ಸೌಜನ್ಯಳಿಗೆ ನ್ಯಾಯ ಸಿಗಲು ಕಾರಿಂಜೇಶ್ವರ ದೇವರಲ್ಲಿ ಪ್ರಾರ್ಥನೆ
Posted On August 7, 2023

ಸೌಜನ್ಯ ಎಂಬ ತಂಗಿಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ತಿಂದು ತೆಗಿದ ನೈಜ ಆರೋಪಿಗಳಿಗೆ ಶಿಕ್ಷೆಯಾಗಲೆಂದು ವಿಶ್ವಹಿಂದೂಪರಿಷದ್ -ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಕಾರಣಿಕ ಕ್ಷೇತ್ರ ಕಾರಿಂಜೇಶ್ವರ ಸನ್ನಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷದ್ ಭಜರಂಗದಳದ ಜಿಲ್ಲಾ ಪ್ರಮುಖರು ಹಾಗೂ ಬಂಟ್ವಾಳ ಪ್ರಖಂಡ ದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು . ನೈಜ ಆರೋಪಿಗಳಿಗೆ ಕಾನೂನು ಶಿಕ್ಷೆ ಆಗಲಿ. ಆದರೂ ನಾವು ದೈವ ದೇವರ ಮೇಲೆ ನಂಬಿಕೆ ಇರಿಸಿದವರು. ತಪ್ಪು ಮಾಡಿದವರು ಕಾನೂನಿನಲ್ಲಿ ತಪ್ಪಿಸಿಕೊಂಡರೂ ಕಾರ್ಣಿಕ ಕ್ಷೇತ್ರವಾದ ಕಾರಿಂಜೇಶ್ವರ ದೇವರ ಅನುಗ್ರಹದಿಂದ ನಿಜವಾದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಹುಚ್ಚು ಹಿಡಿದು ಅವರೇ ಆರೋಪಿಗಳೆ0ದು ಸಮಾಜಕ್ಕೆ ಆದಷ್ಟು ಬೇಗ ತಿಳಿದು ಬರಬೇಕು ಎಂದು ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
- Advertisement -
Trending Now
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
September 29, 2023
Leave A Reply