• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಹೈದ್ರಾಬಾದಿನಲ್ಲಿ ಪತ್ತೆ!

Tulunadu News Posted On August 26, 2024
0


0
Shares
  • Share On Facebook
  • Tweet It

ಹೈದ್ರಾಬಾದಿನ ಪೊಲೀಸ್ ಕಮೀಷನರ್ ಅವರ ವಿಶೇಷ ಟಾಸ್ಕ್ ಪೋರ್ಸ್ ತಂಡ ಹೈದ್ರಾಬಾದಿನ ದಕ್ಷಿಣ – ಪೂರ್ವ ವಲಯದಲ್ಲಿ ಆಹಾರ ಸುರಕ್ಷತಾ ನಿಗಮದ ಅಧಿಕಾರಿಗಳೊಂದಿಗೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಹಳ ಮಹತ್ತರವಾದ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ಕಾಲೋನಿಯ ತಾರನಕ ಎಂಬ ಏರಿಯಾದಲ್ಲಿ ನಡೆದ ಈ ದಾಳಿಯಲ್ಲಿ 5,280 ಕೆಜಿ ಅವಧಿ ಮೀರಿದ ಹಾಲಿನ ಪೌಡರ್ ಗಳ ಪೊಟ್ಟಣಗಳನ್ನು ಪತ್ತೆ ಮಾಡಿದ್ದಾರೆ. ಇದು ಸುಮಾರು 11.5 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳಾಗಿದ್ದು, ಈ ಪ್ರಕರಣದಲ್ಲಿ ಚಿತ್ತಬೊಯಿನ ದಾಮೋದರ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಹಾಲಿನ ಪೌಡರ್ ಕರ್ನಾಟಕದ ಕ್ಷೀರ ಭಾಗ್ಯ ಯೋಜನೆಯಲ್ಲಿ ಹಂಚಬೇಕಾಗಿತ್ತು. ಇದರ ಪ್ಯಾಕೇಟ್ ಗಳ ಮೇಲೆ ” ನಾಟ್ ಫಾರ್ ಸೇಲ್” ಎಂದು ಬರೆಯಲಾಗಿದೆ. ಅದನ್ನು ಮಾರುವುದು ಕಾನೂನು ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಮಾರಲಾಗುತ್ತಿರುವುದನ್ನು ಗಮನಿಸುವಾಗ ಇದರ ಹಿಂದೆ ಬಹಳ ದೊಡ್ಡ racket ಇರುವ ಸಂಶಯ ಮೂಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟಾಸ್ಕ್ ಪೋರ್ಸ್ ಡಿಸಿಪಿ ವೈ ವಿ ಎಸ್ ಸುಧೀಂದ್ರ ” ಆರೋಪಿ ಸಿಕಂದರಾಬಾದಿನ ಬೋಳಕಪುರದ ನಿವಾಸಿಯಾಗಿದ್ದು, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಕರ್ನಾಟಕದ ಶೋಲಾಪುರದ ರವಿಕಿರಣ್ ಅವರಿಂದ ಖರೀದಿಸುತ್ತಿದ್ದ. ಇದನ್ನು ಪ್ರತಿ ಕೆಜಿಗೆ 210 ರೂಪಾಯಿಯಂತೆ ಮಾರುತ್ತಿದ್ದ. ಅದರ ಮೇಲೆ ಮಾರುವಂತಿಲ್ಲ ಎನ್ನುವ ಲೇಬಲ್ ಇದ್ದರೂ ಜನರು ಅದನ್ನು ಖರೀದಿಸುತ್ತಿದ್ದರು. ಪನ್ನೀರ್, ಸ್ಪೀಟ್ಸ್ ಮತ್ತು ರೋಡ್ ಸೈಡ್ ಟೀ ಮಾರುವವರು ಇವನಿಂದ ಈ ಅವಧಿ ಮೀರಿದ ಹಾಲಿನ ಪೌಡರ್ ಖರೀದಿಸುತ್ತಿದ್ದರು. ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಅವಧಿ ಮೀರಿದ ಬಳಿಕ ಅಲ್ಲಿಗೆ ಹೋಗಿ ಹೋಯಿತು ಎನ್ನುವುದರ ತನಿಖೆ ನಡೆಯಬೇಕಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ, 2009 ಈ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search