• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೋದಿಯೇ ಕಾರಣ ಎಲ್ಲದಕ್ಕೂ!?

Hanumantha Kamath Posted On November 20, 2023
0


0
Shares
  • Share On Facebook
  • Tweet It

ಭಾರತದ 11 ಜನರ ಕ್ರಿಕೆಟ್ ತಂಡ ಉಳಿದ ಹತ್ತು ತಂಡಗಳನ್ನು ಸೋಲಿಸಿ ಫೈನಲ್ ಪಂದ್ಯಕ್ಕೆ ಬಂದಿತ್ತು. ಅಷ್ಟೇ ಯಾಕೆ, ಇದೇ ಕ್ರೀಡಾಕೂಟದ ಲೀಗ್ ಹಂತದಲ್ಲಿ ಅಕ್ಟೋಬರ್ 8 ರಂದು ಇದೇ ಆಸ್ಟ್ರೇಲಿಯಾವನ್ನು ಭಾರತ ತಂಡ ಆರು ವಿಕೆಟ್ ನಿಂದ ಸೋಲಿಸಿತ್ತು. ಈಗ ಫೈನಲ್ ಪಂದ್ಯದಲ್ಲಿ ಅದೇ ಆಸ್ಟ್ರೇಲಿಯಾ ಆರು ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಅದು ಲೀಗ್, ಇದು ಫೈನಲ್, ವ್ಯತ್ಯಾಸ ಇಷ್ಟೇ. ಇಲ್ಲಿ ಯಾವ ದಿನ ಏನು ಬೇಕಾದರೂ ಆಗಬಹುದು. ಯಾಕೆಂದರೆ ಅದು ಕ್ರಿಕೆಟ್.
ಅನಿಶ್ಚಿತತೆಯ ಆಟ ಯಾವುದಾದರೂ ಇದ್ದರೆ ಅದಕ್ಕೆ ಪರ್ಯಾಯ ಹೆಸರೇ ಕ್ರಿಕೆಟ್. ಕ್ರಿಕೆಟನ್ನು ಅದೇ ದೃಷ್ಟಿಯಿಂದ ನೋಡಬೇಕು. ಒಂದೂವರೆ ತಿಂಗಳ ಹಿಂದೆ ನಾವು ಆಸ್ಟ್ರೇಲಿಯಾವನ್ನು ಸೋಲಿಸಿದಾಗ ಇಡೀ ದೇಶ ಖುಷಿಪಟ್ಟಿತ್ತು. ಈಗ ಫೈನಲ್ ನಲ್ಲಿ ಸೋತಾಗ ಇಡೀ ದೇಶಕ್ಕೆ ನೋವಾಗಿದೆ, ನಿಜ. ಆದರೆ ಭಾರತ ತಂಡ ಸೋತಿರುವುದರಲ್ಲಿ ಕೆಲವರಿಗೆ ಖುಷಿಯಾಗಿದೆ. ಅವರು ಖುಷಿ ಪಡುತ್ತಿರುವುದಕ್ಕೆ ಕಾರಣ ಅದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ. ಅಲ್ಲಿ ಆಟ ನೋಡಲು ದೇಶದ ಪ್ರಧಾನಿ ಬಂದಿದ್ರು. ಅಮಿತ್ ಶಾ ಬಂದಿದ್ರು. ಇನ್ನು ಅಮಿತ್ ಶಾ ಮಗ ಜಯ ಶಾ ಭಾರತ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ. ಇದೆಲ್ಲದ ಕಾರಣದಿಂದ ಭಾರತ ಸೋತಿರುವುದಕ್ಕೆ ಕೆಲವು ವಿಘ್ನಸಂತೋಷಿಗಳಿಗೆ ಆನಂದವೋ ಆನಂದ.

ಕ್ರಿಕೆಟಿನ ಗೆಲುವಿಗೂ ಪ್ರಧಾನಿಗೂ ಏನು ಸಂಬಂಧ?

