• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಯಡ್ಡಿಯ 1 ವರ್ಷದ ದಿವ್ಯ ಮೌನ ದುಬಾರಿಯಾಗಲಿದೆ ಎಂದು ಹೈಕಮಾಂಡಿಗೆ ಅನಿಸಿತ್ತು!

Hanumantha Kamath Posted On August 24, 2022
0


0
Shares
  • Share On Facebook
  • Tweet It

ಯಡ್ಯೂರಪ್ಪನವರನ್ನು ಕೇಂದ್ರಿಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸದಸ್ಯರನ್ನಾಗಿಸಿ ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಒಬ್ಬ ವ್ಯಕ್ತಿ 78 ವರ್ಷಗಳ ವಯಸ್ಸಿನ ನಂತರ ರಾಜ್ಯದ ಮುಖ್ಯಮಂತ್ರಿಯಾಗಲು ಸಮರ್ತರಲ್ಲ ಎಂದಾದರೆ ಅದೇ ಮನುಷ್ಯ 79 ನೇ ವಯಸ್ಸಿನಲ್ಲಿ ದಕ್ಷಿಣ ಭಾರತದ ಉಸ್ತುವಾರಿಯನ್ನು ನೋಡಿಕೊಳ್ಳಲು ಎಷ್ಟು ಪರಿಪೂರ್ಣರಾಗಿರುತ್ತಾರೆ ಎನ್ನುವುದು ರಾಜಕೀಯ ಪಂಡಿತರ ಪ್ರಶ್ನೆ ಮತ್ತು ಅಭಿಪ್ರಾಯ. ಇದೇ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿದೆ. ವಯಸ್ಸಿನ ಕಾರಣಕ್ಕೆ ಇಳಿಸಿದ್ದೇ ಆದರೆ ಈಗ ಅದಕ್ಕಿಂತಲೂ ದೊಡ್ಡ ಹುದ್ದೆ ಕೊಡುವ ನೆಪ ಹಾಸ್ಯಾಸ್ಪದ. ಬಿಜೆಪಿಯಲ್ಲಿ ಒಂದು ಪದ್ಧತಿ ಇದೆ. ಅದು ತನ್ನ ಕೇಂದ್ರಿಯ ಸಂಸದೀಯ ಮಂಡಳಿಯಲ್ಲಿ ಇಷ್ಟೇ ಸದಸ್ಯರು ಇರಬೇಕು ಎನ್ನುವ ನಿಯಮವನ್ನು ಮಾಡಿದೆ. ಎಐಸಿಸಿ ಕಾಂಗ್ರೆಸ್ ಪದಾಧಿಕಾರಿಗಳನ್ನು ತುಂಬಿದ ಹಾಗೆ ಮನಸ್ಸೋ ಇಚ್ಚೇ ಸದಸ್ಯರನ್ನು ಬಿಜೆಪಿ ತನ್ನ ಸಂಸದೀಯ ಮಂಡಳಿಯಲ್ಲಿ ತುಂಬುವುದಿಲ್ಲ. ಅವರಿಗೆ ಬೇಸರ ಆಗುತ್ತೆ, ಇವರಿಗೆ ನೋವಾಗುತ್ತೆ, ಹತ್ತರಲ್ಲಿ ಹನ್ನೊಂದು ಇರಲಿ ಬಿಡಿ ಎಂದು ಸಿಕ್ಕಿದವರನ್ನು ಕರೆಸಿ ಮಂಡಳಿ ತುಂಬಿಸಿಕೊಳ್ಳುವುದಿಲ್ಲ. 