• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸೋಮೇಶ್ವರದ ನೀರುದೋಸೆ ಬಾಯಲ್ಲಿ ನೀರೂರಿಸುತ್ತದೆ!

Nag Shenoy Posted On October 16, 2023
0


0
Shares
  • Share On Facebook
  • Tweet It

ಆಗುಂಬೆ ಘಾಟಿಯ ಹೆಬ್ಬೆರಳಿಗೆ ತಾಗಿಕೊಂಡಿರುವ ಪುಟ್ಟ ಗ್ರಾಮದ ಹೆಸರು ಸೋಮೇಶ್ವರ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಆರಾಧಿಸುವ ಶ್ರೀ ವೆಂಕಟರಮಣ ದೇವಸ್ಥಾನ ಬಿಟ್ಟರೆ ಆ ಗ್ರಾಮದಲ್ಲಿ ವಿಶೇಷತೆಗಳು ಎನ್ನುವುದು ಬೇರೆ ಏನೂ ಕಾಣುವುದಿಲ್ಲ. ಆದರೆ ನಿತ್ಯ ಅಸಂಖ್ಯಾತ ವಾಹನಗಳು ಈ ಸೋಮೇಶ್ವರದಲ್ಲಿ ನಿಲ್ಲುತ್ತವೆ. ಇಲ್ಲಿ ಕಾಫಿ, ತಿಂಡಿ ಮಾಡಿಕೊಂಡು ಮುಂದಕ್ಕೆ ಹೋಗುತ್ತವೆ. ಯಾಕೆಂದರೆ ಸೋಮೇಶ್ವರ ದಾಟಿದ ತಕ್ಷಣ ಕೆಲವೇ ಮೀಟರ್ ಗಳ ಅಂತರದಲ್ಲಿ ಆಗುಂಬೆ ಘಾಟಿ ಸಿಗುತ್ತದೆ. ದಾರಿಯಲ್ಲಿ ಎಲ್ಲಿಯೂ ತಿಂಡಿ, ಪಾನೀಯ ಸಿಗುವುದಿಲ್ಲ. ಆದ್ದರಿಂದ ಇಲ್ಲಿ ಟಿಫಿನ್ ಮಾಡದೇ ನೀವು ಮುಂದೆ ಹೋಗುವ ಮನಸ್ಸು ಮಾಡುವುದಿಲ್ಲ. ಇಂತಹ ಪುಟ್ಟ ಗ್ರಾಮ ಸೋಮೇಶ್ವರದಲ್ಲಿ ಹತ್ತಾರು ಹೋಟೇಲುಗಳಿವೆ. ಎಲ್ಲರಿಗೂ ಉತ್ತಮ ವ್ಯಾಪಾರವಿದೆ.

ಇಂತಹ ಸೋಮೇಶ್ವರದಲ್ಲಿ ಐದಾರು ದಶಕಗಳ ಹಿಂದೆ ಹೋಟೇಲು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಕುಟುಂಬಗಳಿವೆ. ಅಂತಹ ಒಂದು ಹೋಟೇಲಿನಲ್ಲಿ ನಮ್ಮ ತಂಡ ಟಿಫಿನ್ ಮಾಡಿತು. ಅಷ್ಟಕ್ಕೂ ಸೋಮೇಶ್ವರದ ಯಾವುದೇ ಹೋಟೇಲಿಗೆ ಬರುವ ಪ್ರವಾಸಿಗರು ಮೊದಲು ಕೇಳುವುದೇ ನೀರುದೋಸೆ. ಅದನ್ನು ನೆಚ್ಚಿಕೊಂಡು ತಿನ್ನುವ ಖುಷಿಯೇ ಬೇರೆ. ಇಲ್ಲಿ ದೋಸೆ ತಯಾರಿಸುವ ವಿಧಾನ, ಅದಕ್ಕೆ ಬಳಸುವ ಹಿಟ್ಟು ಎಲ್ಲವೂ ವಿಶಿಷ್ಟ. ಇಂತಹ ನೀರು ದೋಸೆಯ ಮೂಲಕ ಸೋಮೇಶ್ವರ ಫೇಮಸ್ ಆಗಿಬಿಟ್ಟಿದೆ.

ನೀರು ದೋಸೆ ಇಲ್ಲಿನ ಹೋಟೇಲುಗಳಲ್ಲಿ ವರ್ಷದ 365 ದಿನ, ವಾರದ 24*7 ಕೂಡ ಸಿಗುತ್ತದೆ. ನೀರು ದೋಸೆಯನ್ನು ತಿನ್ನಲೆಂದೆ ಇಲ್ಲಿ ಬರುವವರಿದ್ದಾರೆ. ಅದರ ರುಚಿಗೆ ಮಾರು ಹೋಗದವರಿಲ್ಲ. ಮಂಗಳೂರು, ಉಡುಪಿ ಕಡೆಯಿಂದ ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗುವವರು, ಅತ್ತ ಕಡೆಯಿಂದ ಇತ್ತ ಬರುವವರಿಗೆ ಒಂದು ಕೊಂಡಿಯಾಗಿರುವ ಸೋಮೇಶ್ವರದ ಈ ಹೋಟೇಲುಗಳ ನೀರುದೋಸೆಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ರುಚಿಯಿಂದ ನಿಮ್ಮ ನಾಲಿಗೆ ಕೂಡ ಸೂಪರ್ ಎನ್ನದೇ ಇರುತ್ತಾ?

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Nag Shenoy September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Nag Shenoy September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search