• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

2022 ರಲ್ಲಿ ಪ್ರತಿ 3 ನಿಮಿಷಕ್ಕೆ ಒಬ್ಬ ಅಪಘಾತದಲ್ಲಿ ಸಾವು!

Tulunadu News Posted On October 14, 2023


  • Share On Facebook
  • Tweet It

ಭಾರತದಲ್ಲಿ ಇಲ್ಲಿಯ ತನಕ ನಡೆದ ಅಪಘಾತಗಳ ಪ್ರಮಾಣವನ್ನು ವಿಶ್ಲೇಷಿಸುವಾಗ 2022 ರಲ್ಲಿ ಅತೀ ಹೆಚ್ಚು ಅಪಘಾತಗಳು ನಡೆದಿವೆ ಎನ್ನುವುದು ಅಂಕಿಅಂಶಗಳಿಂದ ಸಾಬೀತಾಗಿದೆ. 2022 ರಲ್ಲಿ ಒಂದೇ ವರ್ಷದಲ್ಲಿ 1.68 ಲಕ್ಷಕ್ಕಿಂತಲೂ ಹೆಚ್ಚು ಅಪಘಾತಗಳು ನಡೆದಿರುವುದು ದಾಖಲಾಗಿದೆ. ಈ ಅಪಘಾತಗಳಲ್ಲಿ ಮರಣ ಹೊಂದಿದವರ ಸರಾಸರಿಯನ್ನು ನೋಡಿದಾಗ ನಿತ್ಯ 462 ಜನ ಪ್ರಾಣ ತೆತ್ತಿದ್ದಾರೆ. ಇದು ಅಂದಾಜು ಮೂರು ನಿಮಿಷಗಳಿಗೆ ಒಬ್ಬರು ಮರಣ ಹೊಂದಿರುವುದಾಗಿ ಅರ್ಥ ಮಾಡಿಕೊಳ್ಳಬಹುದು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲಾ ರಾಜ್ಯಗಳಿಂದ ಈ ಕುರಿತು ಅಂಕಿಅಂಶಗಳನ್ನು ತರಿಸಿ ವರದಿ ಸಿದ್ಧಪಡಿಸಿಕೊಂಡಿದೆ. ಅಪಘಾತಗಳು, ಸಾವು, ನೋವುಗಳ ಸಂಖ್ಯೆ 2022 ರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು ಬಹಳ ಕಳವಳಕಾರಿ ವಿಷಯ. 2021 ಕ್ಕೆ ಹೋಲಿಸುವಾಗ 2022 ರಲ್ಲಿ 9% ದಷ್ಟು ಹೆಚ್ಚಿನ ಅಪಘಾತಗಳು ನಡೆದಿವೆ. ಇನ್ನು ಕೊರೊನಾ ಪೂರ್ವಕ್ಕೆ ಹೋಲಿಸಿದಾಗ 2019 ರಿಂದ 2022 ರಲ್ಲಿ ಈ ಪ್ರಮಾಣ 11.5% ಹೆಚ್ಚಾಗಿರುವುದು ಕೂಡ ಯೋಚಿಸಬೇಕಾದ ಸಂಗತಿ. ಇಲ್ಲಿಯ ತನಕ ಪ್ರತಿ ವರ್ಷ ನಡೆದ ಅಪಘಾತಗಳನ್ನು ಗಮನಿಸಿದಾಗ 2022 ರಲ್ಲಿ ಹೆಚ್ಚಾಗಿ ನಡೆದ ಅಪಘಾತಗಳು ಚಿಂತನೆಗೆ ಈಡು ಮಾಡಿವೆ. ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಬ್ಬರು ಸಾಯುವುದೆಂದರೆ ದೇಶಕ್ಕೆ ದೊಡ್ಡ ನಷ್ಟವೂ ಹೌದು. ಈಗಾಗಲೇ ಭಾರತದಲ್ಲಿ ರಸ್ತೆಗಳು ಅಗಲೀಕರಣವಾಗಿದ್ದರೂ ಅಪಘಾತಗಳು ನಡೆಯುತ್ತಿರುವುದು ಏಕೆ ಎಂದು ಚಿಂತಿಸಬೇಕಾದ ಸಂಗತಿ.

ಇನ್ನು ಹಿಂದಿನ ವರ್ಷಗಳಿಗೆ ಹೋಲಿಸಿದಾಗ 2022 ರಲ್ಲಿ 4.43 ಲಕ್ಷ ಜನರು ಗಾಯಾಳಾಗಿದ್ದಾರೆ. ಇದು 2021 ರ 3.84 ಲಕ್ಷ ಗಾಯಾಳುಗಳ ಸಂಖ್ಯೆಗೆ ಹೋಲಿಸಿದಾಗ 15% ಜಾಸ್ತಿ ಎನ್ನುವುದನ್ನು ಕೂಡ ನಾವು ಗಮನಿಸಬೇಕು. ಒಟ್ಟಿನಲ್ಲಿ ಈ ಅಪಘಾತಗಳ ಸಂಖ್ಯೆ, ಸಾವಿನ ಪ್ರಮಾಣಗಳನ್ನು ಗಣನೀಯ ಇಳಿಸಲು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಅದರೊಂದಿಗೆ ಇದರ ಹಿಂದಿನ ಕಾರಣಗಳ ಬಗ್ಗೆ ನಾವು ಕೂಲಂಕುಶವಾಗಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search