• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅದೇ ಕಾರಣಕ್ಕೆ ಕೇರಳ ಸಿನೆಮಾರಂಗ ತ್ಯಜಿಸಿದೆ ಎಂದ ನಟಿ ಮೀನು ಮುನಿರ್!

Tulunadu News Posted On August 26, 2024
0


0
Shares
  • Share On Facebook
  • Tweet It

ನ್ಯಾಯಮೂರ್ತಿ ಹೇಮಾ ಅವರ ಆಯೋಗ ನೀಡಿದ ವರದಿಯ ಬಳಿಕ ಮಲಯಾಳಂ ಸಿನೆಮಾ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ನ್ಯಾ| ಹೇಮಾ ಅವರು ಕೇರಳ ಮುಖ್ಯಮಂತ್ರಿಯವರಿಗೆ ವರದಿ ನೀಡಿದ ಬೆನ್ನಲ್ಲೇ ಸಿಎಂ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚಿಸಿದ್ದಾರೆ. ಎಸ್ ಐಟಿ ಈಗ ತನಿಖೆಗೆ ಇಳಿಯುತ್ತಿದ್ದಂತೆ ಕೇರಳ ರಾಜ್ಯದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಹಾಗೂ ಕಲಾವಿದರ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
ಇದೀಗ ನಟಿ ಮೀನು ಮುನೀರ್ ಈ ಬಗ್ಗೆ ಮಾತನಾಡಿ ಮಲಯಾಲಂ ಚಿತ್ರರಂಗದ ಖ್ಯಾತನಾಮರಿಂದ ತಾವು ಲೈಂಗಿಕ ಕಿರುಕುಳ ಅನುಭವಿಸಿದ್ದು, ಅದರಲ್ಲಿ ಒಬ್ಬರು ಕೇರಳದ ಶಾಸಕರಾಗಿ ಎರಡು ಬಾರಿ ಚುನಾಯಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮೀನು ಮುನೀರ್ ಕೆಲವರ ಹೆಸರನ್ನು ಉಲ್ಲೇಖಿಸಿದ್ದು ಅವರು ತಮಗೆ ಏನೇನೂ ಮಾಡಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. “ನಾನು ಕೇರಳ ಪೊಲೀಸರಿಗೆ ಈ ಬಗ್ಗೆ ದೂರು ಕೊಡಲಿದ್ದೇನೆ. ನ್ಯಾ. ಹೇಮಾ ಅವರ ವರದಿಯ ಅಂಶಗಳ ಬಗ್ಗೆ ಪೊಲೀಸ್
ಇಲಾಖೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು” ಎಂದು ತಿಳಿಸಿದ್ದಾರೆ.

ಒಬ್ಬರು ನಟರು ಕ್ಯಾಲೆಂಡರ್ (2009) ಹಾಗೂ ನಡಕಾಮೆ ಉಳಕಾಂ (2011) ಚಿತ್ರದ ಶೂಟಿಂಗ್ ಸಮಯದಲ್ಲಿ ಹೋಟೇಲ್ ರೂಂನಲ್ಲಿದ್ದಾಗ ಹಲ್ಲೆ ಮಾಡುವ ಪ್ರಯತ್ನವನ್ನು ಮಾಡಿದ್ದರು ಎಂದು ಮೀನು ಮುನೀರ್ ತಿಳಿಸಿದ್ದಾರೆ. ” ಅವರು ನನ್ನ ಹೋಟೇಲ್ ರೂಂ ಪ್ರವೇಶಿಸಿ ನನ್ನನ್ನು ಹಾಸಿಗೆ ಮೇಲೆ ಎಳೆದು ಹಾಕಿ, ನಾನು ಕೆಲವರನ್ನು ವಿಶೇಷವಾಗಿ ಪರಿಗಣಿಸಬೇಕು” ಎಂದು ತಿಳಿಸಿದರು. ನಂತರ ನಾನು ಆ ಕೋಣೆಯಿಂದ ಹೊರಗೆ ಬಂದೆ ಎಂದು ಹೇಳಿದ್ದಾರೆ. ಇನ್ನೊಂದು ಸಲ ಬೇರೊಬ್ಬ ನಟನೊಂದಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಆ ನಟ ನನ್ನ ಕೋಣೆಗೆ ಮರುದಿನ ರಾತ್ರಿ ಬರುತ್ತೇನೆ ಎಂದು ಹೇಳಿದ್ದು, ನಂತರ ರಾತ್ರಿ ಬಂದು ನನ್ನ ಕೋಣೆಯ ಬಾಗಿಲನ್ನು ಬಡಿಯುತ್ತಿದ್ದ ಎಂದು ಕೂಡ ತಿಳಿಸಿದ್ದಾರೆ.

