• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇವಸ್ಥಾನಗಳಲ್ಲಿ ಮುದ್ರಾಧರಣೆ ಬೇಡಾ ಎಂದರೆ ಬಿಜೆಪಿ ಮಾನ ಗೋತಾ!!

Tulunadu News Posted On November 17, 2022


  • Share On Facebook
  • Tweet It

ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಅದರ ಪ್ರಕಾರ ಮುಜುರಾಯಿ ದೇವಸ್ಥಾನಗಳಲ್ಲಿ ಇನ್ನು ಮುದ್ರಾಧಾರಣೆ ನಡೆಯುವಂತಿಲ್ಲ, ಫೋಟೋ ಹಾಕುವಂತಿಲ್ಲ, ಜಯಂತಿಗಳನ್ನು ಆಚರಿಸುವಂತಿಲ್ಲ ಎನ್ನುವ ಅಂಶಗಳನ್ನು ಸೇರಿಸಲಾಗಿದೆ. ಇಂತಹ ಸುತ್ತೋಲೆಗಳನ್ನು ದೇವಸ್ಥಾನಗಳಿಗೆ ಕಳುಹಿಸುವ ಧಾ.ದ ಇಲಾಖೆಯ ಅಧಿಕಾರಿ ಒಂದೋ ಭಯಂಕರ ಹಿಂದೂ ವಿರೋಧಿಯಾಗಿರಬೇಕು ಅಥವಾ ಅವರಿಗೆ ಭಾರತೀಯ ಜನತಾ ಪಾರ್ಟಿಯ ಸರಕಾರ ವಿರುದ್ಧ ಅತೀ ಹೆಚ್ಚಿನ ಕೋಪ ಇರಬೇಕು. ಯಾಕೆಂದರೆ ಈ ಇಲಾಖೆ ಬಿಜೆಪಿ ಸರಕಾರ ಬಂದ ಬಳಿಕ ಹಿಂದೂ ವಿರೋಧಿ ನೀತಿಗಳನ್ನು ಎಷ್ಟು ಜಾರಿ ತರಲು ಸಾಧ್ಯವೋ ಅಷ್ಟು ಪ್ರಯತ್ನಿಸಿದೆ. ಪ್ರತಿ ಬಾರಿ ಮುಜುರಾಯಿ ಇಲಾಖೆ ಏನಾದರೂ ಒಂದು ಅಧ್ವಾನ ಮಾಡುವುದು ಮತ್ತು ಅದು ವಿವಾದಕ್ಕೆ ಒಳಗಾದಾಗ ಏನೂ ಗೊತ್ತಿಲ್ಲದವರಂತೆ ಬಿಜೆಪಿ ಸರಕಾರ ವರ್ತಿಸುವುದು ನಂತರ ಹಿಂದಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿ ಮೈಲೇಜ್ ಗಿಟ್ಟಿಸುವ ಯತ್ನ ನಡೆಯುತ್ತಿರುವುದು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಮೊದಲನೇಯದಾಗಿ ಧಾ.ದ ಇಲಾಖೆಯ ಈ ಧಾರ್ಮಿಕ ಪರಿಷತ್ತು ಕಮಿಟಿಯಲ್ಲಿ ಇರುವವರೆಲ್ಲರೂ ಹಿಂದೂಗಳು. ಒಂದು ವೇಳೆ ಕೆಲವು ಮುಸ್ಲಿಮರು, ಕೆಲವು ಕ್ರಿಶ್ಚಿಯನ್ನರು ಇದ್ದು ಸಮಿತಿಯಲ್ಲಿ ಅವರು ಏನಾದರೂ ಕಡ್ಡಿ ಅಲ್ಲಾಡಿಸುತ್ತಿದ್ದರೆ ಆಗ ಹಿಂದೂಗಳದ್ದು ನಡೆಯುವುದಿಲ್ಲ ಎನ್ನಬಹುದಿತ್ತು. ಆದರೆ ಇಲ್ಲಿ ಹಾಗಲ್ಲ. ಎಲ್ಲರೂ ಹಿಂದೂಗಳೇ. ಹಾಗಿರುವಾಗ ಸರಕಾರಿ ದೇವಸ್ಥಾನಗಳಲ್ಲಿ ಮುದ್ರಾಧಾರಣೆ ಮಾಡಬಾರದು ಎಂದು ಹೇಳಲು ಅವನ್ಯಾರು ಪಾಕಿಸ್ತಾನಿ ಅಧಿಕಾರಿಯಾ? ಇಂತಹ ನಿಯಮ ತರುವ ಅಧಿಕಾರಿಗಳ ತಂದೆ, ಅಜ್ಜ, ಮುತ್ತಾತ ಮತ್ತು ಅವರ ಮುತ್ತಾತನ ಕಾಲದಿಂದಲೂ ಮುದ್ರಾಧಾರಣೆ ದೇವಾಲಯಗಳಲ್ಲಿ ನಡೆಯುತ್ತಲೇ ಇದೆ. ಇನ್ನು ಮುದ್ರಾಧಾರಣೆಯನ್ನು ನಮ್ಮ ಹಿರಿಯರು ಸುಮ್ಮನೆ ಜಾರಿಗೆ ತಂದದ್ದಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ನಿಮ್ಮ ದೇಹದ ಮೇಲೆ ಮುದ್ರೆಯನ್ನು