• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗಂಡ ಬಿಟ್ಟರೂ ತಾಳಿ ತೆಗೆಯದ ಹೆಣ್ಣುಮಕ್ಕಳಿವೆ!

Hanumantha Kamath Posted On November 6, 2023
0


0
Shares
  • Share On Facebook
  • Tweet It

ನೇರವಾಗಿ ವಿಷಯಕ್ಕೆ ಬರುವುದೇ ಆದರೆ ಯುಪಿಎಸ್ ಸಿ ಅಥವಾ ಯಾವುದೇ ಪರೀಕ್ಷೆ ಆಗಲಿ, ತೀರಾ ಮಂಗಳಸೂತ್ರ, ಕರಿಮಣಿ ಅಥವಾ ಕಾಲುಂಗುರ ಹೊರಗೆ ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಹೋಗಿ ಎನ್ನುವುದು ಶುದ್ಧ ಅವಿವೇಕಿತನ. ಪಾಕಿಸ್ತಾನದಲ್ಲಿ ಬೆರಳೆಣಿಕೆಯ ಶೇಕಡಾದಷ್ಟು ಇರುವ ಹಿಂದೂಗಳು ಈ ಪರಿಸ್ಥಿತಿ ಅನುಭವಿಸುತ್ತಿದ್ದರೆ ಅದು ವಿಶೇಷ ಅಲ್ಲ ಎಂದು ಅಂದುಕೊಂಡು ಬಿಡಬಹುದಿತ್ತು. ಆದರೆ ತೀರಾ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಇದನ್ನು ಅನುಭವಿಸುತ್ತಾರೆ ಎಂದರೆ ಅದಕ್ಕಿಂತ ನಾಚಿಕೆ ಬೇರೆ ಇದೆಯಾ? ಒಂದು ವೇಳೆ ಕೇರಳವೋ, ಪಶ್ಚಿಮ ಬಂಗಾಲವೋ ಆಗಿದ್ದರೆ ಅಲ್ಲಿನ ಹೆಣ್ಣು ಮಕ್ಕಳ ಗ್ರಹಚಾರ ಎನ್ನಬಹುದಿತ್ತು. ಯಾಕೆಂದರೆ ಅವರು ಅಂತವರನ್ನೇ ಆರಿಸಿರುವುದರಿಂದ ಬೇರೆ ಆಯ್ಕೆ ಕೂಡ ಅವರಿಗೆ ಇರುವುದಿಲ್ಲ. ಆದರೆ ಕರ್ನಾಟಕದಲ್ಲಿ ಅಷ್ಟು ಬೇಗ ಕಾಲ ಕೆಟ್ಟುಹೋಯಿತಾ ಎಂದು ಅನಿಸದೇ ಇರುವುದಿಲ್ಲ. ಮಹಿಳೆಯರಿಗೆ ಫ್ರೀ ಬಸ್ ವ್ಯವಸ್ಥೆ ಮಾಡಿ ಬೇರೆ ಏನು ಬೇಕಾದರೂ ಕಿರುಕುಳ ಕೊಡಬಹುದು ಎಂದು ಯೋಚಿಸಿದರೆ ಅದಕ್ಕೆ ತಕ್ಕುದಾಗಿರುವ ಉತ್ತರವನ್ನು ಮಹಿಳೆಯರೇ ಕೊಡುತ್ತಾರೆ.

ಗಂಡ ಬಿಟ್ಟರೂ ತಾಳಿ ತೆಗೆಯದ ಹೆಣ್ಣುಮಕ್ಕಳಿವೆ!

