• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!

Tulunadu News Posted On December 5, 2023
0


0
Shares
  • Share On Facebook
  • Tweet It

ಯುನೈಟೆಡ್ ಸ್ಟೇಟ್ ನಲ್ಲಿ ಇರುವ ಒಂದು ಪುಟ್ಟ ದೇಶದ ಹೆಸರು ಅಲಸ್ಕಾ. ಅಲಸ್ಕಾದಲ್ಲಿರುವ ಒಂದು ಪುಟ್ಟ ಊರೇ ವೈಟಿಯರ್. ವೈಟಿಯರ್ ನ ಒಟ್ಟು ಜನಸಂಖ್ಯೆ ಸುಮಾರು 272. ಈ ಊರಿನಲ್ಲಿ 14 ಮಹಡಿಗಳ ಒಂದು ಬೃಹತ್ ಕಟ್ಟಡ ಇದೆ. ಈ ಕಟ್ಟಡದಲ್ಲಿ ಊರಿನ ಬಹುತೇಕ ಜನರು ವಾಸ ಮಾಡುತ್ತಾರೆ. ಆ ಬಿಲ್ಡಿಂಗ್ ಹೆಸರು ಬೇಗಿಕ್ ಟವರ್ಸ್. ಈ ಊರಿಗೆ ಇರುವ ಅಡ್ಡ ಹೆಸರು “ಒಂದೇ ಸೂರಿನಡಿ ಇಡೀ ಊರು” . 1953 ರಲ್ಲಿ ಈ ಕಟ್ಟಡ ಪೂರ್ಣಗೊಂಡಾಗ ಅದರಲ್ಲಿ ಯೋಧರ ವಾಸಸ್ಥಾನವಾಗಿ ಬಳಸು ನಿರ್ಧರಿಸಲಾಗಿತ್ತಾದರೂ ಇತ್ತೀಚೆಗೆ ಅದು ನಾಗರಿಕರ ವಸತಿಗೆ ಅನುಕೂಲವಾಗಿ ಬಳಕೆಯಾಗುತ್ತಿದೆ. ಆ ಕಟ್ಟಡದಲ್ಲಿ ಪೋಸ್ಟ್ ಆಫೀಸ್, ಜಿನಸು ಅಂಗಡಿ, ಪೊಲೀಸ್ ಸ್ಟೇಶನ್, ಲಾಂಡ್ರಿ, ಹೆಲ್ತ್ ಕ್ಲಿನಿಕ್, ಮೇಯರ್ ಕಚೇರಿ, ಒಳಾಂಗಣ ಈಜುಕೊಳ ಕೂಡ ಇದೆ.

ಈ ಊರಿಗೆ ಇರುವ ಸಂಪರ್ಕಗಳು ಎರಡೇ ಆಗಿದ್ದು ಒಂದು ವಾಯು ಮಾರ್ಗ ಇನ್ನೊಂದು ಸುರಂಗ ಮಾರ್ಗ. ವಿಮಾನ, ಹೆಲಿಕಾಪ್ಟರ್ ಮೂಲಕ ಸಂಪರ್ಕ ಹೊಂದಿರುವ ವೈಟಿಯರ್ ಗೆ ಇರುವ ಇನ್ನೊಂದು ದಾರಿ ಎಂದರೆ ಹತ್ತಿರದ ಮೇನಾರ್ಡ್ ಬೆಟ್ಟದಿಂದ ಎರಡು ಮೈಲು ಅಂತರದ ಟನೆಲ್ ನಿರ್ಮಿಸಲಾಗಿದೆ. ಚಳಿಗಾಲದಲ್ಲಿ ಅತ್ಯಂತ ಭೀಕರ ಶೀತಹವೆ ಇರುವುದರಿಂದ ಬೇಗಿಚ್ ಟವರ್ ನಲ್ಲಿ ಜನರು ಒಂದೇ ಏರಿಯಾದಲ್ಲಿ ವಾಸಿಸುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಾಗಿದೆ. ಈ ಕಟ್ಟಡ ಬಿಟ್ಟರೆ ಇನ್ನೊಂದು ಕಾಂಡೋ ಹೆಸರಿನ ಕಟ್ಟಡವಿದ್ದು, ಅಲ್ಲಿ ಒಂದಿಷ್ಟು ಜನರು ವಾಸ ಮಾಡುತ್ತಾರೆ. ಈ ಊರಿನಲ್ಲಿರುವ ಶಾಲೆ ಮತ್ತು ಜಿಮ್ ಅನ್ನು ಪ್ರತ್ಯೇಕ ಜಾಗೆಯಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಬೇಗಿಚ್ ಕಟ್ಟಡದಿಂದ ಒಂದು ಸುರಂಗ ವ್ಯವಸ್ಥೆ ಮಾಡಲಾಗಿದ್ದು, ಶೀತ ಸಮಯದಲ್ಲಿಯೂ ಮಕ್ಕಳು ಶಾಲೆಗೆ ಹೋಗಿ ಬರಲು ಉತ್ತಮ ಸಂಪರ್ಕ ಕಲ್ಪಿಸಲಾಗಿದೆ. ಇಂತಹ ಪುಟ್ಟ ಊರುಗಳ ಕಥೆ ಕೂಡ ರೋಚಕವಾಗಿರಬಹುದು, ಅಲ್ವೇ!

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search