• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಾಮಾನ್ಯ ಭೇದಿಯೆಂದು ನಿರ್ಲಕ್ಷ್ಯ ಮಾಡದಿರಿ , ವ್ಯಾಧಿಗೆ ಈಡಾಗದಿರಿ

TNN Correspondent Posted On August 19, 2017


  • Share On Facebook
  • Tweet It

ಭೇದಿ ಇದು ಸಾಮಾನ್ಯವಾಗಿ ಜೀವನದಲ್ಲಿ ಕೆಲವು ಬಾರಿಯಾದರೂ ಹಲವಾರು ಎದುರಿಸುವ ಒಂದು ಆರೋಗ್ಯದ ಸಮಸ್ಯೆ .ಹೆಚ್ಚಿನ ಸಮಯದಲ್ಲಿ ಇದು ಒಂದೆರಡು ದಿನಗಳಿಗೆ ಮುಗಿದು  ಹೋಗುತ್ತದೆ ಆದರೆ ಕೆಲವು ಬಾರಿ ಇದು ಹೆಚ್ಚಾಗಿ ಸುಸ್ತನ್ನು ಈಡು ಮಾಡಿ ಅನಾರೋಗ್ಯಕ್ಕೂ ಕಾರಣವಾಗಬಹುದು .ಈ ಸಂದರ್ಭದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಒಳ್ಳೆಯದು .ಭೇದಿಗೆ ಹಲವು ಕಾರಣಗಳಿವೆ .

ಆಹಾರದಿಂದ ಉಂಟಾಗುವ ಅಲರ್ಜಿ :ದೇಹಕ್ಕೆ ಹೊಂದಿಕೊಳ್ಳದ ಆಹಾರವನ್ನು ಸೇವಿಸಿದಾಗ ಹೊಟ್ಟೆ ಕೆಟ್ಟು ಹೋಗುತ್ತದೆ .

ಕೊಳಚೆ ನೀರಿನ ಸೇವನೆಯಿಂದ  ಕೂಡ ಭೇದಿ ಉಂಟಾಗುತ್ತದೆ .

ಕರುಳಿನಲ್ಲಿ ತೊಂದರೆಯುಂಟಾದಾಗ ಸಹ ಭೇದಿಯುಂಟಾಗುತ್ತದೆ .ಈ ಸಂದರ್ಭದಲ್ಲಿ ಅವಶ್ಯವಾಗಿ ವೈದ್ಯರನ್ನು ಕಾಣಲೇಬೇಕು

ಮಕ್ಕಳಲ್ಲಿ ಅದೂ ಪುಟ್ಟ ಶಿಶುಗಳಲ್ಲಿ ಭೇದಿ ಉಂಟಾದಾಗ ತೀವ್ರ ನಿಗಾ ವಹಿಸಲೇಬೇಕು .

ಈಗ ಮನೆಯಲ್ಲೇ ಭೇದಿಗೆ ಸರಳ ಪರಿಹಾರದ ಬಗ್ಗೆ ಯೋಚಿಸೋಣ .

೧ ಪೇರಳೆಯ ಚಿಗುರು

ಈ ಹಣ್ಣು ಹಳ್ಳಿಗಳಲ್ಲಿ ಮನೆಗಳಲ್ಲಿ ಸರ್ವೇ ಸಾಮಾನ್ಯ .ಈ ಮರದ ಚಿಗುರು ಎಲೆಗಳನ್ನು ಒಂದು ಲೋಟ  ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ,ಇದು ಮುಕ್ಕಾಲು ಲೋಟಕ್ಕೆ ಇಂಗಿದ ನಂತರ ಈ ಕಷಾಯವನ್ನು ಭೇದಿಗೆ ಒಳಗಾದ ರೋಗಿಗೆ ನೀಡಬೇಕು .ದಿನಕ್ಕೆರಡು ಬಾರಿ ಇದನ್ನು ಕುಡಿಸುವುದರಿಂದ ಭೇದಿಯು ನಿಯಂತ್ರಣಕ್ಕೆ ಬರುವುದು .

೨.ಚಹಾದ ಡಿಕಾಕ್ಷನ್

ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾದ  ಔಷಧವಾಗಿದೆ  .ಅರ್ಧ  ಚಮಚ  ಚಹಾ  ಪುಡಿಯನ್ನು  ಒಂದು ಲೋಟ ನೀರಿಗೆ  ಹಾಕಿ ಕುಡಿಸಿ ಇದನ್ನು ರೋಗಿಗೆ ಕುಡಿಸಿ ,ದಿನದಲ್ಲಿ ಮೂರು ಬಾರಿ ಪುನರಾವರ್ತಿಸಿ ,ಇದರಿಂದ ಭೇದಿಯು ನಿಲ್ಲುವ ಹಂತಕ್ಕೆ ಬರುತ್ತದೆ .

