• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಾಲ್ಕು ವೋಟ್ ಹಾಕಿಸಲು ಆಗದ ಬಿಕೆಗೆ ಭಯೋತ್ಪಾದಕರು ಕಾಣಿಸ್ತಾರೆ!

Hanumantha Kamath Posted On May 12, 2022
0


0
Shares
  • Share On Facebook
  • Tweet It

ಗಾಂಧಿ ಕುಟುಂಬದ ಕಿಚನ್ ಕ್ಯಾಬಿನೆಟ್ ಸದಸ್ಯರಾಗಿರುವ ಬಿಕೆ ಹರಿಪ್ರಸಾದ್ ರಾಜ್ಯಸಭೆಯಲ್ಲಿ ಹಲವು ವರ್ಷಗಳ ತನಕ ಇದ್ದು, ಈಗ ಕರ್ನಾಟಕ ರಾಜ್ಯದಲ್ಲಿ ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ನೇರವಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲದೇ, ಗಾಂಧಿಗಳಿಗೆ ಆಗಾಗ ವಿಟಾಮಿನ್ ಗಳನ್ನು ಪೂರೈಸುವ ನಿಷ್ಟ ಕಾಂಗ್ರೆಸ್ಸಿಗ ಬಿಕೆ. ಆಗಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ, ಹಿಂದೂ ಸಂಘಟನೆಗಳಿಗೆ ಬೈಯದೇ ಇದ್ದರೆ ಜನಪಥ್ 10 ರಲ್ಲಿ ಕುಳಿತಿರುವ ಗಾಂಧಿಗಳಿಗೆ ತಮ್ಮ ಅಸ್ತಿತ್ವ ಗೊತ್ತಾಗಲ್ಲ ಎನ್ನುವ ಅರಿವು ಬಿಕೆಗೆ ಇದೆ. ಆದ್ದರಿಂದ ಅವರು ಅವಕಾಶ ಸಿಕ್ಕಿದ ಕಡೆ ಗುಟುರು ಹಾಕುತ್ತಾ ಇರುತ್ತಾರೆ. ಅವರಿಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬದ ನಿಕಟವರ್ತಿ ಎನ್ನುವ ಒಂದೇ ಕಾರಣಕ್ಕೆ ಗೌರವ ಇದೆ ಹೊರತು ಜನನಾಯಕ ಎಂದು ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗಿಂತ ಬೂತ್ ಮಟ್ಟದ ನಾಯಕರು ಕೂಡ ಹೆಚ್ಚು ಮತ ಹಾಕಿಸಬಲ್ಲರು ಎನ್ನುವುದು ವಾಸ್ತವ ಸತ್ಯ. ಅಂತಹ ಬಿಕೆ ಈಗ ಮತ್ತೆ ಒಂದು ಕಳಪೆ ಹೇಳಿಕೆ ಕೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಆಜಾನ್ ಲೌಡ್ ಸ್ಪೀಕರ್ ಶಬ್ದ ಕಡಿಮೆ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ವಿಶೇಷವಾಗಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಹೋರಾಡಿತ್ತಲ್ಲ, ಅವರನ್ನು ಈ ಬಿಕೆ ಉಗ್ರರು ಎಂದು ಘೋಷಿಸಿದ್ದಾರೆ. ಅದನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿವಕುಮಾರ್ ಸಮರ್ಥಿಸಿದ್ದಾರೆ. ಈಗ ವಿಷಯ ಇರುವುದು ಏನೆಂದರೆ ಹಿಂದೂ ಸಂಘಟನೆಗಳನ್ನು ಅಷ್ಟು ಸುಲಭವಾಗಿ ಉಗ್ರರು, ಭಯೋತ್ಪಾದಕರು ಎಂದು ಇವರು ಹಣೆಪಟ್ಟಿ ಕಟ್ಟುತ್ತಾರಲ್ಲ, ಅದೇ ಮುಸ್ಲಿಂ ಸಂಘಟನೆಗಳು ಪೊಲೀಸ್ ಸ್ಟೇಶನ್ನಿಗೆ ಕಲ್ಲು ಬಿಸಾಡಿದರೂ, ಪೊಲೀಸ್ ವಾಹನ ಜಖಂಗೊಳಿಸಿದರೂ, ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದರೂ ಇವರು ಅವರಿಗೆ ಭಯೋತ್ಪಾದಕರು ಎಂದು ಹೇಳುವುದಿಲ್ಲ. ಆಗ ಇವರ ನಾಲಗೆ ಹೊರಳುವುದಿಲ್ಲ. ಬುದ್ಧಿ ಕೆಲಸ ಮಾಡುವುದಿಲ್ಲ. ಹಿಂದೂ ಸಂಘಟನೆಗಳು ದೇವಸ್ಥಾನಗಳಲ್ಲಿ ಭಜನೆ ಮಾಡಿದರೆ ಇವರಿಗೆ ಅವರು ಉಗ್ರರ ತರಹ ಕಾಣಿಸುತ್ತಾರೆ. ದೇವಸ್ಥಾನಗಳಲ್ಲಿ ಸುಪ್ರಭಾತ ಕೇಳಿಸಿದರೆ ಇವರಿಗೆ ಮೈಮೇಲೆ ದೆವ್ವ ಬಂದಂತೆ ಆಗುತ್ತದೆ. ಅದೇ ಮಸೀದಿಗಳ ಆಝಾನ್ ಇವರಿಗೆ ತೊಟ್ಟಿಲಲ್ಲಿ ಜೋಗುಳ ಹಾಡಿದಂತೆ ಕೇಳುತ್ತದೆ.
ಇನ್ನು ಡಿಕೆಶಿ ಡಿಜೆಹಳ್ಳಿ, ಕೆಜಿಹಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಬ್ರದರ್ಸ್ ಎಂದು ಕರೆದರು. ಒಂದು ಪಕ್ಷದ ರಾಜ್ಯಾಧ್ಯಕ್ಷರು ಒಂದು ಊರಿಗೆ ಬೆಂಕಿ ಹಚ್ಚಲು ಹೊರಟವರನ್ನು, ತಮ್ಮ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದವರನ್ನು ಬ್ರದರ್ಸ್ ಎಂದು ಕರೆದರೆ ಏನಾಗುತ್ತದೆ? ಅವರಿಗೆ ಅಂತಹ ವಿಧ್ವಂಸಕ ಕೃತ್ಯಗಳನ್ನು ಇನ್ನಷ್ಟು ಮಾಡಲು ಧೈರ್ಯ ಬರುತ್ತದೆ. ಅದೇ ರೀತಿಯ ಘಟನೆ ಮಂಗಳೂರಿನಲ್ಲಿ ನಡೆದಿತ್ತಲ್ಲ. ಸಿಎಎ ವಿರುದ್ಧ ಪ್ರತಿಭಟನೆಗೆ ಇಳಿದವರು ಪೊಲೀಸ್ ಠಾಣೆಗೆ ಪೆಟ್ರೋಲ್ ಬಾಂಬ್ ಎಸೆಯಲು, ಆಯುಧಗಳ ಸಂಗ್ರಹ ಮಳಿಗೆಯ ಬಾಗಿಲು ಓಡೆಯಲು ಹೊರಟಾಗ ಬೇರೆ ದಾರಿಯಿಲ್ಲದೆ ಶೂಔಟ್ ಆಗಿತ್ತಲ್ಲ, ಆಗ ಸತ್ತ ಇಬ್ಬರ ಮನೆಗಳಿಗೆ ಹೋಗಿ ಪರಿಹಾರ ನೀಡಲು ಕಾಂಗ್ರೆಸ್ ಹೋಗಿತ್ತಲ್ಲ, ಬಿಜೆಪಿ ಸರಕಾರ ವಿರುದ್ಧ ವ್ಯರ್ಥ ಆರೋಪ ಮಾಡಿತ್ತಲ್ಲ, ಇದೆಲ್ಲವೂ ದುರುಳರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಇಂತಹ ಘಟನೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೂಡ ನಡೆಯಿತ್ತಲ್ಲ. ಆಗಲೂ ಬಿಕೆ ಹಾಗೂ ಡಿಕೆ ಇಬ್ಬರೂ ಆ ಘಟನೆಗೆ ಕಾರಣರಾದವರನ್ನು ಭಯೋತ್ಪಾದಕರು ಎಂದಿಲ್ಲ. ಅದೇ ದೇವಸ್ಥಾನದಲ್ಲಿ ಭಜನೆ ಮಾಡಿದವರು ಇವರಿಗೆ ಭಯೋತ್ಪಾದಕರ ತರಹ ಕಾಣಿಸ್ತಾರಾ?

