• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿತೀಶ್ ಗೆ ಹಿಂದೂಗಳ ನಾಡಿಮಿಡಿತ ಗೊತ್ತಿದೆ!

Hanumantha Kamath Posted On November 30, 2023


  • Share On Facebook
  • Tweet It

ಇದನ್ನು ನೋಡಿ ಸ್ವತ: ಮುಸಲ್ಮಾನರು ಕೂಡ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಅಸಹ್ಯಪಟ್ಟುಕೊಂಡಾರು. ಇ.0.ಡಿ.ಯಾ ಮೈತ್ರಿಕೂಟದ ಬೆಸುಗೆಯಾಗಿರುವ ನಿತೀಶ್ ಅವರಿಗೆ ಹೇಗಾದರೂ ಮಾಡಿ ಒಮ್ಮೆಯಾದರೂ ಪ್ರಧಾನಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕೆನ್ನುವುದು ಹಳೆಯ ಆಸೆ. ಅದಕ್ಕಾಗಿ ಮಮತಾಳಿಂದ ಹಿಡಿದು ಸೋರೇನ್ ತನಕ ಇದ್ದಬದ್ದವರನ್ನೇಲ್ಲಾ ಒಟ್ಟು ಮಾಡಿ ಅಲ್ಲಲ್ಲಿ ಸಭೆ ಮಾಡಿ ಒಗ್ಗಟ್ಟು ಪ್ರದರ್ಶಿಸುವ ಕೆಲಸ ಮಾಡುತ್ತಲೇ ಬಂದರು. ಆದರೆ ಅವರು ಏನು ಮಾಡಿದರೂ ಅವರ ದುರಾದೃಷ್ಟಕ್ಕೆ ರೈಲು ಹಳಿಗಳ ಮೇಲೆ ಸ್ವಲ್ಪ ದೂರ ಹೋಗಿ ಮತ್ತೆ ದಾರಿ ತಪ್ಪಿ ಎಲ್ಲೆಲ್ಲೋ ಓಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಹಾಗಿರುವಾಗ ಅದನ್ನು ಸರಿ ಮಾಡಲು ಸಮಯ ವ್ಯರ್ಥ ಮಾಡುವುದನ್ನು ಪಕ್ಕಕ್ಕೆ ಇಟ್ಟು ತನ್ನದೇ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟು ಪಡೆದುಕೊಂಡರೆ ಪ್ರಧಾನಿ ಹುದ್ದೆಗೆ ಒಂದು ಕೈ ನೋಡಬಹುದು ಎಂದು ನಿತೀಶ್ ಲೆಕ್ಕಹಾಕಿದ್ದಾರೆ. ಎಲ್ಲಿಯಾದರೂ ಅಪ್ಪಿತಪ್ಪಿ ಎನ್ ಡಿಎಗೆ ಬಹುಮತ ಬರದೇ ವಿಪಕ್ಷಗಳಿಗೆ ಬಂದುಬಿಟ್ಟರೆ ಆಗ ಅತೀ ಹೆಚ್ಚು ಸೀಟು ಗಳಿಸಿದ ಪಕ್ಷದ ನಾಯಕನನ್ನು ಪ್ರಧಾನಿ ಮಾಡಲಾಗುತ್ತೆ. ಕರ್ನಾಟಕದಲ್ಲಿ ಹಿಂದೆ ದೇವೆಗೌಡರಿಗೆ ಲಕ್ಕು ಹೊಡೆದ ಹಾಗೆ ಈ ಬಾರಿ ತಮಗೆ ಹೊಡೆದುಬಿಟ್ಟರೆ ಎನ್ನುವ ಖುಷಿಯಿಂದ ನಿತೀಶ್ ತಾವೇ ತಮ್ಮ ಬಿಲ್ಲನ್ನು ಎದೆಗೆ ಏರಿಸಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಅವರು ಕೈಹಾಕಿದ್ದು ಸರಕಾರಿ ರಜೆಗಳಿಗೆ.

ಯಾವ ರಜೆ ಕಟ್, ಯಾವುದು ಹೆಚ್ಚುವರಿ!

