• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇವರಿಗೆ ವಿದ್ಯೆ ಮುಖ್ಯವೋ, ಹಿಜಾಬ್ ಮುಖ್ಯವೋ?

Tulunadu News Posted On December 25, 2023
0


0
Shares
  • Share On Facebook
  • Tweet It

ಕೈಗಳಿಗೆ ಬಳೆ ತೊಟ್ಟರೆ ಶಬ್ಧ ಬರುತ್ತದೆ. ಕುಂಕುಮ ಇಟ್ಟುಕೊಂಡರೆ ಕೋಮುವಾದವಾಗುತ್ತದೆ. ಹೂ ಇಟ್ಟುಕೊಂಡರಂತೂ ಶಾಲೆ ತುಂಬಾ ಕಸ ತುಂಬುತ್ತದೆ. ಭಗವದ್ಗೀತೆಯನ್ನು ಕಲಿಸಿ ಕೊಟ್ಟರೆ ಧರ್ಮ ಹೇರಿಕೆಯಾಗುತ್ತದೆ. ಎದ್ದು ನಿಂತು ಶ್ಲೋಕ ಹೇಳುವ ಕಾಲ ಯಾವಾಗಲೋ ಕಳೆದು ಹೋಗಿದೆ. ಶಾರದಾ ಪೂಜೆ ಈಗಿನ ಮಕ್ಕಳಿಗೆ ಗೊತ್ತೇ ಇರಲಿಕ್ಕಿಲ್ಲ. ಪಂಚಾಂಗವಂತು ದೂರದ ಮಾತು. ಹಬ್ಬ ಹರಿದಿನಗಳಿಗೆ ಸರಿಯಾಗಿ ಮಕ್ಕಳಿಗೆ ಪರೀಕ್ಷೆಗಳ ತಲೆಬಿಸಿ. ಹೀಗೆ ಹೇಳುತ್ತಾ ಹೋದರೆ ಬೇಕಾದಷ್ಟಿದೆ. ಇಷ್ಟೆಲ್ಲ ತೊಂದರೆಗಳ ನಡುವೆಯೂ ಕೂಡ ಹಿಂದೂ ಸಮಾಜ, ಶಿಕ್ಷಣಕ್ಕಾಗಿ ಇದ್ಯಾವುದನ್ನು ಲೆಕ್ಕಿಸಲಿಲ್ಲ. ಆದರೆ ಈ ಒಂದು ಸಮಾಜ ಕೇವಲ ಹಿಜಾಬಿನ ವಿಚಾರದಲ್ಲಿ ವಿದ್ಯೆಯನ್ನು ತಿರಸ್ಕರಿಸುತ್ತದೆಯೆಂದರೆ ಅವರಿಗೆ ವಿದ್ಯೆಯ ಮೇಲಿರುವ ಅಭಿಮಾನವನ್ನು ತಿಳಿದುಕೊಳ್ಳಲು ಇಷ್ಟೇ ಸಾಕಲ್ಲವೇ.

ಮಾತೆತ್ತಿದರೆ ಸಂಘಟನೆಯವರು ವಿನಾಕಾರಣ ಧರ್ಮದ ಗಲಾಟೆಯನ್ನು ಎಬ್ಬಿಸುತ್ತಾರೆ ಎಂದು ದೂರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈಗ ಸುಸ್ಥಿತಿಯಲ್ಲಿದ್ದ ವಾತಾವರಣವನ್ನು ಕೆಡಿಸಿದ್ದು ಯಾರು?. ರಾಜ್ಯದ ಮುಖ್ಯಮಂತ್ರಿಯಾಗಿ ಹೀಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು ಎಷ್ಟು ಮಟ್ಟಿಗೆ ಸರಿ. ತಮ್ಮ ಮಕ್ಕಳಿಗಾಗಿ, ವಿದ್ಯಾರ್ಥಿಗಳಿಗಾಗಿ ತಕ್ಕಮಟ್ಟಿಗೆ ಇದನ್ನು ಸರಿಪಡಿಸುವುದನ್ನು ಬಿಟ್ಟು ಈ ಗಲಾಟೆಯನ್ನು ಒಪ್ಪಿಕೊಳ್ಳುವವರಿಗೆ ನೈತಿಕತೆ ಇದೆಯೇ.

