• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾರ್ಕಳದಲ್ಲಿ ಮಾನವ ಕಳ್ಳಸಾಗಣೆ, ನಾಲ್ಕುವರೆ ಲಕ್ಷಕ್ಕೆ ಮಹಿಳೆ ಖರೀದಿ!

TNN Correspondent Posted On August 31, 2017
0


0
Shares
  • Share On Facebook
  • Tweet It

ನಿಮಗೆ ವಿದೇಶಕ್ಕೆ ಹೋಗುವ ಆಸೆ ಇದೆಯಾ? ನಿಮಗೆ ತುಂಬಾ ಹಣ ಗಳಿಸುವ ಗುರಿ ಇದೆಯಾ? ದುಡ್ಡು ಮಾಡಲು ಫಾರಿನ್ ಗೆ ಹೋಗುವುದು ಒಂದೇ ದಾರಿ ಎಂದು ನಿಮಗೆ ಅನಿಸುತ್ತಿದೆಯಾ? ಹಾಗಾದರೆ ನಿಮ್ಮಂತವರನ್ನೇ ಟಾರ್ಗೆಟ್ ಮಾಡಿ ಹಣ ಮಾಡುವ ತಂತ್ರವನ್ನು ಕೆಲವು ಏಜೆನ್ಸಿಗಳು ಮಾಡುತ್ತವೆ.
ಆಕೆ ಜೆಸಿಂತಾ. ಕಾರ್ಕಳದ ನಿವಾಸಿ. ಗಂಡ ತೀರಿಕೊಂಡಿದ್ದಾರೆ. ಮೂವರು ಮಕ್ಕಳೊಂದಿಗೆ ತನ್ನ ಜೀವನ ಸಾಗಬೇಕಾದರೆ ಉದ್ಯೋಗ ಅನಿವಾರ್ಯವಾಗಿತ್ತು. ಸ್ವಲ್ಪ ಹೆಚ್ಚಿನ ಸಂಬಳ ಸಿಕ್ಕಿದರೆ ಒಳ್ಳೆಯದಾಗುತ್ತದೆ ಎನ್ನುವ ಆಸೆ ಎಲ್ಲರಂತೆ ಆಕೆಗೂ ಇತ್ತು. ಅದನ್ನು ಬೇರೆಯವರಲ್ಲಿ ಹೇಳಿದ್ದಳು. ಅದರ ಬಳಿಕ ಒಮ್ಮೆ ಆಕೆಗೆ ಮಂಗಳೂರಿನ ಜೆಮ್ಸ್ ಎನ್ನುವರಿಂದ ಆಫರ್ ಬರುತ್ತದೆ. ನೀವು ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆ ಮಾಡುವ ಕೆಲಸಕ್ಕೆ ಹೋಗಲು ತಯಾರಿದ್ದಿರಾ? ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೇಳಿ ಅವಳು ಕೂಡ ಖುಷಿಗೊಂಡು ವಿಮಾನ ಹತ್ತುತ್ತಾಳೆ. ಮುಂಬೈನಲ್ಲಿ ವಿಮಾನ ಹತ್ತಿ ಎಲ್ಲೋ ಇಳಿದಾಗಲೇ ಅವಳಿಗೆ ಗೊತ್ತಾಗಿತ್ತು. ಅದು ಕತಾರ್ ಅಲ್ಲ, ಸೌದಿ ಎಂದು. ಅಲ್ಲಿಂದ ಅವಳ ಜೀವನ ನರಕವಾಯಿತು.
ಮೂವರು ಮಡದಿಯರು, ಹತ್ತಾರು ಮಕ್ಕಳು, 16 ಗಂಟೆ ದುಡಿತ, ಜೀತ ಮಾಡಿ ಹೈರಾಣವಾಗಿರುವ ಜೆಸಿಂತಾ ಅವರಿಗೆ ಟಿಬಿ ಕಾಯಿಲೆ ಕೂಡ ಬಾಧಿಸಿ ಅವಳಿಗ ಜೀವಂತ ಶವವಾಗಿದ್ದಾಳೆ. ಅವಳಿಗೆ ನಾಲ್ಕುವರೆ ಲಕ್ಷ ಪಾವತಿಸಿ ಖರೀದಿಸಿದಂತೆ ಆಡುತ್ತಿರುವ ಆ ಕುಟುಂಬ ಹಣ ಕೊಟ್ಟಿದ್ದು ಜೇಮ್ಸ್ ಗೆ. ಮುಂಬೈನ ಶಾಬಾಸ್ ಖಾನ್ ಇದರ ರೂವಾರಿ. ಇವರು ಹಣ ನುಂಗಿ ಇಂತಂಹ ನೂರಾರು ಹೆಣ್ಣುಗಳನ್ನು ಅರಬರಿಗೆ ಮಾರಾಟ ಮಾಡಿದ್ದಾರೆ.
ಇಂತಹಾ 20ಕ್ಕೂ ಅಧಿಕ ಸಬ್ ಏಜೆಂಟ್ ಗಳು ಉಡುಪಿ-ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಶಾಬಾಸ್ ಖಾನ್ ಅಂತವರಿಗೆ 25 ಸಾವಿರ ಕೊಟ್ಟು ಮಹಿಳೆಯರನ್ನು ಖರೀದಿ ಮಾಡುತ್ತಾನೆ. ನಂತರ ಅರಬರೊಂದಿಗೆ ಡೀಲ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಾನೆ.
ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಟಾನ ಜೆಸಿಂತಾರನ್ನು ಮರಳಿ ಭಾರತಕ್ಕೆ ತರುವ ಬಗ್ಗೆ ತಿಂಗಳುಗಳಿಂದ ಹೋರಾಟ ಮಾಡುತ್ತಿದೆ. ಇವರ ಮನವಿಗೆ ಸ್ಪಂದಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ಸೂಕ್ರ ಕ್ರಮ ಕೈಗೊಳ್ಳಲು ಸೌದಿಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ಸತತ ಒತ್ತಾಯದ ಬಳಿಕ ಶನಿವಾರ ಜೇಮ್ಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಶಾಬಾಸ್ ಖಾನ್ ಬಗ್ಗೆ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ತಾಯಿಯ ಸಂಕಟ ಗೊತ್ತಾಗಿ ಮಕ್ಕಳು ಆತಂಕಿತರಾಗಿದ್ದಾರೆ. ಆದರೆ ಮಾನವ ಕಳ್ಳ ಸಾಗಣೆ ಮಾತ್ರ ಭಾರತದಿಂದ ಬೇರೆ ರಾಷ್ಟ್ರಕ್ಕೆ ನಿರಾಂತಕವಾಗಿ ನಡೆಯುತ್ತಿದೆ.

 

0
Shares
  • Share On Facebook
  • Tweet It


human traffiking


Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Tulunadu News July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Tulunadu News July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search