• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಮಾನ ಕಳೆಯಲು ಸಚಿವರೇ ಬರಬೇಕಾಯಿತು!!

Hanumantha Kamath Posted On February 4, 2022


  • Share On Facebook
  • Tweet It

ಬೆಂಗಳೂರಿನಿಂದ ಸಚಿವರೊಬ್ಬರು ಬಂದು ಬೆಳಗ್ಗಿನ ಜಾವ ಒಂದು ಸುತ್ತು ಮಂಗಳೂರು ನಗರವನ್ನು ಪ್ರದಕ್ಷಿಣೆ ಹಾಕಿಕೊಂಡು ಬರೋಣವೆಂದು ಹೊರಟರೆ ಅವರಿಗೆ ಎದುರುಗೊಂಡದ್ದು ಕಸಕಡ್ಡಿ, ತ್ಯಾಜ್ಯದ ರಾಶಿಗಳು. ಅದನ್ನು ನೋಡಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನುವ ಸುದ್ದಿ ಇದೆ. ಸಚಿವರೆಂದರೆ ವಿಮಾನ ನಿಲ್ದಾಣದಿಂದ ನೇರವಾಗಿ ಡಿಸಿ ಆಫೀಸಿಗೋ ಅಥವಾ ಉದ್ಘಾಟನೆಗೋ ಸೀದಾ ಹೋಗಿ ಅಲ್ಲಿಂದ ಬೆಂಗಳೂರಿಗೆ ಹಿಂತಿರುಗುತ್ತಾರೆ ಎನ್ನುವುದು ಇಲ್ಲಿಯ ತನಕ ನಡೆದುಕೊಂಡು ಬಂದ ಸಂಪ್ರದಾಯ. ಇದರ ನಡುವೆ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಈ ಬಾರಿ ವಿಭಿನ್ನವಾಗಿ ನಿಂತಿದ್ದಾರೆ. ನಮ್ಮ ಮಂಗಳೂರಿನ ತ್ಯಾಜ್ಯಗಳು ಅಲ್ಲಲ್ಲಿ ರಸ್ತೆ ಬದಿ ಬಿದ್ದಿರುವುದನ್ನು ಅವರು ನಮಗೆ ತೋರಿಸುವ ಅನಿವಾರ್ಯತೆ ಬಂದಿದೆ ಎಂದರೆ ನಮ್ಮ ಸೌಂದರೀಕರಣ ಯಾವ ಲೆವೆಲ್ಲಿನಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ. ಅಪರೂಪಕ್ಕೆ ಬಂದಿರುವ ಸಚಿವರಿಗೆ ಈ ಊರಿನ ತ್ಯಾಜ್ಯ ಕಾಣಿಸುತ್ತದೆ ಎಂದರೆ ಅದೇ ವಾರ್ಡಿನಲ್ಲಿ ಓಡಾಡುವ ಕಾರ್ಪೋರೇಟರ್, ನಿತ್ಯ ಬೆಳಿಗ್ಗೆ ರೌಂಡಪ್ ಹಾಕಬೇಕಿದ್ದ ಹೆಲ್ತ್ ಇನ್ಸಪೆಕ್ಟರ್, ಪರಿಸರ ಅಭಿಯಂತರರು ಏನೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ವಾರ್ಡಿನಲ್ಲಿ ನಡೆದಾಡುತ್ತಿದ್ದರಾ ಎನ್ನುವ ಪ್ರಶ್ನೆ ಬರುತ್ತದೆ.
