• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಕಮಲ ಹಾಸನ್ ರಾಜಕೀಯ ಎಳಸು ಸಾಬೀತು

TNN Correspondent Posted On September 2, 2017
0


0
Shares
  • Share On Facebook
  • Tweet It

‘ನಾನು ಕೋಟ್ಯಂತರ ಅಭಿಮಾನಿಗಳನ್ನು ನನ್ನ ನಟನೆಯ ಮೂಲಕ ಗಳಿಸಿದ್ದೇನೆ. ಅವರಲ್ಲಿ ಅರ್ಧದಷ್ಟು ಜನರ ಬೆಂಬಲವನ್ನು ರಾಜಕೀಯದಲ್ಲಿ ಪಡೆಯುತ್ತೇನೆ ಎಂಬ ಭರವಸೆ ಇದೆ. ನನ್ನದು ಕೇಸರಿ ಬಣ್ಣ ಅಲ್ಲ.’ ಇದು ಕಮಲ ಹಾಸನ ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಬಳಿಕ ನೀಡಿದ ಹೇಳಿಕೆ. ಇಲ್ಲಿ ಕಮಲ್ ಹಾಸನ್ ಎರಡನ್ನು ಸ್ಪಷ್ಟಪಡಿಸಲು ಯತ್ನಿಸಿದ್ದಾಾರೆ. ಆದರೆ ಅದರಲ್ಲಿ ಯಶಸ್ವಿಯಾಗುವಲ್ಲಿ ವಿಫಲರಾಗಿ, ತಾವೂ ಇನ್ನು ರಾಜಕೀಯದಲ್ಲಿ ಎಳಸು ಎಂಬುದನ್ನು ಸಾಬೀತು ಮಾಡಿದ್ದಾರೆ.

ಒಂದು ತಾನು ಬಿಜೆಪಿ, ಆರ್‌ಎಸ್‌ಎಸ್ ಜತೆ ಸೇರುವುದಿಲ್ಲ, ಎರಡನೇಯದಾಗಿ ನನ್ನ ಅಭಿಮಾನಿಗಳು ನನ್ನ ಜತೆ ರಾಜಕೀಯದಲ್ಲೂ ಇರುತ್ತಾರೆ ಎಂಬುದನ್ನು. ಆದರೆ ಅವಕಾಶ ಸಿಕ್ಕಾಗಲೆಲ್ಲಾಾ ರಾಜಕಾರಣಿಗಳ ಮತ್ತು ಅಧಿಕಾರ, ನೀತಿ ನಿಯಮಗಳ ಕುರಿತು ಟೀಕೆ, ವಿಮರ್ಶೆ ಮಾಡುತ್ತಿದ್ದ ಕಮಲ್ ಹಾಸನ್ ‘ತಮ್ಮ ಅಭಿಮಾನಿಗಳಲ್ಲಿ ಅರ್ಧದಷ್ಟು ಅಭಿಮಾನಿಗಳ ಬೆಂಬಲ ರಾಜಕೀಯದಲ್ಲಿ ಪಡೆಯುತ್ತೇನೆ ಎಂಬುದರ ಹಿಂದೆ, ತಾವೂ ಇಂದು ರಾಜಕೀಯದಲ್ಲಿ ಅಪ್ರಸ್ತುತ ಯೋಚನೆಯನ್ನು ಬಿತ್ತುತ್ತಿದ್ದೇನೆ, ಜತೆಗೆ ನಾನು ಮೋದಿ, ಬಿಜೆಪಿ ಜತೆ ಹೋಗುವುದಿಲ್ಲ ಎಂದು ಕಂಠಶೋಷಣೆ ಮಾಡಿಕೊಂಡಿದ್ದಾರೆ. ಹೊರತು ಇದರಲ್ಲಿ ಅವರು ಸಾಧಿಸಿದ್ದು ಶೂನ್ಯ.

ಥೇಟರ್‌ನಲ್ಲಿ ಸಿಳ್ಳೆ ಹೊಡೆಯುವ, ನಟನೆಗೆ ಜೈ ಕಾರ ಹಾಕುವ ಜನರು,  ವೋಟು ಹಾಕುತ್ತಾರೆ ಎಂದು, ಅದರಲ್ಲೂ ಒಂದು ಸ್ಪಷ್ಟ ಗುರಿ, ನಿರ್ದೇಶನವಿಲ್ಲದೇ ಬೆಂಬಲ ನೀಡುತ್ತಾರೆ ಎಂದು ಹೇಳುತ್ತಾ ತಿರುಗಾಡುವ ಕಮಲ್ ಹಾಸನ್‌ಗೆ ಜನ ಬೆಂಬಲಿಸುತ್ತಾರೆ ಎಂಬುದು ವಾಸ್ತವಕ್ಕೆೆ ಬಹು ದೂರ.

62 ವಯಸ್ಸಿನ ಕಮಲ್ ಹಾಸನ್ ಹಲವು ದಿನಗಳಿಂದ ರಾಜಕೀಯ ಸೇರ್ಪಡೆಯಾಗುವ ಮಾತು ಅವರ ವಯಸ್ಸಿನಷ್ಟೇ ಹಳತಾಗಿದೆ. ವೃತ್ತಿ ಜೀವನದ ನಿವೃತ್ತಿಯ ಹೊತ್ತಿನಲ್ಲಿ ಅತ್ತ ಡಿಎಂಕೆ ಸಮಾವೇಶದಲ್ಲಿ ಭಾಗಿಯಾಗುವುದು, ಇತ್ತ ಕಮ್ಯುನಿಸ್ಟ್‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗುವುದು ಮಾಡುತ್ತಾ ತಮಗೆ ಒಂದು ಸ್ಪಷ್ಟ ದಿಕ್ಕು ದಿಸೆ ಇಲ್ಲ ಎಂಬುದು ಪದೇಪದೆ ಸಾಬೀತು ಮಾಡುತ್ತಿದ್ದಾರೆ.

ಮಂಜುನಾಥ್, ಎಸ್.ಎಂ,

ಖಾಸಗಿ ಉದ್ಯೋಗಿ ಮೈಸೂರು.

 

 

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search