• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?

Hanumantha Kamath Posted On December 9, 2023
0


0
Shares
  • Share On Facebook
  • Tweet It

ಇಂತವರು ಜನರ ಪರವಾಗಿ ಕೆಲಸ ಮಾಡ್ತಾರಾ?

ಹಮ್ ಭ್ರಷ್ಟಾಚಾರ್ ಕಿ ಕಿಲಾಫ್ ಹೇ ಎಂದು ಚುನಾವಣೆಗಳಲ್ಲಿ ಮಾತನಾಡುವ ಮುಖಂಡರಿಗೆ ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯನ ಮನೆಯಲ್ಲಿ ಸಿಕ್ಕಿದ ನೋಟುಗಳನ್ನು ಮಿಶಿನ್ ನಲ್ಲಿ ಲೆಕ್ಕ ಮಾಡಲು ದಿನಗಟ್ಟಲೆ ಬೇಕಾಗುತ್ತದೆ ಎಂದು ಗೊತ್ತಿಲ್ವಾ?

https://tulunadunews.com/wp-content/uploads/2023/12/WhatsApp-Video-2023-12-09-at-17.20.43_58e1b162.mp4

ಹೀಗೆ ಪ್ರಪಂಚದ ಕಣ್ಣಿನಲ್ಲಿ ಭ್ರಷ್ಟಾಚಾರದ ಹಣದ ಕುಬೇರರು ನಗ್ನರಾಗುತ್ತಿದ್ದಂತೆ ಅವರ ಪಕ್ಷದ ಮುಖಂಡರು ಅದ್ಯಾವ ಮುಖ ಇಟ್ಟು ಸಮಾವೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೋ ದೇವರೇ ಬಲ್ಲ. ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ಎಂಪಿ ಧೀರಜ್ ಸಾಹು ಬಂಗಲೆಯಲ್ಲಿ 156 ಚೀಲ ಹಾಗೂ 30 ಕಪಾಟುಗಳಿಂದ ತುಂಬಿ ತುಳುಕಿ ಹೊರಗೆ ಬೀಳುತ್ತಿರುವ ನೋಟಿನ ಕಂತೆಗಳನ್ನು ಎಣಿಸಿ ಎಣಿಸಿಯೇ ಮಿಶಿನ್ ಗಳು ಸುಸ್ತಾಗಿವೆ. ಎಲ್ಲಾ ಲೆಕ್ಕ ಮುಗಿದಾಗ ಹತ್ತಿರ ಹತ್ತಿರ ಒಂದು ಸಾವಿರ ಕೋಟಿಗೆ ಲೆಕ್ಕ ಹೋದರೂ ಆಶ್ಚರ್ಯವಿಲ್ಲ. ಇದು ಬರಿ ನಗದು ಹಣದ ಲೆಕ್ಕ. ಇಲ್ಲಿ ಸ್ಥಿರ ಆಸ್ತಿಯ ವಿಷಯಕ್ಕೆ ಹೋದರೆ ಅದು ಎಷ್ಟಿರಬಹುದೋ. ಇಂತವರು ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರು. ಒಂದು ರೀತಿಯಲ್ಲಿ ಕಾಂಗ್ರೆಸ್ಸಿನ ಖರ್ಚಿನ ಹಣದ ಪೈಪುಗಳು. ಇನ್ನು ಇವರ ವಿರುದ್ಧ ತನಿಖೆ ಬಿಗಿ ಮಾಡಿದ ಕೂಡಲೇ ಮುಂದಿನ ದಿನಗಳಲ್ಲಿ ಇದು ದ್ವೇಷದ ರಾಜಕೀಯ ಎಂದು ವಿಪಕ್ಷಗಳು ಬೊಬ್ಬೆ ಹೊಡೆದರೂ ಆಶ್ಚರ್ಯವಿಲ್ಲ.

ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?

