• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತದ 5 ರೂ ಕಾಯಿನಿಂದ ಬಾಂಗ್ಲಾದಲ್ಲಿ 6 ಬ್ಲೇಡ್ ತಯಾರಿ!

Tulunadu News Posted On August 2, 2023
0


0
Shares
  • Share On Facebook
  • Tweet It

ನಿಮ್ಮಲ್ಲಿ ಐದು ರೂಪಾಯಿ ನಾಣ್ಯ ಇದೆಯಾ? ಅದು ತುಂಬಾ ದಪ್ಪ ಇದೆಯಾ? ಹಾಗಾದರೆ ಅದು ಕೆಲವೇ ದಿನಗಳಲ್ಲಿ ಮಾಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ನೀವು ಅಂತಹ ದಪ್ಪ ಆಕಾರದ ಐದು ರೂಪಾಯಿ ನಾಣ್ಯಗಳನ್ನು ಬಹಳ ಅಪರೂಪವಾಗಿ ನೋಡಿರಬಹುದು. ಆದರ ಅರ್ಥ ಭಾರತ ಸರಕಾರ ಎರಡು ಸಾವಿರ ರೂಪಾಯಿಯಂತೆ ಅದನ್ನು ಕೂಡ ಹಿಂದಕ್ಕೆ ಪಡೆದುಕೊಂಡಿರಬಹುದಾ ಎಂದು ನಿಮಗೆ ಅನಿಸಬಹುದು. ಇಲ್ಲಿ ಇರುವ ವಿಷಯ ಏನಪ್ಪ ಎಂದರೆ ಭಾರತದ ದಪ್ಪ ಐದು ರೂಪಾಯಿ ನಾಣ್ಯಗಳನ್ನು ಇಲ್ಲಿಂದ ಬಾಂಗ್ಲಾ ದೇಶಕ್ಕೆ ಸ್ಮಂಗಲ್ ಮಾಡಲಾಗುತ್ತಿತ್ತು. ಅದಕ್ಕೆ ಕಾರಣ ಬ್ಲೇಡ್ ಗಳ ತಯಾರಿಕೆ. ಬ್ಲೇಡ್ ಗಳಿಗೆ ಬಳಕೆಯಾಗುವ ಕಾರ್ಬನ್ ಸ್ಟೀಲ್ ಕಚ್ಚಾ ವಸ್ತುಗಳು ಬಾಂಗ್ಲಾ ದೇಶದಲ್ಲಿ ಬಹಳ ದುಬಾರಿಯಾಗಿದೆ. ಅದಕ್ಕಾಗಿ ಬಾಂಗ್ಲಾದ ಬ್ಲೇಡ್ ತಯಾರಕರು ನಮ್ಮ ದೇಶದ ಐದು ರೂಪಾಯಿ ಕಾಯಿನ್ ಗಳನ್ನು ತಮ್ಮ ದೇಶಕ್ಕೆ ಕಳ್ಳ ಸಾಗಾಣಿಕೆ ಮೂಲಕ ತರಿಸಿಕೊಳ್ಳುತ್ತಿದ್ದರು. ಒಂದೊಂದು ಕಾಯಿನ್ ನಿಂದ ತಲಾ ಆರು ಬ್ಲೇಡ್ ಗಳನ್ನು ಉತ್ಪಾದಿಸಿ ತಲಾ ಬ್ಲೇಡ್ ಗಳನ್ನು 2 ರೂಪಾಯಿಗಳಿಗೆ ಮಾರಲಾಗುತ್ತಿತ್ತು. ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಈ ಕಳ್ಳ ಸ್ಮಂಗ್ಲಿಂಗ್ ಜೋರಾಗಿ ನಡೆಯುತ್ತಿತ್ತು. ಇದು ಭಾರತ ಸರಕಾರಕ್ಕೆ ತಿಳಿದ ಕೂಡಲೇ ನಮ್ಮ ದೇಶದಲ್ಲಿ ಹೊಸ ಐದು ರೂಪಾಯಿ ನಾಣ್ಯಗಳನ್ನು ತಯಾರಿಸುವ ಪ್ರಕ್ರಿಯೆ ಶುರುವಾಯಿತು. ಹೊಸ ಐದು ರೂಪಾಯಿ ನಾಣ್ಯವನ್ನು ಹೇಗೆ ತಯಾರಿಸಲಾಗಿದೆ ಎಂದರೆ ಅದನ್ನು ಯಾವುದೇ ಕಾರಣಕ್ಕೂ ಕರಗಿಸಿ ಬೇರೆ ವಸ್ತುಗಳನ್ನು ತಯಾರಿಸಲು ಆಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹೊಸ ಐದು ರೂಪಾಯಿ ನಾಣ್ಯವನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಕರೆ ನೀಡಿದೆ.

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search