• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಆರೋಗ್ಯ ನಂಬಿದ್ರೆ ನಂಬಿ ಸುದ್ದಿ 

ಉಡುಪಿ: 1.80 ಲಕ್ಷ ಬೆಲೆಗೆ ಮಾರಾಟವಾದ ಅಪರೂಪದ ಘೋಲ್‌ ಮೀನು!

Tulunadu News Posted On November 24, 2021
0


0
Shares
  • Share On Facebook
  • Tweet It

ಮಲ್ಪೆ ಕಡಲಲ್ಲಿ ಕೋಲಿ ಗಂಗಾಮತ ಮೊಗವೀರ ಸಮುದಾಯದ ಮೀನುಗಾರರ ಬಲೆಗೆ ಬಿದ್ದ 20 ಕೆಜಿ ತೂಕದ ಒಂದೂ ಲಕ್ಷದ ಎಂಬತ್ತು ಸಾವಿರ ರೂಪಾಯಿಗಳ ಬೆಲೆ ಬಾಳುವ ಅಪರೂಪದ ಗೋಲಿ ( ಘೋಲ್) ಮೀನು.
 
ಈ ಗೋಲ್‌ ಎಂಬ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಆಳ ಸಮುದ್ರದಲ್ಲಿರುವ ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿರುತ್ತದೆ. ಆದರೆ ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.
 
ಗೋಲ್‌ ಮೀನು ಕಲ್ಮುರಿಯಂತೆ ಸಂದಿಗೊಂದುಗಳಲ್ಲಿ ಬದುಕುವ ಮೀನು. ಬಲೆಗೆ ಬೀಳುವುದು ಕಡಿಮೆ. ಇದರ ಜೀವಶಾಸ್ತ್ರೀಯ ದ್ವಿನಾಮಕರಣ Protonibea diacanthus. ಐಯೋಡಿನ್‌, ಒಮೆಗಾ-3 ಕೊಬ್ಬಿನ ಆಮ್ಲ, ಡಿ.ಎಚ್.ಎ, ಎ.ಪಿ.ಇ, ಕಬ್ಬಿಣ, ಮೆಗ್ನೀಶಿಯಮ್‌, ಸೆಲೆನಿಯಮ್‌ ಮುಂತಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಈ ಮೀನಿಗೆ ಔಷದೀಯ ಗುಣವಿರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಈ ಮೀನಿನ ಜಠರ ಭಾಗದಲ್ಲಿ ಇರುವ ಚೀಲದಂತಹ ರಚನೆಗೆ ಸಿಂಗಪೂರ್‌, ಹಾಂಗ್‌ ಕಾಂಗ್‌ ಇಂಡೋನೇಶಿಯಾ, ಜಪಾನ್‌ ಗಳಲ್ಲಿ ಬಹು ಬೇಡಿಕೆಯಿದೆ. ಈ ಚೀಲವೇ ಗೋಳಿಮೀನನ್ನು ಗೋಲ್ಡ್ ಫಿಶ್‌ ಎಂದು ಕರೆಯುವಂತೆ ಮಾಡಿದೆ.
ಗೋಲ್‌ ಮೀನಿನ ಚರ್ಮದಿಂದ ಸಂಸ್ಕರಿಸಲಾಗುವ ಕೊಲ್ಲಾಜೆನ್‌ ಚರ್ಮದ ಕಾಂತಿಯನ್ನು ಹೆಚ್ಚಿಸಿ ವಯಸ್ಸಾಗುವಿಕೆಯನ್ನು ತಡೆಯಬಲ್ಲದು ಎನ್ನುತ್ತಾರೆ. ನಮ್ಮ ದೇಹದ ವಿವಿಧ ಅಂಗಾಂಶಗಳನ್ನು ಅಂಟಿನಂತೆ ಜೋಡಿಸುವ ಒಂದು ಪ್ರೋಟಿನ್‌ ಯುಕ್ತ ವಸ್ತುವೇ ಕೊಲ್ಲಾಜೆನ್.. ಇದು ಎಲ್ಲ ಪ್ರಾಣಿಗಳ ದೇಹದಲ್ಲಿರುತ್ತದೆ. ಚರ್ಮದ ಭಾಗದಲ್ಲಿ ಹೆಚ್ಚಾಗಿರುತ್ತದೆ. ಸೌಂದರ್ಯ ವರ್ಧಕ ಕ್ರೀಮುಗಳಲ್ಲಿ ಕೊಲ್ಲಾಜೆನ್‌ ಸೇರಿಸುತ್ತಾರಾದರೂ ಚರ್ಮದ ಮೂಲಕ ಈ ವಸ್ತು ಹೀರಿಕೆಯಾಗುವುದು ಅನುಮಾನ. ಒಮೆಗಾ-3 ಕೊಬ್ಬಿನ ಆಮ್ಲದ ಆರೋಗ್ಯ ಮಹತ್ವದ ಬಗ್ಗೆ ಗೊತ್ತೇ ಇದೆ- ಇದು ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಫಾರ್ಮಾಸುಟಿಕಲ್ ಕಂಪನಿಯವರೇ ಈ ಮೀನುಗಳ ಹರಾಜಿನಲ್ಲಿ ಭಾಗವಹಿಸುತ್ತಾರೆಂದು ಕೇಳಿರುವೆ. ಆದುದರಿಂದ ಬೇರೆ ಬೇರೆ ಔಷದಿಗಳಲ್ಲಿ ಇದರ ಉಪಯೋಗವಿದೆ ಎಂದು ಊಹಿಸಬಹುದು. ಅರಬ್ಬಿ ಸಮದ್ರ ಮತ್ತು ಫೆಸಿಫಿಕ್‌ ಸಾಗರಗಳ ನಡುವೆ ಹೆಚ್ಚಾಗಿ ಕಂಡುಬರುವ ಈ ಮೀನು ಸಮುದ್ರದಲ್ಲಿರುವ ಬಂಗಾರದ ಕೊಪ್ಪರಿಗೆಯಾಗಿದೆ.
ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ತುಕಾರಾಮ್ ತಾರೆ ಎಂಬವರ ಒಂದೇ ಬಲೆಗೆ ನೂರೈವತ್ತೇಳು ಗೋಳಿಮೀನುಗಳು ಬಿದ್ದಿದ್ದವು. ಒಂದು ಕೋಟಿ ಮೂವತ್ಮೂರು ಲಕ್ಷ ರೂಪಾಯಿಗಳಷ್ಟು ಹಣಕ್ಕೆ ಆ ಮೀನುಗಳು ಮಾರಾಟವಾಗಿದ್ದವು.
0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search