• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಯಾಕೆ ಪ್ರೆಸ್ ಮೀಟ್ ಮಾಡಲ್ಲ? ಇಲ್ಲಿದೆ ಉತ್ತರ!

Tulunadu News Posted On May 17, 2024
0


0
Shares
  • Share On Facebook
  • Tweet It

ಪ್ರಧಾನಿಯಾಗಿ ಹತ್ತು ವರುಷ ಕಳೆದ ನಂತರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಅನೇಕ ಪ್ರಮುಖ ಮೀಡಿಯಾ ಸಂಸ್ಥೆಗಳಿಗೆ ಮುಕ್ತವಾಗಿ ಸಂದರ್ಶನ ನೀಡಿದ್ದಾರೆ. ಅದರೆ ಇಡೀ ಒಂದು ದಶಕದಲ್ಲಿ ಮೋದಿಯವರು ಒಂದೇ ಒಂದು ಸುದ್ದಿಗೋಷ್ಟಿಯನ್ನು ಕರೆಯದಿರುವುದು ಮಾತ್ರ ಆಶ್ಚರ್ಯ. ಮೋದಿಯವರು ಯಾಕೆ ಸುದ್ದಿಗೋಷ್ಟಿ ಕರೆದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂಬ ಜಿಜ್ಞಾಸೆ ಎಲ್ಲರಲ್ಲಿಯೂ ಇತ್ತು. ಕಾಂಗ್ರೆಸ್ಸಿಗರು ಇದೇ ವಿಷಯವನ್ನು ಹಿಡಿದುಕೊಂಡು ಮೋದಿಯವರನ್ನು ಆಗಾಗ್ಗೆ ಟೀಕೆ ಮಾಡುತ್ತಾ ಮೋದಿಯವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೇ ಸುದ್ದಿಗೋಷ್ಟಿ ಕರೆಯಲು ಹಿಂದೇಟು ಹಾಕುತ್ತಾರೆ ಎಂದು ಹೇಳುತ್ತಾ ಬರುತ್ತಿದ್ದರು.
ಇತ್ತೀಚೆಗೆ ಆಜ್ ತಕ್ ವಾಹಿನಿಯ ಸಂಪಾದಕ/ನಿರೂಪಕರ ತಂಡಕ್ಕೆ ಮೋದಿಯವರು ವಿಶೇಷ ಸಂದರ್ಶನ ನೀಡಿದ ಸಂದರ್ಭದಲ್ಲಿ ನಿರೂಪಕ ರಾಹುಲ್ ಕನ್ವಲ್ ಈ ಪ್ರಶ್ನೆಯನ್ನು ಕೇಳಿದ್ದಾರೆ. ತಾವು ಯಾಕೆ ಸುದ್ದಿಗೋಷ್ಟಿ ಕರೆಯುವುದಿಲ್ಲ ಎನ್ನುವುದನ್ನು ಮೋದಿಯವರು ತಮ್ಮ ಅನುಭವದ ಆಧಾರದ ಮೇಲೆ ವಿವರಿಸಿದ್ದಾರೆ. ಅದರ ಸಾರಾಂಶ ಇಲ್ಲಿದೆ.

