• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇವಾಲಯ ಕೆಡವಲು ಅಡ್ಡಬಂದವರ ಮನೆಗೆ ಬುಲ್ಡೋಜರ್!!

Hanumantha Kamath Posted On April 22, 2022


  • Share On Facebook
  • Tweet It

ಕಲ್ಲು ಬಿಸಾಡಿದವರ ಅಕ್ರಮ ಕಟ್ಟಡಗಳನ್ನು ಕೆಡವುದಕ್ಕೆ ಭಾರತೀಯ ಜನತಾ ಪಾರ್ಟಿ ಹಾಗೂ ಆಮ್ ಆದ್ಮಿ ಪಕ್ಷಗಳು ಬುಲ್ಡೋಜರ್ ಹಾಯಿಸಲು ತೊಡಗಿದಾಗ ತಮ್ಮ ಬಾಯಿ ಬಡಿದು ಬೊಬ್ಬೆ ಹಾಕುತ್ತಿದ್ದ ಎಡಪಂಥಿಯರು, ಮಮತಾ ಮತ್ತು ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ ಎನ್ನುವುದೇ ವಿಷಯ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ರಾಜಸ್ಥಾನದಲ್ಲಿ ಅಲಾವರ ಎನ್ನುವ ಸ್ಥಳವಿದೆ. ಅಲ್ಲಿ ಮುನ್ನೂರು ವರ್ಷಗಳ ಹಳೆಯ ದೇವಸ್ಥಾನವಿತ್ತು. ಶಿವನ ದೇವಾಲಯ. ಸ್ಥಳೀಯರು ಅದನ್ನು ಬಹಳ ಭಯಭಕ್ತಿಗಳಿಂದ ಆರಾಧಿಸಿಕೊಂಡು ಬರುತ್ತಿದ್ದರು. ಮೊನ್ನೆ ಅಲ್ಲಿನ ಸರಕಾರ ಆ ದೇವಸ್ಥಾನ ಸಹಿತ ಒಟ್ಟು ಮೂರು ದೇವಾಲಯಗಳನ್ನು ಓಡೆಯಲು ಮುಂದಾಗಿದೆ. ಬುಲ್ಡೋಜರ್ ಬರುತ್ತಿದ್ದಂತೆ ಸ್ಥಳೀಯರು ಅಡ್ಡ ಬಂದಿದ್ದಾರೆ. ಯಾವುದೇ ಕಾರಣಕ್ಕೂ ದೇವಾಲಯ ಕೆಡವಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ. ನೀವು ದೇವಾಲಯ ಕೆಡವಲು ಅಡ್ಡ ಬಂದರೆ ಮೂರ್ತಿಯನ್ನು ಮುರಿದು ಚರಂಡಿಗೆ ಬಿಸಾಡುತ್ತೇವೆ ಎಂದು ಕೆಡವಲು ಬಂದವರು ಹೇಳಿದ್ದಾರೆ.

ಕೊನೆಗೆ ಆ ಶಿವ ದೇವಾಲಯವನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಕೆಡವಲು ಬಂದವರು ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ ಇನ್ನೆರಡು ದೇವಸ್ಥಾನಗಳನ್ನು ಕೂಡ ಕೆಡವಿ ಹೋಗಿದ್ದಾರೆ. ಇದು ಒಂದು ಹಂತ. ಇಷ್ಟೇ ಆಗಿದ್ರೆ ಅಲ್ಲಿರುವುದು ಕಾಂಗ್ರೆಸ್ ಸರಕಾರ, ಅವರಿಂದ ಅಲ್ಲಿನ ಜನ ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಹುದು. ಆದರೆ ಅಲ್ಲಿನ ರಾಜ್ಯ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ಪರ ಪ್ರತಿಭಟನೆ ಮಾಡಿದವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಿಬಿಟ್ಟಿದೆ. ಹಾಗಾದರೆ ರಾಷ್ಟ್ರಾದ್ಯಂತ ಕಾಂಗ್ರೆಸ್ ನಿಲುವು ಏನು? ಹಿಂದೂ ದೇವಾಲಯಗಳನ್ನು ಕೆಡವುದು ಎನ್ನುವುದಾ? 300 ವರ್ಷಗಳ ಹಿಂದಿನ ದೇವಾಲಯ ಅನಧಿಕೃತ ಹೇಗಾಗುತ್ತದೆ? ಇನ್ನು ದೇವಾಲಯ ಉಳಿಸಲು ಪ್ರತಿಭಟಿಸಿದವರ ಮನೆಯನ್ನು ಇವರು ಕೆಡವಿದರಲ್ಲಾ? ಈಗ ಆ ಎಡಪಂಥಿಯರು, ಮಮತಾ ಹದಿನೈದು ದಿನಗಳ ನೋಟಿಸು ಕೊಟ್ಟಿದ್ದೀರಾ ಎಂದು ಯಾಕೆ ಕೇಳುವುದಿಲ್ಲ. ಹಾಗಾದರೆ ಮುಸ್ಲಿಂ ಗಲಭೆಕೋರರ ಮನೆಗಳನ್ನು ಕೆಡವಿದರೆ ಭಾತೃತ್ವ ಪ್ರೇಮ ಹುಟ್ಟುವ ಇವರಿಗೆ ದೇವಸ್ಥಾನಕ್ಕೆ ಹೋರಾಡಿದವರ ಮನೆಯನ್ನು ಕೆಡವಿದರೆ ಮಾತನಾಡಲು ಬಾಯಿ ಬರಲ್ವಾ? ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿಯಲ್ಲಿ ಏನು ಮಾಡಿದರೋ ಅದರ ವಿರುದ್ಧವಾಗಿ ಮುಸ್ಲಿಮರನ್ನು ಸಂತುಷ್ಟಗೊಳಿಸಲು ಕಾಂಗ್ರೆಸ್ ಕೈಗೊಂಡಿರುವ ನಿರ್ಧಾರ ಅವರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಆಗುವುದು ನಿಜ!!

  • Share On Facebook
  • Tweet It


- Advertisement -


Trending Now
ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
Hanumantha Kamath May 24, 2025
60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
Hanumantha Kamath May 24, 2025
Leave A Reply

  • Recent Posts

    • ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
  • Popular Posts

    • 1
      ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 2
      60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • 3
      ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • 4
      ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • 5
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search