• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಯುವತಿಯರ ಮತಾಂತರ, ಕೇರಳ ಇದರ ಆಗರ

TNN Correspondent Posted On August 31, 2017


  • Share On Facebook
  • Tweet It

ತಿರುವನಂತಪುರ: ಕೇರಳದಲ್ಲಿ ಇದುವರೆಗೂ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೀತಿಯ ಹೆಸರಲ್ಲಿ (ಲವ್ ಜಿಹಾದ್) ಮತಾಂತರಗೊಳಿಸಲಾಗುತ್ತದೆ ಎಂಬ ಮಾತು ಆಗಾಗ ಕೇಳಿಬರುತ್ತಿದ್ದವು. ಆದರೆ ಈ ಮಾತಿಗೆ ಈಗ ಇನ್ನಷ್ಟು ಪುಷ್ಟಿ ಬಂದಿದ್ದು, ಇತ್ತೀಚೆಗೆ ಲವ್ ಜಿಹಾದ್ ಪ್ರಕರಣ ಜಾಸ್ತಿಯಾಗಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯೇ ಮಾಹಿತಿ ನೀಡಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ದಾವಾ ಸ್ಕ್ವಾಡ್ (ಮತಾಂತರಗೊಳಿಸಲು ರಚಿಸಿರುವ ತಂಡ)ಗಳು ಕೇರಳದಲ್ಲಿ ಹೇರಳವಾಗಿ ಹಿಂದೂ ಯುವತಿಯರಿಗೆ ನಕಲಿ ಪ್ರೀತಿಯ ಬಲೆ ಹಾಕಿ ಮತಾಂತರಗೊಳಿಸಲಾಗುತ್ತಿದೆ ಎಂದು ಎನ್‌ಐಎ ಹಾಗೂ ಪೊಲೀಸ್ ದಾಖಲೆಗಳಿಂದ ತಿಳಿದುಬಂದಿದೆ.
ಎನ್‌ಐಎ ದಾಖಲೆಯ ಪ್ರಕಾರ ಒಂದು ವರ್ಷದಲ್ಲಿ 105 ಹಿಂದೂ ಯುವತಿಯರನ್ನು ಲವ್‌ಜಿಹಾದ್ ಹೆಸರಲ್ಲಿ ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಎನ್‌ಐಎ ಸಂಸ್ಥೆ ತಿಳಿಸಿದೆ.
ಹಿಂದೂ ಬಡ ಯುವತಿಯರನ್ನು ಗುರಿಯಾಗಿಸಿಕೊಳ್ಳುವ ಈ ಮೂಲಭೂತವಾದಿಗಳು, ಆ ಯುವತಿಯರ ಜತೆ ಪ್ರೀತಿಯ ನಾಟಕವಾಡುತ್ತಾಾರೆ. ಅವರನ್ನು ವಿದೇಶಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಬಳಿಕ ಅವರನ್ನು ತಾಯಿನಾಡಿಗೆ ಕರೆತಂದು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಏನಿದು ದಾವಾ ಸ್ಕ್ವಾಡ್?
ದಾವಾ ಸ್ಕ್ವಾಡ್ ಒಂದು ಮುಸ್ಲಿಮರ ತಂಡವಾಗಿದ್ದು, ಹಿಂದೂ ಯುವತಿಯರಿಗೆ ಹಲವು ಆಮಿಷ ನೀಡಿ ಅವರನ್ನು ಮತಾಂತರಗೊಳಿಸುವುದೇ ಈ ತಂಡದ ಮೂಲ ಉದ್ದೇಶವಾಗಿದೆ. ಇದರಲ್ಲಿ ನೋಡಲು ಸುಂದರವಾಗಿರುವ, ನೌಕರಿ ಅಥವಾ ಪದವಿ ಹೊಂದಿರುವ ಯುವಕರು ಈ ಗುಂಪಿನಲ್ಲಿದ್ದು, ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಕೆಡವುವುದೇ ಇವರ ಕರ್ತವ್ಯ. ಮುಸ್ಲಿಂ ಮೂಲಭೂತವಾದಿಗಳೇ ಇವರಿಗೆ ಹಣ ಸಂದಾಯ ಮಾಡುತ್ತಾರೆ ಎಂದು ಎನ್‌ಐಎ ತಿಳಿಸಿದೆ.

ಯಾರು ಇವರ ಟಾರ್ಗೆಟ್?
18-25 ವಯಸ್ಸಿಿನ ಬಡ, ಪೋಷಕರಿಲ್ಲದ ಯುವತಿಯರೇ ಇವರ ಗುರಿ.

ಯಾವ ಸಂಘಟನೆ ಹಾಗೂ ಪಕ್ಷಗಳ ಬೆಂಬಲ?
ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)

139 ಯುವತಿಯರ ಮತಾಂತರ
ಒಂದು ವರದಿಯ ಪ್ರಕಾರ ಕೇರಳದ ಪಲಕ್ಕಾಡ್ ಒಂದರಲ್ಲೇ ಎರಡು ವರ್ಷಗಳಲ್ಲಿ ಇಷ್ಟು ಯುವತಿಯರನ್ನು ಮತಾಂತರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search