ಇದೆ ಎಂದು ಹತ್ತಿರ ಬರುವ ತನಕ ಗೊತ್ತಾಗುವುದಿಲ್ಲ. ಇನ್ನು ಕೆಲವು ಹಂಪ್ಸ್ ಬೆಕ್ಕು ಅರ್ಧ ತಿಂದು ಬಿಟ್ಟ ಬ್ರೆಡಿನಂತೆ ಇರುತ್ತದೆ. ಅದರಲ್ಲಿಯೇ ವಾಹನ ಚಲಾಯಿಸುತ್ತವೆ. ಇನ್ನು ಕೆಲವೆಡೆ ರಾತ್ರಿ ಸಂಚರಿಸುವಾಗ ಹಂಪ್ಸ್ ಗಳು ದೂರದಿಂದಲೇ ಗೊತ್ತಾಗಲು ಅಲ್ಲಿ ನೆಲ ಲೈಟುಗಳನ್ನು ಅಳವಡಿಸಿರುವುದಿಲ್ಲ. ಎಷ್ಟೋ ರಸ್ತೆಗಳ ಹಂಪ್ಸ್ ಗಳಿಗೆ ಜೀಬ್ರಾ ಕ್ರಾಸ್ ಗಳನ್ನೇ ಅಳವಡಿಸಿರುವುದಿಲ್ಲ. ಇಷ್ಟೆಲ್ಲಾ ನ್ಯೂನತೆಗಳನ್ನು ಸರಿ ಮಾಡದೇ ಸೈಡ್ ಮಿರರ್ ಇಲ್ಲ ಎನ್ನುವ ಕಾರಣಕ್ಕೆ ಇನ್ನು ಮುಂದೆ 500 ರೂಪಾಯಿ ದಂಡ ಬೇರೆ. ನಾಗರಿಕರಿಗೆ ಅತ್ಯುತ್ತಮ ರಸ್ತೆ ಕೊಡುವುದು ಸರಕಾರದ ಕರ್ತವ್ಯ. ಯಾಕೆಂದರೆ ವಾಹನ ಖರೀದಿಸುವಾಗಲೇ ರೋಡ್ ಟ್ಯಾಕ್ಸ್ ನಂತರ ಕಾರು ಸಹಿತ ಚತುಷ್ಪಥ ವಾಹನಗಳು ಹೋಗುವಾಗ ಟೋಲ್ ಫೀಸ್ ಸಹಿತ ವಿವಿಧ ರೀತಿಯಲ್ಲಿ ಹಣವನ್ನು ಕಟ್ಟಲೇಬೇಕಾಗುತ್ತದೆ. ಆದರೆ ಎಲ್ಲಿ ಜನಸಾಮಾನ್ಯರು ಅಗತ್ಯವಾಗಿ ಬಳಸುವ ರಸ್ತೆಗಳಲ್ಲಿ ಹೊಂಡ ಏನು ಸಮಸ್ಯೆ ಇದ್ದರೂ ಅದನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಕೇಳುವವರಿಲ್ಲ. ಅವರಿಗೆ ಯಾವುದೇ ಫೈನ್ ಇಲ್ಲ. ಅವರು ತಮ್ಮ ತಪ್ಪಿಗೆ ಹೊಣೆಗಾರರಲ್ಲ. ಅವರು ಜನರ ತೆರಿಗೆಯ ಹಣವನ್ನು ಕಳಪೆ ಕಾಮಗಾರಿ ಮಾಡುವ ಮೂಲಕ ಹಾಳು ಮಾಡಿದರೂ ಅವರನ್ನು ಕೇಳುವವರಿಲ್ಲ. ಅವರು ಕೆಲಸ ಮಾಡಿದರು, ಕಳಪೆ ಮಾಡಿದರು, ಮತ್ತೆ ಆ ಕಳಪೆ ಕಾಮಗಾರಿ ಸರಿ ಮಾಡಲು ನಮ್ಮದೇ ತೆರಿಗೆಯ ಹಣ ಪೋಲು.
ಇನ್ನು ಪಾರ್ಕಿಂಗ್ ನಲ್ಲಿ ಅನಧಿಕೃತ ನಿರ್ಮಾಣಗಳನ್ನು ಮಾಡಿ ಒಬ್ಬ ಲಕ್ಷಾಂತರ ರೂಪಾಯಿ ಹಣ ಗುಳುಂ ಮಾಡುತ್ತಾ ಇದ್ದರೂ ಅವನನ್ನು ಕೇಳುವವರೇ ಇಲ್ಲ. ಅಂತಹ ಕಟ್ಟಡದ ಪಕ್ಕದಿಂದ ಸ್ಥಳೀಯಾಡಳಿತದ ಅಧಿಕಾರಿಗಳು ನಿತ್ಯ ಹೋಗಿ ಬರುತ್ತಿದ್ದರೂ ಅವರ ಕಣ್ಣ ಎದುರಿಗೆ ಆ ಕಟ್ಟಡ ಎದ್ದು ನಿಂತಿದ್ದರೂ ಯಾರೂ ಕೇಳುವುದಿಲ್ಲ. ಬೇಕಾದರೆ ಅಲ್ಲಿಯೇ ನಿಂತು ಅಧಿಕಾರಿಗಳು ಮಾಸ್ಕ್ ಹಾಕದವರಿಂದ ಫೈನ್ ವಸೂಲಿ ಮಾಡುತ್ತಾರೆ. ಅವರು ನಿಂತ ಜಾಗದ ಹಿಂದೆ ಇರುವ ಕಟ್ಟಡವೇ ಅಕ್ರಮ. ಹಾಗಂತ ಅದರ ಮಾಲೀಕರಿಗೆ ಏನೂ ದಂಡ ಇಲ್ಲ. ಇದು ನಮ್ಮ ವ್ಯವಸ್ಥೆ. ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಲು ಇಂತಹುದೇ ಕಟ್ಟಡಗಳಲ್ಲಿ ಸರಿಯಾದ ಪಾರ್ಕಿಂಗ್ ಇಲ್ಲದೆ ಗ್ರಾಹಕರು ರಸ್ತೆಗಳ ಪಕ್ಕದಲ್ಲಿ ವಾಹನಗಳನ್ನು ಬಿಟ್ಟು ಹೋಗಿರುವುದೇ ಕಾರಣವಾಗಿರುತ್ತದೆ. ಆದರೂ ಅವರಿಗೆ ಫೈನ್ ಇಲ್ಲ. ಇನ್ನು ಪಾರ್ಕಿಂಗ್ ಇಲ್ಲದ ಕಾರಣದಿಂದ ಬಡಪಾಯಿ ದ್ವಿಚಕ್ರ ಸವಾರ ತನ್ನ ಬೈಕನ್ನು ಅಲ್ಲಿಯೇ ಹೊರಗೆ ಬಿಟ್ಟು ಈಗ ಬರುತ್ತೇನೆ ಎಂದು ಒಳಗೆ ಹೋದವನು ಬರುವಷ್ಟರಲ್ಲಿ ಅವರ ಬೈಕ್ ಟೋ ಆಗಿರುತ್ತದೆ. ಅವನು ಟೋನವರನ್ನು ಶಪಿಸುತ್ತಾನೆ. ಯಾಕೆಂದರೆ ತನ್ನದಲ್ಲದ ತಪ್ಪಿಗೆ ಬೈಕ್ ಸವಾರ ಸಾವಿರ ರೂಪಾಯಿ ದಂಡ ಕಟ್ಟಿ ವಾಹನವನ್ನು ಬಿಡಿಸಿ ತರುವಾಗ ಅರ್ಧ ದಿನ ಕಳೆದಿರುತ್ತದೆ. ಅವನ ಹಣವೂ ವ್ಯರ್ಥ. ಶ್ರಮವೂ ವ್ಯರ್ಥ. ತಪ್ಪು ಅವನದ್ದಲ್ಲವೇ ಅಲ್ಲ. ಪಾರ್ಕಿಂಗ್ ಇದ್ದಲ್ಲಿ ಅವನು ಯಾಕೆ ಫುಟ್ ಫಾತ್ ಮೇಲೆ ನಿಲ್ಲಿಸುತ್ತಿದ್ದ. ಇಲ್ಲಿ ಅಮಾಯಕ ಬೈಕ್ ಸವಾರನಿಗೆ ದಂಡ. ಅದಕ್ಕೆ ಕಾರಣನಾದ ಆ ಅನಧಿಕೃತ ಕಟ್ಟಡದ ಮಾಲೀಕನಿಗೆ ಏನೂ ಇಲ್ಲ. ಇನ್ನು ಕಾರಿನವರನ್ನು ಟೋನವರು ಕೈ ಹಾಕುವುದೇ ಅಪರೂಪ. ಯಾಕೆಂದರೆ ಕಾರು ಟೋ ಮಾಡುವುದು ಅಷ್ಟು ಲಾಭದಾಯಕ ಅಲ್ಲ. ಒಂದು ವೇಳೆ ಟೋ ಮಾಡುವಾಗ ಹೆಚ್ಚು ಕಡಿಮೆ ಅದರ ಜವಾಬ್ದಾರಿ ಟೋ ಗುತ್ತಿಗೆದಾರರೇ ನೋಡಿಕೊಳ್ಳಬೇಕು. ಅದಕ್ಕೆ ಕಾರಿನವರು ಒಂದಿಷ್ಟು ಸೇಫ್. ಇಲ್ಲಿ ಒಂದು ಕಾರು ಅಡ್ಡಾದಿಡ್ಡಿ ಇಟ್ಟರೆ ಅದು ನಾಲ್ಕು ಬೈಕ್ ಗಳ ಜಾಗವನ್ನು ತಿಂದು ಹಾಕುತ್ತದೆ. ಅದು ಯಾರಿಗೂ ಬೇಡಾ. ಇವರು ಸೈಡ್ ಮಿರರ್ ಇಲ್ಲದ ಬೈಕ್ ಅನ್ನು ಹುಡುಕುತ್ತಾ ಇರುತ್ತಾರೆ. ಐನೂರು ರೂಪಾಯಿ ಫೈನ್ ಹಾಕಲು!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search