ಮಾನ್ಯ ಮುಖ್ಯಮಂತ್ರಿಗಳು ಸ್ವಲ್ಪ ಸಮಯದ ಹಿಂದೆ ಪರೀಕ್ಷೆಗೆ ಬರುವ ಮಕ್ಕಳಿಗೆ ಕೈ ಬಳೆ ಹಾಗು ತಾಳಿ ಇರಬಾರದು ಎಂದು ಮೌನ ಸಮ್ಮತಿ ಕೊಟ್ಟಿದ್ದರು. ಆದರೆ ಈಗ ಹಿಜಾಬ್ ಬೆಂಬಲಿಸುತ್ತಿದ್ದಾರೆ. ಯಾವ ದೃಷ್ಟಿಯಲ್ಲಿಯೂ ಪರೀಕ್ಷೆಗೆ ಇದು ಸರಿ ಹೊಂದುವುದಿಲ್ಲ. ಆದರೆ ಅದನ್ನು ಉಳಿಸಿ ಬೆಳೆಸಬೇಕು ಎನ್ನುವ ದರ್ದಿರುವ ಈ ಮುಖ್ಯಮಂತ್ರಿಗೆ ಏನು ಹೇಳಬೇಕು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿಜಾಮರು ಈ ದೇಶದಲ್ಲಿ ಬಹಳ ಪ್ರಾಬಲ್ಯವನ್ನು ಪಡೆದಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಇಡೀ ಭಾರತವನ್ನು ಆಳಿದರೂ ಕೂಡ, ಇತಿಹಾಸ ಗುರುತಿಸಿಕೊಳ್ಳುವಂತೆ ಸಮಾಜಕ್ಕೆ ಎಷ್ಟು ಒಳ್ಳೆಯ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ?. ಈಗಿನ ಸ್ವಾತಂತ್ರ್ಯೋತ್ತರದ 75 ವರ್ಷಗಳಿಂದಲೂ ಕೂಡ ಮೀಸಲಾತಿಯ ಮೂಲಕ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿದ್ದರೂ ಕೂಡ,ಇವರಲ್ಲಿ ಎಷ್ಟು ವಿದ್ಯಾವಂತರಿದ್ದಾರೆ.  ಸರಿಯಾಗಿ ಕನ್ನಡ ಮಾತಾಡುವವರು ಕೂಡ ಕೇವಲ ಬೆರಳೆಣಿಕೆಯಲ್ಲಿದ್ದಾರೆ. ವಿದ್ಯೆ ಹಾಗೂ ಸಂಸ್ಕಾರ ವಿಚಾರದಲ್ಲಿ ಕೇವಲ ಒಬ್ಬಿಬ್ಬರ ಉದಾಹರಣೆಯನ್ನು ಕೊಡಬಹುದಷ್ಟೇ. ಆದರೂ ಬದಲಾಗಲು ಬಯಸುತ್ತಿಲ್ಲ. ಹಿಜಾಬನ್ನು ಮುಂದಿಟ್ಟುಕೊಂಡು ವಿದ್ಯೆಗಾಗಿ ಗಲಾಟೆ ಎಬ್ಬಿಸಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.

ಕೇವಲ ಹಿಜಾಬಿನ ವಿಚಾರವನ್ನೇ ಇಟ್ಟುಕೊಳ್ಳೋಣ. ಪೂರ್ತಿ ಇಸ್ಲಾಮಿಕ್ ದೇಶಗಳು ಹಾಗೂ ಈ ಪಂಗಡದ ಪ್ರತಿಯೊಬ್ಬ ಕೂಡ ಹಿಜಾಬನ್ನು ಒಪ್ಪಿಕೊಳ್ಳುತ್ತಾನೆಯೆ. ಅದರಲ್ಲಿಯೇ ಎಷ್ಟೊಂದು ವಾದಗಳಿವೆ. ಮುಖವನ್ನು ಪೂರ್ತಿ ಮುಚ್ಚಿಕೊಳ್ಳಬೇಕು. ಕೇವಲ ತಲೆಯ ಭಾಗವನ್ನು ಮುಚ್ಚಿಕೊಂಡರೆ ಸಾಕು. ಅಷ್ಟೇ ಅಲ್ಲದೆ ಅರೇಬಿಯನ್ ರಾಷ್ಟ್ರಗಳಲ್ಲಿಯೇ ಹಿಜಾಬಿನ ನಿರ್ಬಂಧವಿದೆ. ಇವರ ಪವಿತ್ರ ಪರಂಪರೆಯವರಾದ ಜ್ಯೋಡನ್ನ ದೊರೆ 2ನೇ ಅಬ್ದುಲ್ಲ ಹಿಜಾಬ್ ಅನಿವಾರ್ಯವಲ್ಲ ಎನ್ನುವ ಮೂಲಕ ಈ ಹಿಜಾಬಿನ ಬಗ್ಗೆ ವಿರೋಧ ಮಾತಾಡಿದ್ದಾರೆ.ಆದ್ದರಿಂದ ಇಷ್ಟೆಲ್ಲದರ ನಡುವೆ ಪ್ರಸಕ್ತಿಯೇ ಇಲ್ಲದ ಈ ಹಿಜಾಬಿನ ಗಲಾಟೆಯನ್ನು ಯಾಕೆ ಇವರು ಮತ್ತಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ. ವಿದ್ಯೆ ಮುಖ್ಯವೋ ಅಥವಾ ಹಿಜಾಬ್ ಮುಖ್ಯವೋ ಎಂದು ಅವರೇ ಕಂಡುಕೊಳ್ಳುವುದು ಒಳ್ಳೆಯದಲ್ಲವೇ.

