• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

UK ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನ!

Tulunadu News Posted On July 11, 2024


  • Share On Facebook
  • Tweet It

ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಘಟನೆಯೊಂದು ನಡೆದಿದ್ದು ಅದು ಯುನೈಟೆಡ್ ಕಿಂಗ್ ಡಂ ಸಂಸತ್ತಿನಲ್ಲಿ ಎನ್ನುವ ವಿಷಯ ನಿಮಗೆ ಗೊತ್ತಾದರೆ ನಿಜಕ್ಕೂ ಆಶ್ಚರ್ಯವಾಗಬಹುದು. ಹೌದು, ಹಾಗೆ ಆಗಿದೆ. ಶಿವಾನಿ ರಾಜಾ ಎನ್ನುವ ಮಹಿಳೆ ಸಂಸದೆ ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 29 ವರ್ಷದ ಶಿವಾನಿ ರಾಜಾ ಅವರು ಲೇಸೆಸ್ಟರ್ ಪೂರ್ವ ಕ್ಷೇತ್ರದಿಂದ ಗೆದ್ದಿದ್ದಾರೆ. ಇನ್ನು ವಿಶೇಷ ಎಂದರೆ ಅವರ ಕನಸರವೇಟಿವ್ ಪಕ್ಷ ಕಳೆದ 37 ವರ್ಷಗಳಲ್ಲಿ ಮೊದಲ ಬಾರಿ ಇಲ್ಲಿ ಗೆಲ್ಲುವ ಮೂಲಕ ಬಲಾಢ್ಯ ಲೇಬರ್ ಪಾರ್ಟಿಯ ಭದ್ರಕೋಟೆಯನ್ನು ಚೂರು ಚೂರು ಮಾಡಿದೆ.


ಲೇಸೆಸ್ಟರ್ ಪೂರ್ವವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ, ಆದ್ದರಿಂದ ಭಗವತ್ ಗೀತೆಯ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಶಿವಾನಿ ರಾಜಾ ಹೇಳಿದ್ದಾರೆ.
ಲೇಬರ್ ಪಕ್ಷ ಇಲ್ಲಿಯ ತನಕ ಸೋಲದೇ ಇದ್ದ ಬಲಿಷ್ಟವಾಗಿ ಬೇರೂರಿದ್ದ ಲೇಸೆಸ್ಟರ್ ಪೂರ್ವ ಕ್ಷೇತ್ರವನ್ನು ಗೆದ್ದಿರುವ ಶಿವಾನಿ ರಾಜಾ ಅವರಿಗೆ ಸಿಕ್ಕಿರುವ ಒಟ್ಟು ಮತಗಳು 14,526. ಅವರ ಸಮೀಪದ ಪ್ರತಿಸ್ಪರ್ಧಿ ಲೇಬರ್ ಪಾರ್ಟಿಯ ರಾಜೇಶ್ ಅಗರ್ವಾಲ್ ಅವರಿಗೆ 10,100 ಮತಗಳು ಸಿಕ್ಕಿವೆ. ಇನ್ನು ಲಿಬರಲ್ ಡೆಮಾಕ್ರೆಟ್ ಪಕ್ಷದ ಝಾಪರ್ ಹಕ್ ಅವರಿಗೆ 6329 ಮತಗಳು ಸಿಕ್ಕಿದ್ದು ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.


ಲೇಸಿಸ್ಟರ್ ನಗರದ ಇತಿಹಾಸದಲ್ಲಿ ಶಿವಾನಿ ರಾಜಾ ಅವರ ವಿಜಯ ಬಹುದೊಡ್ಡ ಪರಿಣಾಮವನ್ನು ಬೀರಿದ್ದು, ಈ ಭಾಗದಲ್ಲಿ ಬಹಳ ಸಮಯದಿಂದ ಸನಾತನಿಗಳ ಮತ್ತು ಮುಸಲಿಯರ ನಡುವಿನ ಸಂಘರ್ಷಕ್ಕೆ ಈ ಜಾಗ ಸಾಕ್ಷಿಯಾಗಿತ್ತು.
2022 ರಲ್ಲಿ ಎರಡೂ ಸಮುದಾಯದವರ ನಡುವಿನ ತಿಕ್ಕಾಟಕ್ಕೆ ಯುನೈಟೆಡ್ ಕಿಂಗ್ ಡಂ ವೇದಿಕೆಯಾಗಿತ್ತು. ರಾಣಿಯ ಪಾರ್ಥಿವ ಶರೀರದ ಮೆರವಣಿಗೆಯ ಸಮಯದಲ್ಲಿ ಜೈ ಶ್ರೀ ರಾಮ್ ಎನ್ನುವ ಘೋಷ ವಾಕ್ಯ ಮೊಳಗುತ್ತಿದ್ದಂತೆ ಎರಡೂ ಸಮುದಾಯದವರ ನಡುವೆ ವ್ಯಾಪಕ ಗಲಾಟೆ, ದೊಂಬಿ ನಡೆದಿದ್ದವು. ಇದೆಲ್ಲದರ ನಂತರ ಈಗ ಅದೇ ಲೇಸಿಸ್ಟರ್ ಪೂರ್ವದಲ್ಲಿ ಗುಜರಾತಿ ಮೂಲದ ಹಿಂದೂ ಉದ್ಯಮಿ ಶಿವಾನಿ ರಾಜಾ ಗೆದ್ದು ಚರಿತ್ರೆ ನಿರ್ಮಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Tulunadu News May 23, 2025
ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
Tulunadu News May 23, 2025
Leave A Reply

  • Recent Posts

    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
  • Popular Posts

    • 1
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 2
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 3
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 4
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 5
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search