• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಳೆ ಫೋಟೋ ಶೇರ್ ಮಾಡಿ ಸಂಭ್ರಮಿಸಿದ ಸುಮಲತಾ!

Tulunadu News Posted On August 25, 2023
0


0
Shares
  • Share On Facebook
  • Tweet It

ಬೆಲೆಕಟ್ಟಲಾಗದ ಫೋಟೋ ಇವತ್ತು ಸಿಕ್ಕಿತು ಎಂದು ಸಂಭ್ರಮ ಹಂಚಿಕೊಂಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್. 2006 ರಲ್ಲಿ ಅಂಬರೀಶ್ ಅವರು ಬೆಂಗಳೂರಿನ ಕೆಎಸ್ ಸಿಎ ಸ್ಟೇಡಿಯಂನಲ್ಲಿ ಎಂ.ಎಸ್.ಧೋನಿಯವರಿಗೆ ವೈಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ಚೆಕ್ ನೀಡಿ ಶುಭ ಹಾರೈಸಿದ ಫೋಟೋವನ್ನು ಸುಮಲತಾ ಅಂಬರೀಶ್ ಅವರು “ಎಕ್ಸ್”ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂಬರೀಶ್ ಅವರು ಅದರ ಮೊದಲು ಒಮ್ಮೆ ಧೋನಿಯವರ ತಂದೆಯವರ ಸಂದರ್ಶವನ್ನು ಟಿವಿಯಲ್ಲಿ ನೋಡುತ್ತಿದ್ದರಂತೆ. ಆ ದಿನಗಳಲ್ಲಿ ಧೋನಿ ಇನ್ನು ಇಷ್ಟು ಪ್ರಸಿದ್ಧಿಗೆ ಬಂದಿರಲಿಲ್ಲ. ಉದಯೋನ್ಮುಖ ಆಟಗಾರರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಆಗ ಅವರನ್ನು ನೋಡಲು ಮನೆಗೆ ಅತಿಥಿಗಳು ಬರುತ್ತಿದ್ದರು. ಆದರೆ ಬಂದವರಿಗೆ ಕುಳಿತುಕೊಳ್ಳಲು ಸರಿಯಾಗಿ ಆಸನದ ವ್ಯವಸ್ಥೆ ಇರಲಿಲ್ಲ. ಈ ಮಾತನ್ನು ಧೋನಿಯವರ ತಂದೆಯವರು ಹೇಳಿದ್ದನ್ನು ಕೇಳಿ ಅಂಬರೀಶ್ ಭಾವುಕರಾಗಿದ್ದರಂತೆ.

ದೊಡ್ಡ ಕ್ರೀಡಾಪ್ರೇಮಿಯಾಗಿದ್ದ ಅಂಬರೀಶ್ ಅವರು ಕ್ರಿಕೆಟ್ ಆಟದ ಬಗ್ಗೆ ಉತ್ತಮ ಜ್ಞಾನವನ್ನು ಕೂಡ ಹೊಂದಿದ್ದರು. ಅಂಬರೀಶ್ ಅವರು ಅಂದು ಧೋನಿಯವರಿಗೆ ಚೆಕ್ ಕೊಟ್ಟು ಪ್ರೋತ್ಸಾಹಿಸಿದ ಫೋಟೋ ಕಳೆದುಹೋಗಿದ್ದು, ಬಹಳ ಕಾಲದ ನಂತರ ಸುಮಲತಾ ಅವರಿಗೆ ಸಿಕ್ಕಿದೆ. ಇದು ಆವತ್ತಿನ ದಿನಗಳನ್ನು ಅವರಿಗೆ ನೆನಪಿಸಿದೆ. ಈ ಫೋಟೋವನ್ನು ಅವರು ಧೋನಿಯವರಿಗೂ ಟ್ಯಾಗ್ ಮಾಡಿದ್ದು, “ಈ ಘಳಿಗೆ ನಿಮಗೆ ನೆನಪಿರಲಿಕ್ಕಿಲ್ಲ, ಆದರೆ ನಿಮ್ಮ ಸಾಧನೆ ನಿಜಕ್ಕೂ ದೇಶಕ್ಕೆ ಹೆಮ್ಮೆ ತರುವಂತದ್ದು” ಎಂದು ಬರೆದಿದ್ದಾರೆ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search