• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿ ಎಸ್ ಪಿಜಿ ಕಮಾಂಡೊಗಳು ಕೂಡ ಧೋತಿಯಲ್ಲಿ!

Tulunadu News Posted On January 19, 2024


  • Share On Facebook
  • Tweet It

ಭಾರತದ ಪ್ರಧಾನ ಮಂತ್ರಿಯವರು ಮೊನ್ನೆಯಷ್ಟೇ ಕೇರಳ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ತ್ರಿಶೂರ್ ನಲ್ಲಿರುವ ಶ್ರೀ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇರಳದ ದೇವಸ್ಥಾನಗಳಲ್ಲಿ ಗಂಡಸರು ಪ್ರವೇಶಿಸುವಾಗ ಅಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶವಿದೆ. ಸಾಂಪ್ರದಾಯಿಕ ಉಡುಗೆಗಳು ಅಲ್ಲಿ ಕಡ್ಡಾಯ. ಅದು ಧೋತಿ ಮತ್ತು ಶಾಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಧರಿಸಿದರೆ ಮಾತ್ರ ಪ್ರವೇಶ ಸಾಧ್ಯ. ಮೋದಿಯವರು ಆಯಾ ಊರುಗಳಿಗೆ ಹೋಗುವಾಗ ಅಲ್ಲಿನ ಸಂಸ್ಕೃತಿಗೆ ತಕ್ಕಂತಹ ಉಡುಗೆ – ತೊಡುಗೆಗಳನ್ನು ಧರಿಸುವುದು ಸಾಮಾನ್ಯ. ಅದನ್ನು ನಾವು ವಿವಿಧ ಫೋಟೋಗಳಲ್ಲಿ, ದೃಶ್ಯಗಳಲ್ಲಿ ಕಾಣಬಹುದು.

ಆದರೆ ಮೋದಿಯವರು ದೇಶ, ವಿದೇಶಗಳ ಯಾವುದೇ ಸ್ಥಳದಲ್ಲಿ ಪ್ರವಾಸದಲ್ಲಿದ್ದಾಗಲೂ ಅವರ ಉಡುಗೆ ತೊಡುಗೆಗಳಲ್ಲಿ ಎಂತಹ ವೈವಿದ್ಯತೆಗಳಿದ್ದರೂ ಅವರ ಸುರಕ್ಷತೆಗಾಗಿ ಇರುವ ವಿಶೇಷ ಸುರಕ್ಷತಾ ದಳದ (ಎಸ್ ಪಿಜಿ) ಕಮಾಂಡೊಗಳ ಡ್ರೆಸ್ ಕೋಡ್ ಮಾತ್ರ ಒಂದೇ ತೆರನಾಗಿರುತ್ತದೆ. ಆದರೆ ಶ್ರೀ ಗುರುವಾಯೂರ್ ನಲ್ಲಿ ಹಾಗೆ ಆಗುವ ಚಾನ್ಸ್ ಇರಲಿಲ್ಲ. ಯಾಕೆಂದರೆ ಅಲ್ಲಿ ಶಿಸ್ತೆಂದರೆ ಶಿಸ್ತು. ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಅವರು ದೇವಸ್ಥಾನ ಪ್ರವೇಶಿಸುವಾಗ ಧೋತಿ, ಬಿಳಿ ಶಾಲ್ ಧರಿಸಿಯೇ ಬರಬೇಕಾಗುತ್ತದೆ.

ಇದನ್ನೆಲ್ಲಾ ಅರಿತಿರುವ ಮೋದಿಯವರು ದೇವಸ್ಥಾನದ ಒಳಗೆ ತಮ್ಮ ಸುರಕ್ಷತೆಗೆ ಬರುವ ಕಮಾಂಡೊಗಳಿಗೆ ಧೋತಿ, ಶಾಲು ಧರಿಸಲು ಸೂಚಿಸಿದ್ದಾರೆ. ಯಾಕೆಂದರೆ ದೇವಸ್ಥಾನದ ಒಳಗೆ ಮೋದಿಯವರನ್ನು ಮಾತ್ರ ಬಿಟ್ಟು ಕಮಾಂಡೊಗಳು ಹೊರಗೆ ನಿಲ್ಲುವಂತಿಲ್ಲ. ಮೋದಿ ಎಲ್ಲಿರುತ್ತಾರೋ ಅಲ್ಲಿ ಆಸುಪಾಸಿನಲ್ಲಿ ಕಮಾಂಡೊಗಳು ಇರಬೇಕು. ಒಳಗೆ ಬರಲು ಧೋತಿ, ಶಾಲು ಧರಿಸಲ್ಲ ಎಂದು ಎಸ್ ಪಿಜಿ ಕಮಾಂಡುಗಳು ಹೇಳುವಂತಿಲ್ಲ. ಯಾಕೆಂದರೆ ಮೋದಿಯವರ ಸುರಕ್ಷೆ ಮುಖ್ಯ. ಆದ್ದರಿಂದ ಕಮಾಂಡೊಗಳು ತಮ್ಮ ಡ್ರೆಸ್ ಕೋಡ್ ಧರಿಸದೇ ಧೋತಿ, ಶಾಲು ಧರಿಸಿ ಮೋದಿಯವರೊಡನೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೋದಿಯವರ ಸುರಕ್ಷೆ ಕೂಡ ಪಾಲಿಸಿದಂತೆ ಆಯಿತು, ಡ್ರೆಸ್ ಕೋಡ್ ಕೂಡ ದೇವಸ್ಥಾನದ ನಿಯಮವನ್ನು ಪಾಲಿಸಿದಂತೆ ಆಯಿತು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search