• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಖಾಲಿಸ್ತಾನಿ ಉಗ್ರ ನಿಜ್ಜರ್ ಆಪ್ತ ಕೆನಡಾದಲ್ಲಿ ಅರೆಸ್ಟ್ !

Tulunadu News Posted On November 11, 2024
0


0
Shares
  • Share On Facebook
  • Tweet It

ಅಮೇರಿಕಾದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಕೆನಡಾದಲ್ಲಿಯೂ ಅಲ್ಲಿನ ಆಡಳಿತಗಾರರ ಮನಸ್ಥಿತಿ ಬದಲಾದಂತೆ ಕಾಣುತ್ತಿದೆ. ಇಲ್ಲಿಯ ತನಕ ಖಾಲಿಸ್ತಾನಿ ಉಗ್ರರ ಪೋಷಕರಂತೆ ಮಾತನಾಡುತ್ತಿದ್ದ ಕೆನಡಾ ಪ್ರಧಾನಿ ಈಗ ಕೊಂಚ ಬದಲಾದಂತೆ ಕಾಣುತ್ತಿದ್ದಾರೆ. ಕೆನಡಾದ ಪೊಲೀಸರು ಅರ್ಷದೀಪ್ ಸಿಂಗ್ ಆಲಿಯಾಸ್ ಅರ್ಷ್ ಡಲ್ಲಾನನ್ನು ಬಂಧಿಸಿದ್ದಾರೆ. ಡಲ್ಲಾ ಭಾರತಕ್ಕೆ ಬೇಕಿರುವ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದು, ಖಾಲಿಸ್ತಾನದ ಭಯೋತ್ಪಾದಕ ನಿಜ್ಜಾರ್ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದ. ಕಳೆದ ತಿಂಗಳು ಅಕ್ಟೋಬರ್ 28 ರಂದು ಮಿಲ್ಟನ್ ನಲ್ಲಿ ನಡೆದ ಒಂದು ಶೂಟೌಟ್ ನಲ್ಲಿ ಈತ ಭಾಗಿಯಾಗಿದ್ದಾನೆ ಎನ್ನುವ ಅನುಮಾನದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದೇ ಸಪ್ಟೆಂಬರ್ ನಲ್ಲಿ ಪಂಜಾಬಿನ ಮೊಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಬಲ್ಜಿಂದರ್ ಸಿಂಗ್ ಬಲ್ಲಿಯವರ ಕೊಲೆಯ ಹೊಣೆಯನ್ನು ಡಲ್ಲಾ ವಹಿಸಿಕೊಂಡಿದ್ದ. ಇನ್ನು ಸಿಖ್ ಹೋರಾಟಗಾರ ಗುರುಪ್ರೀತ್ ಸಿಂಗ್ ಹರಿ ಹತ್ಯಾ ಪ್ರಕರಣದಲ್ಲಿ ಡಲ್ಲಾ ಆಪ್ತರನ್ನು ಬಂಧಿಸಲಾಗಿದೆ. ಇನ್ನು ಜಸ್ವಂತ್ ಗಿಲ್ ಎನ್ನುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಜೈಲುಹಕ್ಕಿಯ ಹತ್ಯಾ ಪ್ರಕರಣದಲ್ಲಿಯೂ ಡಲ್ಲಾ ಸೂಚನೆ ಮೇರೆಗೆ ನವೆಂಬರ್ ನಲ್ಲಿ ಹತ್ಯೆಗೈಯಲಾಗಿತ್ತು ಎಂದು ಹೇಳಲಾಗುತ್ತದೆ. ನಿಜ್ಜರ್ ಆಪ್ತರಲ್ಲಿ ಕೆನಡಾ ಪೊಲೀಸರು ಇತ್ತೀಚಿನ ದಿನಗಳಲ್ಲಿ ಬಂಧಿಸಿದ ಎರಡನೇ ಭಯೋತ್ಪಾದ ಡಲ್ಲಾ. ನವೆಂಬರ್ 8 ರಂದು ಬ್ರಂಟನ್ ನಿವಾಸಿ ಇಂದ್ರಜಿತ್ ಗೋಸಾಲ್ ಎನ್ನುವವನ್ನು ಹಲ್ಲೆ ಆರೋಪದಡಿ ಬಂಧಿಸಲಾಗಿತ್ತು. ನಿಜ್ಜರ್ ಸಾವಿನ ನಂತರ ಅವನ ಸ್ಥಾನವನ್ನು ಗೋಸಾಲ್ ತುಂಬಿದ್ದ ಎಂದು ಹೇಳಲಾಗುತ್ತದೆ.
ಸದ್ಯ ಖಾಲಿಸ್ಥಾನದ ಟೈಗರ್ ಫೋರ್ಸಿನ ಉತ್ತರಾಧಿಕಾರಿಯಾಗಿ ಡಲ್ಲಾ ಕಾರ್ಯ ನಿರ್ವಹಿಸುತ್ತಿದ್ದ.
ಅರ್ಷಾ ಡಲ್ಲಾ, ರಾಷ್ಟ್ರೀಯ ತನಿಖಾ ದಳದ ವಾಟೆಂಡ್ ಪಟ್ಟಿಯಲ್ಲಿ ಇದ್ದಾನೆ. ಪಂಜಾಬಿನಲ್ಲಿ ಇತನ ಅಣತಿಯ ಮೇಲೆ ಕ್ರಿಮಿನಲ್ ಚಟುವಟಿಕೆ ನಡೆಸುವ ಕ್ರಿಮಿನಲ್ ಗಳ ತಂಡ ಇರುವುದರಿಂದ ಇವನನ್ನು ಬಂಧಿಸಿದರೆ ಅದು ಕೂಡ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಪೊಲೀಸರ ಅಭಿಪ್ರಾಯ. ಕೆನಡಾದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳ ಒಳಗೆ ಡಲ್ಲಾ ