• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಡಿಕೆಶಿ ಮುಂದಿನ ಸಿಎಂ ಎಂದು ಹೇಳುವ ಗಂಡ್ಸು ಕಾಂಗ್ರೆಸ್ಸಿನಲ್ಲಿಲ್ಲ, ಯಾಕೆಂದರೆ!!

Hanumantha Kamath Posted On June 24, 2021
0


0
Shares
  • Share On Facebook
  • Tweet It

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಯ ಎರಡು ವರ್ಷ ಮೊದಲೇ ತಮ್ಮ ಸಿಎಂ ಅಭ್ಯರ್ಥಿ ಯಾರು ಎಂದು ಪ್ರಚಾರಪಡಿಸುವ ಸಂಪ್ರದಾಯ ಹಿಂದಿನಿಂದಲೂ ಇಲ್ಲ. ಅಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಶಾಸಕಾಂಗ ಸಭೆ ನಡೆಯುವಾಗಲೇ ದೆಹಲಿಯಿಂದ ಬರುವ ದೂತನೊಬ್ಬ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಅಲ್ಲಿ ಮುಚ್ಚಿದ ಕವರ್ ಪಕ್ಷದ ಅಧ್ಯಕ್ಷರ ಕೈಯಲ್ಲಿ ಕೊಟ್ಟು ಹೋಗಿಬಿಡುವುದು ವಾಡಿಕೆ. ಆ ಕವರ್ ಒಳಗೆ ಯಾರ ಹೆಸರು ಬರೆದಿರುತ್ತದೆಯೋ ಅವರೇ ಸಿಎಂ. ಕೆಲವು ರಾಜ್ಯಗಳಲ್ಲಿ ದೆಹಲಿಯಿಂದ ಕವರ್ ಬರುವುದು ತಡವಾಗಿ ಶಾಸಕಾಂಗ ಸಭೆಯಲ್ಲಿ ಶಾಸಕರು ಕಾದು ಕುಳಿತುಕೊಂಡದ್ದು ಇದೆ. ಆದ್ದರಿಂದ ಆ ಪಕ್ಷದ ಕವರ್ ಸಂಸ್ಕೃತಿ ಇಂದಿರಾ ಗಾಂಧಿಯ ಮಗ ಸಂಜಯ್ ಗಾಂಧಿಯಿಂದ ಹಿಡಿದು ಯುಪಿಎ ಎರಡನೇ ಅವಧಿಯ ಕಡೆಯ ತನಕ ಹಾಗೆ ನಡೆದುಕೊಂಡು ಬಂದಿತ್ತು.

ಆದರೆ ಯಾವಾಗ ಪಕ್ಷ ಬಹುತೇಕ ರಾಜ್ಯಗಳಲ್ಲಿ ವೆಂಟಿಲೇಟರ್ ನಲ್ಲಿರುವ ವೃದ್ಧನ ಲೆವೆಲ್ಲಿಗೆ ಬಂದುಬಿಟ್ಟಿತ್ತೋ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ತಮ್ಮದೇ ಬಲದ ಮೂಲಕ ತಂದ ನಾಯಕರು ಜಿಗಿತುಕೊಂಡು ಬಿಟ್ಟರು. ಇವತ್ತಿಗೂ ಪಂಜಾಬ್ ಎಂದರೆ ಅಮರೀಂದರ್ ಸಿಂಗ್ ಹೆಸರು ಮೊದಲು ಬರುತ್ತದೆ. ಆ ಬಳಿಕ ಕಾಂಗ್ರೆಸ್ ಚಿನ್ನೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಚುನಾವಣೆಗೆ 20 ತಿಂಗಳು ಇರುವಾಗಲೇ ಅರಸೊತ್ತಿಗೆಯ ಗಲಾಟೆ ಶುರುವಾಗಿದೆ. ಆ ಗಲಾಟೆಯಲ್ಲಿ ಜನಬಲ, ಧನಬಲ ಮತ್ತು ಜಾತಿಬಲ ಮೂರು ಕೂಡ ಇರುವ ಡಿಕೆಶಿವಕುಮಾರ್ ಏಕಾಏಕಿ ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂತಾಗಿದ್ದಾರೆ. ಒಂದೇ ಏಟಿಗೆ ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಿಸಬಲ್ಲ, ಕೋಟಿಕೋಟಿ ಖರ್ಚು ಮಾಡಿ ಕಾರ್ಯಕ್ರಮ ಮಾಡಬಲ್ಲ, ಜಾತಿಯಲ್ಲಿ ರಾಜ್ಯದ ಪ್ರಬಲ ಒಕ್ಕಲಿಗ ಜಾತಿಗೆ ಸೇರಿದ ಮೂಲ ಕಾಂಗ್ರೆಸ್ಸಿಗ ಡಿಕೆಶಿಯೇ ಮುಂದಿನ ಸಿಎಂ ಎಂದು ಹೇಳುವಂತಹ ಒಂದೇ ಒಂದು ಗಂಡ್ಸು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿಲ್ಲ. ಹೆಚ್ಚೆಂದರೆ ಡಿಕೆಶಿ ರಾಜ್ಯದಲ್ಲಿ ಪಕ್ಷದ ಸುಪ್ರೀಂ ಎಂದು ಪರಮೇಶ್ವರ್ ಮೆಲ್ಲನೆ ಹೇಳಿ ತಮ್ಮ ಹಳೆ ಸೋಲಿನ ಕೋಪವನ್ನು ಸಿದ್ಧು ಮೇಲೆ ತೆಗೆಯುತ್ತಾರೆ ಬಿಟ್ಟರೆ ಒಬ್ಬನೇ ಒಬ್ಬ ಹಿರಿಯ ನಾಯಕ ಏಯ್, ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಲು ಹೋಗುತ್ತಿಲ್ಲ. ಅದಕ್ಕೆ ಕಾರಣ ಡಿಕೆಶಿ ಹಿನ್ನಲೆ.

