• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇವರಿಗೆ ವಿದ್ಯೆ ಮುಖ್ಯವೋ, ಹಿಜಾಬ್ ಮುಖ್ಯವೋ?

Tulunadu News Posted On December 25, 2023


  • Share On Facebook
  • Tweet It

ಕೈಗಳಿಗೆ ಬಳೆ ತೊಟ್ಟರೆ ಶಬ್ಧ ಬರುತ್ತದೆ. ಕುಂಕುಮ ಇಟ್ಟುಕೊಂಡರೆ ಕೋಮುವಾದವಾಗುತ್ತದೆ. ಹೂ ಇಟ್ಟುಕೊಂಡರಂತೂ ಶಾಲೆ ತುಂಬಾ ಕಸ ತುಂಬುತ್ತದೆ. ಭಗವದ್ಗೀತೆಯನ್ನು ಕಲಿಸಿ ಕೊಟ್ಟರೆ ಧರ್ಮ ಹೇರಿಕೆಯಾಗುತ್ತದೆ. ಎದ್ದು ನಿಂತು ಶ್ಲೋಕ ಹೇಳುವ ಕಾಲ ಯಾವಾಗಲೋ ಕಳೆದು ಹೋಗಿದೆ. ಶಾರದಾ ಪೂಜೆ ಈಗಿನ ಮಕ್ಕಳಿಗೆ ಗೊತ್ತೇ ಇರಲಿಕ್ಕಿಲ್ಲ. ಪಂಚಾಂಗವಂತು ದೂರದ ಮಾತು. ಹಬ್ಬ ಹರಿದಿನಗಳಿಗೆ ಸರಿಯಾಗಿ ಮಕ್ಕಳಿಗೆ ಪರೀಕ್ಷೆಗಳ ತಲೆಬಿಸಿ. ಹೀಗೆ ಹೇಳುತ್ತಾ ಹೋದರೆ ಬೇಕಾದಷ್ಟಿದೆ. ಇಷ್ಟೆಲ್ಲ ತೊಂದರೆಗಳ ನಡುವೆಯೂ ಕೂಡ ಹಿಂದೂ ಸಮಾಜ, ಶಿಕ್ಷಣಕ್ಕಾಗಿ ಇದ್ಯಾವುದನ್ನು ಲೆಕ್ಕಿಸಲಿಲ್ಲ. ಆದರೆ ಈ ಒಂದು ಸಮಾಜ ಕೇವಲ ಹಿಜಾಬಿನ ವಿಚಾರದಲ್ಲಿ ವಿದ್ಯೆಯನ್ನು ತಿರಸ್ಕರಿಸುತ್ತದೆಯೆಂದರೆ ಅವರಿಗೆ ವಿದ್ಯೆಯ ಮೇಲಿರುವ ಅಭಿಮಾನವನ್ನು ತಿಳಿದುಕೊಳ್ಳಲು ಇಷ್ಟೇ ಸಾಕಲ್ಲವೇ.

ಮಾತೆತ್ತಿದರೆ ಸಂಘಟನೆಯವರು ವಿನಾಕಾರಣ ಧರ್ಮದ ಗಲಾಟೆಯನ್ನು ಎಬ್ಬಿಸುತ್ತಾರೆ ಎಂದು ದೂರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈಗ ಸುಸ್ಥಿತಿಯಲ್ಲಿದ್ದ ವಾತಾವರಣವನ್ನು ಕೆಡಿಸಿದ್ದು ಯಾರು?. ರಾಜ್ಯದ ಮುಖ್ಯಮಂತ್ರಿಯಾಗಿ ಹೀಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು ಎಷ್ಟು ಮಟ್ಟಿಗೆ ಸರಿ. ತಮ್ಮ ಮಕ್ಕಳಿಗಾಗಿ, ವಿದ್ಯಾರ್ಥಿಗಳಿಗಾಗಿ ತಕ್ಕಮಟ್ಟಿಗೆ ಇದನ್ನು ಸರಿಪಡಿಸುವುದನ್ನು ಬಿಟ್ಟು ಈ ಗಲಾಟೆಯನ್ನು ಒಪ್ಪಿಕೊಳ್ಳುವವರಿಗೆ ನೈತಿಕತೆ ಇದೆಯೇ.

