• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆಯೇ ?ಹಾಗಿದ್ದರೆ ಅದಕ್ಕೆ ಮೂಲ ಕಾರಣ ಪೋಷಕರಾದ ನೀವು

TNN Correspondent Posted On August 23, 2017
0


0
Shares
  • Share On Facebook
  • Tweet It

ಈ ಪ್ರಪಂಚದಲ್ಲಿ ಎಲ್ಲ ಉದ್ಯೋಗಗಳಿಗೆ ಮೂಲಭೂತ ವಿದ್ಯಾರ್ಹತೆ ,ತರಬೇತಿ ಕಡ್ಡಾಯವಾಗಿದೆ .ಆದರೆ  ಪೋಷಕರು  ಎಂಬ ಬಹಳ ಪ್ರಾಮುಖ್ಯವಾದ ಹುದ್ದೆಗೆ ತರಬೇತಿಯೂ ಇಲ್ಲ ,ಅರ್ಹತೆಗಳು ಕೂಡ ಮಾನದಂಡವಲ್ಲ .ಯಾಕೆಂದರೆ ಇದು ಪ್ರೈಯೊಬ್ಬರಿಗೂ ಪೋಷಕರಾದ ಮೇಲೆ ಬರುವ ಕೆಲಸ ,ಜವಾಬ್ದಾರಿ .ಇದಕ್ಕೆ ಹೆಚ್ಚಿನವರು  ದೈಹಿಕವಾಗಿ ,ಆರ್ಥಿಕವಾಗಿ ಸಿದ್ಧರಾಗಿರುತ್ತಾರೆ ಆದರೆ ಮಾನಸಿಕವಾಗಿಯೂ ಸಿದ್ಧರಾಗುವುದು ಅಷ್ಟೇ ಅವಶ್ಯ ಎನ್ನುವುದನ್ನು ಮರೆಯುತ್ತಾರೆ .ತಮ್ಮ ಪೋಷಕರು ,ಸಂಬಂಧಿಗಳು ,ನೆರೆ ಕರೆಯವರು ,ಸ್ನೇಹಿತರು ಹೀಗೆ ಸಮಾಜವನ್ನು ನೋಡಿ ತಮ್ಮ ಮಕ್ಕಳಿಗೆ ಪೋಷಕರಾಗಲು ಸಿದ್ಧರಾಗುತ್ತಾರೆ .ಆದರೆ ಇಲ್ಲಿ ಗಮನಾರ್ಹವಾದ ಅಂಶವೊಂದನ್ನು ಅವರು ಮರೆಯುತ್ತಾರೆ ,ಅದೆಂದರೆ ಪ್ರತಿ ಒಂದು ಮಗು ಕೂಡ ವಿಭಿನ್ನವಾದದ್ದು ಹಾಗೆಯೆ ಪ್ರತಿಯೊಂದು ಮಗುವಿಗೆ ತನ್ನದೇ ಆದ ವೈಶಿಷ್ಟ್ಯವಿದೆ ಅದನ್ನು ಪರಿಗಣಿಸಬೇಕು ಎನ್ನುವುದನ್ನು .ಆದ್ದರಿಂದ ಬೇರೆ ಮಕ್ಕಳನ್ನು ನೋಡಿ ಅವರ ಕೌಶಲ್ಯಕ್ಕೆ ತಮ್ಮ ಮಕ್ಕಳನ್ನು ಹೋಲಿಸುತ್ತಾರೆ ಮತ್ತು ಅವರನ್ನು ಆದರ್ಶವಾಗಿರಿಸಿ ತಮ್ಮ ಮಕ್ಕಳನ್ನು ಅವರಂತೆ ಮಾಡಲು ಪ್ರೋತ್ಸಾಹಿಸುತ್ತಾರೆ ಅಕ್ಷರಶಃ ಒತ್ತಡ ಹೇರುತ್ತಾರೆ ಇದರಿಂದ ಸ್ವಯಂ ಅರಳಬೇಕಿದ್ದ ಮಕ್ಕಳು ಪ್ರಯತ್ನ  ಪೂರ್ವಕವಾಗಿ ಅರಳುತ್ತಾರೆ ಮತ್ತೆ ಮುದುಡುತ್ತಾರೆ .ಮನದಲ್ಲಿ ಒತ್ತಡದ ಬಂಡೆಯನ್ನು ಹೊತ್ತು ಹೊರಗೆ ನೀರಸ ನಗೆಯನ್ನು ನಕ್ಕು ತಮಗೆ ಬಳುವಳಿಯಾಗಿ ಬಂದಿದ್ದ ಕೌಶಲ್ಯವನ್ನು ಮರೆತು ,ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಸದಾ ಸತ್ತಂತೆ ಬದುಕಿ ನಿರಾಶರಾಗಿ ಇದು “ವಿಧಿ ಬರಹ “ಎಂದು ಸುಮ್ಮನಾಗುತ್ತಾರೆ .

