• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

7 ತಿಂಗಳ ಗರ್ಭೀಣಿಗೆ ಒಲಿಂಪಿಕ್ಸ್ ಗೆಲುವು!

Tulunadu News Posted On August 1, 2024
0


0
Shares
  • Share On Facebook
  • Tweet It

ಈಜಿಪ್ಟ್ ರಾಷ್ಟ್ರದ ನಡಾ ಹಫೀಜ್ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಯುಎಸ್ ಎ ಒಕ್ಕೂಟದ ಎಲಿಜಬೆತ್ ಟಾರ್ಟಾಕೊವಸ್ಕಿ ಅವರನ್ನು ಮಹಿಳಾ ಕತ್ತಿವರಸೆ ವಿಭಾಗದಲ್ಲಿ ಸೋಲಿಸಿದ ಸುದ್ದಿ ಪ್ರಸಾರಗೊಂಡಾಗ ಅದರಲ್ಲಿ ಏನು ವಿಶೇಷತೆ ಇದೆ ಎಂದು ನಿಮಗೆ ಅನಿಸಬಹುದು. ಆದರೆ ಪಂದ್ಯ ಮುಗಿದ ಬಳಿಕ ವಿಜೇತೆ ನಡಾ ಹಫೀಜ್ ತನ್ನ ಇನ್ಟಾಗ್ರಾಂನಲ್ಲಿ ಹೇಳಿದ್ಳು ಓದಿದ ನಂತರ ಜಗತ್ತೆ ಒಮ್ಮೆ ಬೆಚ್ಚಿಬಿದ್ದಿತ್ತು. ” ಈ ಪಂದ್ಯ ಆಡುವಾಗ ನಾನು ಗರ್ಭದಲ್ಲಿ ಪುಟ್ಟ ಒಲಿಂಪಿಯನ್ ಹೊತ್ತುಕೊಂಡು ಆಡಿದೆ” ಎಂದು ಆಕೆ ಹೇಳಿದ್ದು ಕೇಳಿ ಎಲ್ಲರೂ ಮೂಕವಿಸ್ಮಿತರಾದರು.

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಕೆ ಈಗ ಏಳು ತಿಂಗಳ ಗರ್ಭೀಣಿ. ನಡಾ ಹಫೀಜ್ ಅವರಿಗೆ ಈಗ 26 ವರ್ಷ ವಯಸ್ಸು. ನಾನು ಆಟದ ಅಂಗಣದಲ್ಲಿ ಸ್ಪರ್ಧಿಸುವಾಗ ನನ್ನ ಜೊತೆ ಒಟ್ಟು ಮೂರು ಜನ ಇದ್ದರು. ಒಬ್ಬಳು ನಾನು, ಇನ್ನೊಬ್ಬಳು ಸ್ಪರ್ಧಿ, ಮತ್ತೊಂದು ಜೀವ ಹೊಟ್ಟೆಯಲ್ಲಿತ್ತು ಎಂದು ಅವಳು ಬರೆದಿದ್ದಾಳೆ.

” ನನ್ನ ಮಗು ಮತ್ತು ನನಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸುವಾಗ ಸಮಾನವಾದ ಸವಾಲುಗಳು ಇದ್ದವು. ಅದು ದೈಹಿಕ ಮತ್ತು ಭಾವನಾತ್ಮಕ ಏರಡೂ ಆಗಿದ್ದಿರಬಹುದು. ಆದರೆ ಬದುಕಿನ ಸಮಾನತೆಯನ್ನು ಮತ್ತು ಕ್ರೀಡೆಯ ಉತ್ಸಾಹವನ್ನು ಕಾಪಾಡಿಕೊಳ್ಳಲು ಶ್ರಮ ಅಗತ್ಯ ಇತ್ತು” ಎಂದು ಅವರು ಬರೆದಿದ್ದಾರೆ. ” ಮೊದಲ ಪಂದ್ಯ ಗೆದ್ದಾಗ ಬಹಳ ಹೆಮ್ಮೆ ಅನಿಸ್ತು. ಯಾಕೆಂದರೆ ನಾನು ಅಂತಿಮ 16 ರಲ್ಲಿದ್ದೆ” ಎಂದು ನಡಾ ಹೇಳಿದ್ದಾರೆ.
ಹಫೀಜ್ ಮುಂದುವರೆದು ಬರೆಯುತ್ತಾ ” ನಾನು ಬಹಳ ಅದೃಷ್ಟವಂತೆ. ಗಂಡ, ಕುಟುಂಬದ ಪ್ರೀತಿ ಸಿಕ್ಕಿದೆ. ಈ ಬಾರಿಯ ಒಲಿಂಪಿಕ್ಸ್ ತುಂಬಾ ವಿಭಿನ್ನವಾಗಿತ್ತು. ಈ ಬಾರಿ ಒಲಿಂಪಿಯನ್ ಹೊಟ್ಟೆಯಲ್ಲಿಯೂ ಇದ್ದ ಕಾರಣ ಆ ಖುಷಿಯೇ ಬೇರೆ”

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಗ್ರಾಮದಲ್ಲಿ ಆಯೋಜಕರು ನರ್ಸರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದು, ಅಲ್ಲಿ ತಾಯಂದಿರು ನಮ್ಮ ಮಕ್ಕಳನ್ನು ಬಿಟ್ಟು ನಿಶ್ಚಿಂತೆಯಾಗಿ ಮೈದಾನಕ್ಕೆ ತೆರಳಬಹುದು. ಈ ಮೂಲಕ ಸ್ಪರ್ಧೆಯಲ್ಲಿ ಸಮಯ ಕಳೆಯುವಿಕೆ ಮತ್ತು ಮಕ್ಕಳೊಂದಿಗೆ ಉಳಿದ ಸಮಯ ವಿನಿಯೋಗಿಸುವಿಕೆ ಬಹಳ ಉತ್ತಮವಾಗಿರುತ್ತದೆ. ಮುಂದಿನ ಬಾರಿ ಹಫೀಜಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವಾಗ ಅವಳ ಮಗು ನಾಲ್ಕು ವರ್ಷ ಆಗಲಿದ್ದು, ಒಲಿಂಪಿಕ್ಸ್ ನರ್ಸರಿಯಲ್ಲಿ ಬಿಡಬಹುದು.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search