೩.ಓ ಆರ್ ಎಸ್ ದ್ರಾವಣ

ಓರಲ್ ರಿ ಹೈಡ್ರಷನ್ ಸೊಲ್ಯೂಷನ್ ಇದು ಭೇದಿಯ  ಸಮಯದಲ್ಲಿ  ದೇಹವು ಒಣಗುವುದನ್ನು ತಪ್ಪಿಸುತ್ತದೆ .ಇದು medical ಅಂಗಡಿಗಳಲ್ಲಿ ದೊರಕುತ್ತದೆ ,ಇಲ್ಲವೇ ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು .ಒಂದು ಚಮಚ ಸಕ್ಕರೆಗೆ ,ಕಾಲು ಚಮಚ ಉಪ್ಪು ಬೆರೆಸಿ ಒಂದು ಲೋಟ ನೀರಿಗೆ ಹಾಕಿ ಕುಡಿಯಬಹುದು .ಇದು ದೇಹದ ಆರ್ದ್ರತೆಯನ್ನು ಕಾಪಿಡುತ್ತದೆ.

೪.ಎಳನೀರು ಮತ್ತು ಹಾಲು

ಇದು ಹಲವರಿಗೆ  ತಿಳಿದಿಲ್ಲ ಆದರೆ ಇದು ಭೇದಿಯ ಸಮಯದಲ್ಲಿ ಅಮೃತ ಸಮಾನವಾದ ಪೇಯವಾಗಿದೆ .ಒಂದು ಎಳನೀರಿಗೆ ಅರ್ಧ ಲೋಟ ಕುದಿಸಿದ ಹಾಲನ್ನು ಬೆರೆಸಿ ಕುಡಿಯುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ .ದಿನದಲ್ಲಿ ಒಂದು ಬಾರಿ ಇದನ್ನು ಸೇವಿಸಿದರೆ ದೇಹವು ಒಣಗುವ ಪ್ರಮೇಯ ಬರುವುದಿಲ್ಲ .ಇದು ಪುಷ್ಟಿಕರ ಮತ್ತು ಶಕ್ತಿಯುತವಾದ ಪೇಯವಾಗಿದೆ .

೬.ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೆಕ್ಟಿನ್ ನ ಅಂಶ ಧಾರಾಳವಾಗಿರುವುದರಿಂದ  ಭೇದಿಯ ಸಂದರ್ಭದಲ್ಲಿ ಇದನ್ನು ಸೇವಿಸುವುದು ಒಳ್ಳೆಯದಾಗಿದೆ .ಪೆಕ್ಟಿನ್ ನೀರಿನಲ್ಲಿ ಕರಗುವ ನಾರಿನಂಶವನ್ನು ಹೊಂದಿರುವುದರಿಂದ ಭೇದಿಯನ್ನು ಕಡಿಮೆ ಮಾಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಇದರಲ್ಲಿ ಪೊಟ್ಯಾಸಿಯಂ ಸಹ ಜಾಸ್ತಿ ಇರುವುದರಿಂದ  ದೇಹದ ಮಹತ್ವದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಭೇದಿಯ ಸಂದರ್ಭದಲ್ಲಿ ಸೇವಿಸಿ .ಅರೆ ಹಣ್ಣಾದ ಬಾಳೆಹಣ್ಣುಗಳನ್ನು ಸೇವಿಸದಿರಿ .

ಭೇದಿಯು ತುಂಬಾ ಹೆದರಿಕೊಳ್ಳಬೇಕಾದ ರೋಗವೇನಲ್ಲ ಆದ್ರೆ ನಿರ್ಲಕ್ಷ್ಯ ಮಾಡಿದಲ್ಲಿ ಜೀವಕ್ಕೆ ಕುತ್ತು ಖಂಡಿತ ಇದೆ .ಪರಿಸ್ಥಿತಿ  ಕೈ ಮೀರಿ ಹೋದಲ್ಲಿ ವೈದ್ಯರ ಸಲಹೆ ಪಡೆಯುವುದನ್ನು ಖಂಡಿತ ಮರೆಯದಿರಿ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search