• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೆ ಮಾಡಿದ ತಪ್ಪು ಮತ್ತೊಮ್ಮೆ ಮಾಡದಿರೋಣ.

TNN Correspondent Posted On August 19, 2017
0


0
Shares
  • Share On Facebook
  • Tweet It

ಭಾರತ ಮತ್ತು ಚೀನಾ ನಡುವೆ ಯುಧ್ಧದ ಕಾರ್ಮೋಡ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಮತ್ತು ಚೀನಾದ ಕುಚೇಷ್ಠೆ ವಿಪರೀತ ಮಟ್ಟಕ್ಕೆ ಏರಿರುವ ಈ ಸಂದಿಗ್ಧ ಸಮಯದಲ್ಲಿ ಪ್ರತಿಯೊಬ್ಬ ದೇಶಭಕ್ತರ ಬಾಯಲ್ಲಿ ಚೀನಾ ವಸ್ತುಗಳೆಲ್ಲವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರಕಾರವೇ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ. ಜಾಗತಿಕ ಒಪ್ಪಂದಗಳ ಕೆಲವು ನಿಯಮದಂತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳು ಪರಸ್ಪರ ತಮ್ಮ ದೇಶದ ವಸ್ತುಗಳನ್ನು ಇತರ ದೇಶದಲ್ಲಿ ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಇನ್ನು ಬಹುತೇಕ ಮಂದಿ ಚೀನಾ ವಸ್ತುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಳಸುತ್ತಿದ್ದಾರೆ ಆದ್ದರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

ಪ್ರಾಮಾಣಿಕವಾಗಿ ಹೇಳುವುದಿದ್ದರೆ ದೇಶಭಕ್ತರೆನಿಸಿಕೊಳ್ಳುವ ನಾವೇ ಕೆಲವರು ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳು, ಮಕ್ಕಳ ಆಟ ಸಾಮಾಗ್ರಿಗಳು, ಪಟಾಕಿ,ಎಲ್ ಇ ಡಿ ಬಲ್ಬ್, ಬ್ಯಾಟರಿ,ಪೆನ್ನು ಇತ್ಯಾದಿಗಳನ್ನು ಬಳುಸುತ್ತಾ ಇದ್ದಿರಬಹುದು. ನಾವೇ ಬಳಸುತ್ತಿರುವಾಗ ಮತ್ತೊಬ್ಬರಿಗೆ ಬಳಸಬೇಡಿ ಎಂದು ಹೇಗೆ ಹೇಳುವುದು ಎಂಬ ಆಲೋಚನೆ ಹಲವರಿಗೆ ಕಾಡುತ್ತಿರಲೂ ಬಹುದು. ಅದಕ್ಕೊಸ್ಕರನೇ ಹಿಂದೆ ನಾವು ತಪ್ಪು ಮಾಡಿರಬಹುದು ಮುಂದೆ ಅದೇ ತಪ್ಪನ್ನು ಮಾಡದಿರೋಣ, ಇತರರಿಗೆ ಮಾಡಲು ಬಿಡದಿರೋಣ ಎಂಬ ಸಂದೇಶ ಸಾರಬೇಕಿದೆ. ಚೀನಾ ಹಿಂದಿನಿಂದಲೂ ನಮ್ಮ ಬದ್ದ ಶತ್ರುದೇಶವಾದ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿಗಳ ಮೂಲಕ ಬೆಂಬಲ ಕೊಡುತ್ತಾ ಬಂದಿದೆ. ಈಗ ನೇರವಾಗಿ ಭಾರತಕ್ಕೆ ಗಡಿ ವಿಚಾರದಲ್ಲಿ ಹಾಗೂ ನಮ್ಮ ವೀರ ಯೋಧರ ಸ್ವಾಭಿಮಾನಕ್ಕೇ ಸವಾಲು ಹಾಕಿದೆ.ಒಂದು ಕಡೆ ನಮ್ಮ ಸೈನಿಕರು ಯುಧ್ದಕ್ಕೆ ತಯಾರಾದಂತೆ ಮತ್ತೊಂದು ಕಡೆ ನಾವೆಲ್ಲ ಭಾರತೀಯರು ಚೈನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾದೊಂದಿಗೆ ಆರ್ಥಿಕ ಹೋರಾಟಕ್ಕೆ ತಯಾರಾಗಬೇಕಿದೆ.

ಯುದ್ಧವಂತೂ ನಾವು ಯಾರೂ ಬಯಸುವುದಿಲ್ಲ ಆದರೆ ಆರ್ಥಿಕವಾಗಿ ಚೀನಾವನ್ನು ನೆಲಕಚ್ಚುವಂತೆ ಮಾಡಿ ಯುಧ್ಧ ಗೆಲ್ಲುವ ಪರ್ಯಾಯ ಮಾರ್ಗದ  ಸಾಮರ್ಥ್ಯವಂತೂ ನಮ್ಮಲ್ಲಿದೆ. ಪ್ರತಿಯೊಬ್ಬರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ.ನಾನೂ ಒಬ್ಬ ಚೀನಾದೊಂದಿಗೆ ಹೋರಾಡುವ ಯೋಧ ಎಂದು ಪ್ರತಿಯೊಬ್ಬ ಭಾವಿಸಿದರೆ ಸೈನಿಕರ ಪ್ರಾಣವೂ ಉಳಿಯುತ್ತದೆ, ಯುದ್ಧವನ್ನೂ ಗೆಲ್ಲುತ್ತೇವೆ. ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿ ಚೀನಾವಸ್ತುಗಳನ್ನು ಮಾರಾಟಮಾಡದಂತೆ ಜಾಗ್ರತಿ ಮೂಡಿಸೋಣ,ಬಂಧುಗಳಲ್ಲಿ,ಮಿತ್ರರಲ್ಲಿ ಚೀನಾವಸ್ತುಗಳನ್ನು ಖರೀದಿಸದಂತೆ ವಿನಂತಿಸೋಣ.ಈ ಕ್ಷಣದಿಂದಲೇ ಸನ್ನಧ್ಧರಾಗಿ.ಜೈ ಹಿಂದ್.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search