ನಾವು ವಾರ್ಡನ್ನು ಸ್ವಚ್ಚ, ಸುಂದರ ಮಾಡುತ್ತೇವೆ ಎಂದು ರೈಲು ಬಿಟ್ಟು ಗೆದ್ದ ಬಂದಿರುವ ಕಾರ್ಪೋರೇಟರ್ ಅವರನ್ನು ಕರೆದು ಸಚಿವರು ಬೈಯಬೇಕಾಗಿತ್ತು. ಇನ್ನು ಬೆಳಿಗ್ಗೆ ಇಡೀ ತಮಗೆ ಕೊಟ್ಟಿರುವ ವಾರ್ಡಿನಲ್ಲಿ ಇದ್ದು, ಮೂರು ಗಂಟೆಯ ನಂತರ ಪಾಲಿಕೆಯ ತಮ್ಮ ವಿಭಾಗಕ್ಕೆ ಬರಬೇಕಿರುವ ಆರೋಗ್ಯ ನಿರೀಕ್ಷಕರು ಮತ್ತು ಪರಿಸರ ಅಭಿಯಂತರರನ್ನು ಕರೆದು ತಕ್ಷಣ ಅಮಾನತು ಮಾಡಬೇಕಿತ್ತು. ಯಾಕೆಂದರೆ ಇದು ಈ ಮೂವರ ಜವಾಬ್ದಾರಿ. ಆದರೆ ಈ ಮೂವರನ್ನು ಕೂಡ ಹೇಳುವವರು ಮತ್ತು ಕೇಳುವವರು ಯಾರೂ ಇಲ್ಲ. ಇವರು ತಮ್ಮ ಕಚೇರಿಯಲ್ಲಿಯೇ ಇಡೀ ದಿನ ಝಂಡಾ ಊರಿ ಕುಳಿತುಬಿಟ್ಟಿರುತ್ತಾರೆ. ಕಸಕಡ್ಡಿ, ತ್ಯಾಜ್ಯಗಳು ಊರೀಡಿ ಹರಡಿದ್ದರೆ ಇವರಿಗೇನು ಹೋಗಬೇಕು. ಇವರಿಗೆ ತಿಂಗಳಾದ ಕೂಡಲೇ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಕಳುಹಿಸಿಕೊಡುವ ಎಂಜಿಲು ಕವರ್ ಸರಿಯಾಗಿ ಸಿಕ್ಕಿದರೆ ಸಾಕು. ನಮ್ಮ ವಾರ್ಡಿನಲ್ಲಿ ಸರಿಯಾಗಿ ಮನೆ ಮನೆ ಕಸ ಸಂಗ್ರಹ ಯಾಕ್ರೀ ಮಾಡಲ್ಲ, ಏನ್ರೀ ಕೊಬ್ಬು ನಿಮಗೆ ಎಂದು ಆಂಟೋನಿ ವೇಸ್ಟ್ ಗೆ ಇಲ್ಲಿಯ ತನಕ ಯಾವ ಕಾರ್ಪೋರೇಟರ್ ಅಥವಾ ಅಧಿಕಾರಿಗಳು ಕೇಳಿದ್ದಾರಾ? ಇಲ್ಲಾ, ಕೇಳಿಲ್ಲ. ಯಾಕೆಂದರೆ ಕೇಳುವ ನೈತಿಕತೆ ಯಾರೂ ಉಳಿಸಿಕೊಂಡಿಲ್ಲ.
ಆ ಆಂಟೋನಿಯವರು ಕಳೆದ ಬಾರಿ ತಮ್ಮ ಟೆಂಡರ್ ಅವಧಿ ಮುಗಿಯುವ ಎರಡು ತಿಂಗಳು ಇರುವಾಗಲೇ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹ ನಿಲ್ಲಿಸಿಯಾಗಿತ್ತು. ಈಗ ನಾಲ್ಕು ತಿಂಗಳ ಮೊದಲಿನಿಂದ ಕನಿಷ್ಟ 90% ಮನೆಗಳಿಂದಲಾದರೂ ತ್ಯಾಜ್ಯ ಸಂಗ್ರಹ ಆಗುತ್ತಿತ್ತು. ಈಗ ಅದು ಕೂಡ ಇಲ್ಲ. ಆದ್ದರಿಂದ ಅನೇಕ ಕಡೆ ಜನ ತಾವು ಹಿಂದೆ ಎಲ್ಲಿ ತಂದು ಕಸ ಗುಡ್ಡೆ ಹಾಕುತ್ತಿದ್ದರೋ ಅಲ್ಲಿಯೇ ಮತ್ತೆ ಕಸ ತಂದು ಬಿಸಾಡಿ ಹೋಗುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಈ ಅತೀ ಬುದ್ಧಿವಂತ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಹೊಸ ಉಪಾಯವೊಂದನ್ನು ಮಾಡಿದ್ದಾರೆ.

