• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸೋಮೇಶ್ವರದ ನೀರುದೋಸೆ ಬಾಯಲ್ಲಿ ನೀರೂರಿಸುತ್ತದೆ!

Nag Shenoy Posted On October 16, 2023
0


0
Shares
  • Share On Facebook
  • Tweet It

ಆಗುಂಬೆ ಘಾಟಿಯ ಹೆಬ್ಬೆರಳಿಗೆ ತಾಗಿಕೊಂಡಿರುವ ಪುಟ್ಟ ಗ್ರಾಮದ ಹೆಸರು ಸೋಮೇಶ್ವರ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಆರಾಧಿಸುವ ಶ್ರೀ ವೆಂಕಟರಮಣ ದೇವಸ್ಥಾನ ಬಿಟ್ಟರೆ ಆ ಗ್ರಾಮದಲ್ಲಿ ವಿಶೇಷತೆಗಳು ಎನ್ನುವುದು ಬೇರೆ ಏನೂ ಕಾಣುವುದಿಲ್ಲ. ಆದರೆ ನಿತ್ಯ ಅಸಂಖ್ಯಾತ ವಾಹನಗಳು ಈ ಸೋಮೇಶ್ವರದಲ್ಲಿ ನಿಲ್ಲುತ್ತವೆ. ಇಲ್ಲಿ ಕಾಫಿ, ತಿಂಡಿ ಮಾಡಿಕೊಂಡು ಮುಂದಕ್ಕೆ ಹೋಗುತ್ತವೆ. ಯಾಕೆಂದರೆ ಸೋಮೇಶ್ವರ ದಾಟಿದ ತಕ್ಷಣ ಕೆಲವೇ ಮೀಟರ್ ಗಳ ಅಂತರದಲ್ಲಿ ಆಗುಂಬೆ ಘಾಟಿ ಸಿಗುತ್ತದೆ. ದಾರಿಯಲ್ಲಿ ಎಲ್ಲಿಯೂ ತಿಂಡಿ, ಪಾನೀಯ ಸಿಗುವುದಿಲ್ಲ. ಆದ್ದರಿಂದ ಇಲ್ಲಿ ಟಿಫಿನ್ ಮಾಡದೇ ನೀವು ಮುಂದೆ ಹೋಗುವ ಮನಸ್ಸು ಮಾಡುವುದಿಲ್ಲ. ಇಂತಹ ಪುಟ್ಟ ಗ್ರಾಮ ಸೋಮೇಶ್ವರದಲ್ಲಿ ಹತ್ತಾರು ಹೋಟೇಲುಗಳಿವೆ. ಎಲ್ಲರಿಗೂ ಉತ್ತಮ ವ್ಯಾಪಾರವಿದೆ.

ಇಂತಹ ಸೋಮೇಶ್ವರದಲ್ಲಿ ಐದಾರು ದಶಕಗಳ ಹಿಂದೆ ಹೋಟೇಲು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಕುಟುಂಬಗಳಿವೆ. ಅಂತಹ ಒಂದು ಹೋಟೇಲಿನಲ್ಲಿ ನಮ್ಮ ತಂಡ ಟಿಫಿನ್ ಮಾಡಿತು. ಅಷ್ಟಕ್ಕೂ ಸೋಮೇಶ್ವರದ ಯಾವುದೇ ಹೋಟೇಲಿಗೆ ಬರುವ ಪ್ರವಾಸಿಗರು ಮೊದಲು ಕೇಳುವುದೇ ನೀರುದೋಸೆ. ಅದನ್ನು ನೆಚ್ಚಿಕೊಂಡು ತಿನ್ನುವ ಖುಷಿಯೇ ಬೇರೆ. ಇಲ್ಲಿ ದೋಸೆ ತಯಾರಿಸುವ ವಿಧಾನ, ಅದಕ್ಕೆ ಬಳಸುವ ಹಿಟ್ಟು ಎಲ್ಲವೂ ವಿಶಿಷ್ಟ. ಇಂತಹ ನೀರು ದೋಸೆಯ ಮೂಲಕ ಸೋಮೇಶ್ವರ ಫೇಮಸ್ ಆಗಿಬಿಟ್ಟಿದೆ.

ನೀರು ದೋಸೆ ಇಲ್ಲಿನ ಹೋಟೇಲುಗಳಲ್ಲಿ ವರ್ಷದ 365 ದಿನ, ವಾರದ 24*7 ಕೂಡ ಸಿಗುತ್ತದೆ. ನೀರು ದೋಸೆಯನ್ನು ತಿನ್ನಲೆಂದೆ ಇಲ್ಲಿ ಬರುವವರಿದ್ದಾರೆ. ಅದರ ರುಚಿಗೆ ಮಾರು ಹೋಗದವರಿಲ್ಲ. ಮಂಗಳೂರು, ಉಡುಪಿ ಕಡೆಯಿಂದ ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗುವವರು, ಅತ್ತ ಕಡೆಯಿಂದ ಇತ್ತ ಬರುವವರಿಗೆ ಒಂದು ಕೊಂಡಿಯಾಗಿರುವ ಸೋಮೇಶ್ವರದ ಈ ಹೋಟೇಲುಗಳ ನೀರುದೋಸೆಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ರುಚಿಯಿಂದ ನಿಮ್ಮ ನಾಲಿಗೆ ಕೂಡ ಸೂಪರ್ ಎನ್ನದೇ ಇರುತ್ತಾ?

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Nag Shenoy October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Nag Shenoy October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search