ಮೊದಲನೇಯದಾಗಿ ರಾಜಕೀಯವಾಗಿ ಡಿಕೆಶಿ ಸೆರಗಿನ ಕೆಂಡ ಎಂದು ದೆಹಲಿಯ ಜನಪಥ್ 10ನಲ್ಲಿ ಕುಳಿತಿರುವ ವಯೋವೃದ್ಧರು ನಂಬಿದ್ದಾರೆ. ಡಿಕೆಶಿ ಮೇಲಿರುವ ಆರೋಪಗಳು ಅವರನ್ನು ತಿಹಾರ್ ಜೈಲಿನೊಳಗೆ ವಾರಗಟ್ಟಲೆ ಇಟ್ಟ ಕಾರಣ ಅಂತವರನ್ನು ಸಿಎಂ ಎಂದು ಹೇಳುವುದು ಹೇಗೆ ಎನ್ನುವುದು ಸೋನಿಯ ಬಣದ ಆತಂಕ. ಮುಂದೆ ಚುನಾವಣೆ ಹತ್ತಿರ ಬರುವಾಗ ಒಳ್ಳೆಯ ಸಮಯ ನೋಡಿ ಬಿಜೆಪಿ ದೆಹಲಿ ಮುಖಂಡರು ಡಿಕೆಶಿ ಫೈಲ್ ಗಳನ್ನು ಅಧಿಕಾರಿಗಳಿಗೆ ಕರುಣಿಸಿ ಇದರಲ್ಲಿರುವ ಆರೋಪಿ ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಎಂದರೆ ಅದು ಕಾಂಗ್ರೆಸ್ ಪಾಲಿಗೆ ದೊಡ್ಡ ಅಪಮಾನ. ಈಗಾಗಲೇ ಕಾಂಗ್ರೆಸ್ಸನ್ನು ಹೊರಗೆ ಇಟ್ಟು ಶರದ್ ಪವಾರ್ ನೇತೃತ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಕಾಂಗ್ರೆಸ್ಸಿನ ದಯನೀಯ ಸ್ಥಿತಿಯನ್ನು ವಿವರಿಸುತ್ತವೆ. ರಾಜ್ಯದಲ್ಲಿ ಹೇಗೋ ಡಿಕೆಶಿ ಯಡ್ಡಿಯೊಂದಿಗೆ ಚೌಕಾಶಿ ಮಾಡಿ ರಾಜಕೀಯ ಮಾಡುತ್ತಾ ಇರಬಹುದು. ಆದರೆ ಮೇಲೆ ಅಮಿತ್ ಶಾಗೆ ಇನ್ನು ಕೂಡ ಅಹ್ಮದ್ ಪಟೇಲ್ ಚುನಾವಣೆಯ ಸಂದರ್ಭದಲ್ಲಿ ಡಿಕೆಶಿ ಆಡಿದ ಆಟದಿಂದ ಇನ್ನೂ ಕೋಪ ಆರಿಲ್ಲ.

ಅಷ್ಟಕ್ಕೂ ಈ ಸಿಎಂ ಬೆಂಕಿಗೆ ಪ್ರತಿ ಬಾರಿ ತುಪ್ಪ ಸುರಿಯೋದು ಯಾರೆಂದು ನೋಡಿದರೆ ಅದೇ ಸಿದ್ಧು ಹಳೇ ದೋಸ್ತ್ ಜಮೀರು. ದಳದಲ್ಲಿ ಇದ್ದಾಗ ಸಿದ್ದು ಟೀಚರ್ ಆಗಿದ್ದರೆ ಜಮೀರು ನರ್ಸರಿ ವಿದ್ಯಾರ್ಥಿ. ಈಗ ಜಮೀರು ಡಿಗ್ರಿ ಸ್ಟುಡೆಂಟ್ ಆದರೆ ಸಿದ್ಧು ಅದೇ ಕಾಲೇಜಿನ ಪ್ರಿನ್ಸಿಪಾಲ್. ಆದ್ದರಿಂದ ತನಗೆ ರಾಜಕೀಯ ಎಬಿಸಿಡಿ ಕಲಿಸಿದ ಗುರುವಿಗೆ ವಂದಿಸದೇ ಜಮೀರು ಬೇರೆ ಏನು ಮಾಡಬಲ್ಲರು? ಇನ್ನು ಅನೇಕ ಒಕ್ಕಲಿಗ ಮತ್ತು ಲಿಂಗಾಯಿತ ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಕುರುಬ ವೋಟುಗಳೇ ನಿರ್ಣಾಯಕ. ಸಿದ್ಧು ಸೈಡ್ ಲೈನ್ ಆದರೆ ಇವರಿಗೆ ದೇವರೇ ಗತಿ. ಸಿದ್ಧು ಲೆವೆಲ್ಲಿಗೆ ಬಿಜೆಪಿಯಲ್ಲಿಯೂ ಕುರುಬ ನಾಯಕ ಇನ್ನೊಬ್ಬನಿಲ್ಲ. ಈಶು ಇದ್ದಾರಾದರೂ ಅವರನ್ನು ಕುರುಬರ ಪರಮೋಚ್ಚ ನಾಯಕ ಅಂತ ಶಿವಮೊಗ್ಗದವರೇ ಒಪ್ಪಲ್ಲ.