ಅದೇ ಪ್ರಕಾರ 2008 ರಲ್ಲಿ ನಡೆದ ಘಟನೆಯೊಂದನ್ನು ಹೇಳಿರುವ ಮೀನು ಮುನೀರ್ ಅವರು ” ನಾನು ರಾಜ್ಯದ ರಾಜಧಾನಿಯಲ್ಲಿ ಚಿತ್ರೀಕರಣದಲ್ಲಿರುವಾಗ ಒಂದು ಸಲ ರೆಸ್ಟ್ ರೂಂನಿಂದ ಹೊರಗೆ ಬರುತ್ತಿದ್ದೆ. ಆಗ ನಟನೊಬ್ಬ ಹಿಂದಿನಿಂದ ಬಂದು ಅಪ್ಪಿಕೊಂಡು ಕಿಸ್ ಮಾಡಿದ್ದ. ನಾನು ಅವನನ್ನು ದೂಡಿ ಅಲ್ಲಿಂದ ತಪ್ಪಿಸಿಕೊಂಡಿದ್ದೆ. ಅವನು ನನ್ನನ್ನು ಅವನ ಫ್ಲಾಟಿಗೆ ಆಹ್ವಾನಿಸಿದ್ದ. ಆದರೆ ನಾನು ನಿರಾಕರಿಸಿದ್ದೆ. ನಂತರ ಆ ವಿಷಯ ಅಲ್ಲಿಗೆ ನಿಂತು ಹೋಯಿತು” ಎಂದು ಹೇಳಿದ್ದಾರೆ.

ಇನ್ನು 2013 ರಲ್ಲಿ ಇನ್ನೊಂದು ಘಟನೆ ನಡೆದಿದ್ದು, ಕೇರಳ ಕಲಾವಿದರ ಸಂಘದ ಸದಸ್ಯತ್ವ ಸ್ವೀಕರಿಸಲು ಒಬ್ಬರಿಗೆ ಕರೆ ಮಾಡಿದ್ದೆ. ಅವರು ಅರ್ಜಿ ತುಂಬಲು ಫ್ಲಾಟಿಗೆ ಕರೆದರು. ಅಲ್ಲಿ ಹೋಗಿ ಅರ್ಜಿ ಭರ್ತಿ ಮಾಡುವಾಗ ಹಿಂದಿನಿಂದ ಬಂದು ಕುತ್ತಿಗೆಗೆ ಕಿಸ್ ಮಾಡಿದರು. ನಾನು ಅಲ್ಲಿಂದ ತಕ್ಷಣ ಓಡಿಬಂದೆ. ಅಲ್ಲಿಗೆ ಕಲಾವಿದರ ಸದಸ್ಯತ್ವವೂ ಸಿಗದಂತಾಯಿತು. ಸಾಮಾನ್ಯವಾಗಿ ಮೂರು ಸಿನೆಮಾಗಳಲ್ಲಿ ನಟಿಸಿದ ನಂತರ ಸದಸ್ಯತ್ವ ಸಿಗುತ್ತದೆ. ಆದರೆ ನಾನು ಅವರಿಗೆ ಸಹಕರಿಸದ ಕಾರಣಕ್ಕೆ ಸಿಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಮಲಯಾಲಂ ಚಿತ್ರರಂಗ ತ್ಯಜಿಸಿ ತಮಿಳುನಾಡಿನ ಚೆನೈನಲ್ಲಿ ನೆಲೆಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಅವರು ಹೇಳಿದ್ದಾರೆ. ನನಗೆ ಈಗ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಮೀನು ಮುನೀರ್ ಹೇಳಿದ್ದಾರೆ.

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search