ಒತ್ತಿದಾಗ ಅದು ದೇಹದ ನರನಾಡಿಗಳಲ್ಲಿ ಏಕಕಾಲಕ್ಕೆ ಸಕರಾತ್ಮಕ ಶಕ್ತಿಯನ್ನು ಪ್ರವಹಿಸಿ ದೇಹದಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸುತ್ತದೆ. ಇನ್ನು ಮುದ್ರಾಧಾರಣೆ ಏನೂ ಬಲವಂತದ ಮತಾಂತರವಲ್ಲ. ಅದನ್ನು ಯಾರ ಮೇಲೆಯೂ ಒತ್ತಾಯಪೂರ್ವಕವಾಗಿ ಹೇರುವುದಿಲ್ಲ. ಇನ್ನು ಮುದ್ರಾಧಾರಣೆಗೆ ಅನುವಾಗುವ ಭಕ್ತ ಕೂಡ ಸೀದಾ ಬಂದು ಮುದ್ರಾಧಾರಣೆ ಪಡೆದುಕೊಳ್ಳುವಂತಿಲ್ಲ. ಆತ ಅದಕ್ಕಾಗಿ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿ, ಸಂಧ್ಯಾವಂದನೆ ಮಾಡಿ, ಅಕ್ಕಿಯ ಯಾವುದೇ ಆಹಾರ ಸೇವಿಸದೇ, ಪಂಚೆಯಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮುದ್ರಾಧಾರಣೆ ಮಾಡಿಸಿಕೊಂಡು ಶಿಸ್ತಾಗಿ ಮನೆಗೆ ಹೋಗುತ್ತಾರೆ. ಇದರಿಂದ ಹಿಂದೂ ಧರ್ಮದ ಒಂದು ಸಂಪ್ರದಾಯ ಇವತ್ತಿನ ಪೀಳಿಗೆಗೆ ಗೊತ್ತಾಗುತ್ತದೆ. ಇನ್ನು ದೇವಸ್ಥಾನಗಳಲ್ಲಿ ಯಾವುದೇ ಜಯಂತಿಯನ್ನು ಆಚರಿಸಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಯಾವುದೇ ದೇವಸ್ಥಾನದಲ್ಲಿ ಸಿನೆಮಾ ನಟರ, ರಾಜಕೀಯ ನೇತಾರರ ಜನ್ಮದಿನವನ್ನು ಜಯಂತಿಯನ್ನು ಆಚರಿಸುವುದಾದರೆ ಅದನ್ನು ನಿಲ್ಲಿಸಬೇಕು ಎಂದು ಹೇಳುವುದರಲ್ಲಿ ಅರ್ಥವಿದೆ. ಆದರೆ ನಾವು ದೇವಸ್ಥಾನಗಳಲ್ಲಿ ಆಚರಿಸುವುದು ನಮ್ಮ ಧರ್ಮವನ್ನು ಬೆಳೆಸಲು ಶ್ರಮಿಸಿದ ಸಂತರ, ಯುಗಪುರುಷರ ಜಯಂತಿಗಳನ್ನು. ಅದನ್ನು ಆಚರಿಸುವುದರಿಂದ ನಮ್ಮ ಈಗಿನ ಪೀಳಿಗೆಗೆ ಆ ಯುಗಪುರುಷರ ಸಂದೇಶಗಳನ್ನು ತಿಳಿಸಿದಂತೆ ಆಗುತ್ತದೆ. ಅದನ್ನು ಆಚರಿಸಿದರೆ ನಿಲ್ಲಿಸಿದರೆ ಇನ್ನೇನು ಉಳಿದಿದೆ. ಇನ್ನು ಫೋಟೋಗಳನ್ನು ಹಾಕಬಾರದು, ನಾಮಫಲಕ ಹಾಕಬಾರದು ಎಂದು ಹೇಳಲಾಗಿದೆ. ಫೋಟೋಗಳನ್ನು ಒಂದು ದೇವಸ್ಥಾನದಲ್ಲಿ ಹಾಕಿದ್ದಾರೆ ಎಂದರೆ ಆ ಫೋಟೋಗಳು ಯಾವುದೋ ಅಶ್ಲೀಲ ಚಿತ್ರಕಲೆಯಾಗಿರುವುದಿಲ್ಲ. ಇನ್ನು ನಾಮಫಲಕಗಳನ್ನು ಹಾಕುವುದರ ವಿರುದ್ಧ ಇವರು ಏನು ಹೇಳಲು ಹೊರಟಿದ್ದಾರೆ ಎಂದು ಬರುವ ದಿನಗಳಲ್ಲಿ ಗೊತ್ತಾಗಬೇಕು. ಒಟ್ಟಿನಲ್ಲಿ ಮುದ್ರಾಧಾರಣೆ, ಜಯಂತಿ, ಫೋಟೋ ಬೇಡಾ ಎಂದು ಹೇಳಿರುವ ಅಧಿಕಾರಿಯು ಬಿಜೆಪಿ ಸರಕಾರದ ಮಾನ ತೆಗೆಯಲೆಂದೇ ಹುಟ್ಟಿರುವಂತಿದೆ. ಅವರನ್ನು ಶೀಘ್ರ ಎತ್ತಂಗಡಿ ಮಾಡದೇ ಹೋದರೆ ಬಿಜೆಪಿಯ ಮಾನ ಮರ್ಯಾದೆ ಮತ್ತೆ ಹರಾಜಾದೀತು. ಜೋಕೆ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search