• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಬಂದ್ ಮಾಡಿಟ್ಟರೆ ಏನು ಲಾಭ?

Hanumantha Kamath Posted On November 18, 2023
0


0
Shares
  • Share On Facebook
  • Tweet It

ಯಾವುದೇ ಯೋಜನೆ ಸಮರ್ಪಕವಾಗಿ ನಡೆದು ಅದರ ಲಾಭ ಜನಸಾಮಾನ್ಯರಿಗೆ ಸಿಗದೇ ಇದ್ದರೆ ಅದರಿಂದ ಪ್ರಯೋಜನ ಏನು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ತಾಜಾ ಉದಾಹರಣೆ ಮಂಗಳೂರಿನ ಕದ್ರಿ ಪಾರ್ಕಿನ ಪರಿಸರದಲ್ಲಿ ಸ್ಮಾರ್ಟ್ ಸಿಟಿ ಫಂಡ್ ನಿಂದ ನಿರ್ಮಿತವಾಗಿರುವ ಅಂಗಡಿಗಳ ಸಾಲು. ಮಂಗಳೂರಿನ ಕದ್ರಿ ಪಾರ್ಕ್ ಪರಿಸರ ಅಂದಾಜು 16.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಆಧುನಿಕರಣಗೊಂಡಿದೆ. ಈ ಪರಿಸರದಲ್ಲಿ ಹಿಂದೆ ವ್ಯವಸ್ಥಿತವಾಗಿ ಮಳಿಗೆಗಳು ಇರಲಿಲ್ಲ. ಪಾರ್ಕಿಗಾಗಿ ಬರುವ ನಾಗರಿಕರಿಗೆ ಉತ್ತಮವಾದ ಪರಿಸರದಲ್ಲಿ ತಿಂಡಿ, ತಿನಿಸುಗಳು ಸಿಗಬೇಕು ಎನ್ನುವ ಕಾರಣಕ್ಕೆ 38 ಮಳಿಗೆಗಳು ಮತ್ತು 5 ಫುಡ್ ಕೋರ್ಟ್ ಗಳ ನಿರ್ಮಾಣವಾಗಿದೆ. ಈಗ ಇರುವಂತಹ ಪ್ರಶ್ನೆ ಇದೆಲ್ಲವೂ ನಿರ್ಮಾಣವಾಗಿ ಆರು ತಿಂಗಳಿಗಿಂತ ಹೆಚ್ಚು ಸಮಯ ಆದರೂ ಯಾವ ಅಂಗಡಿ ಕೂಡ ಇನ್ನು ತೆರೆದಿಲ್ಲ. ಕಾರಣ ಯಾರಿಗೆ ಕೊಡುವುದು ಎನ್ನುವ ಗೊಂದಲ.

ಒಬ್ಬರಿಗೆ ಕೊಟ್ಟರೆ ಬೆಟರ್ ಅಥವಾ ಹಂಚುವುದಾ?

ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಹೇಗೆ ನಿಯಮ ರೂಪಿತವಾಗಿತ್ತು ಎಂದರೆ ಅಷ್ಟೂ ಮಳಿಗೆ, ಫುಡ್ ಕೋರ್ಟ್ ನಿರ್ವಹಣೆಯನ್ನು ಒಬ್ಬನೇ ವ್ಯಕ್ತಿಗೆ ಸಂಪೂರ್ಣ ಜವಾಬ್ದಾರಿ ನೀಡುವುದು. ಆತ ಆ ಅಂಗಡಿಗಳನ್ನು ಬಾಡಿಗೆಗೆ ನೀಡುವುದು, ಅಲ್ಲಿನ ಪರಿಸರವನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು, ಬೀದಿ ದೀಪ ನಿರ್ವಹಣೆ ಮಾಡುವುದು, ಒಟ್ಟು ಇಡೀ ಪರಿಸರವನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಒಬ್ಬರಿಗೆ ನೀಡುವುದು. ನಂತರ ಅವನು ಪಾಲಿಕೆಗೆ ವರ್ಷಕ್ಕೆ ಇಂತಿಂಷ್ಟು ಅಮೌಂಟ್ ಕಟ್ಟುವುದು ಎನ್ನುವ ನಿಯಮ ರೂಪಿತವಾಗಿತ್ತು. ಹೀಗೆ ಮಾಡಿ ಎಲ್ಲವನ್ನು ಒಬ್ಬರಿಗೆ ನೀಡುವುದರಿಂದ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ. ಏನೂ ತೊಂದರೆ ಆದರೆ ಒಬ್ಬರೇ ಜವಾಬ್ದಾರಾಗುತ್ತಾರೆ ಎನ್ನುವುದು ಇದರ ಉದ್ದೇಶವಾಗಿತ್ತು. ಸಿಂಗಲ್ ಪಾಯಿಂಟ್ ನಲ್ಲಿ ಕೆಲಸ ಸುಸೂತ್ರವಾಗಿ ನಡೆಯುತ್ತದೆ ಎನ್ನುವ ಐಡಿಯಾ ಇತ್ತು. ಹಾಗೆ ಇಲ್ಲಿ ಟೆಂಡರ್ ಕರೆದಾಗ ಒಬ್ಬನೇ ವ್ಯಕ್ತಿ ಬಿಡ್ ಮಾಡಿದ್ದರು.

