• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿಮ್ಮ ದೇಹದಲ್ಲಿ ಬೊಜ್ಜು ಇದೆಯೇ?ಹಾಗಿದ್ದಲ್ಲಿ ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ .

TNN Correspondent Posted On August 18, 2017


  • Share On Facebook
  • Tweet It

ಬೊಜ್ಜು ,ಇದು ಇತ್ತೀಚಿಗೆ ಹಲವರ ಮುಜುಗರಕ್ಕೆ ಕಾರಣವಾಗುವ ಒಂದು ಕಾಯಿಲೆ .ಆಘಾತಕಾರಿ ವಿಷಯವೆಂದರೆ ಹಿಂದೆ ಇದು ವಯಸ್ಕರಲ್ಲಿ ಕಾಣಿಸುತ್ತಿತ್ತು ಈವಾಗ ಪುಟ್ಟ ಮಕ್ಕಳಲ್ಲೂ ಸಹ ತೋರಿ ಬರುತ್ತಿದೆ .ಹೊರಗಿನ ಕರಿದ ಆಹಾರ ,ಸರಿಯಾದ ಸಮಯದಲ್ಲಿ ಆಹಾರ ಸೇವಿಸದಿರುವುದು ,ವ್ಯಾಯಾಮ ಮಾಡದೇ ಆಲಸಿಗಳಾಗುವುದು ಹೀಗೆ ಇದಕ್ಕೆ ಹಲವಾರು ಕಾರಣಗಳಿವೆ.ಮೊದಲು ಸುಮ್ಮನೆ ಇದನ್ನು ನಿರ್ಲಕ್ಷಿಸಿದರೆ ಸಮಯ ಕಳೆದಂತೆ ಇದು ಮಾರಕವಾಗುವ ಸಾಧ್ಯತೆಗಳಿವೆ.ಇದನ್ನು ಯೌವನದಲ್ಲೇ ತಡೆಯಲೇಬೇಕು .ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಟಿಸುವ ಪತ್ರಿಕೆಯ ಪ್ರಕಾರ ಯೌವನದಲ್ಲಿ ಬೊಜ್ಜು ಜಾಸ್ತಿಯಿದ್ದರೆ ಮಧ್ಯ ವಯಸ್ಕರಾದಾಗ ಹೃದಯಾಘಾತ ಆಗುವ ಸಾಧ್ಯತೆಗಳು ಹೆಚ್ಚುತ್ತವೆ .ಸ್ವೀಡನ್ ನ ಗೊಥೆನ್ ಬುರ್ಗ್ ವಿಶ್ವ ವಿದ್ಯಾಲಯದ ಪ್ರಕಾರ ಹೃದಯಾಘಾತವು ವಯಸ್ಕರಿಂತ ಹೆಚ್ಚಾಗಿ ತರುಣರಲ್ಲೇ ಕಂಡು ಬರುತ್ತಿದೆ .ಇದು ಮಿತಿ ಮೀರಿದ ಬೊಜ್ಜಿನಿಂದಾಗಿ ಆಗುತ್ತದೆ .ಇದನ್ನು ಕಡಿಮೆ ಮಾಡಲು ಮನೆಯಲ್ಲೇ ಮಾಡಲಾಗುವ  ಸರಳ ವೈಖರಿಗಳನ್ನು ಕಲಿಯೋಣ .

೧.ಮೊದಲನೆಯದಾಗಿ ನಿಯಮಿತ ವ್ಯಾಯಾಮ ಮಾಡಲೇಬೇಕು .ಸೂರ್ಯ ನಮಸ್ಕಾರವು  ಸರ್ವಾಂಗ ವ್ಯಾಯಾಮವಾಗಿದೆ .ದಿನಕ್ಕೆ ನಾಲ್ಕು ಬಾರಿ ಇದನ್ನು ಮಾಡುವುದು ಒಳ್ಳೆಯದು .ಕ್ರಂಚ್ ಗಳು ಸಹ ಬೊಜ್ಜನ್ನು ಕರಗಿಸಬಲ್ಲವು .ದೈಹಿಕ ವ್ಯಾಯಾಮದ ತರಬೇತುದಾರರಿಂದ ಮಾರ್ಗದರ್ಶನವನ್ನು ಪಡೆದುಕೊಂಡು ವ್ಯಾಯಾಮ ಮಾಡಲು ಶುರು  ಮಾಡಿ .ಇದರಲ್ಲಿ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು ,ಬೊಜ್ಜು ಕರಗಿಸಲೇಬೇಕೆಂಬ ಹಠ ಹಿಡಿದು ಎರ್ರಾಬಿರ್ರಿ ವ್ಯಾಯಾಮ ಮಾಡದಿರಿ ,ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಿ .ದಿನ ಸ್ವಲ್ಪ ನಡೆಯುವುದು ,ಹಳ್ಳಿಯಲ್ಲಿದ್ದರೆ ಕೃಷಿ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ .

೨.ಕರಿಬೇವಿನ ಸೇವನೆ

ಒಗ್ಗರಣೆಗೆ ಹಾಕಿದಾಕ್ಷಣ ಮೂಗರಳಿಸುವಂತೆ ಪರಿಮಳ ಬರುವುದೇ ಕರಿಬೇವಿನಿಂದ .ಇದು ಬೊಜ್ಜನ್ನು ಕರಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಹಲವರಿಗೆ ಊಟದಲ್ಲಿ ಕರಿಬೇವಿನ ಎಲೆ ಸಿಕ್ಕಿದರೆ ಸಾಕು ಬದಿಗಿಡುವಲ್ಲಿ ಮಗ್ನರಾಗುತ್ತಾರೆ .ಇನ್ನು ಮುಂದೆ ಹಾಗೆ ಮಾಡದಿರಿ .ಈ ಎಳೆ ಜೀರ್ಣಶಕ್ತಿಯ ಕಿಣ್ವಗಳನ್ನು ಉದ್ದೀಪಿಸಿ ಆಹಾರವು ಬೇಗ ಜೀರ್ಣವಾಗುವಂತೆ ಮಾಡುತ್ತವೆ .ಪ್ರತಿ ದಿನ ೧೦ ಕರಿಬೇವಿನ ಎಲೆಗಳನ್ನು ಹಸಿಯಾಗಿ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಿ .ಮೂರು ತಿಂಗಳವರೆಗೆ ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡಿದರೆ ಬೊಜ್ಜು ನಿಧಾನವಾಗಿ  ನಿವಾರಣೆಯಾಗುತ್ತದೆ.

೩.ನಿಂಬೆ ಹಣ್ಣಿನ ರಸ ಮತ್ತು ಜೇನು

ಕಟು ರುಚಿಯುಳ್ಳ ಚಿನ್ನದ ಬಣ್ಣದ ನಿಂಬೆ ಹಣ್ಣಿನ ರಸ ಮತ್ತು ಮಧುರವಾದ ಜೇನು ತುಪ್ಪ ಬೊಜ್ಜನ್ನು ಕರಗಿಸುತ್ತವೆ .ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ .ಒಂದು ಲೋಟ ನೀರಿಗೆ ,ಎರಡು ಚಮಚ ನಿಂಬೆರಸ ,ಬೆರೆಸಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ .ಇದನ್ನು ಚೆನ್ನಾಗಿ ಕದಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ.ನಿಯಮಿತವಾಗಿ ಮಾಡಿದರೆ ಅತ್ಯುತ್ತಮ ಫಲಿತಾಂಶವು ನಿಮ್ಮದಾಗುವುದು .

ಇದರೊಂದಿಗೆ ಕುರುಕು ತಿಂಡಿಗಳನ್ನು ,ಜಂಕ್ ಫುಡ್ ಗಳನ್ನೂ ಬಿಡುವುದು ಸಹ ಅವಶ್ಯವಾಗಿದೆ .ಸಿಕ್ಕ ಪಟ್ಟೆ ಬಾಯಿ ಚಪಲಕ್ಕಾಗಿ ಆಗಾಗ  ಬರಗಿಕೊಂಡು ಹೊಟ್ಟೆಗೆ ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು .ರಾತ್ರಿ ಊಟಕ್ಕೆ ಕಾರ್ಬೋ ಹೈಡ್ರೇಟು ಉಳ್ಳಂತಹ ಆಹಾರವನ್ನು ತಿನ್ನಬಾರದು .ಆದಷ್ಟು ತಾಜಾವಾಗಿರುವ ಹಣ್ಣಿನ ರಸಗಳನ್ನು ಸೇವಿಸಬೇಕು ಇಲ್ಲವೇ ಹಣ್ಣನ್ನು ಕಚ್ಚಿ ತಿನ್ನಬೇಕು .ಐಸ್ಕ್ರೀಮುಗಳು ,ಚಾಕಲೇಟುಗಳ ಬಳಕೆಯನ್ನು ಕಡಿಮೆ ಮಾಡಬೇಕು .ಬೊಜ್ಜು ಬೇಗ  ದೇಹದಲ್ಲಿ ಶೇಖರವಾಗುತ್ತದೆ ಆದರೆ ಹೋಗುವುದು ಅತ್ಯಂತ ನಿಧಾನವಾಗಿ .ಆದ್ದರಿಂದ ಬೊಜ್ಜನ್ನು ದೂರವಿರಿಸಿ ,ಆರೋಗ್ಯದಿಂದ  ನಳನಳಿಸಿ.

 

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search