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ, ಶ್ರೀರಾಮನವಮಿ, ಶಿವರಾತ್ರಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ಬಿಹಾರ ಶಿಕ್ಷಣ ಇಲಾಖೆ ರದ್ದುಗೊಳಿಸಿದೆ. ಇನ್ನು ಗಾಂಧಿ – ಶಾಸ್ತ್ರಿಜಯಂತಿಯಾದ ಅಕ್ಟೋಬರ್ 2 ರಂದು ನೀಡುವ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಅದರೊಂದಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಕೂಡ ಇರುವುದಿಲ್ಲ. ಅದರೊಂದಿಗೆ ಬಿಹಾರದ ಸ್ಥಳೀಯ ಹಬ್ಬಗಳಾದ ತೇಜ್ ಮತ್ತು ವಸಂತ ಪಂಚಮಿಗೆ ಕೊಡುವ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಇಷ್ಟೇ ಆಗಿದ್ದರೆ ಅದು ಬೇರೆ ವಿಷಯ. ಆದರೆ ಬರಿ ಹಿಂದೂಗಳ ರಜೆ ಕಡಿಮೆ ಮಾಡಿದರೆ ಏನು ಪ್ರಯೋಜನ. ಆ ರಜೆಗಳನ್ನು ಮುಸ್ಲಿಮರ ಹಬ್ಬಗಳಂದು ಹೆಚ್ಚುವರಿಯಾಗಿ ಕೊಟ್ಟರೆ ಮುಸ್ಲಿಮರು ಖುಷಿಪಡುತ್ತಾರೆ ಎಂದು ನಿತೀಶ್ ಪ್ಲಾನ್ ಮಾಡಿದ್ದಾರೆ. ಹಾಗೆ ಬಕ್ರೀದ್ ಹಬ್ಬಕ್ಕೆ 3 ದಿನ, ಈದ್ ಮಿಲಾದ್ ಗೆ 3 ದಿನ, ಮೊಹರಂಗೆ 2 ದಿನ ರಜೆಯನ್ನು ಹೆಚ್ಚಿಸಲಾಗಿದೆ. ಸದ್ಯ ಇದು ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಎಂದುಕೊಂಡರೂ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸಾರ್ವತ್ರಿಕವಾಗಿ ಜಾರಿ ಬರಲು ತಡವಾಗಲಿಕ್ಕಿಲ್ಲ.

ನಿತೀಶ್ ಗೆ ಹಿಂದೂಗಳ ನಾಡಿಮಿಡಿತ ಗೊತ್ತಿದೆ!

ನಿತೀಶ್ ಮಾಡಿದ ಈ ನಿರ್ಧಾರವನ್ನು ಸಹಜವಾಗಿ ಭಾರತೀಯ ಜನತಾ ಪಾರ್ಟಿ ವಿರೋಧಿಸಿದೆ. ಆದರೆ ನಿತೀಶ್ ಇದನ್ನು ಕ್ಯಾರೇ ಮಾಡಿಲ್ಲ. ಯಾಕೆಂದರೆ ಹಿಂದೂಗಳಿಗೆ ನೀವು ಏನೇ ಮಾಡಿದ್ರೂ ಅವರು ಕೊನೆಯಲ್ಲಿ ಜಾತಿಗಳ ನಡುವೆ ಓಡೆದು ಹಂಚಿ ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಅವರಲ್ಲಿ ಒಗ್ಗಟ್ಟು ಎನ್ನುವುದು ಇಲ್ಲವೇ ಇಲ್ಲ ಎಂದು ನಿತೀಶ್ ಗೆ ಗೊತ್ತಿದೆ. ಅದೇ ಮುಸ್ಲಿಮರನ್ನು ಓಲೈಸಿದರೆ ಅವರು ಖುಷಿಗೊಂಡು ಸಾರಾಸಗಟಾಗಿ ತಮಗೆ ವೋಟ್ ಹಾಕುತ್ತಾರೆ ಎಂಬ ಧೈರ್ಯ ಅವರಿಗೆ ಇದೆ. ಬಿಹಾರದಲ್ಲಿ ಕಾಂಗ್ರೆಸ್ಸಿಗೆ ಕೇಳುವವರು ಇಲ್ಲ. ನಿತೀಶ್ ಅವರ ಜೆಡಿಯು, ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮುಸ್ಲಿಂ ಮತಗಳು ಪಾಸ್ವಾನ್ ಪಕ್ಷಕ್ಕೆ ಹೋಗಬಾರದು ಎಂದಾದರೆ ತಾವು ಇಂತಹ ಒಂದು ಹೆಜ್ಜೆಯನ್ನು ಇಡಲೇಬೇಕು ಎನ್ನುವುದು ನಿತೀಶ್ ಅವರಿಗೆ ಅರಿವಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search