• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸೋಮೇಶ್ವರದ ನೀರುದೋಸೆ ಬಾಯಲ್ಲಿ ನೀರೂರಿಸುತ್ತದೆ!

Nag Shenoy Posted On October 16, 2023
0


0
Shares
  • Share On Facebook
  • Tweet It

ಆಗುಂಬೆ ಘಾಟಿಯ ಹೆಬ್ಬೆರಳಿಗೆ ತಾಗಿಕೊಂಡಿರುವ ಪುಟ್ಟ ಗ್ರಾಮದ ಹೆಸರು ಸೋಮೇಶ್ವರ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಆರಾಧಿಸುವ ಶ್ರೀ ವೆಂಕಟರಮಣ ದೇವಸ್ಥಾನ ಬಿಟ್ಟರೆ ಆ ಗ್ರಾಮದಲ್ಲಿ ವಿಶೇಷತೆಗಳು ಎನ್ನುವುದು ಬೇರೆ ಏನೂ ಕಾಣುವುದಿಲ್ಲ. ಆದರೆ ನಿತ್ಯ ಅಸಂಖ್ಯಾತ ವಾಹನಗಳು ಈ ಸೋಮೇಶ್ವರದಲ್ಲಿ ನಿಲ್ಲುತ್ತವೆ. ಇಲ್ಲಿ ಕಾಫಿ, ತಿಂಡಿ ಮಾಡಿಕೊಂಡು ಮುಂದಕ್ಕೆ ಹೋಗುತ್ತವೆ. ಯಾಕೆಂದರೆ ಸೋಮೇಶ್ವರ ದಾಟಿದ ತಕ್ಷಣ ಕೆಲವೇ ಮೀಟರ್ ಗಳ ಅಂತರದಲ್ಲಿ ಆಗುಂಬೆ ಘಾಟಿ ಸಿಗುತ್ತದೆ. ದಾರಿಯಲ್ಲಿ ಎಲ್ಲಿಯೂ ತಿಂಡಿ, ಪಾನೀಯ ಸಿಗುವುದಿಲ್ಲ. ಆದ್ದರಿಂದ ಇಲ್ಲಿ ಟಿಫಿನ್ ಮಾಡದೇ ನೀವು ಮುಂದೆ ಹೋಗುವ ಮನಸ್ಸು ಮಾಡುವುದಿಲ್ಲ. ಇಂತಹ ಪುಟ್ಟ ಗ್ರಾಮ ಸೋಮೇಶ್ವರದಲ್ಲಿ ಹತ್ತಾರು ಹೋಟೇಲುಗಳಿವೆ. ಎಲ್ಲರಿಗೂ ಉತ್ತಮ ವ್ಯಾಪಾರವಿದೆ.

ಇಂತಹ ಸೋಮೇಶ್ವರದಲ್ಲಿ ಐದಾರು ದಶಕಗಳ ಹಿಂದೆ ಹೋಟೇಲು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಕುಟುಂಬಗಳಿವೆ. ಅಂತಹ ಒಂದು ಹೋಟೇಲಿನಲ್ಲಿ ನಮ್ಮ ತಂಡ ಟಿಫಿನ್ ಮಾಡಿತು. ಅಷ್ಟಕ್ಕೂ ಸೋಮೇಶ್ವರದ ಯಾವುದೇ ಹೋಟೇಲಿಗೆ ಬರುವ ಪ್ರವಾಸಿಗರು ಮೊದಲು ಕೇಳುವುದೇ ನೀರುದೋಸೆ. ಅದನ್ನು ನೆಚ್ಚಿಕೊಂಡು ತಿನ್ನುವ ಖುಷಿಯೇ ಬೇರೆ. ಇಲ್ಲಿ ದೋಸೆ ತಯಾರಿಸುವ ವಿಧಾನ, ಅದಕ್ಕೆ ಬಳಸುವ ಹಿಟ್ಟು ಎಲ್ಲವೂ ವಿಶಿಷ್ಟ. ಇಂತಹ ನೀರು ದೋಸೆಯ ಮೂಲಕ ಸೋಮೇಶ್ವರ ಫೇಮಸ್ ಆಗಿಬಿಟ್ಟಿದೆ.

ನೀರು ದೋಸೆ ಇಲ್ಲಿನ ಹೋಟೇಲುಗಳಲ್ಲಿ ವರ್ಷದ 365 ದಿನ, ವಾರದ 24*7 ಕೂಡ ಸಿಗುತ್ತದೆ. ನೀರು ದೋಸೆಯನ್ನು ತಿನ್ನಲೆಂದೆ ಇಲ್ಲಿ ಬರುವವರಿದ್ದಾರೆ. ಅದರ ರುಚಿಗೆ ಮಾರು ಹೋಗದವರಿಲ್ಲ. ಮಂಗಳೂರು, ಉಡುಪಿ ಕಡೆಯಿಂದ ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗುವವರು, ಅತ್ತ ಕಡೆಯಿಂದ ಇತ್ತ ಬರುವವರಿಗೆ ಒಂದು ಕೊಂಡಿಯಾಗಿರುವ ಸೋಮೇಶ್ವರದ ಈ ಹೋಟೇಲುಗಳ ನೀರುದೋಸೆಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ರುಚಿಯಿಂದ ನಿಮ್ಮ ನಾಲಿಗೆ ಕೂಡ ಸೂಪರ್ ಎನ್ನದೇ ಇರುತ್ತಾ?

0
Shares
  • Share On Facebook
  • Tweet It




Trending Now
ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
Nag Shenoy September 11, 2025
ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
Nag Shenoy September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
  • Popular Posts

    • 1
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 2
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 3
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • 4
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 5
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್

  • Privacy Policy
  • Contact
© Tulunadu Infomedia.

Press enter/return to begin your search