• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

UK ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನ!

Tulunadu News Posted On July 11, 2024
0


0
Shares
  • Share On Facebook
  • Tweet It

ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಘಟನೆಯೊಂದು ನಡೆದಿದ್ದು ಅದು ಯುನೈಟೆಡ್ ಕಿಂಗ್ ಡಂ ಸಂಸತ್ತಿನಲ್ಲಿ ಎನ್ನುವ ವಿಷಯ ನಿಮಗೆ ಗೊತ್ತಾದರೆ ನಿಜಕ್ಕೂ ಆಶ್ಚರ್ಯವಾಗಬಹುದು. ಹೌದು, ಹಾಗೆ ಆಗಿದೆ. ಶಿವಾನಿ ರಾಜಾ ಎನ್ನುವ ಮಹಿಳೆ ಸಂಸದೆ ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 29 ವರ್ಷದ ಶಿವಾನಿ ರಾಜಾ ಅವರು ಲೇಸೆಸ್ಟರ್ ಪೂರ್ವ ಕ್ಷೇತ್ರದಿಂದ ಗೆದ್ದಿದ್ದಾರೆ. ಇನ್ನು ವಿಶೇಷ ಎಂದರೆ ಅವರ ಕನಸರವೇಟಿವ್ ಪಕ್ಷ ಕಳೆದ 37 ವರ್ಷಗಳಲ್ಲಿ ಮೊದಲ ಬಾರಿ ಇಲ್ಲಿ ಗೆಲ್ಲುವ ಮೂಲಕ ಬಲಾಢ್ಯ ಲೇಬರ್ ಪಾರ್ಟಿಯ ಭದ್ರಕೋಟೆಯನ್ನು ಚೂರು ಚೂರು ಮಾಡಿದೆ.


ಲೇಸೆಸ್ಟರ್ ಪೂರ್ವವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ, ಆದ್ದರಿಂದ ಭಗವತ್ ಗೀತೆಯ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಶಿವಾನಿ ರಾಜಾ ಹೇಳಿದ್ದಾರೆ.
ಲೇಬರ್ ಪಕ್ಷ ಇಲ್ಲಿಯ ತನಕ ಸೋಲದೇ ಇದ್ದ ಬಲಿಷ್ಟವಾಗಿ ಬೇರೂರಿದ್ದ ಲೇಸೆಸ್ಟರ್ ಪೂರ್ವ ಕ್ಷೇತ್ರವನ್ನು ಗೆದ್ದಿರುವ ಶಿವಾನಿ ರಾಜಾ ಅವರಿಗೆ ಸಿಕ್ಕಿರುವ ಒಟ್ಟು ಮತಗಳು 14,526. ಅವರ ಸಮೀಪದ ಪ್ರತಿಸ್ಪರ್ಧಿ ಲೇಬರ್ ಪಾರ್ಟಿಯ ರಾಜೇಶ್ ಅಗರ್ವಾಲ್ ಅವರಿಗೆ 10,100 ಮತಗಳು ಸಿಕ್ಕಿವೆ. ಇನ್ನು ಲಿಬರಲ್ ಡೆಮಾಕ್ರೆಟ್ ಪಕ್ಷದ ಝಾಪರ್ ಹಕ್ ಅವರಿಗೆ 6329 ಮತಗಳು ಸಿಕ್ಕಿದ್ದು ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.


ಲೇಸಿಸ್ಟರ್ ನಗರದ ಇತಿಹಾಸದಲ್ಲಿ ಶಿವಾನಿ ರಾಜಾ ಅವರ ವಿಜಯ ಬಹುದೊಡ್ಡ ಪರಿಣಾಮವನ್ನು ಬೀರಿದ್ದು, ಈ ಭಾಗದಲ್ಲಿ ಬಹಳ ಸಮಯದಿಂದ ಸನಾತನಿಗಳ ಮತ್ತು ಮುಸಲಿಯರ ನಡುವಿನ ಸಂಘರ್ಷಕ್ಕೆ ಈ ಜಾಗ ಸಾಕ್ಷಿಯಾಗಿತ್ತು.
2022 ರಲ್ಲಿ ಎರಡೂ ಸಮುದಾಯದವರ ನಡುವಿನ ತಿಕ್ಕಾಟಕ್ಕೆ ಯುನೈಟೆಡ್ ಕಿಂಗ್ ಡಂ ವೇದಿಕೆಯಾಗಿತ್ತು. ರಾಣಿಯ ಪಾರ್ಥಿವ ಶರೀರದ ಮೆರವಣಿಗೆಯ ಸಮಯದಲ್ಲಿ ಜೈ ಶ್ರೀ ರಾಮ್ ಎನ್ನುವ ಘೋಷ ವಾಕ್ಯ ಮೊಳಗುತ್ತಿದ್ದಂತೆ ಎರಡೂ ಸಮುದಾಯದವರ ನಡುವೆ ವ್ಯಾಪಕ ಗಲಾಟೆ, ದೊಂಬಿ ನಡೆದಿದ್ದವು. ಇದೆಲ್ಲದರ ನಂತರ ಈಗ ಅದೇ ಲೇಸಿಸ್ಟರ್ ಪೂರ್ವದಲ್ಲಿ ಗುಜರಾತಿ ಮೂಲದ ಹಿಂದೂ ಉದ್ಯಮಿ ಶಿವಾನಿ ರಾಜಾ ಗೆದ್ದು ಚರಿತ್ರೆ ನಿರ್ಮಿಸಿದ್ದಾರೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search