• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾರ್ಕಳದಲ್ಲಿ ಮಾನವ ಕಳ್ಳಸಾಗಣೆ, ನಾಲ್ಕುವರೆ ಲಕ್ಷಕ್ಕೆ ಮಹಿಳೆ ಖರೀದಿ!

TNN Correspondent Posted On August 31, 2017
0


0
Shares
  • Share On Facebook
  • Tweet It

ನಿಮಗೆ ವಿದೇಶಕ್ಕೆ ಹೋಗುವ ಆಸೆ ಇದೆಯಾ? ನಿಮಗೆ ತುಂಬಾ ಹಣ ಗಳಿಸುವ ಗುರಿ ಇದೆಯಾ? ದುಡ್ಡು ಮಾಡಲು ಫಾರಿನ್ ಗೆ ಹೋಗುವುದು ಒಂದೇ ದಾರಿ ಎಂದು ನಿಮಗೆ ಅನಿಸುತ್ತಿದೆಯಾ? ಹಾಗಾದರೆ ನಿಮ್ಮಂತವರನ್ನೇ ಟಾರ್ಗೆಟ್ ಮಾಡಿ ಹಣ ಮಾಡುವ ತಂತ್ರವನ್ನು ಕೆಲವು ಏಜೆನ್ಸಿಗಳು ಮಾಡುತ್ತವೆ.
ಆಕೆ ಜೆಸಿಂತಾ. ಕಾರ್ಕಳದ ನಿವಾಸಿ. ಗಂಡ ತೀರಿಕೊಂಡಿದ್ದಾರೆ. ಮೂವರು ಮಕ್ಕಳೊಂದಿಗೆ ತನ್ನ ಜೀವನ ಸಾಗಬೇಕಾದರೆ ಉದ್ಯೋಗ ಅನಿವಾರ್ಯವಾಗಿತ್ತು. ಸ್ವಲ್ಪ ಹೆಚ್ಚಿನ ಸಂಬಳ ಸಿಕ್ಕಿದರೆ ಒಳ್ಳೆಯದಾಗುತ್ತದೆ ಎನ್ನುವ ಆಸೆ ಎಲ್ಲರಂತೆ ಆಕೆಗೂ ಇತ್ತು. ಅದನ್ನು ಬೇರೆಯವರಲ್ಲಿ ಹೇಳಿದ್ದಳು. ಅದರ ಬಳಿಕ ಒಮ್ಮೆ ಆಕೆಗೆ ಮಂಗಳೂರಿನ ಜೆಮ್ಸ್ ಎನ್ನುವರಿಂದ ಆಫರ್ ಬರುತ್ತದೆ. ನೀವು ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆ ಮಾಡುವ ಕೆಲಸಕ್ಕೆ ಹೋಗಲು ತಯಾರಿದ್ದಿರಾ? ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೇಳಿ ಅವಳು ಕೂಡ ಖುಷಿಗೊಂಡು ವಿಮಾನ ಹತ್ತುತ್ತಾಳೆ. ಮುಂಬೈನಲ್ಲಿ ವಿಮಾನ ಹತ್ತಿ ಎಲ್ಲೋ ಇಳಿದಾಗಲೇ ಅವಳಿಗೆ ಗೊತ್ತಾಗಿತ್ತು. ಅದು ಕತಾರ್ ಅಲ್ಲ, ಸೌದಿ ಎಂದು. ಅಲ್ಲಿಂದ ಅವಳ ಜೀವನ ನರಕವಾಯಿತು.
ಮೂವರು ಮಡದಿಯರು, ಹತ್ತಾರು ಮಕ್ಕಳು, 16 ಗಂಟೆ ದುಡಿತ, ಜೀತ ಮಾಡಿ ಹೈರಾಣವಾಗಿರುವ ಜೆಸಿಂತಾ ಅವರಿಗೆ ಟಿಬಿ ಕಾಯಿಲೆ ಕೂಡ ಬಾಧಿಸಿ ಅವಳಿಗ ಜೀವಂತ ಶವವಾಗಿದ್ದಾಳೆ. ಅವಳಿಗೆ ನಾಲ್ಕುವರೆ ಲಕ್ಷ ಪಾವತಿಸಿ ಖರೀದಿಸಿದಂತೆ ಆಡುತ್ತಿರುವ ಆ ಕುಟುಂಬ ಹಣ ಕೊಟ್ಟಿದ್ದು ಜೇಮ್ಸ್ ಗೆ. ಮುಂಬೈನ ಶಾಬಾಸ್ ಖಾನ್ ಇದರ ರೂವಾರಿ. ಇವರು ಹಣ ನುಂಗಿ ಇಂತಂಹ ನೂರಾರು ಹೆಣ್ಣುಗಳನ್ನು ಅರಬರಿಗೆ ಮಾರಾಟ ಮಾಡಿದ್ದಾರೆ.
ಇಂತಹಾ 20ಕ್ಕೂ ಅಧಿಕ ಸಬ್ ಏಜೆಂಟ್ ಗಳು ಉಡುಪಿ-ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಶಾಬಾಸ್ ಖಾನ್ ಅಂತವರಿಗೆ 25 ಸಾವಿರ ಕೊಟ್ಟು ಮಹಿಳೆಯರನ್ನು ಖರೀದಿ ಮಾಡುತ್ತಾನೆ. ನಂತರ ಅರಬರೊಂದಿಗೆ ಡೀಲ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಾನೆ.
ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಟಾನ ಜೆಸಿಂತಾರನ್ನು ಮರಳಿ ಭಾರತಕ್ಕೆ ತರುವ ಬಗ್ಗೆ ತಿಂಗಳುಗಳಿಂದ ಹೋರಾಟ ಮಾಡುತ್ತಿದೆ. ಇವರ ಮನವಿಗೆ ಸ್ಪಂದಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ಸೂಕ್ರ ಕ್ರಮ ಕೈಗೊಳ್ಳಲು ಸೌದಿಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ಸತತ ಒತ್ತಾಯದ ಬಳಿಕ ಶನಿವಾರ ಜೇಮ್ಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಶಾಬಾಸ್ ಖಾನ್ ಬಗ್ಗೆ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ತಾಯಿಯ ಸಂಕಟ ಗೊತ್ತಾಗಿ ಮಕ್ಕಳು ಆತಂಕಿತರಾಗಿದ್ದಾರೆ. ಆದರೆ ಮಾನವ ಕಳ್ಳ ಸಾಗಣೆ ಮಾತ್ರ ಭಾರತದಿಂದ ಬೇರೆ ರಾಷ್ಟ್ರಕ್ಕೆ ನಿರಾಂತಕವಾಗಿ ನಡೆಯುತ್ತಿದೆ.

 

0
Shares
  • Share On Facebook
  • Tweet It


human traffiking


Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Tulunadu News July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Tulunadu News July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search