11 ಮಂದಿ ಗರಿಷ್ಟ. ಒಬ್ಬ ವ್ಯಕ್ತಿ ಒಳಗೆ ಬರುವಾಗ ಇನ್ನೊಬ್ಬ ಜಾಗ ಖಾಲಿ ಮಾಡಬೇಕು. ದೂಸರಾ ಮಾತೇ ಇಲ್ಲ. ಹೋಗುವವರು ಎಷ್ಟೇ ಪ್ರಭಾವಿಯಾಗಿರಲಿ, ಪುನರಾಚನೆ ಎಂದ ಕೂಡಲೇ ದೇಶದ ಯಾವುದೇ ಮೂಲೆಯಿಂದ ಬಿಜೆಪಿಯ ಯಾವ ಮುಖಂಡರಲ್ಲಿ ಯಾರು ಬೇಕಾದರೂ ಒಳಗೆ ಬರುವ ಸಾಧ್ಯತೆ ಇದೆ. ಬೇಡವಾದವರು ಹೊರ ಹೋಗುವುದು ಅಷ್ಟೇ ಮೌನವಾಗಿ ನಡೆಯುತ್ತದೆ.
ಒಳಗೆ ಇದ್ದವರೆಲ್ಲ ಏನೋ ಕಡಿದು ಕಟ್ಟೆ ಹಾಕುತ್ತಾರೆ ಎಂದಲ್ಲ. ಸಂಸದೀಯ ಮಂಡಳಿಯಲ್ಲಿ ಮೋದಿ, ಶಾ ಮಾತೇ ಫೈನಲ್. ಉಳಿದವರು ಸಭೆಗಳಲ್ಲಿ ತಮ್ಮ ಅಭಿಪ್ರಾಯ ಹೇಳಲು ಅವಕಾಶ ಸಿಗುತ್ತದೆ ಎನ್ನುವುದೇ ಪುಣ್ಯ. ಅದರೊಂದಿಗೆ ಹೈಕಮಾಂಡ್ ನಲ್ಲಿ ನಾನು ಒಬ್ಬ ಜನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶ ಮತ್ತು ವರ್ಚಸ್ಸು ಸಿಗುತ್ತದೆ, ಅಷ್ಟೇ. ವಿಷಯ ಹೀಗಿರುವುದರಿಂದ ಯಡ್ಡಿ ಆ ಮಂಡಳಿಯಲ್ಲಿ ಮೊದಲ ಬಾರಿಗೆ ಸದಸ್ಯರಾಗಿರುವುದು ಅವರಿಗೆ ಏನೋ ದೊಡ್ಡ ಕಿರೀಟ ಕೊಟ್ಟ ಹಾಗೆ ಎಂದು ಜನರಿಗೆ ತೋರಿಸಿಕೊಡುವ ಅನಿವಾರ್ಯತೆ ರಾಜ್ಯ ಬಿಜೆಪಿಯಲ್ಲಿದೆ. ಯಾಕೆಂದರೆ ಇದು ಸಮರ ಆರಂಭವಾದ ಸಮಯ. ಒಂದು ವೇಳೆ ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆ ಆದ ಮರುದಿನ ಈ ನೇಮಕ ಮಾಡಿದಿದ್ರೆ ಅದನ್ನು ಬಿಜೆಪಿ ರಾಜ್ಯ ನಾಯಕರು ಅಷ್ಟು ಸಂಭ್ರಮಿಸುತ್ತಿರಲಿಲ್ಲ. ಯಾಕೆಂದರೆ ಆಗ ಫಲಿತಾಂಶ ಎದುರಿಗೆ ಇರುತ್ತಿತ್ತು. ಆದರೆ ಈಗ ಯಡ್ಡಿ ದೊಡ್ಡ ಸ್ಥಾನ ಕೊಟ್ಟಿದ್ದೇವೆ ಎಂದು ತೋರಿಸಿ ಆ ಮೂಲಕ ನಿರ್ಣಾಯಕ ಲಿಂಗಾಯತ ಮತದಾರರಿಗೆ ಸಂದೇಶ ಕೊಡುವ ಅಗತ್ಯ ಇದೆ. ಅದು ಈಗ ಆಗಿದೆ ಅಷ್ಟೇ.

