• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಂಬಿಕೆ ಮೇಲೆ ಜಗತ್ತು ನಿಂತಿದೆ!

Hanumantha Kamath Posted On November 8, 2023
0


0
Shares
  • Share On Facebook
  • Tweet It

ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಅನಗತ್ಯ ಗೊಂದಲವನ್ನು ಸೃಷ್ಟಿಸಿದ್ದಾರೆ. ಇದೇ ಮಾತನ್ನು ಜಾಕೀರ್ ನೈಕ್ ಹೇಳಿದರೆ ಆತ ಮುಸ್ಲಿಮರ ಖುಷಿಗಾಗಿ ಹೇಳಿದ್ದಾನೆ ಎಂದು ಖಂಡಿತವಾಗಿ ಅಂದುಕೊಳ್ಳಬಹುದು. ಯಾಕೆಂದರೆ ಹಿಂದೂ ದೇವರುಗಳನ್ನು ಟೀಕಿಸಿ, ಹಿಂದೂತ್ವವನ್ನು ಹಂಗಿಸುವುದೇ ಆತನ ಕಾಯಕ. ಇದರಿಂದ ಹಿಂದೂಗಳ ಭಾವನೆಗೆ ದಕ್ಕೆ ಬರುತ್ತೆ ಎಂದು ಗೊತ್ತಿಲ್ಲದಷ್ಟು ಅಮಾಯಕನಲ್ಲ ಜಾಕೀರ್ ನೈಕ್. ಅವನಿಗೆ ಅದು ಹೊಟ್ಟೆಪಾಡು. ಅವನ ಮಾತುಗಳನ್ನು ತಮ್ಮ ಸ್ವಾಮೀಜಿಯವರ ಬಳಿ ಹೇಳಿ ಬೇಸರ ತೋಡಿಕೊಂಡವರು ತುಂಬಾ ಜನ ಇದ್ದಾರೆ. ಆದರೆ ತೀರಾ ಹಿಂದೂ ಸ್ವಾಮೀಜಿಗಳೇ ನಮ್ಮ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದರೆ ನಾವು ಎಲ್ಲಿಗೆ ಹೋಗೋದು.
ಸಾಣೀಹಳ್ಳಿ ಶ್ರೀ ಎಂದೇ ಪ್ರಖ್ಯಾತರಾಗಿರುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಭಕ್ತರ ಭಾವನೆಗೆ ಘಾಸಿ ಮಾಡಿದ್ದಾರೆ. ಒಂದು ವೇಳೆ ಸಾಣೀಹಳ್ಳಿ ಶ್ರೀಗಳು ಗಣಪತಿ ದೇವರನ್ನು ನಂಬದೇ ಇದ್ದರೆ ಅದು ಅವರ ವೈಯಕ್ತಿಕ ವಿಚಾರ. ಅವರು ಯಾವುದೇ ಗಣೇಶೋತ್ಸವಕ್ಕೆ ಹೋಗದೇ ಇದ್ದರೆ ಅದು ಅವರ ಇಷ್ಟ. ಹಾಗಂತ ಗಣಪತಿ ದೇವರನ್ನು ಪೂಜಿಸುವುದು ಅಥವಾ ಗಣೇಶೋತ್ಸವ ನಡೆಸುವುದು ಸರಿಯಲ್ಲ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಏನು ಸಾಧನೆ ಮಾಡಿದಂತೆ ಆಯಿತು. ಹಾಗಂತ ಇವರು ಶಿವ ದೇವರನ್ನು ನಂಬುತ್ತಾರೆ ಆದರೆ ಗಣಪತಿ ಯಾಕೆ ಬೇಡಾ ಎನ್ನುವುದು ಅವರೇ ಹೇಳಬೇಕು.

ಶಂಖದಿಂದ ಬಂದ ತೀರ್ಥ ಅಲ್ಲ!

