• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಎಸ್ ಪಿಜಿ ಕಮಾಂಡೊಗಳು ಕೂಡ ಧೋತಿಯಲ್ಲಿ!

Tulunadu News Posted On January 19, 2024
0


0
Shares
  • Share On Facebook
  • Tweet It

ಭಾರತದ ಪ್ರಧಾನ ಮಂತ್ರಿಯವರು ಮೊನ್ನೆಯಷ್ಟೇ ಕೇರಳ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ತ್ರಿಶೂರ್ ನಲ್ಲಿರುವ ಶ್ರೀ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇರಳದ ದೇವಸ್ಥಾನಗಳಲ್ಲಿ ಗಂಡಸರು ಪ್ರವೇಶಿಸುವಾಗ ಅಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶವಿದೆ. ಸಾಂಪ್ರದಾಯಿಕ ಉಡುಗೆಗಳು ಅಲ್ಲಿ ಕಡ್ಡಾಯ. ಅದು ಧೋತಿ ಮತ್ತು ಶಾಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಧರಿಸಿದರೆ ಮಾತ್ರ ಪ್ರವೇಶ ಸಾಧ್ಯ. ಮೋದಿಯವರು ಆಯಾ ಊರುಗಳಿಗೆ ಹೋಗುವಾಗ ಅಲ್ಲಿನ ಸಂಸ್ಕೃತಿಗೆ ತಕ್ಕಂತಹ ಉಡುಗೆ – ತೊಡುಗೆಗಳನ್ನು ಧರಿಸುವುದು ಸಾಮಾನ್ಯ. ಅದನ್ನು ನಾವು ವಿವಿಧ ಫೋಟೋಗಳಲ್ಲಿ, ದೃಶ್ಯಗಳಲ್ಲಿ ಕಾಣಬಹುದು.

ಆದರೆ ಮೋದಿಯವರು ದೇಶ, ವಿದೇಶಗಳ ಯಾವುದೇ ಸ್ಥಳದಲ್ಲಿ ಪ್ರವಾಸದಲ್ಲಿದ್ದಾಗಲೂ ಅವರ ಉಡುಗೆ ತೊಡುಗೆಗಳಲ್ಲಿ ಎಂತಹ ವೈವಿದ್ಯತೆಗಳಿದ್ದರೂ ಅವರ ಸುರಕ್ಷತೆಗಾಗಿ ಇರುವ ವಿಶೇಷ ಸುರಕ್ಷತಾ ದಳದ (ಎಸ್ ಪಿಜಿ) ಕಮಾಂಡೊಗಳ ಡ್ರೆಸ್ ಕೋಡ್ ಮಾತ್ರ ಒಂದೇ ತೆರನಾಗಿರುತ್ತದೆ. ಆದರೆ ಶ್ರೀ ಗುರುವಾಯೂರ್ ನಲ್ಲಿ ಹಾಗೆ ಆಗುವ ಚಾನ್ಸ್ ಇರಲಿಲ್ಲ. ಯಾಕೆಂದರೆ ಅಲ್ಲಿ ಶಿಸ್ತೆಂದರೆ ಶಿಸ್ತು. ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಅವರು ದೇವಸ್ಥಾನ ಪ್ರವೇಶಿಸುವಾಗ ಧೋತಿ, ಬಿಳಿ ಶಾಲ್ ಧರಿಸಿಯೇ ಬರಬೇಕಾಗುತ್ತದೆ.

ಇದನ್ನೆಲ್ಲಾ ಅರಿತಿರುವ ಮೋದಿಯವರು ದೇವಸ್ಥಾನದ ಒಳಗೆ ತಮ್ಮ ಸುರಕ್ಷತೆಗೆ ಬರುವ ಕಮಾಂಡೊಗಳಿಗೆ ಧೋತಿ, ಶಾಲು ಧರಿಸಲು ಸೂಚಿಸಿದ್ದಾರೆ. ಯಾಕೆಂದರೆ ದೇವಸ್ಥಾನದ ಒಳಗೆ ಮೋದಿಯವರನ್ನು ಮಾತ್ರ ಬಿಟ್ಟು ಕಮಾಂಡೊಗಳು ಹೊರಗೆ ನಿಲ್ಲುವಂತಿಲ್ಲ. ಮೋದಿ ಎಲ್ಲಿರುತ್ತಾರೋ ಅಲ್ಲಿ ಆಸುಪಾಸಿನಲ್ಲಿ ಕಮಾಂಡೊಗಳು ಇರಬೇಕು. ಒಳಗೆ ಬರಲು ಧೋತಿ, ಶಾಲು ಧರಿಸಲ್ಲ ಎಂದು ಎಸ್ ಪಿಜಿ ಕಮಾಂಡುಗಳು ಹೇಳುವಂತಿಲ್ಲ. ಯಾಕೆಂದರೆ ಮೋದಿಯವರ ಸುರಕ್ಷೆ ಮುಖ್ಯ. ಆದ್ದರಿಂದ ಕಮಾಂಡೊಗಳು ತಮ್ಮ ಡ್ರೆಸ್ ಕೋಡ್ ಧರಿಸದೇ ಧೋತಿ, ಶಾಲು ಧರಿಸಿ ಮೋದಿಯವರೊಡನೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೋದಿಯವರ ಸುರಕ್ಷೆ ಕೂಡ ಪಾಲಿಸಿದಂತೆ ಆಯಿತು, ಡ್ರೆಸ್ ಕೋಡ್ ಕೂಡ ದೇವಸ್ಥಾನದ ನಿಯಮವನ್ನು ಪಾಲಿಸಿದಂತೆ ಆಯಿತು.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!

  • Privacy Policy
  • Contact
© Tulunadu Infomedia.

Press enter/return to begin your search