• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಯುವರಾಜ್ ಸಿಂಗ್ ಜೀವನ ಚರಿತ್ರೆಯ ಸಿನೆಮಾದಲ್ಲಿ ಅವರ ಪಾತ್ರಕ್ಕೆ ಯಾರು?

Tulunadu News Posted On August 21, 2024
0


0
Shares
  • Share On Facebook
  • Tweet It

2007 ರ ಟಿ20 ವಿಶ್ವಕಪ್ ಮತ್ತು 2011 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಕ್ಯಾನ್ಸರ್ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಟಿ ಸಿರೀಸ್ ನಿರ್ಮಾಣ ಸಂಸ್ಥೆ ಯುವರಾಜ ಸಿಂಗ್ ಜೀವನ ಚರಿತ್ರೆ ಮೇಲೆ ಸಿನೆಮಾ ಮಾಡಲು ತಯಾರಿ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಯುವಿ ತಾಯಿ ಶಬನಮ್ ಗಿಲ್ ” ಇದು ನಮ್ಮ ಪಾಲಿಗೆ ವಿಶೇಷವಾಗಿ ಯುವಿ ಪಾಲಿಗೆ ದೊಡ್ಡ ವಿಷಯ. ಇದೊಂದು ಸ್ಫೂರ್ತಿದಾಯಕ ಕಥೆ. ಇದು ಯುವಜನಾಂಗಕ್ಕೆ ಯಶಸ್ಸು ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕೆನ್ನುವುದರ ಕುರಿತು ಹೇಳಿಕೊಡುತ್ತದೆ. ಜೀವನ ತಳ ತಲುಪಿದಾಗ ಅಲ್ಲಿಂದ ಮೇಲೆ ಚಿಮ್ಮಿ ಯಶಸ್ಸನ್ನು ತಲುಪುದರ ಬಗ್ಗೆ ಯುವಿ ಜೀವನವೇ ಸಾಕ್ಷಿ. ಒಬ್ಬಳು ತಾಯಿಯಾಗಿ ನಾನು ಇದನ್ನು ಹೆಮ್ಮೆ ಪಡುತ್ತೇನೆ” ಎಂದು ಹೇಳಿದ್ದಾರೆ.
ಚಂಢಿಗಡ ಮೂಲದ ಯುವರಾಜ್ ಸಿಂಗ್ ಭಾರತದ ಪರ 40 ಟೆಸ್ಟ್, 304 ಏಕದಿನ, 58 ಟಿ20 ಪಂದ್ಯಗಳನ್ನು ಆಡಿದ್ದಾರೆ. 2000 ರ ಅಕ್ಟೋಬರ್ 3 ರಂದು ಭಾರತದ ಪರ ಚೊಚ್ಚಲ ಪಂದ್ಯ ಆಡಿದ ಯುವಿಗೆ ಈಗ 42 ವರ್ಷ ವಯಸ್ಸು. 2007 ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಒವರಿನಲ್ಲಿ ಆರು ಸಿಕ್ಸ್ ಗಳನ್ನು ಬಾರಿಸಿರುವ ಈ ಪ್ರತಿಭಾವಂತ ಆಲ್ ರೌಂಡರ್ 2011 ರ ವಿಶ್ವಕಪ್ ಪಂದ್ಯಾಟದಲ್ಲಿ ಒಟ್ಟು 362 ರನ್ ಹೊಡೆದು 15 ವಿಕೆಟ್ ಕಬಳಿಸಿರುವುದು ಅವರ ಸಾಮರ್ತ್ಯಕ್ಕೆ ಸಾಕ್ಷಿ. 2011 ರ ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ಯುವಿ ಆ ಕಾಯಿಲೆಯಿಂದ ಗುಣಮುಖರಾಗಿ ಮತ್ತೆ ಭಾರತ ತಂಡಕ್ಕೆ ಮರಳುತ್ತಾರೆ. ಅದು ನಿಜಕ್ಕೂ ಅದ್ಭುತ ಸಾಧನೆ. 2019 ನೇ ಇಸವಿಯಲ್ಲಿ ಕ್ರಿಕೆಟ್ ವೃತ್ತಿಗೆ ಗುಡ್ ಬಾಯ್ ಹೇಳಿದ ಯುವಿ ಭಾರತ ತಂಡದಲ್ಲಿ ಕಮ್ ಬ್ಯಾಕ್ ಮಾಡಿದ ಕಥೆಯೇ ಹಲವರಿಗೆ ಸ್ಫೂರ್ತಿ.