ಪೋಷಕರ ಒತ್ತಡ ಮಕ್ಕಳ ಮಾನಸಿಕ ಬೆಳವಣಿಗೆಗೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ .ಬೇರೆ ಮಕ್ಕಳೊಂದಿಗೆ ಹೋಲಿಕೆ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ .ಮನಸ್ಸು ಸ್ವಚ್ಛಂದವಾಗಿದ್ದಾಗ ಸೃಜನಾತ್ಮಕವಾಗುತ್ತದೆ .ತಮ್ಮ ಆಸಕ್ತಿಕರವಾದ ವಿಭಾಗದಲ್ಲಿ ಸಾಧನೆಯನ್ನು ಮಾಡಲು ಪ್ರೇರೇಪಣೆ ಸಿಗುತ್ತದೆ ,ಆದರೆ  ಒತ್ತಡ ಬಿದ್ದಾಗ ರಚನತ್ಮಾಕ ಪ್ರಕ್ರಿಯೆಯು ಅಲ್ಲಿಯೇ ನಿಂತು ಯಾಂತ್ರಿಕತೆ ಅಭ್ಯಾಸವಾಗುತ್ತದೆ .

ಮಾರ್ಗದರ್ಶನ ನೀಡಿ ,ದಾರ್ಷ್ಟ್ಯದ ಆದೇಶವಲ್ಲ

ಮಕ್ಕಳಿಗೆ  ಮಾರ್ಗದರ್ಶನ ಅಗತ್ಯ .ತಾವು ಪೋಷಕರಾಗಿದ್ದೇವೆ ಎಂಬ ಒಂದೇ ಅರ್ಹತೆಯನ್ನು ಮುಂದಿಟ್ಟುಕೊಂಡು ದಾರ್ಷ್ಯತೆಯಿಂದ ಪ್ರತಿ ಸಲ ನೋವುಂಟು ಮಾಡುವ ಶಿಸ್ತಾದ ಆದೇಶವು ಮಕ್ಕಳನ್ನು ಚಿಪ್ಪಿನೊಳಗೇ ಮುದುಡುವಂತೆ ಮಾಡುತ್ತದೆ .ಒಳಿತು ಕೆಡುಕುಗಳ ಜ್ಞಾನ ,ತಪ್ಪು ಒಪ್ಪುಗಳ ವಿಮರ್ಶೆ ಪೋಷಕರಾಗಿ ನೀವು ನೀಡಲೇಬೇಕು .ಉದಾಹರಣೆಗೆ ಮಗು ಐಸ್ಕ್ರೀಂ ಬೇಕೆಂದು ಹಠ ಹಿಡಿಯಬಹುದು ಆದರೆ ಅದು ಜ್ವರದಿಂದ ನರಳುತ್ತಿದೆ ಎಂದಾದರೆ ಈ ಹೊತ್ತಲಿ ಐಸ್ಕ್ರೀಮ್ ತಿನ್ನಬಾರದು ,ತಿಂದರೆ ಯಾವ ರೀತಿಯ ಕೆಟ್ಟ ಪರಿಣಾಮವಾಗಬಹುದು ಎಂಬುವುದನ್ನು ಪೋಷಕರು ಅರ್ಥೈಸಬೇಕು .ಅದು ಬಿಟ್ಟು ಮುಖಕ್ಕೆ ಹೊಡೆದ ಹಾಗೆ “ಕೊಡುವುದಿಲ್ಲ “ಎಂದರೆ ಮಗು ಹಠಮಾರಿಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ .ಇದು ಪ್ರತಿಯೊಂದು ವಿಷಯದಲ್ಲೂ ಮಗುವಿನ ಒತ್ತಡವನ್ನು ಜಾಸ್ತಿ ಮಾಡಬಹುದು .

