• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೆ ಮಾಡಿದ ತಪ್ಪು ಮತ್ತೊಮ್ಮೆ ಮಾಡದಿರೋಣ.

TNN Correspondent Posted On August 19, 2017
0


0
Shares
  • Share On Facebook
  • Tweet It

ಭಾರತ ಮತ್ತು ಚೀನಾ ನಡುವೆ ಯುಧ್ಧದ ಕಾರ್ಮೋಡ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಮತ್ತು ಚೀನಾದ ಕುಚೇಷ್ಠೆ ವಿಪರೀತ ಮಟ್ಟಕ್ಕೆ ಏರಿರುವ ಈ ಸಂದಿಗ್ಧ ಸಮಯದಲ್ಲಿ ಪ್ರತಿಯೊಬ್ಬ ದೇಶಭಕ್ತರ ಬಾಯಲ್ಲಿ ಚೀನಾ ವಸ್ತುಗಳೆಲ್ಲವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರಕಾರವೇ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ. ಜಾಗತಿಕ ಒಪ್ಪಂದಗಳ ಕೆಲವು ನಿಯಮದಂತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳು ಪರಸ್ಪರ ತಮ್ಮ ದೇಶದ ವಸ್ತುಗಳನ್ನು ಇತರ ದೇಶದಲ್ಲಿ ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಇನ್ನು ಬಹುತೇಕ ಮಂದಿ ಚೀನಾ ವಸ್ತುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಳಸುತ್ತಿದ್ದಾರೆ ಆದ್ದರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

ಪ್ರಾಮಾಣಿಕವಾಗಿ ಹೇಳುವುದಿದ್ದರೆ ದೇಶಭಕ್ತರೆನಿಸಿಕೊಳ್ಳುವ ನಾವೇ ಕೆಲವರು ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳು, ಮಕ್ಕಳ ಆಟ ಸಾಮಾಗ್ರಿಗಳು, ಪಟಾಕಿ,ಎಲ್ ಇ ಡಿ ಬಲ್ಬ್, ಬ್ಯಾಟರಿ,ಪೆನ್ನು ಇತ್ಯಾದಿಗಳನ್ನು ಬಳುಸುತ್ತಾ ಇದ್ದಿರಬಹುದು. ನಾವೇ ಬಳಸುತ್ತಿರುವಾಗ ಮತ್ತೊಬ್ಬರಿಗೆ ಬಳಸಬೇಡಿ ಎಂದು ಹೇಗೆ ಹೇಳುವುದು ಎಂಬ ಆಲೋಚನೆ ಹಲವರಿಗೆ ಕಾಡುತ್ತಿರಲೂ ಬಹುದು. ಅದಕ್ಕೊಸ್ಕರನೇ ಹಿಂದೆ ನಾವು ತಪ್ಪು ಮಾಡಿರಬಹುದು ಮುಂದೆ ಅದೇ ತಪ್ಪನ್ನು ಮಾಡದಿರೋಣ, ಇತರರಿಗೆ ಮಾಡಲು ಬಿಡದಿರೋಣ ಎಂಬ ಸಂದೇಶ ಸಾರಬೇಕಿದೆ. ಚೀನಾ ಹಿಂದಿನಿಂದಲೂ ನಮ್ಮ ಬದ್ದ ಶತ್ರುದೇಶವಾದ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿಗಳ ಮೂಲಕ ಬೆಂಬಲ ಕೊಡುತ್ತಾ ಬಂದಿದೆ. ಈಗ ನೇರವಾಗಿ ಭಾರತಕ್ಕೆ ಗಡಿ ವಿಚಾರದಲ್ಲಿ ಹಾಗೂ ನಮ್ಮ ವೀರ ಯೋಧರ ಸ್ವಾಭಿಮಾನಕ್ಕೇ ಸವಾಲು ಹಾಕಿದೆ.ಒಂದು ಕಡೆ ನಮ್ಮ ಸೈನಿಕರು ಯುಧ್ದಕ್ಕೆ ತಯಾರಾದಂತೆ ಮತ್ತೊಂದು ಕಡೆ ನಾವೆಲ್ಲ ಭಾರತೀಯರು ಚೈನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾದೊಂದಿಗೆ ಆರ್ಥಿಕ ಹೋರಾಟಕ್ಕೆ ತಯಾರಾಗಬೇಕಿದೆ.

ಯುದ್ಧವಂತೂ ನಾವು ಯಾರೂ ಬಯಸುವುದಿಲ್ಲ ಆದರೆ ಆರ್ಥಿಕವಾಗಿ ಚೀನಾವನ್ನು ನೆಲಕಚ್ಚುವಂತೆ ಮಾಡಿ ಯುಧ್ಧ ಗೆಲ್ಲುವ ಪರ್ಯಾಯ ಮಾರ್ಗದ  ಸಾಮರ್ಥ್ಯವಂತೂ ನಮ್ಮಲ್ಲಿದೆ. ಪ್ರತಿಯೊಬ್ಬರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ.ನಾನೂ ಒಬ್ಬ ಚೀನಾದೊಂದಿಗೆ ಹೋರಾಡುವ ಯೋಧ ಎಂದು ಪ್ರತಿಯೊಬ್ಬ ಭಾವಿಸಿದರೆ ಸೈನಿಕರ ಪ್ರಾಣವೂ ಉಳಿಯುತ್ತದೆ, ಯುದ್ಧವನ್ನೂ ಗೆಲ್ಲುತ್ತೇವೆ. ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿ ಚೀನಾವಸ್ತುಗಳನ್ನು ಮಾರಾಟಮಾಡದಂತೆ ಜಾಗ್ರತಿ ಮೂಡಿಸೋಣ,ಬಂಧುಗಳಲ್ಲಿ,ಮಿತ್ರರಲ್ಲಿ ಚೀನಾವಸ್ತುಗಳನ್ನು ಖರೀದಿಸದಂತೆ ವಿನಂತಿಸೋಣ.ಈ ಕ್ಷಣದಿಂದಲೇ ಸನ್ನಧ್ಧರಾಗಿ.ಜೈ ಹಿಂದ್.

0
Shares
  • Share On Facebook
  • Tweet It




Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Tulunadu News July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search