• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸುಧಾಮೂರ್ತಿಯವರ ಸ್ಪೂನ್ ಮತ್ತು ಚೇತನ್ ಟೀಕೆ!

Tulunadu News Posted On July 28, 2023
0


0
Shares
  • Share On Facebook
  • Tweet It

ಒಂದೆರಡು ಸಿನೆಮಾಗಳು ಹಿಟ್ ಆದ ಕೂಡಲೇ ಅದರಲ್ಲಿ ಅಭಿನಯಿಸಿದ ವ್ಯಕ್ತಿಗಳು ಹೇಳಿದ್ದು ವೇದವಾಕ್ಯವಾಗುವುದಿಲ್ಲ. ಕನ್ನಡದಲ್ಲಿ ಒಬ್ಬ ನಟ ಚೇತನ್ ಎನ್ನುವ ವ್ಯಕ್ತಿ ಇದ್ದಾರೆ. ಅವರಿಗೆ ಆಗಾಗ ಏನಾದರೂ ಹೇಳಿಕೆ ನೀಡದಿದ್ದರೆ ತಿಂದ ಅನ್ನ ಅರಗುವುದಿಲ್ಲ. ಅವರು ಈಗ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರೂ, ಸ್ನೇಹಮಯಿ ವ್ಯಕ್ತಿತ್ವದ ಸುಧಾಮೂರ್ತಿಯವರನ್ನು ಬ್ರಾಹ್ಮಣ್ಯ ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ ನಿಂದ ಗುರುತಿಸ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಎಂದು ಹೇಳಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸುಧಾಮೂರ್ತಿಯವರು ಯೂಟ್ಯೂಬ್ ಚಾನೆಲ್ ಒಂದರ ಸಂಚಿಕೆಯಲ್ಲಿ “ನಾನೊಬ್ಬಳು ಶುದ್ಧ ಸಸ್ಯಾಹಾರಿ, ಮೊಟ್ಟೆ ಸಹಿತ ಯಾವುದೇ ಮಾಂಸಹಾರ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಸಸ್ಯಹಾರ- ಮಾಂಸಹಾರ ಭಕ್ಷ್ಯಗಳಿಗೆ ಒಂದೇ ಚಮಚಾ ಬಳಸುತ್ತಾರೆಯೇ ಎಂಬ ಆತಂಕ ನನ್ನ ಮನಸ್ಸನ್ನು ಕಾಡುತ್ತದೆ” ಎಂದು ಹೇಳಿದ್ದರು. ” ನಾನು ವಿದೇಶಕ್ಕೆ ಹೋದಾಗ ಅಲ್ಲಿ ಸಸ್ಯಹಾರಿ ರೆಸ್ಟೋರೆಂಟ್ ಗಳನ್ನು ಹುಡುಕುತ್ತೇನೆ. ಮನೆಯ ಊಟವನ್ನೇ ಹೆಚ್ಚು ಇಷ್ಟಪಡುತ್ತೇನೆ. ಪ್ರಯಾಣ ಮಾಡುವಾಗ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತೆಗೆದುಕೊಂಡು ಹೋಗುತ್ತೇನೆ” ಎಂದು ಕೂಡ ಹೇಳಿದ್ದಾರೆ.
ಇದರಲ್ಲಿ ನಟ ಚೇತನ್ ಅವರಿಗೆ ತಪ್ಪು ಕಾಣಿಸಿದೆ. ಅದಕ್ಕಾಗಿ ಸುಧಾಮೂರ್ತಿಯವರನ್ನು ಟೀಕಿಸಿದ್ದಾರೆ. ಇವತ್ತಿಗೂ ಎಷ್ಟೋ ಜನ ಸುಧಾಮೂರ್ತಿಯವರ ಈ ನಿಲುವನ್ನು ಅನುಸರಿಸುತ್ತಿದ್ದಾರೆ. ಗೋಮಾಂಸ ನಮ್ಮ ಆಹಾರ ಪದ್ಧತಿ ಎಂದು ಹೇಳಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ತರುವವರ ಬಗ್ಗೆ ಕೆಲವರಿಗೆ ಏನೂ ಅನಿಸುವುದಿಲ್ಲ. ಅದೇ ಸುಧಾಮೂರ್ತಿಯವರು ತಾವು ಮಾಂಸಹಾರಕ್ಕೆ ಬಳಸಿರಬಹುದಾದ ಸ್ಪೂನ್ ಬಳಸಲು ಬಯಸುವುದಿಲ್ಲ ಎಂದು ಹೇಳಿದ್ದು ಚೇತನ್ ಅಂತವರಿಗೆ ತಪ್ಪು ಎಂದು ಅನಿಸುತ್ತದೆ. ಸುಧಾಮೂರ್ತಿಯವರು ಯಾವತ್ತೂ ಪ್ರಚಾರದ ಹಿಂದೆ ಹೋದವರಲ್ಲ. ಅವರು ಅಸಂಖ್ಯಾತ ಜನರಿಗೆ ತಮ್ಮ ಫೌಂಡೇಶನ್ ಮೂಲಕ ಸಾಕಷ್ಟು ಸಹಾಯ ಹಸ್ತ ಚಾಚಿದ್ದಾರೆ. ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಯೋಗ್ಯ ನೆರವು ನೀಡಿದ್ದಾರೆ. ಅವರ ಒಳ್ಳೆಯ ಕಾರ್ಯಗಳಿಂದ ಪ್ರಚಾರದಲ್ಲಿ ಇದ್ದಾರೆಯೇ ಹೊರತು ಒಂದೆರಡು ಸಿನೆಮಾ ಮಾಡಿ ಅಲ್ಲ ಎಂದು ಚೇತನ್ ತರದವರು ಅಂದುಕೊಳ್ಳಬೇಕಿದೆ.

0
Shares
  • Share On Facebook
  • Tweet It




Trending Now
ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
Tulunadu News September 9, 2025
ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
Tulunadu News September 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
    • ಖಾರ್ ಬೂಂದಿ ತಿನ್ನುತ್ತಿದ್ದಿರಾ? ಎಚ್ಚರಿಕೆ!
    • ಸೀಟ್ ಬೆಲ್ಟ್ ಧರಿಸದ್ದಕ್ಕೆ ದಂಡ ಪಾವತಿ ಮಾಡಿದ ಸಿದ್ಧರಾಮಯ್ಯ!
    • ಡಿಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ! ಎಡಿಆರ್ ವರದಿ
    • ಕೂಡಲೇ ರಸ್ತೆಯ ಹೊಂಡಗಳನ್ನು ದುರಸ್ತಿಗೊಳಿಸಿ:- ಶಾಸಕ ಕಾಮತ್ ಸೂಚನೆ
  • Popular Posts

    • 1
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • 2
      ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • 3
      ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • 4
      ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • 5
      ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ

  • Privacy Policy
  • Contact
© Tulunadu Infomedia.

Press enter/return to begin your search