• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

20 ವರ್ಷದ ಯುವತಿಯ ಬರ್ಬರ ಹತ್ಯೆ… ಪ್ರಿಯತಮನ ಮೇಲೆ ಶಂಕೆ..

Tulunadu News Posted On July 30, 2024
0


0
Shares
  • Share On Facebook
  • Tweet It

ಅವಳ ಹೆಸರು ಯಶಶ್ರೀ ಸಿಂಧೆ. ಮುಂಬೈಯಲ್ಲಿ ವಾಸ. ಕಳೆದ ಶನಿವಾರ ಮನೆಯಲ್ಲಿ ಗೆಳೆಯರ ಭೇಟಿಗೆಂದು ತೆರಳಿದವಳು ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ದಿನಗಳ ನಂತರ ಆಕೆಯ ಮೃತದೇಹ ನವಿ ಮುಂಬೈಯ ಉರನ್ ರೈಲ್ವೆ ನಿಲ್ದಾಣದ ಸನಿಹದಲ್ಲಿ ಪೊದೆಗಳ ರಾಶಿಗಳ ನಡುವೆ ಸಿಕ್ಕಿದೆ. ದೇಹದ ಮೇಲೆ ಹಲವು ಕಡೆ ಗಾಯಗಳ ಗುರುತು ಮತ್ತು ಆಯುಧದಿಂದ ಇರಿದ ಚಿನ್ನೆಗಳು ಪತ್ತೆಯಾಗಿವೆ. ಬೀದಿ ನಾಯಿಗಳು ದೇಹವನ್ನು ಅಲ್ಲಲ್ಲಿ ಸೀಳಿದ್ದು ದೇಹ ಭಯಾನಕವಾಗಿ ಇದೆ.

ಅದು ಜುಲೈ ತಿಂಗಳ 25 ನೇ ದಿನ. ಸುಮಾರು ಬೆಳಿಗ್ಗೆ 10.30 ಗಂಟೆಯ ಸಮಯ. ಯಶಶ್ರೀ ಸಿಂಧೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಪ್ರಾಥಮಿಕ ವರದಿಗಳ ಪ್ರಕಾರ ಅವಳ ಮೊಬೈಲ್ ನಲ್ಲಿ ದೌಡ್ ಶೇಖ್ ಎನ್ನುವ ವ್ಯಕ್ತಿಯೊಂದಿಗೆ ಬಿರುಸಿನ ಮಾತುಕತೆಗಳು ನಡೆದಿರುವುದು ಪತ್ತೆಯಾಗಿದೆ. ಅವನ ಮೂಲವನ್ನು ಪತ್ತೆ ಹಚ್ಚಿರುವ ಪೊಲೀಸರು ಆತ ಕರ್ನಾಟಕ ಮೂಲದ ದೌಡ್ ಶೇಖ್ ಎನ್ನುವುದು ಗೊತ್ತಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮೃತಳ ದೇಹದ ಮೇಲೆ ದೌಡ್ ಎನ್ನುವ ಟ್ಯಾಟೂ ಕೂಡ ಕಂಡುಬಂದಿದೆ.

ಮಾಹಿತಿಯ ಪ್ರಕಾರ ” ಮೃತ ಯಶಶ್ರೀ ಈ ದೌಡ್ ಶೇಖ್ ನೊಂದಿಗೆ 2019 ರಿಂದಲೇ ಗೆಳೆತನದಲ್ಲಿದ್ದಳು. ಆದರೆ ಈ ಸಂಬಂಧವನ್ನು ಆಕೆಯ ಮನೆಯವರು ಒಪ್ಪಿರಲಿಲ್ಲ. ಕೆಲವು ಕಾಲದ ನಂತರ ಶೇಖ್ ತನ್ನ ಮೂಲ ಕರ್ನಾಟಕಕ್ಕೆ ಹಿಂತಿರುಗಿದ್ದ. ಅದಕ್ಕಿಂತ ಮೊದಲು ಇವನು ಮುಂಬೈಯ ಉರನ್ ನಲ್ಲಿ ವಾಸವಿದ್ದ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಇತ್ತೀಚೆಗೆ ಆತ ಉರನ್ ಗೆ ಮತ್ತೆ ವಾಪಾಸಾಗಿದ್ದ. ಅದರ ಕಾರಣವನ್ನು ತಿಳಿಯಬೇಕಿದೆ. ಸದ್ಯ ಇದನ್ನು ಯಾವುದೇ ಕೋಮಿನ ಆಯಾಮದಲ್ಲಿ ನೋಡಬಾರದಾಗಿ ವಿನಂತಿ. ನಾವು ಎಲ್ಲಾ ದೃಷ್ಟಿಕೋನದಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆ. ಅದಕ್ಕಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದೇವೆ. ಶೀಘ್ರ ಆರೋಪಿಯನ್ನು ಬಂಧಿಸುತ್ತೇವೆ. ಸದ್ಯ ಆಕೆಯ ಪ್ರಿಯಕರನ ಮೇಲೆ ಸಂಶಯ ಇದೆ” ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ವಿವೇಕ್ ಪಾನ್ಸರೆ ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search