ಆರ್ಎಸ್ಎಸ್ ಮುಖಂಡನ ಕೊಲೆಯ ಮಾಸ್ಟರ್ ಮೈಂಡ್ ಸಿಪಿಐಎಂ ಮುಖಂಡ: ಸಿಬಿಐ
Posted On September 1, 2017

ತಿರುವನಂತಪುರ: ಕೇರಳದ ಆರ್ಎಸ್ಎಸ್ ಮುಖಂಡ ಕತಿರೂರ್ ಮನೋಜ್ ಕೊಲೆ ಪ್ರಕರಣದಲ್ಲಿ ಸಿಪಿಐಎಮ್ನ ಕಣ್ಣೂರ್ ಜಿಲ್ಲಾ ಕಾರ್ಯದರ್ಶಿ ಪಿ.ಜಯರಾಜನ್ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆೆಸ್ಟಿಗೇಷನ್ (ಸಿಬಿಐ) ಚಾರ್ಜ್ಶೀಟ್ ಸಲ್ಲಿಸಿದೆ.
ಮನೋಜ್ ಕೊಲೆಯ ಮಾಸ್ಟರ್ ಮೈಂಡ್ ಪಿ.ಜಯರಾಜನ್ ಎಂದು ಸಿಬಿಐ ಜಾರ್ಜ್ ಶೀಟ್ನಲ್ಲಿ ತಿಳಿಸಿದೆ. ಕಣ್ಣೂರ ಜಿಲ್ಲೆೆಯ ಕತಿರೂರ್ನಲ್ಲಿ 2014 ಸೆಪ್ಟೆೆಂಬರ್ 1 ರಂದು ಮನೋಜ್(42) ಅವರನ್ನು ಸಿಪಿಐಎಂ ಕಾರ್ಯಕರ್ತರು ಕೊಲೆ ಮಾಡಿದ್ದರು ಎಂಬ ಆರೋಪವಿದ್ದು, ಕೊಲೆಯಲ್ಲಿ ಪಿ.ಜಯರಾಜನ್ ಭಾಗಿಯಾಗಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿಸಿಬಿಐ ತಿಳಿಸಿದೆ.
- Advertisement -
Leave A Reply