ಯುವರಾಜ್ ಸಿಂಗ್ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರ ತಾಯಿ ಶಬನಂ “ಯುವಿ ನಿತ್ಯ ಸೈಕಲ್ಲಿನಲ್ಲಿ ಮನೆಯಿಂದ ಸ್ಟೇಡಿಯಂಗೆ ಹೋಗಿ ಬರುತ್ತಿದ್ದ. ಕ್ರಿಕೆಟ್ ಅವರ ಜೀವನದ ಭಾಗವೇ ಆಗಿತ್ತು. ವಿಶ್ವಕಪ್ ಗೆದ್ದಾಗ ಅದು ನಮಗೆಲ್ಲರಿಗೂ ಮರೆಯಲಾರದ ಅದ್ಭುತ ಕ್ಷಣಗಳು. ಅವನಲ್ಲಿ ಯಾವಾಗಲೂ ಫೈಟಿಂಗ್ ಸ್ಪಿರಿಟ್ ಇತ್ತು. ಅವನು ಯಶಸ್ಸು ಗಳಿಸಿದಾಗಲೂ, ಸೋತಾಗಲು ಸಕರಾತ್ಮಕ ಮನಸ್ಥಿತಿಯನ್ನೇ ಹೊಂದಿದ್ದ. ಯಾವಾಗಲೂ ಶ್ರಮ ವಹಿಸಿ ಆಡಿ ಮತ್ತೇ ಶಕ್ತಿಯುತವಾಗಿ ಹಿಂತಿರುಗಬೇಕೆಂಬುದು ಅವನ ಗುರಿಯಾಗಿರುತ್ತಿತ್ತು”
ಮಾಜಿ ಟೀಮ್ ಭಾರತ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹಾಗೂ ಮಹಿಳಾ ಕ್ರಿಕೆಟ್ ತಂಡದ ಕಪ್ತಾನೆ ಮಿಥಾಲಿ ರಾಜ್ ಅವರ ಜೀವನಕಥೆ ಸಿನೆಮಾವಾಗಿ ಮೂಡಿಬಂದಿದೆ. ಈ ಹಂತದಲ್ಲಿ ನಿರ್ಮಾಪಕರಾದ ಭೂಷಣ್ ಹಾಗೂ ರವಿಯವರು ತನ್ನ ಜೀವನದ ಕಥೆಯನ್ನು ಸಿನೆಮಾ ಮಾಡಲು ಮುಂದೆ ಬಂದಿರುವುದು ಖುಷಿಯಾಗಿದೆ. ಈ ಮೂಲಕ ನನ್ನ ಬದುಕು ಪ್ರಪಂಚಾದ್ಯಂತ ಇರುವ ಅಭಿಮಾನಿಗಳಿಗೆ ಗೊತ್ತಾಗುತ್ತದೆ. ಕ್ರಿಕೆಟ್ ನನ್ನ ಶಕ್ತಿಯಾಗಿತ್ತು ಎಂದು ಯುವರಾಜ್ ಹೇಳಿದ್ದಾರೆ. ಒಟ್ಟಿನಲ್ಲಿ ಯುವಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಮತ್ತು ಈ ಸಿನೆಮಾದಲ್ಲಿ ಯುವರಾಜ್ ಸಿಂಗ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಾರಾ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ

0
Shares
  • Share On Facebook
  • Tweet It




Trending Now
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
Tulunadu News August 22, 2025
ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
Tulunadu News August 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
  • Popular Posts

    • 1
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 2
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • 3
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 4
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 5
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!

  • Privacy Policy
  • Contact
© Tulunadu Infomedia.

Press enter/return to begin your search