• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಎಸ್ ಪಿಜಿ ಕಮಾಂಡೊಗಳು ಕೂಡ ಧೋತಿಯಲ್ಲಿ!

Tulunadu News Posted On January 19, 2024
0


0
Shares
  • Share On Facebook
  • Tweet It

ಭಾರತದ ಪ್ರಧಾನ ಮಂತ್ರಿಯವರು ಮೊನ್ನೆಯಷ್ಟೇ ಕೇರಳ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ತ್ರಿಶೂರ್ ನಲ್ಲಿರುವ ಶ್ರೀ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇರಳದ ದೇವಸ್ಥಾನಗಳಲ್ಲಿ ಗಂಡಸರು ಪ್ರವೇಶಿಸುವಾಗ ಅಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶವಿದೆ. ಸಾಂಪ್ರದಾಯಿಕ ಉಡುಗೆಗಳು ಅಲ್ಲಿ ಕಡ್ಡಾಯ. ಅದು ಧೋತಿ ಮತ್ತು ಶಾಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಧರಿಸಿದರೆ ಮಾತ್ರ ಪ್ರವೇಶ ಸಾಧ್ಯ. ಮೋದಿಯವರು ಆಯಾ ಊರುಗಳಿಗೆ ಹೋಗುವಾಗ ಅಲ್ಲಿನ ಸಂಸ್ಕೃತಿಗೆ ತಕ್ಕಂತಹ ಉಡುಗೆ – ತೊಡುಗೆಗಳನ್ನು ಧರಿಸುವುದು ಸಾಮಾನ್ಯ. ಅದನ್ನು ನಾವು ವಿವಿಧ ಫೋಟೋಗಳಲ್ಲಿ, ದೃಶ್ಯಗಳಲ್ಲಿ ಕಾಣಬಹುದು.

ಆದರೆ ಮೋದಿಯವರು ದೇಶ, ವಿದೇಶಗಳ ಯಾವುದೇ ಸ್ಥಳದಲ್ಲಿ ಪ್ರವಾಸದಲ್ಲಿದ್ದಾಗಲೂ ಅವರ ಉಡುಗೆ ತೊಡುಗೆಗಳಲ್ಲಿ ಎಂತಹ ವೈವಿದ್ಯತೆಗಳಿದ್ದರೂ ಅವರ ಸುರಕ್ಷತೆಗಾಗಿ ಇರುವ ವಿಶೇಷ ಸುರಕ್ಷತಾ ದಳದ (ಎಸ್ ಪಿಜಿ) ಕಮಾಂಡೊಗಳ ಡ್ರೆಸ್ ಕೋಡ್ ಮಾತ್ರ ಒಂದೇ ತೆರನಾಗಿರುತ್ತದೆ. ಆದರೆ ಶ್ರೀ ಗುರುವಾಯೂರ್ ನಲ್ಲಿ ಹಾಗೆ ಆಗುವ ಚಾನ್ಸ್ ಇರಲಿಲ್ಲ. ಯಾಕೆಂದರೆ ಅಲ್ಲಿ ಶಿಸ್ತೆಂದರೆ ಶಿಸ್ತು. ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಅವರು ದೇವಸ್ಥಾನ ಪ್ರವೇಶಿಸುವಾಗ ಧೋತಿ, ಬಿಳಿ ಶಾಲ್ ಧರಿಸಿಯೇ ಬರಬೇಕಾಗುತ್ತದೆ.

ಇದನ್ನೆಲ್ಲಾ ಅರಿತಿರುವ ಮೋದಿಯವರು ದೇವಸ್ಥಾನದ ಒಳಗೆ ತಮ್ಮ ಸುರಕ್ಷತೆಗೆ ಬರುವ ಕಮಾಂಡೊಗಳಿಗೆ ಧೋತಿ, ಶಾಲು ಧರಿಸಲು ಸೂಚಿಸಿದ್ದಾರೆ. ಯಾಕೆಂದರೆ ದೇವಸ್ಥಾನದ ಒಳಗೆ ಮೋದಿಯವರನ್ನು ಮಾತ್ರ ಬಿಟ್ಟು ಕಮಾಂಡೊಗಳು ಹೊರಗೆ ನಿಲ್ಲುವಂತಿಲ್ಲ. ಮೋದಿ ಎಲ್ಲಿರುತ್ತಾರೋ ಅಲ್ಲಿ ಆಸುಪಾಸಿನಲ್ಲಿ ಕಮಾಂಡೊಗಳು ಇರಬೇಕು. ಒಳಗೆ ಬರಲು ಧೋತಿ, ಶಾಲು ಧರಿಸಲ್ಲ ಎಂದು ಎಸ್ ಪಿಜಿ ಕಮಾಂಡುಗಳು ಹೇಳುವಂತಿಲ್ಲ. ಯಾಕೆಂದರೆ ಮೋದಿಯವರ ಸುರಕ್ಷೆ ಮುಖ್ಯ. ಆದ್ದರಿಂದ ಕಮಾಂಡೊಗಳು ತಮ್ಮ ಡ್ರೆಸ್ ಕೋಡ್ ಧರಿಸದೇ ಧೋತಿ, ಶಾಲು ಧರಿಸಿ ಮೋದಿಯವರೊಡನೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೋದಿಯವರ ಸುರಕ್ಷೆ ಕೂಡ ಪಾಲಿಸಿದಂತೆ ಆಯಿತು, ಡ್ರೆಸ್ ಕೋಡ್ ಕೂಡ ದೇವಸ್ಥಾನದ ನಿಯಮವನ್ನು ಪಾಲಿಸಿದಂತೆ ಆಯಿತು.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search