“ಹಿಂದೆ ಕೆಲವರು ಮಾಧ್ಯಮಗಳ ಮುಂದೆ ಹೋಗಿ ಪ್ರಚಾರಕ್ಕಾಗಿ ಏಕಪಕ್ಷೀಯ ಸುದ್ದಿಗಳನ್ನು ತಮಗೆ ಬೇಕಾದ ಹಾಗೆ ಹೇಳುತ್ತಿದ್ದರು. ಅದು ಸರಿಯಲ್ಲ. ನಾನು ನನ್ನ ಜನರ ಮನೆಬಾಗಿಲಿಗೆ ಹೋಗಿ ವಾಸ್ತವ ಅರಿಯುತ್ತಾ ಬಂದಿದ್ದೇನೆ. ಪ್ರಸ್ತುತ ಕಾಲಘಟ್ಟದಲ್ಲಿ ನಿಮ್ಮ ವಿಷಯಗಳನ್ನು ಜನರ ಮುಂದೆ ಪ್ರಸ್ತಾಪಿಸಲು ಅನೇಕ ಮಾಧ್ಯಮಗಳಿವೆ. ಇನ್ನು ಸಂಸತ್ತಿನಲ್ಲಿ ನನ್ನ ಹುದ್ದೆಗೆ ಜವಾಬ್ದಾರಿಯುತನಾಗಿದ್ದೇನೆ. ನಾನು ಏನಿದ್ದರೂ ಅಲ್ಲಿಂದಲೇ ಜನರಿಗೆ ಉತ್ತರಿಸುತ್ತೇನೆ. ಅದು ಶ್ರೇಷ್ಟ ಮತ್ತು ಸಮರ್ಪಕ ದಾರಿಯಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದಿಷ್ಟು ಹಳ್ಳಿಗರು ನನ್ನ ಬಳಿ ಬಂದು ನಾವೀಗ ದಿನದ 24 ಗಂಟೆಯೂ ವಿದ್ಯುತ್ ಸಿಗುವಂತಹ ವ್ಯವಸ್ಥೆಯಾಗಿದೆ. ಧನ್ಯವಾದಗಳು ಎಂದರು. ಅದಕ್ಕೆ ನಾನು ಈ ವಿಷಯ ಮೀಡಿಯಾದಲ್ಲಿ ಬಂದೇ ಇಲ್ಲ ಎಂದೆ. ಅದಕ್ಕೆ ಅವರು ಇಂತಹ ವಿಷಯಗಳನ್ನು ಮೀಡಿಯಾದವರು ಎಲ್ಲಿ ಹಾಕುತ್ತಾರೆ ಎಂದರು. ಕೆಲವು ವಿಷಯಗಳು ಮೀಡಿಯಾದಲ್ಲಿ ಬರುವುದಿಲ್ಲ. ಹಾಗಂತ ನಾವು ಉತ್ತಮ ಕೆಲಸಗಳನ್ನು ಮಾಡುವುದು ನಿಲ್ಲಿಸಬಾರದು. ಆ ಹಳ್ಳಿಗಳಿಗೆ ಈಗಲೂ ವಿದ್ಯುತ್ ಇದೆ. ” ಎಂದು ಮೋದಿಯವರು ಸಂದರ್ಶನದಲ್ಲಿ ಹೇಳಿದರು.

ಒಟ್ಟಿನಲ್ಲಿ ಮುಖ್ಯವಾಹಿನಿಗಳ ಮಾಧ್ಯಮಗಳನ್ನು ದೂರ ಇಟ್ಟು ಮೋದಿಯವರು ಪ್ರಧಾನಿಯಾಗಿ ಈಗಾಗಲೇ 10 ವರ್ಷ ಕಳೆದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದಾರೆ. ಇತ್ತೀಚಿಗಷ್ಟೇ ಗುಜರಾತ್ ನ ಗಾಂಧಿ ನಗರದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಮಾಧ್ಯಮಗಳೆದುರು ಒಂದಿಷ್ಟು ಮಾತನಾಡಿದ್ದರು. ಆಗ ಅಮಿತ್ ಶಾ ಕೂಡ ಅವರ ಪಕ್ಕ ನಿಂತಿದ್ದರು.

ಮೋದಿಯವರು ಪ್ರೆಸ್ ಮೀಟ್ ಮಾಡಲಿ, ಬಿಡಲಿ ಅವರು ಯಾವತ್ತೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕೆಲವು ರಾಜಕಾರಣಿಗಳು ಚಲಾವಣೆಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಸುದ್ದಿಗೋಷ್ಟಿ ಮಾಡುತ್ತಾರೆ. ಸುದ್ದಿಗೋಷ್ಟಿ ಮಾಡದೇ ಇದ್ದರೆ ತಾವು ಎಲ್ಲಿಯಾದರೂ ಅಪ್ರಸ್ತುತರಾಗುತ್ತೇವಾ ಎನ್ನುವ ಕಾರಣಕ್ಕೆ ಕೆಲವರು ಏನಾದರೂ ವಿಷಯ ಹಿಡಿದುಕೊಂಡು ಸುದ್ದಿಗೋಷ್ಟಿ ಮಾಡುತ್ತಾರೆ. ಆದರೆ ಮೋದಿ ಹಾಗಲ್ಲ. ಸುದ್ದಿಗೋಷ್ಟಿಯಿಂದ ದೂರ ಇದ್ದುಕೊಂಡೇ ಸುದ್ದಿಯಲ್ಲಿ ಇರುತ್ತಾರೆ.

0
Shares
  • Share On Facebook
  • Tweet It




Trending Now
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
Tulunadu News August 22, 2025
ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
Tulunadu News August 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
  • Popular Posts

    • 1
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 2
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • 3
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 4
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 5
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!

  • Privacy Policy
  • Contact
© Tulunadu Infomedia.

Press enter/return to begin your search