ಭಾರತ ತಂಡ ಸೋತಿರುವುದಕ್ಕೂ ಮೋದಿ, ಶಾಗೂ ಸಂಬಂಧವೇ ಇಲ್ಲ. ಇಬ್ಬರೂ ತಮ್ಮ ತವರು ರಾಜ್ಯದಲ್ಲಿ ನಡೆಯುವ ಪಂದ್ಯವನ್ನು ನೋಡಲು ಬಂದಿರುವುದು ಏನೂ ದೊಡ್ಡ ಟೀಕೆಯ ವಿಷಯವಲ್ಲ. ಇನ್ನು ಅದೊಂದು ಪಂದ್ಯ. ಅಲ್ಲಿ ಗ್ಯಾಲರಿಯಲ್ಲಿ ಕುಳಿತು ಮೋದಿ, ಶಾ ಆಟ ನೋಡುವುದರಿಂದ ಆಟದ ಪಂದ್ಯದ ಫಲಿತಾಂಶ ಬದಲಾಗುವುದಿಲ್ಲ. ಆದರೂ ಮೋದಿ ಬಂದ ಕಾರಣ ಸೋತು ಹೋಯಿತು ಅಥವಾ
ಗೆದ್ದಿದ್ದರೆ ಅದರ ಕ್ರೆಡಿಟ್ ಮೋದಿಗೆ ಹೋಗುತ್ತಿತ್ತು ಎಂದು ಅಂದುಕೊಳ್ಳುವುದು ಎಂತಹ ಮೂರ್ಖತನ. ಇನ್ನು ಜಯ್ ಶಾ ಬಿಸಿಸಿಐ ಸೆಕ್ರೆಟರಿ ಆದ ಕೂಡಲೇ ಅವರು ಪಂದ್ಯದ ಫಲಿತಾಂಶವನ್ನು ತೀರ್ಮಾನ ಮಾಡಲು ಆಗುವುದಿಲ್ಲ. ಒಂದು ವೇಳೆ ಭಾರತ ತಂಡ ಗೆದ್ದಿದ್ದರೆ ಅದಕ್ಕೆ ಅವರು ತಾನೇ ಕಾರಣ ಎಂದು ಹೇಳಲು ಆಗುತ್ತಿರಲಿಲ್ಲ. ಆದರೆ ಭಾರತ ತಂಡ ಗೆದ್ದಿದ್ದರೆ ಅಮಿತ್ ಶಾ ಮಗನಿಗೆ ಕೋಡು ಬರುತ್ತಿತ್ತೋ ಎನ್ನುವ ಹೆದರಿಕೆಯಿಂದ ಕೆಲವರು ಸೋತದ್ದಕ್ಕೆ ಖುಷಿ ಪಡುತ್ತಿದ್ದಾರೆ.

ಮೋದಿಯೇ ಕಾರಣ ಎಲ್ಲದಕ್ಕೂ!?

ಇನ್ನು ತಮ್ಮ ತಂಡ ಸೋತಿರುವುದಕ್ಕೆ ಕೊಹ್ಲಿ, ರೋಹಿತ್ ಶರ್ಮಾ, ಶಮಿ ಸಹಿತ ಎಲ್ಲರೂ ಭಾವುಕರಾಗಿರುವುದನ್ನು ದೇಶ ಕಂಡಿದೆ. ಸೋತರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರಧಾನಿ ಭರವಸೆ ತುಂಬಿದ್ದಾರೆ. ಕೊನೆಯದಾಗಿ ಇಷ್ಟೇ ಹೇಳುವುದು, ಇದು ಒಂದು ಆಟ, ಇದರಿಂದ ಭಾರತದ ಭವಿಷ್ಯ ಬದಲಾಗುವುದಿಲ್ಲ. ಗೆದ್ದಿದ್ರೆ ಅದು ಆಟವಷ್ಟೇ. ಸೋತರೂ ಆಟವಷ್ಟೇ. ಎಲ್ಲಿಯೂ ಸೋಲದೆ ಕೊನೆಯ ತನಕ ಬಂದದ್ದಕ್ಕೆ ಹೆಮ್ಮೆ ಪಡೋಣ. ಅದು ಬಿಟ್ಟು ಮೋದಿಯವರನ್ನು ಮೂದಲಿಸುವುದಕ್ಕೆ ಅರ್ಥ ಇದೆಯಾ? ಇತ್ತೀಚೆಗೆ ಏಕೋ ಎಲ್ಲದ್ದಕ್ಕೂ ಮೋದಿಯೇ ಕಾರಣ ಎನ್ನುವ ಗಾದೆ ಸೃಷ್ಟಿಯಾಗುತ್ತಿದೆ!

0
Shares
  • Share On Facebook
  • Tweet It




Trending Now
ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
Hanumantha Kamath September 11, 2025
ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
Hanumantha Kamath September 10, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
  • Popular Posts

    • 1
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 2
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • 3
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 4
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • 5
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!

  • Privacy Policy
  • Contact
© Tulunadu Infomedia.

Press enter/return to begin your search