ಪ್ರಸಕ್ತ ಮುಖ್ಯಮಂತ್ರಿಯಂತೂ ಈ ಒಂದು ವರ್ಗದ ಪ್ರವರ್ತಕರಂತೆ ವರ್ತಿಸುತ್ತಿದ್ದಾರೆ. ಅವರ ಎಲ್ಲಾ ಆಚರಣೆಗಳು ಕೂಡ ಇವರಿಗೆ ಬಹಳ ಇಷ್ಟ ಎನ್ನುವುದು ಈಗ ಎಲ್ಲರಿಗೂ ಗೊತ್ತಿದೆ. ಸಂಪ್ರದಾಯದಲ್ಲಿಯೇ ಇರದ ಟಿಪ್ಪುವಿನ ಜನ್ಮ ದಿನವನ್ನು ಉತ್ಸವದ ರೀತಿಯಲ್ಲಿ ಆಚರಿಸಿದ ಮಹನೀಯರು. ಮಹಿಷನ ದಸರಕ್ಕೆ ಮೌನ ಮುದ್ರಿಕೆಯನ್ನು ಒತ್ತಿದವರು. ಒಂದು ರಾಜ್ಯದ ಮುಖ್ಯಮಂತ್ರಿ ಯಾಗಿ ಹೀಗೆ ಜನಾಂಗದ ದ್ವೇಷವನ್ನು ಬೆಳೆಸುವುದು ಎಷ್ಟು ಸರಿ.

ಇದನ್ನು ಅರ್ಥೈಸಿಕೊಳ್ಳದೆ ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದಾರೆಂದರೆ ಇವರನ್ನು ಪೂರ್ತಿ ಬಹಿಷ್ಕಾರ ಮಾಡಿದರೆ ಹೇಗೆ ತಪ್ಪಾಗುತ್ತದೆ. ಸಮಾನ ವಸ್ತ್ರ ಸಂಹಿತೆ ಜಾರಿಯಲ್ಲಿರುವ ಮಕ್ಕಳ ನಡುವೆ ಹಿಜಾಬ್ ಇವರಿಗೆ ಬೇಕಾಗುತ್ತದೆಯೆಂದರೆ ದೇವಸ್ಥಾನಗಳ ಮುಂದೆ ಇವರು ಅಂಗಡಿ ಮುಗ್ಗಟ್ಟುಗಳನ್ನು ಇಡುವ ಹಾಗಿಲ್ಲವೆಂದರೆ ಯಾಕೆ ಒಪ್ಪಬಾರದು. ಸಮಾಜದ ವಾತಾವರಣವನ್ನು ಎಲ್ಲರೂ ಕಾಪಾಡಲೇಬೇಕು.

0
Shares
  • Share On Facebook
  • Tweet It




Trending Now
ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
Tulunadu News September 10, 2025
ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
Tulunadu News September 10, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
    • ಖಾರ್ ಬೂಂದಿ ತಿನ್ನುತ್ತಿದ್ದಿರಾ? ಎಚ್ಚರಿಕೆ!
  • Popular Posts

    • 1
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • 2
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 3
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • 4
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • 5
      ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!

  • Privacy Policy
  • Contact
© Tulunadu Infomedia.

Press enter/return to begin your search