ಯಾಕೆಂದರೆ ಸನಾತನ ಧರ್ಮದಲ್ಲಿ ಮಹಿಳೆ ಯಾವ ದು:ಖವನ್ನು ಸಹಿಸಿಕೊಂಡರೂ ಇರುತ್ತಾಳೆ. ಆದರೆ ಗಂಡ ಬದುಕಿರುವಾಗಲೇ ತಾಳಿ, ಮಂಗಳಸೂತ್ರ ತೆಗೆದಿಡಬೇಕು ಎನ್ನುವುದನ್ನು ಒಪ್ಪಲ್ಲ. ಗಂಡ ಎಂತವನಿದ್ದರೂ ಅವನನ್ನು ಸಹಿಸಿಯಾಳು, ಆದರೆ ಅವನು ಕಟ್ಟಿದ ಮಾಂಗಲ್ಯ ಕಿತ್ತು ಬದಿಗಿಟ್ಟು ಬಿಡುವಷ್ಟು ಕೆಟ್ಟ ದಿನಗಳು ನಮ್ಮಲ್ಲಿ ಬಂದಿಲ್ಲ. ಆದರೆ ಈಗ ಅದನ್ನು ಸರಕಾರವೇ ನಿಂತು ಮಾಡಿಸುತ್ತಿದೆಯೇನೋ ಎನಿಸುವ ಮಟ್ಟಿಗೆ ಪರಿಸ್ಥಿತಿ ಬದಲಾಗುತ್ತಿದೆ. ಮಾಂಗಲ್ಯ ಹೊರಗಿಟ್ಟು ಪರೀಕ್ಷಾ ಕೊಠಡಿಗೆ ಬರಬೇಕು ಎನ್ನುವ ನಿಯಮ ಎಲ್ಲಿದೆ ಎನ್ನುವುದನ್ನು ಮೊದಲು ಸರಕಾರದ ಪರವಾಗಿ ಯಾರಾದರೂ ಹೇಳಬೇಕು. ಯಾಕೆಂದರೆ ಹಿಜಾಬ್ ತೆಗೆದು ಕಾಲೇಜಿನ ಕೊಠಡಿಗೆ ಬರಲು ಅಭ್ಯಂತರವಿಲ್ಲ ಎನ್ನುವುದು ಕಾಂಗ್ರೆಸ್ ನಿಲುವು. ಹಾಗಿದ್ದ ಮೇಲೆ ಹಿಜಾಬಿಗಿಂತ ಕಿವಿಯೋಲೆ, ಮಾಂಗಲ್ಯ, ಕಾಲುಂಗುರ ಡೇಂಜರಾ. ಕಿವಿಯೋಲೆ ತೆಗೆಯಲು ಕಷ್ಟವಾಗಿ ಹೆಣ್ಣುಮಕ್ಕಳು ನೋವು ಅನುಭವಿಸಿ ಬಲವಂತವಾಗಿ ತೆಗೆಸುತ್ತಿರುವ ಕರಾಳ ದಿನಗಳು ಕರ್ನಾಟಕದಲ್ಲಿ ಈಗ ನೋಡಲು ಸಿಗುತ್ತಿದೆ. ಅಷ್ಟಕ್ಕೂ ಇವೆಲ್ಲವನ್ನು ಹಾಕಿ ಚೀಟಿಂಗ್ ಮಾಡಲು ಆಗುತ್ತಾ ಎನ್ನುವುದನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಹೇಳಬೇಕು. ಯಾಕೆಂದರೆ ಎಲ್ಲವನ್ನು ದುರ್ಬಿನು ಹಾಕಿ ನೋಡಿ ಒಳಗೆ ಬಿಡುವುದಾದರೆ ಒಳಗೆ ಲೆಕ್ಚರರ್ ಯಾಕೆ?
ಇನ್ನು ಯಾವುದರಲ್ಲಿ ನಕಲು ಆಗುತ್ತೆ, ಯಾವುದರಿಂದ ಆಗಲ್ಲ ಎನ್ನುವುದು ಹೊರಗೆ ಚೆಕಿಂಗ್ ಗಾಗಿ ನಿಂತಿರುವ ಸೆಕ್ಯೂರಿಟಿಯವರಿಗೆ ಗೊತ್ತಾಗಬೇಕು. ಅಂತವರನ್ನು ಅಲ್ಲಿ ನಿಲ್ಲಿಸಬೇಕು. ಇದೆಲ್ಲವನ್ನು ಬಿಟ್ಟು ಹೆಣ್ಣುಮಕ್ಕಳಿಂದ ಇದೆಲ್ಲವನ್ನು ತೆಗೆಸಿ ಅವರನ್ನು ಅಳಿಸಿ ಒಳಗೆ ಬಿಟ್ಟರೆ ಅವರು ಯಾವ ನಿರಾಳ ಮನಸ್ಥಿತಿಯಲ್ಲಿ ಪರೀಕ್ಷೆ ಬರೆದಾರು? ಅವರಿಗೆ ಹೇಗೆ ಉತ್ತಮ ಅಂಕಗಳು ದೊರೆತಾವು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು.

