• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಳ್ಳಸಾಗಣಿಕೆಗೊಂಡಿದ್ದ ಶತಮಾನಗಳ ಹಿಂದಿನ ಕಲಾಕೃತಿಗಳು ವಾಪಾಸ್!

Tulunadu News Posted On July 20, 2023
0


0
Shares
  • Share On Facebook
  • Tweet It

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸದಿಂದ ಮತ್ತೊಂದು ಮೌನ ಕ್ರಾಂತಿ ನಡೆದಿದೆ. ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ 105 ಸಾಂಸ್ಕೃತಿಕ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರಕ್ಕೆ ಅಮೇರಿಕಾ ಬಂದಿದೆ. ಯುನೈಟೆಡ್ ಸ್ಟೇಟ್ಸ್ (ಯುಎಸ್) ಭಾರತದಲ್ಲಿ ಕಳ್ಳತನ ಮಾಡಿ ಅನೇಕ ಪುರಾತನ ವಸ್ತುಗಳನ್ನು ಸ್ಮಂಗ್ಲಿಂಗ್ ಮಾಡಲಾಗಿದೆ. ಇಲ್ಲಿನ ಹಲವು ವಸ್ತುಗಳು ಅಮೇರಿಕಾದಲ್ಲಿ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವೂ ಆಗಿದೆ. ಆ ಬಗ್ಗೆ ಭಾರತೀಯ ದೂತಾವಾಸದಿಂದ ಅಮೇರಿಕಾದ ಆಡಳಿತ, ಕಳ್ಳಸಾಗಣೆ ವಿರೋಧಿ ಘಟಕ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ತನಿಖಾ ತಂಡಕ್ಕೆ ಕಾಲಕಾಲಕ್ಕೆ ದೂರು ಕೂಡ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು ಭಾರತದ ಅನೇಕ ಪುರಾತತ್ವ ವಸ್ತುಗಳನ್ನು ಪತ್ತೆ ಹಚ್ಚಿರುವ ಅಲ್ಲಿನ ಇಲಾಖೆಗಳು ಅಮೇರಿಕಾದ ಸಂಗ್ರಹದಲ್ಲಿ ಇಟ್ಟುಕೊಂಡಿದ್ದವು. ಸದ್ಯ ಅಂತಹ ಕೆಲವು ವಸ್ತುಗಳು ಭಾರತಕ್ಕೆ ಮರಳಲಿವೆ.
ಅದರಲ್ಲಿ 12 ಮತ್ತು 13 ನೇ ಶತಮಾನದ ರಾಜಸ್ಥಾನದ ಮಾರ್ಬಲ್ ನಿಂದ ಮಾಡಲ್ಪಟ್ಟ ಕಮಾನು, 14 ಮತ್ತು 15 ನೇ ಶತಮಾನದ ಮಧ್ಯ ಭಾರತದ ಅಪ್ಸರಾ ಮೂರ್ತಿ, 14 ಮತ್ತು 15 ನೇ ಶತಮಾನದ ತಾಮ್ರದ ಮಿಶ್ರಲೋಹದ ಸಂಬಂದರ್ ಶಿಲ್ಪವು ತೋರುಬೆರಳು ಸ್ಪಲ್ಪ ಮೇಲಕ್ಕೆ ತೋರಿಸುತ್ತದೆ ( ಸಾಂಕೇತಿಕವಾಗಿ ಪಾರ್ವತಿ ಮತ್ತು ಶಿವನ ಕಡೆಗೆ) ಚೋಳ ಸಾಮ್ರಾಜ್ಯ (ಇಂದಿನ ಸಿಕಾರ್ಜಿ, ತಮಿಳುನಾಡು, ಭಾರತ) ಮತ್ತು 17 ಹಾಗೂ 18 ಶತಮಾನದ ತಾಮ್ರದ ನಟರಾಜನ ಮೂರ್ತಿಗಳು ಒಳಗೊಂಡಿವೆ.
ಪ್ರಧಾನಿ ಮೋದಿಯವರ 2016ರ ಅಮೇರಿಕಾ ಭೇಟಿಯ ವೇಳೆ ಅಮೇರಿಕಾದ 16 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಇದೇ ರೀತಿ 2021 ರಲ್ಲಿ ಅಮೇರಿಕಾ 157 ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಈ ಬಾರಿ 105 ಪುರಾತನ ವಸ್ತುಗಳ ಜೊತೆಗೆ 278 ಸಾಂಸ್ಕೃತಿಕ ಕಲಾಕೃತಿಗಳನ್ನು ಅಮೇರಿಕಾ ಭಾರತಕ್ಕೆ ಹಸ್ತಾಂತರಿಸಿದೆ

0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Tulunadu News April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search