ಯಾಕೆಂದರೆ ಮಾಹುಅ ಮೊಯಿತ್ರ ಹೆಸರಲ್ಲಿ ಹಾಗೆ ಆಗಿದೆ. ಅವರು ಪ್ರಶ್ನೆಗಾಗಿ ಹಣ ವಿವಾದದಲ್ಲಿ ಸಿಲುಕಿಕೊಂಡು ಸಂಸತ್ತಿನ ಎಥಿಕ್ಸ್ ಕಮಿಟಿಯಿಂದ ವಿಚಾರಣೆ ನಡೆದು ಇವರು ಪ್ರಶ್ನೆಗಾಗಿ ಹಣ ಪಡೆದುಕೊಂಡಿರುವುದು ನಿಜ ಎಂದು ಸಾಬೀತಾಗಿರುವುದರಿಂದ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಅದನ್ನು ವಿಪಕ್ಷಗಳು ದ್ವೇಷ ರಾಜಕೀಯ ಎಂದು ಪ್ರತಿಭಟನೆ ಮಾಡಿವೆ. ಇದರಲ್ಲಿ ದ್ವೇಷದ ವಿಷಯ ಎಲ್ಲಿಂದ ಬಂತು? ನಮ್ಮ ಓದುಗರಿಗೆ ಒಂದು ವಿಷಯ ಗೊತ್ತಿರುತ್ತದೆ, ಅದೇನೆಂದರೆ ಸಂಸದರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಜನರ ಪರವಾಗಿ ಪ್ರಶ್ನೆಗಳನ್ನು ಕೇಳಲು ಅವಕಾಶ ಇದೆ. ಅದಕ್ಕಾಗಿ ಒಂದು ಸಿಸ್ಟಮ್ ಮಾಡಲಾಗಿದೆ. ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ ಲೋಕಸಭಾ ಸದಸ್ಯರ ಪೋರ್ಟಲ್ ನಲ್ಲಿ ನೀವು ಲೋಕಸಭೆಯ ಸಂಸತ್ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಬಹುದು. ಅದಕ್ಕಾಗಿ ಪ್ರತಿ ಲೋಕಸಭಾ ಸದಸ್ಯರಿಗೆ ಆ ಪೋರ್ಟಲಿಗೆ ಲಾಗ್ ಇನ್ ಆಗಲು ಪ್ರತ್ಯೇಕ ಐಡಿ ಹಾಗೂ ಪಾಸ್ ವರ್ಡ್ ಇದೆ. ಯಾರು ಬೇಕಾದರೂ ಒಳಗೆ ಹೋಗಿ ಪ್ರಶ್ನೆ ಕಳುಹಿಸುವಂತಿಲ್ಲ. ಇಲ್ಲಿ ಪ್ರಶ್ನೆಗಳನ್ನು ಟೈಪ್ ಮಾಡುವವರು ತಾವು ಕೇಳುತ್ತಿರುವ ವಿಷಯದ ಬಗ್ಗೆ ನಿಖರತೆಯನ್ನು ಹೊಂದಿರಬೇಕು. ತಾವು ಯಾವ ವಿಷಯದ ಬಗ್ಗೆ ಉತ್ತರ ಬಯಸುತ್ತಿದ್ದೇವೋ ಅದರ ಸಂಪೂರ್ಣ ಜ್ಞಾನ ಹೊಂದಿರಬೇಕು. ಸಾಮಾನ್ಯವಾಗಿ ಈ ಟೆಕ್ನಿಕಲ್ ವಿಷಯ ಗೊತ್ತಿರದ ಸಂಸದರು ತಮ್ಮ ಆಪ್ತ ಕಾರ್ಯದರ್ಶಿಗಳಿಂದ ಅದನ್ನು ಮಾಡಿಸುವುದು ಸಾಮಾನ್ಯ.

ಉದ್ಯಮಿ ಅಫಿದಾವಿತ್ ನೀಡಿ ಒಪ್ಪಿಕೊಂಡಿದ್ದಾರೆ!