ಮನೆಯೇ ಶಾಲೆ, ಪೋಷಕರೇ ಗುರುಗಳು

ಪೋಷಕರಿಗಿಂತ ಹೆಚ್ಚಿನ ಗುರುಗಳಿಲ್ಲ .ತಾಯಿ ತಂದೆಯೇ ಮಕ್ಕಳ  ಮೊದಲ ಹೀರೋ ,ಹೀರೋಯಿನ್ .ಮಕ್ಕಳು ಆದರ್ಶದ ಗುಣಗಳನ್ನು ಇವರಲ್ಲಿ ನೋಡ ಬಯಸುತ್ತಾರೆ .ಉದಾಹರಣೆಗೆ “ಕೆಟ್ಟ ಅಭ್ಯಾಸಗಳನ್ನು ಮಾಡಬಾರದು “ಎಂದು ದಿನನಿತ್ಯ ಮಗನಿಗೆ ಹೇಳುವ ತಂದೆಯೇ ಹಿತ್ತಲಲ್ಲಿ ಸಿಗರೇಟು ಸೇದುವುದನ್ನು ಮಗ ಕದ್ದು ನೋಡಿದರೆ ಹೇಗಿರಬಹುದು ?ತಂದೆಯ ಮೇಲಿನ ತನ್ನ ಆದರ್ಶಗಳ ಆಶಾಗೋಪುರ ಕುಸಿದು ಅಲ್ಲಿ ಮ್ಲಾನತೆ ಆವರಿಸಿ ಮಗ ಇನ್ನಿಲ್ಲದ ಒತ್ತಡಕ್ಕೆ ಸಿಲುಕುತ್ತಾನೆ .ಮಕ್ಕಳಿಗೆ ಪ್ರೋತ್ಸಾಹ ಅಗತ್ಯ ,ಅವರು ತಪ್ಪು ಮಾಡಿದಾಗ ನಿಗದಿತ ಶಿಕ್ಷೆಯೂ ಅಗತ್ಯ ಆದರೆ ಪ್ರಯೋಜನಕ್ಕೆ ಬರದವರೆಂಬ ಈಟಿಗಳಂತ ಮಾತುಗಳು ಅವರ ಆತ್ಮ ವಿಶ್ವಾಸವನ್ನೇ ಕುಗ್ಗಿಸುತ್ತದೆ .ಆದ್ದರಿಂದ ತಾಯಿ ತಂದೆ ಇಬ್ಬರೂ ಈ ನಿಟ್ಟಿನಲ್ಲಿ ಯೋಚಿಸಲೇ ಬೇಕು .

ಮಕ್ಕಳನ್ನು ಹೆದರಿಸಿ ಬೆದರಿಸಿ ಸರಿ ದಾರಿಗೆ ತರುವ ಒತ್ತಡಕ್ಕಿಂತ ಪ್ರೀತಿ ವಾತ್ಸಲ್ಯದ ಮಾತುಗಳು ಅತೀ ಅವಶ್ಯ .ಇದು ಮಕ್ಕಳ ಪೋಷಕರಾಗಬೇಕಾದವರಿಗೆ ಇರುವ ಮೊದಲ ಅರ್ಹತೆ .ಉತ್ತಮ ಮಕ್ಕಳು ಬೇಕೆಂದಲ್ಲಿ ಉತ್ತಮ ಪೋಷಕರು ನೀವಾಗಿ .

0
Shares
  • Share On Facebook
  • Tweet It




Trending Now
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
Tulunadu News January 6, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
  • Popular Posts

    • 1
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 2
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 3
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • 4
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 5
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ

  • Privacy Policy
  • Contact
© Tulunadu Infomedia.

Press enter/return to begin your search