• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!

Tulunadu News Posted On September 13, 2023
0


0
Shares
  • Share On Facebook
  • Tweet It

ಇಂತಹ ದಿನ ಯಾವತ್ತಾದರೂ ಬರಬಹುದು ಎಂದು ನೀವು ಊಹಿಸಿದ್ದಿರಾ? ಬಹುತೇಕ ಜನ ಇಲ್ಲ ಎಂದೇ ಹೇಳಬಹುದು. ಸೌದಿ ಅರೇಬಿಯಾದಿಂದ ನಾವು ತೈಲವನ್ನು ಎಷ್ಟೋ ವರ್ಷಗಳಿಂದ ಆಮದು ಮಾಡಿಕೊಳ್ಳುತ್ತಾ ಇದ್ದೇವೆ. ಒಂದು ದೇಶ ಯಾವತ್ತೂ ಬೇರೆ ದೇಶದಿಂದ ಏನಾದರೂ ಆಮದು ಮಾಡಿಕೊಳ್ಳುತ್ತಾ ಇದ್ದರೆ ಎಷ್ಟೆಂದರೂ ಆ ದೇಶದ ಎದುರು ಕುಬ್ಜವಾಗಿಯೇ ಇರಬೇಕಾಗುತ್ತದೆ. ಇಲ್ಲಿಯ ತನಕ ಸೌದಿ ಅರೇಬಿಯಾ ಭಾರತದ ಎದುರು ಒಂದು ಮುಷ್ಠಿ ಹೆಚ್ಚಿನ ಪ್ರಾಬಲ್ಯವನ್ನು ತೈಲ ರಫ್ತಿನ ವಿಷಯದಲ್ಲಿ ಹೊಂದಿತ್ತು. ಆದರೆ ಇನ್ನು ಮುಂದೆ ಭಾರತ ಸೌದಿ ಅರೇಬಿಯಾದ ಸಂಬಂಧ ಬೇರೆಯದ್ದೇ ಆಯಾಮವನ್ನು ಪಡೆದುಕೊಳ್ಳಲಿದೆ. ಎರಡೂ ದೇಶಗಳ ನಡುವೆ ಕೊಡು ಕೊಳ್ಳುವಿಕೆ ವ್ಯವಹಾರ ನಡೆಯಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತ – ಮಧ್ಯಪ್ರಾಚ್ಯ ರಾಷ್ಟ್ರಗಳು – ಈರೋಪ್ ನಡುವೆ ಆರ್ಥಿಕ ಕಾರಿಡಾರ್ ರಚನೆಯಾಗಲಿದೆ. ಈ ಒಡಂಬಡಿಕೆಯಲ್ಲಿ ಜಾಗತಿಕ ಇಂಧನ ಪೂರೈಕೆಯನ್ನು ಸೌದಿ ಅರೇಬಿಯಾಕ್ಕೆ ಭಾರತ ಮಾಡಲಿದೆ. ನವೀಕರಿಸಬಹುದಾದ ಇಂಧನವನ್ನು ಪೂರೈಸಲಿರುವ ಭಾರತ ಹಸಿರು ಜಲಜನಕವನ್ನು ಪ್ರತಿ ವರ್ಷ 5 ಮಿಲಿಯನ್ ಟನ್ ನಷ್ಟು ಪೂರೈಕೆ ಮಾಡುವ ಗುರಿ ಇಟ್ಟುಕೊಂಡಿದೆ. ಸೌದಿಗೆ ಮಾತ್ರವಲ್ಲ, ಸಿಂಗಾಪುರ ಕೂಡ ಇಂಧನ ಪೂರೈಕೆ ವಿಷಯದಲ್ಲಿ ಭಾರತದೊಂದಿಗೆ ಒಪ್ಪಂದ ಮಾಡುವ ಆಸಕ್ತಿಯನ್ನು ತೋರಿಸಿದ್ದು, ನವೀಕರಿಸಬಹುದಾದ ಇಂಧನವನ್ನು ಭಾರತದಿಂದ ಆಮದು ಮಾಡಿಕೊಳ್ಳಲಿದೆ. ಅಂಡಮಾನ್ ಮತ್ತು ನಿಕೋಬರ್ ದ್ವೀಪದ ಅಡಿಯಲ್ಲಿ ಕೇಬಲ್ ಮೂಲಕ ಈ ಪೂರೈಕೆ ನಡೆಯಲಿದೆ.
ಇದು ಸದ್ಯಕ್ಕೆ ಆಗುವ ಪ್ರಕ್ರಿಯೆ ಅಲ್ಲ, ಇದಕ್ಕಾಗಿ ವರುಷಗಳು ತಗಲುತ್ತವೆ ಎಂದು ಮೋದಿ ವಿರೋಧಿಗಳು ಹೇಳಬಹುದು. ಆದರೆ ವಿಷಯ ಏನೆಂದರೆ ಈ ಕುರಿತು ಈಗಾಗಲೇ ಕೆಲಸ ಆರಂಭವಾಗಿದೆ. ಇದು ಬಾಹ್ಯ ಪ್ರಪಂಚಕ್ಕೆ ಈಗ ಪ್ರಚಾರವಾಗುತ್ತಿದೆಯಾದರೂ ಇದರ ಮೊದಲೇ ಕಾಮಗಾರಿಗಳು ಆರಂಭವಾಗಿದೆ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search