ಮಾನ್ಯ ಮುಖ್ಯಮಂತ್ರಿಗಳು ಸ್ವಲ್ಪ ಸಮಯದ ಹಿಂದೆ ಪರೀಕ್ಷೆಗೆ ಬರುವ ಮಕ್ಕಳಿಗೆ ಕೈ ಬಳೆ ಹಾಗು ತಾಳಿ ಇರಬಾರದು ಎಂದು ಮೌನ ಸಮ್ಮತಿ ಕೊಟ್ಟಿದ್ದರು. ಆದರೆ ಈಗ ಹಿಜಾಬ್ ಬೆಂಬಲಿಸುತ್ತಿದ್ದಾರೆ. ಯಾವ ದೃಷ್ಟಿಯಲ್ಲಿಯೂ ಪರೀಕ್ಷೆಗೆ ಇದು ಸರಿ ಹೊಂದುವುದಿಲ್ಲ. ಆದರೆ ಅದನ್ನು ಉಳಿಸಿ ಬೆಳೆಸಬೇಕು ಎನ್ನುವ ದರ್ದಿರುವ ಈ ಮುಖ್ಯಮಂತ್ರಿಗೆ ಏನು ಹೇಳಬೇಕು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿಜಾಮರು ಈ ದೇಶದಲ್ಲಿ ಬಹಳ ಪ್ರಾಬಲ್ಯವನ್ನು ಪಡೆದಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಇಡೀ ಭಾರತವನ್ನು ಆಳಿದರೂ ಕೂಡ, ಇತಿಹಾಸ ಗುರುತಿಸಿಕೊಳ್ಳುವಂತೆ ಸಮಾಜಕ್ಕೆ ಎಷ್ಟು ಒಳ್ಳೆಯ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ?. ಈಗಿನ ಸ್ವಾತಂತ್ರ್ಯೋತ್ತರದ 75 ವರ್ಷಗಳಿಂದಲೂ ಕೂಡ ಮೀಸಲಾತಿಯ ಮೂಲಕ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿದ್ದರೂ ಕೂಡ,ಇವರಲ್ಲಿ ಎಷ್ಟು ವಿದ್ಯಾವಂತರಿದ್ದಾರೆ.  ಸರಿಯಾಗಿ ಕನ್ನಡ ಮಾತಾಡುವವರು ಕೂಡ ಕೇವಲ ಬೆರಳೆಣಿಕೆಯಲ್ಲಿದ್ದಾರೆ. ವಿದ್ಯೆ ಹಾಗೂ ಸಂಸ್ಕಾರ ವಿಚಾರದಲ್ಲಿ ಕೇವಲ ಒಬ್ಬಿಬ್ಬರ ಉದಾಹರಣೆಯನ್ನು ಕೊಡಬಹುದಷ್ಟೇ. ಆದರೂ ಬದಲಾಗಲು ಬಯಸುತ್ತಿಲ್ಲ. ಹಿಜಾಬನ್ನು ಮುಂದಿಟ್ಟುಕೊಂಡು ವಿದ್ಯೆಗಾಗಿ ಗಲಾಟೆ ಎಬ್ಬಿಸಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.

