• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಹೈದ್ರಾಬಾದಿನಲ್ಲಿ ಪತ್ತೆ!

Tulunadu News Posted On August 26, 2024
0


0
Shares
  • Share On Facebook
  • Tweet It

ಹೈದ್ರಾಬಾದಿನ ಪೊಲೀಸ್ ಕಮೀಷನರ್ ಅವರ ವಿಶೇಷ ಟಾಸ್ಕ್ ಪೋರ್ಸ್ ತಂಡ ಹೈದ್ರಾಬಾದಿನ ದಕ್ಷಿಣ – ಪೂರ್ವ ವಲಯದಲ್ಲಿ ಆಹಾರ ಸುರಕ್ಷತಾ ನಿಗಮದ ಅಧಿಕಾರಿಗಳೊಂದಿಗೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಹಳ ಮಹತ್ತರವಾದ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ಕಾಲೋನಿಯ ತಾರನಕ ಎಂಬ ಏರಿಯಾದಲ್ಲಿ ನಡೆದ ಈ ದಾಳಿಯಲ್ಲಿ 5,280 ಕೆಜಿ ಅವಧಿ ಮೀರಿದ ಹಾಲಿನ ಪೌಡರ್ ಗಳ ಪೊಟ್ಟಣಗಳನ್ನು ಪತ್ತೆ ಮಾಡಿದ್ದಾರೆ. ಇದು ಸುಮಾರು 11.5 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳಾಗಿದ್ದು, ಈ ಪ್ರಕರಣದಲ್ಲಿ ಚಿತ್ತಬೊಯಿನ ದಾಮೋದರ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಹಾಲಿನ ಪೌಡರ್ ಕರ್ನಾಟಕದ ಕ್ಷೀರ ಭಾಗ್ಯ ಯೋಜನೆಯಲ್ಲಿ ಹಂಚಬೇಕಾಗಿತ್ತು. ಇದರ ಪ್ಯಾಕೇಟ್ ಗಳ ಮೇಲೆ ” ನಾಟ್ ಫಾರ್ ಸೇಲ್” ಎಂದು ಬರೆಯಲಾಗಿದೆ. ಅದನ್ನು ಮಾರುವುದು ಕಾನೂನು ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಮಾರಲಾಗುತ್ತಿರುವುದನ್ನು ಗಮನಿಸುವಾಗ ಇದರ ಹಿಂದೆ ಬಹಳ ದೊಡ್ಡ racket ಇರುವ ಸಂಶಯ ಮೂಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟಾಸ್ಕ್ ಪೋರ್ಸ್ ಡಿಸಿಪಿ ವೈ ವಿ ಎಸ್ ಸುಧೀಂದ್ರ ” ಆರೋಪಿ ಸಿಕಂದರಾಬಾದಿನ ಬೋಳಕಪುರದ ನಿವಾಸಿಯಾಗಿದ್ದು, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಕರ್ನಾಟಕದ ಶೋಲಾಪುರದ ರವಿಕಿರಣ್ ಅವರಿಂದ ಖರೀದಿಸುತ್ತಿದ್ದ. ಇದನ್ನು ಪ್ರತಿ ಕೆಜಿಗೆ 210 ರೂಪಾಯಿಯಂತೆ ಮಾರುತ್ತಿದ್ದ. ಅದರ ಮೇಲೆ ಮಾರುವಂತಿಲ್ಲ ಎನ್ನುವ ಲೇಬಲ್ ಇದ್ದರೂ ಜನರು ಅದನ್ನು ಖರೀದಿಸುತ್ತಿದ್ದರು. ಪನ್ನೀರ್, ಸ್ಪೀಟ್ಸ್ ಮತ್ತು ರೋಡ್ ಸೈಡ್ ಟೀ ಮಾರುವವರು ಇವನಿಂದ ಈ ಅವಧಿ ಮೀರಿದ ಹಾಲಿನ ಪೌಡರ್ ಖರೀದಿಸುತ್ತಿದ್ದರು. ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಅವಧಿ ಮೀರಿದ ಬಳಿಕ ಅಲ್ಲಿಗೆ ಹೋಗಿ ಹೋಯಿತು ಎನ್ನುವುದರ ತನಿಖೆ ನಡೆಯಬೇಕಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ, 2009 ಈ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search