ಇನ್ನು ಸಿದ್ಧು ತಮ್ಮ ಜೊತೆ ದಳದಿಂದ ಬಂದ ಯಾರನ್ನು ಕೈ ಬಿಟ್ಟಿಲ್ಲ. ಅದಕ್ಕೆ ಬೇಕಾದರೆ ಐವನ್ ಡಿಸೋಜಾ ಎನ್ನುವ ವಿಧಾನಪರಿಷತ್ತಿನ ಮಾಜಿ ಸದಸ್ಯರೊಬ್ಬರನ್ನೇ ತೆಗೆದುಕೊಳ್ಳಿ. ಐವನ್ ಅವರಿಗೆ ವಿಧಾನಪರಿಷತ್ ಗೆ ಆಯ್ಕೆಯಾಗಲು ಇದ್ದ ಏಕೈಕ ಅರ್ಹತೆ ಎಂದರೆ ಅವರು ಹಿಂದೆ ದಳದಲ್ಲಿ ಇದ್ದರು ಎನ್ನುವುದು ಮಾತ್ರ. ಇನ್ನು ಸಿದ್ಧು ಕಾಂಗ್ರೆಸ್ಸನ್ನು ಅಧಿಕಾರದ ರುಚಿ ತೋರಿಸಿದ ನಾಯಕ ಎನ್ನುವುದು ಕಾಂಗ್ರೆಸ್ಸಿನಲ್ಲಿ ಇರುವ ಹಿರಿಯರಿಗೆ ಗೊತ್ತೇ ಇದೆ. ಎಸ್ ಎಂ ಕೃಷ್ಣ ನಂತರ ರಾಜ್ಯದಲ್ಲಿ ಸೊರಗಿದ್ದ ಕಾಂಗ್ರೆಸ್ಸಿಗೆ ಸಿದ್ಧು ಬೇಕಿತ್ತು. ತಮ್ಮ ನೇರ ನುಡಿಯ, ಹೋಂವರ್ಕ್ ಮಾಡಿಕೊಂಡೇ ಕಣಕ್ಕೆ ಇಳಿಯುವ, ಭ್ರಷ್ಟಾಚಾರದ ಆರೋಪ ಹಾಕಲು ಸಾಕ್ಷ್ಯಗಳೇ ಇಲ್ಲದ ಮತ್ತು ಅಹಿಂದ ಮತಗಳನ್ನು ಈಗಲೂ ಕಿಸೆಯಲ್ಲಿಟ್ಟೇ ನಡೆಯುವ ಸಿದ್ಧು ಬಗ್ಗೆ ಕಾಂಗ್ರೆಸ್ಸಿಗೆ ಪ್ರೀತಿ ಇದೆ. ಅದಕ್ಕಾಗಿ ಅವರಿಗೆ ಹಣದ ಗೋಣಿಯನ್ನೇ ದೆಹಲಿಯ ಜನಪಥ್ 10 ಹಿತ್ತಲಲ್ಲಿ ರಾಶಿರಾಶಿ ಹಾಕಬಲ್ಲ ಡಿಕೆಶಿಗಿಂತ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಯಡ್ಡಿ ಎದುರು ಸಿದ್ಧುವೇ ಸೂಕ್ತ ಎಂದು ಅನಿಸುತ್ತದೆ. ಆದ್ದರಿಂದ ಅಧಿಕಾರಕ್ಕೆ ಮರಳದಿದ್ದರೂ ಸಿದ್ಧು ವಿಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿರುವುದು ಮತ್ತು ಡಿಕೆಶಿ ಅತ್ತು ಕರೆದು ರಾಜ್ಯಾಧ್ಯಕ್ಷನಾಗಿರುವುದು!!!

0
Shares
  • Share On Facebook
  • Tweet It




Trending Now
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
Hanumantha Kamath December 18, 2025
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Hanumantha Kamath December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
  • Popular Posts

    • 1
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 2
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 3
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 4
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 5
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search