ಸದ್ಯ ಇನ್ನು ಒಂದೂವರೆ ವರ್ಷ ಯಡ್ಡಿ ಆ ಸ್ಥಾನದಲ್ಲಿ ಇದ್ದೇ ಇರುತ್ತಾರೆ. ಯಾಕೆಂದರೆ ಲೋಕಸಭಾ ಚುನಾವಣೆ ಕೂಡ ಆಗಬೇಕಲ್ವಾ? ಹಾಗಾದರೆ ಯಡ್ಡಿ ಸಂಸದೀಯ ಮಂಡಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ? ಏನಿಲ್ಲ. ಅವರನ್ನು ಬಿಜೆಪಿ ಕಡೆಗಣಿಸಿಲ್ಲ ಎಂದು ಹೊರಗಿನವರಿಗೆ ಗೊತ್ತಾಗುತ್ತೆ ಅಷ್ಟೇ. ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿರುತ್ತಾನೋ ಅಷ್ಟು ಅವನಿಗೆ ಮೇಲೆ ಗೌರವ ಜಾಸ್ತಿ. ಕಾರ್ಯಕರ್ತರು ಎಷ್ಟು ಬೇಕಾದರೂ ಸಿಗುತ್ತಾರೆ. ಆದರೆ ಯಡ್ಡಿಯತಂವರು ಒಬ್ಬರೇ ಇರುವುದು ಎಂದು ಮೋದಿ, ಶಾಗೆ ಗೊತ್ತಿದೆ. ಈ ಸ್ಥಾನ ಕೊಡದಿದ್ದರೂ ಯಡ್ಡಿ ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮಾಡುತ್ತಿರಲಿಲ್ಲವಾ? ಮಾಡುತ್ತಿದ್ದರು. ಆದರೆ ಈಗ ಅವರಿಗೆ ಪ್ರಚಾರ ಮಾಡುವುದು ಅನಿವಾರ್ಯ. ಯಾಕೆಂದರೆ ಜವಾಬ್ದಾರಿ ಇದೆ. ಇನ್ನು ಟಿಕೆಟ್ ಕೊಡುವ ಸಮಯದಲ್ಲಿಯೂ ಅವರ ಮಾತು ನಡೆಯುತ್ತೆ. ಏಕೆಂದರೆ ಆ ಸಮಿತಿಯಲ್ಲಿಯೂ ಅವರು ಸದಸ್ಯರು. ಅವರಿಗೆ ಬೇಕಾದವರಿಗೆ ಟಿಕೆಟ್ ಕೊಡಿಸಬಹುದು. ಆದರೆ ಗೆಲ್ಲಿಸುವ ಜವಾಬ್ದಾರಿ ಕೂಡ ಇದ್ದೇ ಇರುತ್ತದೆ. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ಪಕ್ಷ ಬಹುಮತ ಪಡೆದುಕೊಂಡು ಸರಕಾರ ಅಧಿಕಾರಕ್ಕೆ ತಮ್ಮ ಬಿಗಿಹಿಡಿತವನ್ನು ತೋರಿಸಬಹುದು. ಮಗನಿಗೆ ರಾಜಕೀಯ ಗಟ್ಟಿನೆಲೆಯನ್ನು ಒದಗಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ವಯಸ್ಸಾದ ಮುಖಂಡರಿಗೆ ಮಾಡಿದಂತೆ ತನ್ನನ್ನು ಸೈಡ್ ಲೈನ್ ಮಾಡಲಿಕ್ಕೆ ಆಗಲಿಲ್ಲ ಎಂದು ತೋರಿಸಿ ತನ್ನ ಸುತ್ತಲೂ ಪಕ್ಷ ಸುತ್ತುವಂತೆ ಮಾಡಬಹುದು. ಕೊನೆಗೂ ನಾನೇ ಬೇಕಾಯಿತಲ್ಲ ಎಂದು ರಾಷ್ಟ್ರೀಯ ನಾಯಕರಿಗೆ ತೋರಿಸಿದಂತೆ ಆಯಿತು. ಒಟ್ಟಿನಲ್ಲಿ ರಾಜಕೀಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೂರು ಸಲ ಯೋಚಿಸಬೇಕು ಎಂದು ಈ ವಿಷಯದಲ್ಲಿ ರಾಷ್ಟ್ರೀಯ ನಾಯಕರಿಗೂ ಪಾಠ ಕಲಿತಂತೆ ಆಯಿತು. ಏನೇ ಭ್ರಷ್ಟಾಚಾರದ ಆರೋಪ, ಪುತ್ರವಾತ್ಸಲ್ಯ ಇದ್ದರೂ ಯಡ್ಡಿಯ ಹಿಂದೆ ಪ್ರಬಲ ಲಿಂಗಾಯಿತ ಸಮುದಾಯ ಇರುವುದು ಒಂದು ವರ್ಷದ ಹಿಂದೆ ಬಿಜೆಪಿ ಹೈಕಮಾಂಡಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು. ಆದರೆ ಯಡ್ಡಿಯ ಮೌನ ಅವರಿಗೆ ದುಬಾರಿಯಾದಂತೆ ಅನಿಸಿತ್ತು. ಒಂದಂತೂ ನಿಜ, ಯಡ್ಡಿಗೆ ಪರ್ಯಾಯವಾಗಿ ಹೊಸ ನಾಯಕನ ಉಗಮ ಸದ್ಯಕ್ಕೆ ಆಗಿಲ್ಲ ಎನ್ನುವುದು ನಿಜ. ಪಕ್ಷದಲ್ಲಿ ಬಿಡಿ, ಬಿಡಿ ನಾಯಕರು ಹಲವರು ಇದ್ದಾರೆ. ಆದರೆ ಇಡೀ ರಾಜ್ಯಕ್ಕೆ ಬಿಜೆಪಿಯಲ್ಲಿ ಇರುವ ಏಕೈಕ ನಾಯಕ ಯಡ್ಡಿ ಎಂದು ಮೋದಿ, ಶಾ ಒಪ್ಪಿಕೊಂಡಂತೆ ಆಗಿದೆ!

0
Shares
  • Share On Facebook
  • Tweet It




Trending Now
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Hanumantha Kamath July 12, 2025
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
  • Popular Posts

    • 1
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 2
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 3
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 4
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 5
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!

  • Privacy Policy
  • Contact
© Tulunadu Infomedia.

Press enter/return to begin your search