ಜನರು ಈ ಕಸ ಬಿಸಾಡುವ ಜಾಗಗಳನ್ನು ಬ್ಲ್ಯಾಕ್ ಪಾಯಿಂಟ್ ಎಂದು ಗುರುತಿಸಿ, ಅಲ್ಲಿ ಒಂದಿಷ್ಟು ಸ್ವಚ್ಚ ಮಾಡಿ, ಒಂದು ಬ್ಯಾನರ್ ಹಾಕಿ “ಇಲ್ಲಿ ಕಸ ಹಾಕಿದರೆ ಇಂತಿಷ್ಟು ದಂಡ” ಎಂದು ಬರೆಯಿಸಿ, ಅಲ್ಲೊಂದು ಸಿಸಿಟಿವಿ ಕ್ಯಾಮೆರಾ ಇಟ್ಟು ಕೈತೊಳೆದುಕೊಂಡು ಬಿಟ್ಟಿದ್ದಾರೆ. ಇದಕ್ಕೆ ಇವರು ಇಟ್ಟ ಅನುದಾನ 25 ಲಕ್ಷ ರೂಪಾಯಿಗಳು. ಇಷ್ಟೆಲ್ಲ ಮಾಡಿದ ನಂತರ ಅಲ್ಲಿ ಯಾರಾದರೂ ಬಂದು ಕಸ ಬಿಸಾಡಿದರೆ ಅವರು ಯಾರು, ಎಲ್ಲಿ ಮನೆ ಎಂದು ಹುಡುಕಿ ದಂಡ ಹಾಕುವುದು ಹೇಗೆ? ಯಾರಿಗೆ ಗೊತ್ತಾಗುತ್ತೆ? ಅದರ ಬದಲು ಏನೂ ಖರ್ಚಿಲ್ಲದ ಒಂದು ಉಪಾಯವನ್ನು ನಾನು ಇವರಿಗೆ ಹೇಳಿಕೊಡುತ್ತೇನೆ. ಅದೇನೆಂದರೆ ಆಯಾ ವಾರ್ಡಿನ ಕಾರ್ಪೋರೇಟರ್ ಆ ಕಸ ತಂದು ಬೀಳುತ್ತದೆಯಲ್ಲ, ಆ ರಸ್ತೆಯ ಮನೆಮನೆಗೆ ಹೋಗಿ ನಿಮ್ಮ ಮನೆಯಿಂದ ಕಸ ಸರಿಯಾಗಿ ಸಂಗ್ರಹವಾಗುತ್ತದಾ ಎಂದು ವಿಚಾರಿಸಿದರೆ ಆಯಿತಲ್ಲವೇ? ನೀವು ಹೇಗೂ ಪಕ್ಷದ ಕಾರ್ಯಕ್ರಮ, ಎಂಪಿ, ಎಂಎಲ್ ಎ ಚುನಾವಣೆ, ಅದು ಇದು ಎಂದು ವಾರ್ಡಿನಲ್ಲಿ ಐದು ವರ್ಷಕ್ಕೆ ಕೆಲವು ಸಲ ಎಲ್ಲರ ಮನೆಗಳಿಗೆ ಹೋಗಬೇಕಾಗಿರುತ್ತೀರಿ. ಹಾಗೆ ಒಂದು ಸಲ ಸರಿಯಾಗಿ ಕಸ ಸರಿಯಾಗಿ ಸಂಗ್ರಹವಾಗುತ್ತದಾ ಎಂದು ವಿಚಾರಿಸಲು ಹೋಗಬಹುದಲ್ಲವೇ?ಒಂದು ವೇಳೆ ನಿಮ್ಮ ಕಾರ್ಪೋರೇಟರ್ ಹೀಗೆ ಮಾಡದಿದ್ದರೆ ನಾನು ಜನರಲ್ಲಿ ವಿನಂತಿಸುವುದೇನೆಂದರೆ ತಾವು ಎಲ್ಲೆಲ್ಲಿ ಕಸ ತಂದು ಹಾಕಿ ಅದು ಸಚಿವರಂತವರು ಯಾರೋ ನೋಡಿ ನಮ್ಮ ಮಂಗಳೂರಿನ ಮರ್ಯಾದೆಯನ್ನು ಹರಾಜು ಹಾಕುವ ಬದಲು ಆ ಕಸಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಎದುರು ತಂದು ಗುಡ್ಡೆ ಹಾಕಿ. ಅಲ್ಲಿ ಕಸದ ರಾಶಿ ಬಿದ್ದರೆ ಸಚಿವರು ಎಲ್ಲಿಯೂ ಹೋಗದೇ ಅಲ್ಲಿಯೇ ನಿಂತು ನೋಡಬಹುದು. ಇದರಿಂದ ಮಂಗಳೂರಿನ ಸೌಂದರ್ಯ ಅವರಿಗೆ ಅಲ್ಲಿಯೇ ಅರ್ಥವಾಗುತ್ತದೆ. ಆಂಟೋನಿಯವರು ಈ ಕಾರ್ಪೋರೇಟರ್ ಗಳನ್ನು, ಅಧಿಕಾರಿಗಳನ್ನು ಖರೀದಿಸಿರುವುದು ಗೊತ್ತಾಗುತ್ತದೆ!

  • Share On Facebook
  • Tweet It


- Advertisement -


Trending Now
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
Hanumantha Kamath January 26, 2023
Leave A Reply

  • Recent Posts

    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
    • ವಕ್ಫ್ ಬೋರ್ಡ್ ಅಧ್ಯಕ್ಷರ ಕ್ಲೈಮ್ಯಾಕ್ಸ್ ಆಟದಿಂದ ಬಿಜೆಪಿಗೆ ಟೆನ್ಷನ್!
  • Popular Posts

    • 1
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 2
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search