ದೇವರು ಎನ್ನುವುದು ನಂಬಿಕೆ. ನಾವು ಆ ನಂಬಿಕೆಯ ಮೇಲೆಯೇ ಜೀವಿಸಿರುವುದು. ಹಾಗೆ ನೋಡಿದರೆ ತಂದೆ ಯಾರು ಎಂದು ತಾಯಿ ತೋರಿಸುತ್ತಾರೆಯೋ ಅವರೇ ನಮ್ಮ ತಂದೆ ಎನ್ನುವುದು ಇಡೀ ಜಗತ್ತು ಒಪ್ಪಿರುವ ನಂಬಿಕೆ. ಈಗ ಸ್ವಾಮೀಜಿಯವರದ್ದೇ ಉದಾಹರಣೆಯನ್ನು ತೆಗೆದುಕೊಂಡರೂ ಅವರು ಕೂಡ ಮೇಲಿನಿಂದ ಅವತರಿಸಿದವರಲ್ಲ. ಅವರು ಸ್ವರ್ಗದಲ್ಲಿ ಯಾವೆಲ್ಲಾ ದೇವರು ಇದ್ದಾರೆ ಎಂದು ನೋಡಿ ಪಟ್ಟಿ ಮಾಡಿ ಕೆಳಗೆ ಇಳಿದವರಲ್ಲ. ಹಾಗಿರುವಾಗ ಗಣಪತಿ ನಮ್ಮ ದೇವರು ಅಲ್ಲ ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ. ಈಗ ಸಾಣೇಹಳ್ಳಿ ಶ್ರೀಗಳು ಯಾರದ್ದೋ ಪುಸ್ತಕಗಳನ್ನು ಉದಾಹರಿಸಿಕೊಂಡು ಸಮಜಾಯಿಷಿಕೆ ಕೊಟ್ಟಿರಬಹುದು. ಹಾಗಂತ ಅವರು ಹೇಳಿದ ಕೂಡಲೇ ಶಂಖದಿಂದ ಬಂದ ತೀರ್ಥ ಎಂದು ಒಪ್ಪಿಕೊಳ್ಳಬೇಕಿಲ್ಲ.

ನಂಬಿಕೆ ಮೇಲೆ ಜಗತ್ತು ನಿಂತಿದೆ!

ಇನ್ನು ಶ್ರೀಗಳು ತಾವು ಲಿಂಗಾಯತ ಸಮುದಾಯಕ್ಕೆ ಅದನ್ನು ಹೇಳಿದ್ದು ಎಂದು ವಿಷಯವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚಿನ ಸ್ವಾಮೀಜಿಗಳು ತಾವು ಹಿಂದೂ ಸಂಸ್ಕೃತಿಯ ರಕ್ಷಣೆ, ಉದ್ಧಾರಕ್ಕೆ ಶ್ರಮಿಸುವುದನ್ನು ಬಿಟ್ಟು ಜಾತಿಗೆ ಸೀಮಿತರಾಗುತ್ತಿರುವುದೇ ಇಂತಹ ಹೇಳಿಕೆಗಳಿಗೆ ಕಾರಣ. ಗಣಪತಿ ದೇವರನ್ನು ಸ್ತುತಿಸದೇ ಯಾವುದೇ ಶುಭ ಸಮಾರಂಭವೂ ಆರಂಭವಾಗುವುದಿಲ್ಲ. ಹಾಗಿರುವಾಗ ಜಾತಿಗಳಲ್ಲಿ ಇಂತಹ ಗೊಂದಲ ಏರ್ಪಡಿಸುವುದು ಸರಿಯಲ್ಲ. ಇನ್ನು ಕಾಂಗ್ರೆಸ್ ಸರಕಾರ ಬಂದ ಬಳಿಕ ಸಿದ್ಧರಾಮಯ್ಯನವರನ್ನು ಓಲೈಸಿ ಪ್ರಶಸ್ತಿ ಪಡೆಯುವ ಹಂಬಲ ಕೆಲವರಲ್ಲಿ ಇರಬಹುದು. ಯಾಕೆಂದರೆ ಸಾಣೆಹಳ್ಳಿ ಶ್ರೀಗಳ ಹೇಳಿಕೆಯನ್ನು ಬೆಂಬಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.!!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search