• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

20 ವರ್ಷದ ಯುವತಿಯ ಬರ್ಬರ ಹತ್ಯೆ… ಪ್ರಿಯತಮನ ಮೇಲೆ ಶಂಕೆ..

Tulunadu News Posted On July 30, 2024
0


0
Shares
  • Share On Facebook
  • Tweet It

ಅವಳ ಹೆಸರು ಯಶಶ್ರೀ ಸಿಂಧೆ. ಮುಂಬೈಯಲ್ಲಿ ವಾಸ. ಕಳೆದ ಶನಿವಾರ ಮನೆಯಲ್ಲಿ ಗೆಳೆಯರ ಭೇಟಿಗೆಂದು ತೆರಳಿದವಳು ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ದಿನಗಳ ನಂತರ ಆಕೆಯ ಮೃತದೇಹ ನವಿ ಮುಂಬೈಯ ಉರನ್ ರೈಲ್ವೆ ನಿಲ್ದಾಣದ ಸನಿಹದಲ್ಲಿ ಪೊದೆಗಳ ರಾಶಿಗಳ ನಡುವೆ ಸಿಕ್ಕಿದೆ. ದೇಹದ ಮೇಲೆ ಹಲವು ಕಡೆ ಗಾಯಗಳ ಗುರುತು ಮತ್ತು ಆಯುಧದಿಂದ ಇರಿದ ಚಿನ್ನೆಗಳು ಪತ್ತೆಯಾಗಿವೆ. ಬೀದಿ ನಾಯಿಗಳು ದೇಹವನ್ನು ಅಲ್ಲಲ್ಲಿ ಸೀಳಿದ್ದು ದೇಹ ಭಯಾನಕವಾಗಿ ಇದೆ.

ಅದು ಜುಲೈ ತಿಂಗಳ 25 ನೇ ದಿನ. ಸುಮಾರು ಬೆಳಿಗ್ಗೆ 10.30 ಗಂಟೆಯ ಸಮಯ. ಯಶಶ್ರೀ ಸಿಂಧೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಪ್ರಾಥಮಿಕ ವರದಿಗಳ ಪ್ರಕಾರ ಅವಳ ಮೊಬೈಲ್ ನಲ್ಲಿ ದೌಡ್ ಶೇಖ್ ಎನ್ನುವ ವ್ಯಕ್ತಿಯೊಂದಿಗೆ ಬಿರುಸಿನ ಮಾತುಕತೆಗಳು ನಡೆದಿರುವುದು ಪತ್ತೆಯಾಗಿದೆ. ಅವನ ಮೂಲವನ್ನು ಪತ್ತೆ ಹಚ್ಚಿರುವ ಪೊಲೀಸರು ಆತ ಕರ್ನಾಟಕ ಮೂಲದ ದೌಡ್ ಶೇಖ್ ಎನ್ನುವುದು ಗೊತ್ತಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮೃತಳ ದೇಹದ ಮೇಲೆ ದೌಡ್ ಎನ್ನುವ ಟ್ಯಾಟೂ ಕೂಡ ಕಂಡುಬಂದಿದೆ.

ಮಾಹಿತಿಯ ಪ್ರಕಾರ ” ಮೃತ ಯಶಶ್ರೀ ಈ ದೌಡ್ ಶೇಖ್ ನೊಂದಿಗೆ 2019 ರಿಂದಲೇ ಗೆಳೆತನದಲ್ಲಿದ್ದಳು. ಆದರೆ ಈ ಸಂಬಂಧವನ್ನು ಆಕೆಯ ಮನೆಯವರು ಒಪ್ಪಿರಲಿಲ್ಲ. ಕೆಲವು ಕಾಲದ ನಂತರ ಶೇಖ್ ತನ್ನ ಮೂಲ ಕರ್ನಾಟಕಕ್ಕೆ ಹಿಂತಿರುಗಿದ್ದ. ಅದಕ್ಕಿಂತ ಮೊದಲು ಇವನು ಮುಂಬೈಯ ಉರನ್ ನಲ್ಲಿ ವಾಸವಿದ್ದ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಇತ್ತೀಚೆಗೆ ಆತ ಉರನ್ ಗೆ ಮತ್ತೆ ವಾಪಾಸಾಗಿದ್ದ. ಅದರ ಕಾರಣವನ್ನು ತಿಳಿಯಬೇಕಿದೆ. ಸದ್ಯ ಇದನ್ನು ಯಾವುದೇ ಕೋಮಿನ ಆಯಾಮದಲ್ಲಿ ನೋಡಬಾರದಾಗಿ ವಿನಂತಿ. ನಾವು ಎಲ್ಲಾ ದೃಷ್ಟಿಕೋನದಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆ. ಅದಕ್ಕಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದೇವೆ. ಶೀಘ್ರ ಆರೋಪಿಯನ್ನು ಬಂಧಿಸುತ್ತೇವೆ. ಸದ್ಯ ಆಕೆಯ ಪ್ರಿಯಕರನ ಮೇಲೆ ಸಂಶಯ ಇದೆ” ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ವಿವೇಕ್ ಪಾನ್ಸರೆ ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search