• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನ್ನ ದೂರು ಏನಿತ್ತು…

Hanumantha Kamath Posted On December 23, 2023


  • Share On Facebook
  • Tweet It

ಮಾಡಬೇಕಲ್ಲ ಎಂದು ಮಾಡಿದರೆ ಹೀಗೆ ಆಗುವುದು…

ಜನತಾ ದರ್ಶನ ಎನ್ನುವ ಶಬ್ದಕ್ಕೆ ಅದರದ್ದೇ ಆಗಿರುವ ಪಾವಿತ್ರ್ಯತೆ ಇದೆ. ಅದನ್ನು ಅಷ್ಟೇ ಗೌರವದಿಂದ ಮಾಡಲು ಆಗದಿದ್ದರೆ ಆ ಹೆಸರಿಟ್ಟು ಕಾರ್ಯಕ್ರಮ ಮಾಡಲು ಹೋಗಲೇಬೇಡಿ. ಇಲ್ಲದಿದ್ದರೆ ಕಾಟಾಚಾರ ದರ್ಶನ ಎಂದು ಹೆಸರು ಬದಲಾಯಿಸಿಬಿಡಿ. ಒಂದು ವೇಳೆ ಜನತಾ ದರ್ಶನ ಎಂದು ಮಾಡಿ ಅದರ ಫಾಲೋಅಪ್ ಮಾಡದೇ ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲ. ಸಿದ್ದು ಸರಕಾರ ಬಂದ ನಂತರ ಜನತಾ ದರ್ಶನ ಮಾಡಲೇ ಇಲ್ಲ ಎಂದು ಪತ್ರಿಕೆಗಳಲ್ಲಿ ವಿಷಯಗಳು ಬಂದಂತೆಲ್ಲಾ ಸಿದ್ದು ಎಚ್ಚರಗೊಂಡಿದ್ರು. ಸೆಪ್ಟೆಂಬರ್ 21 ರಂದು ಬೆಂಗಳೂರಿನಲ್ಲಿ ತಾವು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಲ್ಲಿನ ಉಸ್ತುವಾರಿ ಸಚಿವರುಗಳು ಜನತಾ ದರ್ಶನ ಮಾಡಬೇಕೆಂಬ ಸೂಚನೆ ನೀಡಿದ್ರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಪುರಭವನದಲ್ಲಿ ಜನತಾ ದರ್ಶನ ಹೆಸರಿನಲ್ಲಿ ಅಧಿಕಾರಿಗಳನ್ನು ಕರೆಸಿ ಮಾಡಿದ್ರು. ಅಲ್ಲಿ ನಾನು ಒಂದು ದೂರು ಕೊಟ್ಟಿದ್ದೆ.

ನನ್ನ ದೂರು ಏನಿತ್ತು…

ಅದೇನೆಂದರೆ ಮಂಗಳೂರಿನ ಉರ್ವಾಸ್ಟೋರ್ ನಲ್ಲಿ ಅಂಬೇಡ್ಕರ್ ಭವನ ಇದೆಯಲ್ಲ. ಅದನ್ನು ಸಮಾಜ ಕಲ್ಯಾಣ ಇಲಾಖೆಯ 17 ಕೋಟಿ ಅನುದಾನದಿಂದ ನಿರ್ಮಿಸಲಾಗಿತ್ತು. ಅದರ ನಂತರ ಅದರ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಸರಿಯಾಗಿ ನೋಡಿದರೆ ಅದನ್ನು ಪಾಲಿಕೆ ತೆಗೆದುಕೊಳ್ಳಲೇಬಾರದಿತ್ತು. ಯಾಕೆಂದರೆ ಅಲ್ಲಿರುವ ಕಳಪೆ ಕಾಮಗಾರಿಯೇ ಹಾಗಿತ್ತು. ಭವನದ ಆವರಣ ಗೋಡೆಯಲ್ಲಿ ಬಿರುಕು ಬಿದ್ದಿತ್ತು. ಮುಖ್ಯ ಬಾಗಿಲನ್ನು ಹಾಕಲು ಕಷ್ಟಸಾಧ್ಯವಿತ್ತು. ಅನೇಕ ಕಡೆ ಕಳಪೆ ಕಾಮಗಾರಿ ಆಗಿರುವುದು ಎದ್ದು ಕಾಣುತ್ತಿತ್ತು. ಸೆಪ್ಟೆಂಬರ್ 21 ರಂದು ಮಂಗಳೂರಿನಲ್ಲಿ ನಡೆದ ಜನತಾ ದರ್ಶನದಲ್ಲಿ ಪತ್ರ ಪರಿಶೀಲಿಸಿದ ದಿನೇಶ್ ಗುಂಡೂರಾವ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಲೇಬೇಕೆಂದು ಸೂಚಿಸಿದ್ದರು. ನಾನು ಜನತಾ ದರ್ಶನದಲ್ಲಿ ದೂರು ಕೊಟ್ಟು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರೂ ಏನು ಆಗಿರಲಿಲ್ಲ. ಅಲ್ಲಿಂದ ಪತ್ರ ಮಹಾನಗರ ಪಾಲಿಕೆಗೆ ಬಂದಿತ್ತು

ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು…

ಇದೆಲ್ಲಾ ಆಗಿ ಡಿಸೆಂಬರ್ 21ಕ್ಕೆ ಮೂರು ತಿಂಗಳಾಗಿದೆ. ಡಿಸೆಂಬರ್ 22 ರಂದು ದಿನೇಶ್ ಗುಂಡೂರಾವ್ ಅವರ ಮತ್ತೊಂದು ಜನತಾ ದರ್ಶನ ಮಂಗಳೂರಿನಲ್ಲಿ ನಡೆಯುವ ಬಗ್ಗೆ ನಿಗದಿಯಾಗಿತ್ತು. 3 ಗಂಟೆಗೆ ಜನತಾ ದರ್ಶನ ಎಂದು ನಿಗದಿಯಾಗಿದ್ದರೂ ಮಾನ್ಯ ಸಚಿವರು ಆಗಮಿಸುವಾಗ ಗಂಟೆ ಐದಾಗಿತ್ತು. ಬಂದವರೇ ಕೊರೊನಾ ಮೀಟಿಂಗ್ ಮಾಡಿದ್ರು. ನಂತರ ಆ ವಿಷಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ 6:40 ಕ್ಕೆ ಹೊರಟು ಹೋದ್ರು. ಕೊರೊನಾ ಮೀಟಿಂಗ್ ಮಾಡಬಾರದು ಎಂದು ಯಾರೂ ಹೇಳುತ್ತಿಲ್ಲ. ಆದರೆ ಅದನ್ನು ಮಾಡಿದ ಮೇಲೆ ಜನತಾ ದರ್ಶನವನ್ನು ಮಾಡಬಹುದಿತ್ತಲ್ಲ. ಅದು ಮೊದಲೇ ನಿಗದಿಯಾಗಿತ್ತಲ್ಲ. ಹಾಗಾದರೆ ಜನತಾ ದರ್ಶನ ಎಂದರೆ ಅಷ್ಟು ನಿರ್ಲಕ್ಷ್ಯವೇ? ಜನರ ಸಮಸ್ಯೆಗೆ ಪರಿಹಾರ ಸೂಚಿಸಬೇಕಾದವರು ಇಷ್ಟು ಬೇಗ ಹೀಗೆ ಮಾಡಿದರೆ ಹೇಗೆ? ಅಷ್ಟಕ್ಕೂ ನಾವು ನಮ್ಮ ಮನೆಯ ಸಮಸ್ಯೆಯನ್ನು ಹೇಳಿಕೊಂಡು ಬರುವುದಿಲ್ಲ. ಸರಕಾರ ಜನರ ತೆರಿಗೆಯ ಹಣವನ್ನು ಖರ್ಚು ಮಾಡಿ ಕಟ್ಟಿದ ಒಂದು ಕಟ್ಟಡ ಕಳಪೆಯಾಗಿದ್ದು, ಅದನ್ನು ಸರಿ ಮಾಡಿ ಎಂದು ನಾನು ಕೇಳಿದ್ದೇ ಬಿಟ್ಟರೆ ನನ್ನ ಮನೆಯ ಕಂಪೌಂಡಿಗೆ ಎರಡು ಗೋಣಿ ಸಿಮೆಂಟ್ ಕೊಡಿ ಕೇಳಿರಲಿಲ್ಲ. ಸರಕಾರಿ ಕಟ್ಟಡವನ್ನು ಕಳಪೆಯಾಗಿ ಕಟ್ಟಿದ್ದ ಗುತ್ತಿಗೆದಾರರನ್ನು, ಸಹಿ ಹಾಕಿ ಬಿಲ್ ಪಾಸ್ ಮಾಡಿದ ಅಧಿಕಾರಿಯನ್ನು ಕರೆಸಿ ಪ್ರಶ್ನಿಸಲು ಧಮ್ ಇಲ್ಲದವರು ಜನತಾ ದರ್ಶನ ಮಾಡಿದರೆಷ್ಟು? ಬಿಟ್ಟರೆಷ್ಟು?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search