ಕಾಂಗ್ರೆಸ್ಸಿನ ಇದೇ ರೀತಿಯ ಮನಸ್ಥಿತಿಯಿಂದಲೇ ಅದು ಜನರಿಂದ ದೂರ ಆಗುತ್ತಿದೆ. ಹರಿಪ್ರಸಾದಿಗೆ ಜನರಿಂದ ಆಯ್ಕೆಯಾಗಿ ಗೊತ್ತಿಲ್ಲ. ಡಿಕೆಗೆ ಬಿಕೆಯನ್ನು ಬೆಂಬಲಿಸದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಮುಂದಿನ ದಿನಗಳಲ್ಲಿ ಯಾವಾಗಲಾದರೂ ಪಕ್ಷ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಸೋನಿಯಾ ಮನೆಯ ಗೇಟನ್ನು ಡಿಕೆಗಾಗಿ ಯಾರಾದರೂ ತೆರೆಯಬೇಕಾದರೆ ಆ ಸಾಮರ್ತ್ಯ ಇರುವುದು ಬಿಕೆಗೆ ಮಾತ್ರ. ಇಲ್ಲದೇ ಹೋದರೆ ಇಂತಹ ವಿಷಯಗಳಲ್ಲಿ ಡಿಕೆಶಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಆದರೆ ಅವರು ಎಷ್ಟೇ ಸಾಫ್ಟ್ ಹಿಂದೂತ್ವದ ಕಡೆ ವಾಲಿದರೂ, ಕೇಸರಿ ಶಾಲನ್ನು ಧರಿಸಿದರೂ ಅತ್ತ ಸಿದ್ದು ಇತ್ತ ಬಿಕೆ ಇಂತಹ ಹೇಳಿಕೆಯನ್ನು ಕೊಡುವ ಮೂಲಕ ಕಾಂಗ್ರೆಸ್ಸನ್ನು ಹಿಂದೂಗಳ ಕಡೆ ಸೆಳೆಯಲು ಡಿಕೆ ಮಾಡುವ ಅಷ್ಟೂ ಪ್ರಯತ್ನಕ್ಕೆ ಮತ್ತೆ ಲಿಂಬೆ ಹಣ್ಣು ಹಿಂಡುತ್ತಿದ್ದಾರೆ.

ಒಂದು ವೇಳೆ ಹಿಂದೂ ಸಂಘಟನೆಗಳು ಆಜಾನ್ ಶಬ್ದ ತಗ್ಗಿಸುವ ಹಿನ್ನಲೆಯಲ್ಲಿ ಮಸೀದಿಗಳಿಗೆ ಕಲ್ಲು ಹೊಡೆದರೆ ಆಗ ಇಂತಹ ಹೇಳಿಕೆ ಬಂದರೆ ಅದು ಬೇರೆ ವಿಷಯ. ಬಹುಶ: ಒಂದು ವೇಳೆ ಹಾಗೆ ಆಗಿದ್ದರೆ ಬಿಕೆ ಮತ್ತು ಡಿಕೆ ಹಿಂದೂ ಸಂಘಟನೆಗಳನ್ನು ತಕ್ಷಣ ಬ್ಯಾನ್ ಮಾಡಲು ಪ್ರತಿಭಟನೆಗೆ ಕುಳಿತಿದ್ದರೋ ಏನೋ? ಕೆಲವೊಮ್ಮೆ ರಾಜಕೀಯದಲ್ಲಿ ಚಲಾವಣೆಗೆ ಇರಲು ಹೇಳಿಕೆಗಳನ್ನು ಕೊಡುವ ಅವಶ್ಯಕತೆ ರಾಜಕಾರಣಿಗಳಿಗೆ ಇರುತ್ತದೆ. ಪ್ರಚಾರದಲ್ಲಿ ಇರದ ಜನಪ್ರತಿನಿಧಿ ಚಲಾವಣೆಯಲ್ಲಿ ಇಲ್ಲದ ನಾಣ್ಯದ ತರಹ ಜನ ಮರೆತುಬಿಡುತ್ತಾರೆ. ಆದರೆ ಹಾಗಂತ ಇಂತಹ ಹೇಳಿಕೆ ಕೊಡುವ ಮೊದಲು ಇವರು ಯೋಚಿಸುವುದಿಲ್ಲವೇ?

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search