ಪ್ರಕಾಶ್ ರೈ ಹಂದಿ – ಶಾಸಕ ಯತ್ನಾಳ್ ತಿರುಗೇಟು
Posted On September 12, 2023

ಸನಾತನ ಧರ್ಮವನ್ನು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ತೆಗಳಿದ ಬಳಿಕ ಆರೋಪ, ಪ್ರತ್ಯಾರೋಪಗಳು ಬೇರೆ ಬೇರೆ ಮೂಲಗಳಿಂದ ಹೊರಗೆ ಬರುತ್ತಿವೆ. ಈ ಬಗ್ಗೆ ನಟ ಪ್ರಕಾಶ್ ರೈ ಕೂಡ ತಮ್ಮ ಹೇಳಿಕೆ ನೀಡಿದ್ದು ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಕೇವಲವಾಗಿ ಮಾತನಾಡಿದ್ದಾರೆ. ಇದರಿಂದ ಆಕ್ರೋಶಿತರಾಗಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪ್ರಕಾಶ್ ರೈ ಹಂದಿ ಎಂದು ಕಿಡಿಕಾರಿದ್ದಾರೆ. ಪ್ರಕಾಶ್ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಹಿಂದೂ ಧರ್ಮದ ವಿಚಾರದಲ್ಲಿ ಯಾರಾದರೂ ಉಡಾಫೆಯಿಂದ ಮಾತನಾಡಿದಾಗ ಅದಕ್ಕೆ ತೀಕ್ಣವಾಗಿ ಪ್ರತಿಕ್ರಿಯಿಸುವ ಯತ್ನಾಳ್ ಇಂತಹ ವಿಷಯದಲ್ಲಿ ಯಾರನ್ನೂ ಬಿಟ್ಟಿಲ್ಲ. ಟೀಕಿಸಿದವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುವ ಯತ್ನಾಳ್ ಆ ತಕ್ಷಣಕ್ಕೆ ಮನಸ್ಸಿಗೆ ಅನಿಸಿದ್ದನ್ನು ಯಾವುದೇ ಫಿಲ್ಟರ್ ಇಲ್ಲದೇ ಮಾತನಾಡಿಬಿಡುತ್ತಾರೆ. ಅವರ ಇಂತಹ ಮಾತುಗಳಿಂದಾಗಿ ಅವರನ್ನು ಇಷ್ಟಪಡುವ ಅಭಿಮಾನಿ ವರ್ಗವೇ ಇದೆ
- Advertisement -
Trending Now
ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ
March 15, 2025
ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?
March 14, 2025
Leave A Reply