• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಕಮಲ ಹಾಸನ್ ರಾಜಕೀಯ ಎಳಸು ಸಾಬೀತು

TNN Correspondent Posted On September 2, 2017
0


0
Shares
  • Share On Facebook
  • Tweet It

‘ನಾನು ಕೋಟ್ಯಂತರ ಅಭಿಮಾನಿಗಳನ್ನು ನನ್ನ ನಟನೆಯ ಮೂಲಕ ಗಳಿಸಿದ್ದೇನೆ. ಅವರಲ್ಲಿ ಅರ್ಧದಷ್ಟು ಜನರ ಬೆಂಬಲವನ್ನು ರಾಜಕೀಯದಲ್ಲಿ ಪಡೆಯುತ್ತೇನೆ ಎಂಬ ಭರವಸೆ ಇದೆ. ನನ್ನದು ಕೇಸರಿ ಬಣ್ಣ ಅಲ್ಲ.’ ಇದು ಕಮಲ ಹಾಸನ ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಬಳಿಕ ನೀಡಿದ ಹೇಳಿಕೆ. ಇಲ್ಲಿ ಕಮಲ್ ಹಾಸನ್ ಎರಡನ್ನು ಸ್ಪಷ್ಟಪಡಿಸಲು ಯತ್ನಿಸಿದ್ದಾಾರೆ. ಆದರೆ ಅದರಲ್ಲಿ ಯಶಸ್ವಿಯಾಗುವಲ್ಲಿ ವಿಫಲರಾಗಿ, ತಾವೂ ಇನ್ನು ರಾಜಕೀಯದಲ್ಲಿ ಎಳಸು ಎಂಬುದನ್ನು ಸಾಬೀತು ಮಾಡಿದ್ದಾರೆ.

ಒಂದು ತಾನು ಬಿಜೆಪಿ, ಆರ್‌ಎಸ್‌ಎಸ್ ಜತೆ ಸೇರುವುದಿಲ್ಲ, ಎರಡನೇಯದಾಗಿ ನನ್ನ ಅಭಿಮಾನಿಗಳು ನನ್ನ ಜತೆ ರಾಜಕೀಯದಲ್ಲೂ ಇರುತ್ತಾರೆ ಎಂಬುದನ್ನು. ಆದರೆ ಅವಕಾಶ ಸಿಕ್ಕಾಗಲೆಲ್ಲಾಾ ರಾಜಕಾರಣಿಗಳ ಮತ್ತು ಅಧಿಕಾರ, ನೀತಿ ನಿಯಮಗಳ ಕುರಿತು ಟೀಕೆ, ವಿಮರ್ಶೆ ಮಾಡುತ್ತಿದ್ದ ಕಮಲ್ ಹಾಸನ್ ‘ತಮ್ಮ ಅಭಿಮಾನಿಗಳಲ್ಲಿ ಅರ್ಧದಷ್ಟು ಅಭಿಮಾನಿಗಳ ಬೆಂಬಲ ರಾಜಕೀಯದಲ್ಲಿ ಪಡೆಯುತ್ತೇನೆ ಎಂಬುದರ ಹಿಂದೆ, ತಾವೂ ಇಂದು ರಾಜಕೀಯದಲ್ಲಿ ಅಪ್ರಸ್ತುತ ಯೋಚನೆಯನ್ನು ಬಿತ್ತುತ್ತಿದ್ದೇನೆ, ಜತೆಗೆ ನಾನು ಮೋದಿ, ಬಿಜೆಪಿ ಜತೆ ಹೋಗುವುದಿಲ್ಲ ಎಂದು ಕಂಠಶೋಷಣೆ ಮಾಡಿಕೊಂಡಿದ್ದಾರೆ. ಹೊರತು ಇದರಲ್ಲಿ ಅವರು ಸಾಧಿಸಿದ್ದು ಶೂನ್ಯ.

ಥೇಟರ್‌ನಲ್ಲಿ ಸಿಳ್ಳೆ ಹೊಡೆಯುವ, ನಟನೆಗೆ ಜೈ ಕಾರ ಹಾಕುವ ಜನರು,  ವೋಟು ಹಾಕುತ್ತಾರೆ ಎಂದು, ಅದರಲ್ಲೂ ಒಂದು ಸ್ಪಷ್ಟ ಗುರಿ, ನಿರ್ದೇಶನವಿಲ್ಲದೇ ಬೆಂಬಲ ನೀಡುತ್ತಾರೆ ಎಂದು ಹೇಳುತ್ತಾ ತಿರುಗಾಡುವ ಕಮಲ್ ಹಾಸನ್‌ಗೆ ಜನ ಬೆಂಬಲಿಸುತ್ತಾರೆ ಎಂಬುದು ವಾಸ್ತವಕ್ಕೆೆ ಬಹು ದೂರ.

62 ವಯಸ್ಸಿನ ಕಮಲ್ ಹಾಸನ್ ಹಲವು ದಿನಗಳಿಂದ ರಾಜಕೀಯ ಸೇರ್ಪಡೆಯಾಗುವ ಮಾತು ಅವರ ವಯಸ್ಸಿನಷ್ಟೇ ಹಳತಾಗಿದೆ. ವೃತ್ತಿ ಜೀವನದ ನಿವೃತ್ತಿಯ ಹೊತ್ತಿನಲ್ಲಿ ಅತ್ತ ಡಿಎಂಕೆ ಸಮಾವೇಶದಲ್ಲಿ ಭಾಗಿಯಾಗುವುದು, ಇತ್ತ ಕಮ್ಯುನಿಸ್ಟ್‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗುವುದು ಮಾಡುತ್ತಾ ತಮಗೆ ಒಂದು ಸ್ಪಷ್ಟ ದಿಕ್ಕು ದಿಸೆ ಇಲ್ಲ ಎಂಬುದು ಪದೇಪದೆ ಸಾಬೀತು ಮಾಡುತ್ತಿದ್ದಾರೆ.

ಮಂಜುನಾಥ್, ಎಸ್.ಎಂ,

ಖಾಸಗಿ ಉದ್ಯೋಗಿ ಮೈಸೂರು.

 

 

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search