• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಲಾಲ್ ವಸ್ತುಗಳು ಇನ್ನು ಯುಪಿಯಲ್ಲಿ ನೋ!

Tulunadu News Posted On November 20, 2023
0


0
Shares
  • Share On Facebook
  • Tweet It

ವಸ್ತುಗಳ ಪ್ಯಾಕೇಟಿನ ಒಂದು ಮೂಲೆಯಲ್ಲಿ ಹಲಾಲ್ ಚಿನ್ನೆ, ಗುರುತು, ಲೋಗೋ ಇರುವುದನ್ನು ನೀವು ಕಣ್ಣಾರೆ ನೋಡಿರುತ್ತೀರಿ ಅಥವಾ ಯಾರಾದರೂ ಹೇಳಿದ್ದನ್ನು ಕೇಳಿರುತ್ತೀರಿ. ಈ ಹಲಾಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಕಂಪೆನಿಗಳು ಯಾವುದೋ ಖಾಸಗಿ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ಸುರಿಯಬೇಕಾಗುತ್ತದೆ. ಅದರ ನಂತರ ಅವರಿಗೆ ಹಲಾಲ್ ಪ್ರಮಾಣಪತ್ರ ಸಿಗುತ್ತದೆ. ಹಾಗೆ ಹಲಾಲ್ ಲೋಗೋ ಇದ್ದ ವಸ್ತುಗಳನ್ನು ಮಾತ್ರ ಒಂದು ಧರ್ಮದವರು ಕೊಳ್ಳುವುದರಿಂದ ಹಲಾಲ್ ಲೋಗೊ ಹಾಕಿಕೊಳ್ಳಲು ಕಂಪೆನಿಗಳು ಮುಗಿಬೀಳುತ್ತವೆ. ಇದರಿಂದ ಲಾಭ ಆಗುವುದು ಮಾತ್ರ ಯಾವುದೋ ಪರದೇಶಿ ಕಂಪೆನಿಗೆ.

ಇದನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರಕಾರ ಹಲಾಲ್ ಟ್ಯಾಗ್ ಇರುವ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ಹಂಚಿಕೆ ಮತ್ತು ಮಾರಾಟ ಎಲ್ಲದಕ್ಕೂ ನಿಷೇಧ ಹೇರಿದೆ. ಕೇವಲ ರಫ್ತು ಮಾಡುವುದಕ್ಕೆ ಸಡಿಲಿಕೆ ನೀಡಿದೆ.

ಯಾವುದೇ ಹಲಾಲ್ ಟ್ಯಾಗ್ ಇರುವ ಎಲ್ಲಾ ತಿಂಡಿ, ತಿನಿಸು ಉತ್ಪನ್ನಗಳನ್ನು ವಿಶೇಷವಾಗಿ ಔಷಧಿ, ವೈದ್ಯಕೀಯ ಸಂಬಂಧಿ ಸಲಕರಣೆಗಳು, ಸೌಂದರ್ಯವರ್ಧಕ ವಸ್ತುಗಳನ್ನು ಮಾರುವುದು, ಖರೀದಿಸುವುದಕ್ಕೆ, ಸಂಗ್ರಹಿಸುವುದಕ್ಕೆ ಮತ್ತು ಉತ್ಪಾದಿಸಲು ಯಾರಾದರೂ ತೊಡಗಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ. ಜನರ ಧಾರ್ಮಿಕ ನಂಬಿಕೆಗಳನ್ನು ಬಳಸಿ ಕೆಲವು ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳುತ್ತಿವೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ಕೆಲವು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದರಲ್ಲಿ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನೈ, ಜಮೀಯತ್ ಉಲ್ಮಾ -ಈ-ಹಿಂದ್ ಹಲಾಲ್ ಟ್ರಸ್ಟ್ ಡೆಲ್ಲಿ, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬೈ, ಜಮೀಯತ್ ಉಲ್ಮಾ ಮಹಾರಾಷ್ಟ್ರ ಮತ್ತು ಇತರ ಕೆಲವು ಸಂಸ್ಥೆಗಳು ಒಂದು ಸಮುದಾಯದ ಜನರನ್ನು ಸೆಳೆದು ಆ ಮೂಲಕ ಹಲಾಲ್ ಟ್ಯಾಗ್ ಹೊಂದಿರುವ ವಸ್ತುಗಳನ್ನು ಮಾರಾಟ ಮಾಡುವ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶವನ್ನುಹೊಂದಿರುವುದು ಸ್ಪಷ್ಟವಾಗಿತ್ತು.

ಈ ಬಗ್ಗೆ ಮಾತನಾಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಹಲಾಲ್ ಟ್ಯಾಗ್ ಕೊಡಲು ಯಾವುದೇ ಸಂಸ್ಥೆಗಳು ಹಕ್ಕುಬದ್ಧ ಮಾನ್ಯತೆ ಹೊಂದಿಲ್ಲ. ಇದರಿಂದ ಸಂಗ್ರಹವಾಗುವ ಹಣ ಭಾರತದ ವಿರುದ್ಧವೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಲಾಲ್ ಜನರ ಭಾವನೆಗಳನ್ನು ದುರುಪಯೋಗಗೊಳಿಸಲು ಇರುವ ಸಾಧನವಾಗಿದ್ದು ಎಲ್ಲಿಯ ತನಕ ಎಂದರೆ ಸಸ್ಯಹಾರಕ್ಕೂ ಇದು ಕಡ್ಡಾಯ ಮಾಡಿರುವುದು ಷಡ್ಯಂತ್ರದ ಭಾಗ ಎಂದಿದ್ದಾರೆ

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search