• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅನ್ಸಾರಿ ಹೆಣ ನೋಡಲು ಪತ್ನಿ ಬಂದರೆ ಅರೆಸ್ಟ್!?

Tulunadu News Posted On March 30, 2024
0


0
Shares
  • Share On Facebook
  • Tweet It

ಗ್ಯಾಂಗ್ ಸ್ಟರ್, ಮಾಫಿಯಾ ಡಾನ್, ಐದು ಬಾರಿಯ ಶಾಸಕ, ಬಿಜೆಪಿ ಶಾಸಕನ ಹತ್ಯೆಯ ಕೇಸಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ಹೃದಯಾಘಾತದಿಂದ ಮೃತನಾಗಿದ್ದು, ಅವನ ಹೆಣ ನೋಡಲು ಪತ್ನಿಯೇ ಬರದ ಸ್ಥಿತಿ ನಿರ್ಮಾಣವಾಗಿದೆ. ಆಕೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು, ಪೊಲೀಸರ ಬಂಧನದ ಭಯದಿಂದ ಆಗಾಗ್ಗೆ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಾಳೆ. ಆಕೆಯ ವಿರುದ್ಧ ಪ್ರಸ್ತುತ 11 ಪ್ರಕರಣಗಳು ಇದ್ದು, ಉತ್ತರಪ್ರದೇಶದ ಲೇಡಿ ಡಾನ್ ಗಳ ಪಟ್ಟಿಯಲ್ಲಿ ಅವಳ ಹೆಸರು ಅಗ್ರಸ್ಥಾನದಲ್ಲಿದೆ.

ಒಂದು ವೇಳೆ ಮುಖ್ತಾರ್ ಅನ್ಸಾರಿ ಪತ್ನಿ ಅಫ್ಸಾ ಅನ್ಸಾರಿ ಅಂತಿಮ ದರ್ಶನಕ್ಕೆ ಆಗಮಿಸಿದ್ದಲ್ಲಿ ಅವಳನ್ನು ಬಂಧಿಸಲು ಯುಪಿ ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಅಫ್ಸಾ ವೇಷಮರೆಸಿಕೊಂಡು ಬರುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಸಾಮಾನ್ಯ ದಿರಿಸಿನಲ್ಲಿಯೂ ಪೊಲೀಸರನ್ನು ಸಜ್ಜುಗೊಳಿಸಲಾಗಿದೆ. 2005 ರಲ್ಲಿ ಮುಖ್ತಾರ್ ಜೈಲಿನಲ್ಲಿ ಫಿಕ್ಸ್ ಆದ ನಂತರ ಪತ್ನಿ ಅಫ್ಸಾ ಆತನ ವಹಿವಾಟುಗಳ ಉಸ್ತುವಾರಿ ನೋಡಲು ಆರಂಭಿಸಿದ್ದಳು. ಆಕೆಯನ್ನು ಆತನ ರಿವಾಲ್ವರಿನ ಕೊಂಡಿ ಎಂದೇ ಕರೆಯಲಾಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರು ವ್ಯವಹಾರಗಳನ್ನು ನೋಡಲು ಆರಂಭಿಸಿದ ಬಳಿಕ ಅಫ್ಸಾ ತೆರೆಗೆ ಸರಿದಳು. ಅವಳ ಮೇಲೆ ಯುಪಿ ಪೊಲೀಸರು 75000 ನಗದು ಘೋಷಿಸಿದ್ದು, ಆಕೆಯ ಸುಳಿವನ್ನು ನೀಡಿದವರಿಗೆ ಅದನ್ನು ಬಹುಮಾನವಾಗಿ ನೀಡಲಾಗುವುದು ಎಂದು ಪ್ರಚಾರ ಮಾಡಲಾಗಿದೆ.

ಮುಖ್ತಾರ್ ಇನ್ನೊಬ್ಬ ಪುತ್ರ ಅಬ್ಬಾಸ್ ಅನ್ಸಾರಿ ಕೂಡ ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಸದ್ಯ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಇನ್ನು ಮುಖ್ತಾರ್ ಸಹೋದರ ಅಫ್ಜಲ್ ಅನ್ಸಾರಿ ಗಾಜಿಪುರದ ಹಾಲಿ ಸಂಸದರಾಗಿದ್ದು, ಸಹೋದರರು ತಮ್ಮ ಮಾಫಿಯಾವನ್ನು ಬಳಸಿ ಅಧಿಕಾರಕ್ಕೆ ಬರುತ್ತಿದ್ದರು. ಇನ್ನು ಮುಖ್ತಾರ್ ಅನ್ಸಾರಿ ಸೊಸೆ ಕೂಡ ಜೈಲಿನಲ್ಲಿದ್ದಾಳೆ. ನಿಖತ್ ಬಾನೋ ತನ್ನ ಗಂಡ ಅಬ್ಬಾಸ್ ನನ್ನು ಜೈಲಿನಿಂದ ಪರಾರಿ ಮಾಡುವ ಷಡ್ಯಂತ್ರವನ್ನು ರಚಿಸಿ ಸಿಕ್ಕಿಬಿದ್ದಿದ್ದಾಳೆ. ಒಟ್ಟಿನಲ್ಲಿ ಈ ಕುಟುಂಬ ಜೈಲಿನಲ್ಲಿ ಮತ್ತು ಪೊಲೀಸರ ನಿಗಾದಲ್ಲಿ ಇದ್ದು, ಮುಖ್ತಾರ್ ಅನ್ಸಾರಿಯ ಸಾವಿನೊಂದಿಗೆ ಈ ಕುಟುಂಬದ ಮಾಫಿಯಾ ಮೇಲಿನ ಹಿಡಿತ ಕೊನೆಗೊಳ್ಳುವ ಲಕ್ಷಣ ಕಂಡುಬಂದಿದೆ.

0
Shares
  • Share On Facebook
  • Tweet It




Trending Now
ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
Tulunadu News February 10, 2026
‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
Tulunadu News February 9, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
  • Popular Posts

    • 1
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 2
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • 3
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search