• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಾಗರ ಶರ್ಮಾ ಡೈರಿಯಲ್ಲಿ ಆತ ಸ್ಪಷ್ಟವಾಗಿ ಬರೆದಿದ್ದ!

Tulunadu News Posted On December 16, 2023


  • Share On Facebook
  • Tweet It

ಸಂಸತ್ತಿನ ಒಳಗೆ ಅಧಿವೇಶನದ ನಡೆಯುತ್ತಿರುವ ಹೊತ್ತಿನಲ್ಲಿ ವೀಕ್ಷಕರ ಗ್ಯಾಲರಿಯಿಂದ ಒಳಗೆ ಹಾರಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದ ಪ್ರಧಾನ ಆರೋಪಿ ಸಾಗರ್ ಶರ್ಮಾ ಮನೆಯಲ್ಲಿ ಆತ ಬರೆಯುತ್ತಿದ್ದ ಡೈರಿ ಭಯೋತ್ಪಾದಕ ನಿಗ್ರಹ ದಳಕ್ಕೆ ಸಿಕ್ಕಿದೆ. ಅದರಲ್ಲಿ ಸಾಗರ್ ಶರ್ಮಾ ತನ್ನ ಮನದ ಭಾವನೆಗಳನ್ನು ಸ್ಪಷ್ಟವಾಗಿ ಹಿಂದಿ ಭಾಷೆಯಲ್ಲಿ ಬರೆದಿದ್ದಾನೆ.

“ಇನ್ನು ಮನೆ ಬಿಟ್ಟು ಹೋಗುವ ಸಮಯ ಬಂದಿದೆ. ಏನಾದರೂ ಹೋರಾಟ ಮಾಡಲೇಬೇಕು. ನನ್ನ ಮನಸ್ಸಿನ ಭಾವನೆಗಳನ್ನು ತಂದೆ, ತಾಯಿಗಳಿಗೆ ತಿಳಿಸಲು ಮನಸ್ಸು ಹಾತೊರೆಯುತ್ತಿದ್ದರೂ ಅವರಿಗೆ ಅದು ಮನವರಿಕೆ ಆಗಲಿಕ್ಕಿಲ್ಲ. ಈ ದಿನಕ್ಕಾಗಿ ಐದು ವರ್ಷಗಳಿಂದ ಯೋಜನೆ ಹಾಕುತ್ತಿದ್ದೇನೆ. ಬೇರೆಯವರಿಂದ ಕಿತ್ತುಕೊಳ್ಳುವವನು ಯಾವತ್ತೂ ಶಕ್ತಿವಂತನಲ್ಲ. ಸುಖ, ಸಂತೋಷ ತ್ಯಾಗ ಮಾಡಲು ತಯಾರಾಗಿರುವವನು ಮಾತ್ರ ಶಕ್ತಿವಂತ” ಹೀಗೆ ಸಾಗರ್ ಶರ್ಮಾ ಬರೆಯುತ್ತಾ ಹೋಗಿದ್ದಾನೆ. ಆ ಇಡೀ ಡೈರಿಯನ್ನು ತನಿಖೆಗೆ ಒಳಪಡಿಸಿರುವ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಆತನ ಯೋಜನೆ, ಯೋಚನೆ ಹಾಗೂ ಷಡ್ಯಂತ್ರಗಳನ್ನು ಅರಿತುಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ.

ಇತನ ಡೈರಿ ಈ ಪ್ರಕರಣಕ್ಕೆ ಮಹತ್ವಪೂರ್ಣ ತಿರುವನ್ನು ನೀಡುವ ಸಾಧ್ಯತೆ ಇದೆ. ಯಾಕೆಂದರೆ ಈ ಘಟನೆಯಲ್ಲಿ ಭಾಗಿಯಾಗಿರುವವರಿಗೂ ಸಾಗರ ಶರ್ಮಾನಿಗೂ ಹಿಂದಿನಿಂದಲೂ ಸಂಬಂಧವಿತ್ತು. ಎಲ್ಲರಿಗೂ ಏನಾದರೂ ಮಾಡಲೇಬೇಕೆಂಬ ಹಪಾಹಪಿ ಇತ್ತು. ಆದರೆ ಏನು ಮಾಡಬೇಕು ಎನ್ನುವ ಸ್ಪಷ್ಟವಾದ ದಾರಿ ಗೊತ್ತಿರಲಿಲ್ಲ. ಇಂತಹ ಮನಸ್ಥಿತಿಯಲ್ಲಿ ಸಿಲುಕಿಕೊಂಡವರು ಸೂಕ್ತ ಗುರು ಸಿಕ್ಕಿದರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಕೆಟ್ಟ ಸಂಗಡಿಗರು ಸಿಕ್ಕಿದರೆ ಭವಿಷ್ಯವನ್ನೇ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಈ ಪ್ರಕರಣದಿಂದ ಬಿಡುಗಡೆಯಾಗಿ ಹೊರಗೆ ಬಂದ ಬಳಿಕ ಸಾಗರ್ ಶರ್ಮಾನಿಗೆ ಯಾವುದಾದರೂ ಪಕ್ಷ ವೇದಿಕೆ ನೀಡಬಹುದು. ಅದರಿಂದ ಆತನ ಬೆಳವಣಿಗೆ ಬೇರೆಯದ್ದೇ ರೀತಿಯಲ್ಲಿ ಆಗಬಹುದು. ಯಾಕೆಂದರೆ ನಮ್ಮ ದೇಶದಲ್ಲಿ ದೇಶದ ಸುರಕ್ಷತೆಗಿಂತ ರಾಜಕೀಯ ಲಾಭವೇ ಕೆಲವರಿಗೆ ಮುಖ್ಯವಾಗಿ ಹೋಗಿರುತ್ತದೆ!

  • Share On Facebook
  • Tweet It


- Advertisement -


Trending Now
ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
Tulunadu News May 24, 2025
60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
Tulunadu News May 24, 2025
Leave A Reply

  • Recent Posts

    • ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
  • Popular Posts

    • 1
      ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 2
      60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • 3
      ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • 4
      ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • 5
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search