ಇನ್ನು ಈ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು?

ನಮ್ಮ ಜಾತಿಯವರನ್ನು ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ, ಮೀಸಲಾತಿ ಕೊಡಿ ಎಂದು ಆಕಾಶ, ಪಾತಾಳ ಒಂದು ಮಾಡುವ ಕೆಲವು ಮಠಾಧೀಶರು ನಮ್ಮ ಧರ್ಮದ ಮೇಲೆ, ಹೆಣ್ಣುಮಕ್ಕಳ ನಂಬಿಕೆಯ ಮೇಲೆ, ಸನಾತನ ಸಂಸ್ಕೃತಿಯ ಅಸ್ಮಿತೆಯ ಮೇಲೆ ಹೊಡೆತ ಬೀಳುವಾಗ ಧ್ವನಿ ಎತ್ತದಿದ್ದರೆ ಹೇಗೆ? ಅದು ಅವರ ಕರ್ತವ್ಯವಲ್ಲವೇ? ಅವರು ಯಾವುದರ ಉದ್ಧಾರಕ್ಕಾಗಿ ಆಯಾ ಪೀಠಗಳ ಮೇಲೆ ಕುಳಿತಿದ್ದಾರೋ ಅದು ಈಡೇರಬೇಕು. ಸ್ವಾಮಿಗಳು, ಸಂತರು ಯಾವ ಉದ್ದೇಶಕ್ಕೆ ಮುಂದಾಗಬೇಕೋ ಅದನ್ನೇ ಮಾಡದಿದ್ದರೆ ಆಡಳಿದಲ್ಲಿ ಇರುವ ಉಳಿದವರು ತಮಗೆ ಖುಷಿ ಬಂದಂತೆ ನಿಯಮ ತರುತ್ತಾರೆ.
ಇನ್ನು ಇದರೊಂದಿಗೆ ಸಂಘಟನೆಗಳು ಕೂಡ ಕಾನೂನು ಮಾರ್ಗ ಅನುಸರಿಸಬೇಕು. ಪ್ರತಿಭಟನೆ, ಸುದ್ದಿಗೋಷ್ಟಿ ಎಲ್ಲವೂ ಇರಲಿ, ಅವು ಜನಾಭಿಪ್ರಾಯ ರೂಪಿಸಲು ಬೇಕು. ಆದರೆ ವಿಷಯ ದಡ ಕೂಡ ಮುಟ್ಟಬೇಕಲ್ಲ. ಅದಕ್ಕಾಗಿ ಕಾನೂನು ಮೆಟ್ಟಿಲು ಕೂಡ ಹತ್ತಬೇಕು. ಇಲ್ಲದಿದ್ದರೆ ಯಾವುದೇ ಹೋರಾಟ ದಡ ಮುಟ್ಟುವುದಿಲ್ಲ. ಒಟ್ಟಿನಲ್ಲಿ ತಾಳಿಗೂ ಕೈ ಹಾಕುವ ಕ್ರಮಕ್ಕೆ ಎಂತಹ ಭಂಡ ಸರಕಾರ ಕೂಡ ಮುಂದಾಗಬಾರದು. ಹೆಸರಿನಲ್ಲಿ ದೇವರನ್ನು ಇಟ್ಟುಕೊಂಡರೆ ಆಗಲ್ಲ, ಒಂದಿಷ್ಟು ಅದಕ್ಕೆ ಸರಿಯಾಗಿ ನಡೆಯಬೇಕಲ್ಲ!

0
Shares
  • Share On Facebook
  • Tweet It




Trending Now
ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
Hanumantha Kamath September 11, 2025
ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
Hanumantha Kamath September 10, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
  • Popular Posts

    • 1
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 2
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • 3
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 4
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • 5
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!

  • Privacy Policy
  • Contact
© Tulunadu Infomedia.

Press enter/return to begin your search