ಕೇವಲ ಹಿಜಾಬಿನ ವಿಚಾರವನ್ನೇ ಇಟ್ಟುಕೊಳ್ಳೋಣ. ಪೂರ್ತಿ ಇಸ್ಲಾಮಿಕ್ ದೇಶಗಳು ಹಾಗೂ ಈ ಪಂಗಡದ ಪ್ರತಿಯೊಬ್ಬ ಕೂಡ ಹಿಜಾಬನ್ನು ಒಪ್ಪಿಕೊಳ್ಳುತ್ತಾನೆಯೆ. ಅದರಲ್ಲಿಯೇ ಎಷ್ಟೊಂದು ವಾದಗಳಿವೆ. ಮುಖವನ್ನು ಪೂರ್ತಿ ಮುಚ್ಚಿಕೊಳ್ಳಬೇಕು. ಕೇವಲ ತಲೆಯ ಭಾಗವನ್ನು ಮುಚ್ಚಿಕೊಂಡರೆ ಸಾಕು. ಅಷ್ಟೇ ಅಲ್ಲದೆ ಅರೇಬಿಯನ್ ರಾಷ್ಟ್ರಗಳಲ್ಲಿಯೇ ಹಿಜಾಬಿನ ನಿರ್ಬಂಧವಿದೆ. ಇವರ ಪವಿತ್ರ ಪರಂಪರೆಯವರಾದ ಜ್ಯೋಡನ್ನ ದೊರೆ 2ನೇ ಅಬ್ದುಲ್ಲ ಹಿಜಾಬ್ ಅನಿವಾರ್ಯವಲ್ಲ ಎನ್ನುವ ಮೂಲಕ ಈ ಹಿಜಾಬಿನ ಬಗ್ಗೆ ವಿರೋಧ ಮಾತಾಡಿದ್ದಾರೆ.ಆದ್ದರಿಂದ ಇಷ್ಟೆಲ್ಲದರ ನಡುವೆ ಪ್ರಸಕ್ತಿಯೇ ಇಲ್ಲದ ಈ ಹಿಜಾಬಿನ ಗಲಾಟೆಯನ್ನು ಯಾಕೆ ಇವರು ಮತ್ತಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ. ವಿದ್ಯೆ ಮುಖ್ಯವೋ ಅಥವಾ ಹಿಜಾಬ್ ಮುಖ್ಯವೋ ಎಂದು ಅವರೇ ಕಂಡುಕೊಳ್ಳುವುದು ಒಳ್ಳೆಯದಲ್ಲವೇ.

ಪ್ರಸಕ್ತ ಮುಖ್ಯಮಂತ್ರಿಯಂತೂ ಈ ಒಂದು ವರ್ಗದ ಪ್ರವರ್ತಕರಂತೆ ವರ್ತಿಸುತ್ತಿದ್ದಾರೆ. ಅವರ ಎಲ್ಲಾ ಆಚರಣೆಗಳು ಕೂಡ ಇವರಿಗೆ ಬಹಳ ಇಷ್ಟ ಎನ್ನುವುದು ಈಗ ಎಲ್ಲರಿಗೂ ಗೊತ್ತಿದೆ. ಸಂಪ್ರದಾಯದಲ್ಲಿಯೇ ಇರದ ಟಿಪ್ಪುವಿನ ಜನ್ಮ ದಿನವನ್ನು ಉತ್ಸವದ ರೀತಿಯಲ್ಲಿ ಆಚರಿಸಿದ ಮಹನೀಯರು. ಮಹಿಷನ ದಸರಕ್ಕೆ ಮೌನ ಮುದ್ರಿಕೆಯನ್ನು ಒತ್ತಿದವರು. ಒಂದು ರಾಜ್ಯದ ಮುಖ್ಯಮಂತ್ರಿ ಯಾಗಿ ಹೀಗೆ ಜನಾಂಗದ ದ್ವೇಷವನ್ನು ಬೆಳೆಸುವುದು ಎಷ್ಟು ಸರಿ.

ಇದನ್ನು ಅರ್ಥೈಸಿಕೊಳ್ಳದೆ ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದಾರೆಂದರೆ ಇವರನ್ನು ಪೂರ್ತಿ ಬಹಿಷ್ಕಾರ ಮಾಡಿದರೆ ಹೇಗೆ ತಪ್ಪಾಗುತ್ತದೆ. ಸಮಾನ ವಸ್ತ್ರ ಸಂಹಿತೆ ಜಾರಿಯಲ್ಲಿರುವ ಮಕ್ಕಳ ನಡುವೆ ಹಿಜಾಬ್ ಇವರಿಗೆ ಬೇಕಾಗುತ್ತದೆಯೆಂದರೆ ದೇವಸ್ಥಾನಗಳ ಮುಂದೆ ಇವರು ಅಂಗಡಿ ಮುಗ್ಗಟ್ಟುಗಳನ್ನು ಇಡುವ ಹಾಗಿಲ್ಲವೆಂದರೆ ಯಾಕೆ ಒಪ್ಪಬಾರದು. ಸಮಾಜದ ವಾತಾವರಣವನ್ನು ಎಲ್ಲರೂ ಕಾಪಾಡಲೇಬೇಕು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search