ಆದರೆ ಮಾಹುಅ ಮೊಯಿತ್ರ ಪ್ರಕರಣದಲ್ಲಿ ಅವರು ಅದಾನಿ ವಿರುದ್ಧ ಪೋರ್ಟಲ್ ಮೂಲಕ ಕೆಲವು ಖಡಕ್ ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳು ಹೇಗಿದ್ದವು ಎಂದರೆ ಅದಾನಿಗೆ ವಿರುದ್ಧವಾಗಿದ್ದವರು ಕೇಳಿದ ಪ್ರಶ್ನೆಗಳಂತೆ ಇದ್ದವು. ಈ ಬಗ್ಗೆ ಸಂಶಯಗೊಂಡ ಭಾರತೀಯ ಜನತಾ ಪಾರ್ಟಿಯ ಸಂಸದರಾದ ನಿಶಿಕಾಂತ್ ದುಬೆ ಒಂದಿಷ್ಟು ಅದರ ಹಿಂದೆ ಬಿದ್ದಾಗ ಅದು ದರ್ಶನ್ ಹಿರನ್ನದಾನಿ ಬರೆದು ಹಾಕಿದ ಪ್ರಶ್ನೆಗಳಾಗಿದ್ದವು ಎನ್ನುವುದು ಹೊರಗೆ ಬಂತು. ಅದರ ಬಳಿಕ ಅವರು ಮಾಹುಅ ಮೊಯಿತ್ರ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದ್ದು. ಯಾವುದೇ ಸಂಸದ/ಸಂಸದೆ ಬೇರೆಯವರಿಂದ ಯಾವುದೇ ರೀತಿಯ ಲಾಭ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವುದಕ್ಕೆ ವಿರೋಧವಿದೆ. ಸದನದ ಸದಸ್ಯರಾಗುವುದು ಜನರ ಪರವಾಗಿ ಧ್ವನಿ ಎತ್ತಲು ವಿನ: ಯಾವುದೇ ಉದ್ಯಮಿಯ ಪರವಾಗಿ ಅಲ್ಲ. ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕೆ ಮಾಹುಅ ಮೊಯಿತ್ರ ವಿರುದ್ಧ ಎಥಿಕ್ಸ್ ಕಮಿಟಿಯಿಂದ ವಿಚಾರಣೆ ಆಗಿದೆ. ಅದರಲ್ಲಿ ದರ್ಶನ್ ಅವರು ಅಫಿದಾವಿತ್ ನೀಡಿ ಪ್ರಶ್ನೆಗಳನ್ನು ಕೇಳಲು ಲಾಗಿನ್ ಡಿಟೇಲ್ಸ್ ಪಡೆದುಕೊಂಡಿರುವುದು ನಿಜ. ಅದರೊಂದಿಗೆ ಮಾಹುಅ ಮೊಯಿತ್ರ ಅವರು ತಮ್ಮಿಂದ ಹಣ ಹಾಗೂ ವಿವಿಧ ರೀತಿಯ ವಸ್ತುಗಳನ್ನು ಪಡೆದುಕೊಳ್ಳುತ್ತಲೇ ಬಂದಿದ್ದರು ಎಂದು ಕೂಡ ಹೇಳಿದ್ದಾರೆ. ಇನ್ನೇನೂ ಬಾಕಿ ಇದೆ. ಯಾವಾಗ ಈ ವಿಚಾರ ಮುನ್ನಲೆಗೆ ಬಂತೋ ತೃಣಮೂಲ ಕಾಂಗ್ರೆಸ್ ತನ್ನ ಸಂಸದೆಯಿಂದ ಅಂತರವನ್ನು ಕಾಯ್ದುಕೊಂಡಿತ್ತು. ಕೊನೆಗೆ ಮಾಹುಅ ಮೊಯಿತ್ರ ಲೋಕಸಭೆಯಿಂದ ಉಚ್ಚಾಟನೆಗೊಂಡ ಬಳಿಕ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ” ಮಾಹುಅ ಮೊಯಿತ್ರ ಪರಿಸ್ಥಿತಿಯ ಶಿಶು, ಆದರೆ ಅವಳ ಬೆಂಬಲಕ್ಕೆ ಬಂದ ವಿಪಕ್ಷಗಳ ಮೈತ್ರಿಕೂಟಕ್ಕೆ ಧನ್ಯವಾದ” ಎಂದಿದ್ದಾರೆ. ಇದರರ್ಥ ಮಾಹುಅ ಮೊಯಿತ್ರ ಚರಿತ್ರೆ ಟಿಎಂಸಿಗೆ ಗೊತ್ತಿದೆ. ಸದ್ಯ ರಾಹುಲ್ ಮಾತ್ರ ತಮ್ಮ ಸಂಸದನ ಮನೆಯಲ್ಲಿ ಸಿಕ್ಕಿದ ಹಣದ ಬಗ್ಗೆ ಏನು ಹೇಳ್ತಾರೋ ಎಂದು ಕಾದು ನೋಡಬೇಕು!

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search