• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೆ ಮಾಡಿದ ತಪ್ಪು ಮತ್ತೊಮ್ಮೆ ಮಾಡದಿರೋಣ.

TNN Correspondent Posted On August 19, 2017
0


0
Shares
  • Share On Facebook
  • Tweet It

ಭಾರತ ಮತ್ತು ಚೀನಾ ನಡುವೆ ಯುಧ್ಧದ ಕಾರ್ಮೋಡ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಮತ್ತು ಚೀನಾದ ಕುಚೇಷ್ಠೆ ವಿಪರೀತ ಮಟ್ಟಕ್ಕೆ ಏರಿರುವ ಈ ಸಂದಿಗ್ಧ ಸಮಯದಲ್ಲಿ ಪ್ರತಿಯೊಬ್ಬ ದೇಶಭಕ್ತರ ಬಾಯಲ್ಲಿ ಚೀನಾ ವಸ್ತುಗಳೆಲ್ಲವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರಕಾರವೇ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ. ಜಾಗತಿಕ ಒಪ್ಪಂದಗಳ ಕೆಲವು ನಿಯಮದಂತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳು ಪರಸ್ಪರ ತಮ್ಮ ದೇಶದ ವಸ್ತುಗಳನ್ನು ಇತರ ದೇಶದಲ್ಲಿ ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಇನ್ನು ಬಹುತೇಕ ಮಂದಿ ಚೀನಾ ವಸ್ತುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಳಸುತ್ತಿದ್ದಾರೆ ಆದ್ದರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

ಪ್ರಾಮಾಣಿಕವಾಗಿ ಹೇಳುವುದಿದ್ದರೆ ದೇಶಭಕ್ತರೆನಿಸಿಕೊಳ್ಳುವ ನಾವೇ ಕೆಲವರು ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳು, ಮಕ್ಕಳ ಆಟ ಸಾಮಾಗ್ರಿಗಳು, ಪಟಾಕಿ,ಎಲ್ ಇ ಡಿ ಬಲ್ಬ್, ಬ್ಯಾಟರಿ,ಪೆನ್ನು ಇತ್ಯಾದಿಗಳನ್ನು ಬಳುಸುತ್ತಾ ಇದ್ದಿರಬಹುದು. ನಾವೇ ಬಳಸುತ್ತಿರುವಾಗ ಮತ್ತೊಬ್ಬರಿಗೆ ಬಳಸಬೇಡಿ ಎಂದು ಹೇಗೆ ಹೇಳುವುದು ಎಂಬ ಆಲೋಚನೆ ಹಲವರಿಗೆ ಕಾಡುತ್ತಿರಲೂ ಬಹುದು. ಅದಕ್ಕೊಸ್ಕರನೇ ಹಿಂದೆ ನಾವು ತಪ್ಪು ಮಾಡಿರಬಹುದು ಮುಂದೆ ಅದೇ ತಪ್ಪನ್ನು ಮಾಡದಿರೋಣ, ಇತರರಿಗೆ ಮಾಡಲು ಬಿಡದಿರೋಣ ಎಂಬ ಸಂದೇಶ ಸಾರಬೇಕಿದೆ. ಚೀನಾ ಹಿಂದಿನಿಂದಲೂ ನಮ್ಮ ಬದ್ದ ಶತ್ರುದೇಶವಾದ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿಗಳ ಮೂಲಕ ಬೆಂಬಲ ಕೊಡುತ್ತಾ ಬಂದಿದೆ. ಈಗ ನೇರವಾಗಿ ಭಾರತಕ್ಕೆ ಗಡಿ ವಿಚಾರದಲ್ಲಿ ಹಾಗೂ ನಮ್ಮ ವೀರ ಯೋಧರ ಸ್ವಾಭಿಮಾನಕ್ಕೇ ಸವಾಲು ಹಾಕಿದೆ.ಒಂದು ಕಡೆ ನಮ್ಮ ಸೈನಿಕರು ಯುಧ್ದಕ್ಕೆ ತಯಾರಾದಂತೆ ಮತ್ತೊಂದು ಕಡೆ ನಾವೆಲ್ಲ ಭಾರತೀಯರು ಚೈನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾದೊಂದಿಗೆ ಆರ್ಥಿಕ ಹೋರಾಟಕ್ಕೆ ತಯಾರಾಗಬೇಕಿದೆ.

ಯುದ್ಧವಂತೂ ನಾವು ಯಾರೂ ಬಯಸುವುದಿಲ್ಲ ಆದರೆ ಆರ್ಥಿಕವಾಗಿ ಚೀನಾವನ್ನು ನೆಲಕಚ್ಚುವಂತೆ ಮಾಡಿ ಯುಧ್ಧ ಗೆಲ್ಲುವ ಪರ್ಯಾಯ ಮಾರ್ಗದ  ಸಾಮರ್ಥ್ಯವಂತೂ ನಮ್ಮಲ್ಲಿದೆ. ಪ್ರತಿಯೊಬ್ಬರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ.ನಾನೂ ಒಬ್ಬ ಚೀನಾದೊಂದಿಗೆ ಹೋರಾಡುವ ಯೋಧ ಎಂದು ಪ್ರತಿಯೊಬ್ಬ ಭಾವಿಸಿದರೆ ಸೈನಿಕರ ಪ್ರಾಣವೂ ಉಳಿಯುತ್ತದೆ, ಯುದ್ಧವನ್ನೂ ಗೆಲ್ಲುತ್ತೇವೆ. ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿ ಚೀನಾವಸ್ತುಗಳನ್ನು ಮಾರಾಟಮಾಡದಂತೆ ಜಾಗ್ರತಿ ಮೂಡಿಸೋಣ,ಬಂಧುಗಳಲ್ಲಿ,ಮಿತ್ರರಲ್ಲಿ ಚೀನಾವಸ್ತುಗಳನ್ನು ಖರೀದಿಸದಂತೆ ವಿನಂತಿಸೋಣ.ಈ ಕ್ಷಣದಿಂದಲೇ ಸನ್ನಧ್ಧರಾಗಿ.ಜೈ ಹಿಂದ್.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search