ಬಂದ್ ಮಾಡಿಟ್ಟರೆ ಏನು ಲಾಭ?

ಯಾವುದೇ ಒಂದು ಯೋಜನೆಗೆ ಟೆಂಡರ್ ಕರೆಯುವಾಗ ಒಬ್ಬನೇ ಬಿಡ್ ಮಾಡಿದರೆ ಆಗ ಕೆಲವು ಸಂದರ್ಭಗಳಲ್ಲಿ ಪಾಲಿಕೆಯವರು ಈ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಅಲ್ಲಿ ಓಕೆ ಮಾಡಿಸಿಕೊಂಡು ಮುಂದುವರೆಯುತ್ತಾರೆ. ಆದರೆ ಈ ವಿಷಯದಲ್ಲಿ ಹಾಗೆ ಮಾಡಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಮ್ಮತಿಸಲಿಲ್ಲ. ಅದರ ನಂತರ ಎರಡನೇ ಬಾರಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಿತು. ಆಗ ರಾಜ್ಯದಲ್ಲಿ ಸರಕಾರ ಬದಲಾಯಿತು. ಆಗ ಒಬ್ಬನೇ ವ್ಯಕ್ತಿ ಟೆಂಡರ್ ನೀಡುವುದು ಬೇಡಾ. ಬೇರೆ ಬೇರೆ ಕ್ಯಾಟಗರಿ ಮಾಡಿ ಹಂಚಿಬಿಡೋಣ ಎನ್ನುವ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ರಾಜಕೀಯ ಕಾರಣಗಳಿಂದ ಕಳೆದ ಆರು ತಿಂಗಳುಗಳಿಗಿಂತಲೂ ಹೆಚ್ಚು ಅವಧಿಯಿಂದ ಈ ಅಂಗಡಿಗಳು ಬಂದ್ ಬಿದ್ದಿವೆ. ನಿಯಮಗಳ ಪ್ರಕಾರ ಇಂತಹ ಮಳಿಗೆಗಳನ್ನು ಮೀಸಲಾತಿಯ ಆಧಾರದ ಮೇಲೆ ಕೊಡುವ ಕ್ರಮ ಇಲ್ಲ. ಆದರೆ ಅನಗತ್ಯವಾಗಿ ರಾಜಕೀಯ ನಡೆಯುತ್ತಿರುವುದರಿಂದ ಅತ್ತ ಅಂಗಡಿಗಳು ಒಬ್ಬರಿಗೂ ಸಿಗದೇ ಆರು ತಿಂಗಳುಗಳಿಂದ ಮುಚ್ಚಿದೆ. ಪಾಲಿಕೆಗೆ ಬರಬೇಕಾದ ಆದಾಯ ವ್ಯರ್ಥವಾಗುತ್ತಿದೆ. ಇದಕ್ಕೆ ಪರಿಹಾರ ಇಲ್ವಾ? ಕೋಟಿ ಖರ್ಚು ಮಾಡಿ ಕಟ್ಟಿರುವುದು ಬಂದ್ ಮಾಡಿ ಇಡಲಾ ಎಂದು ನಾಗರಿಕರು ಕೇಳುತ್ತಿದ್ದಾರೆ.

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search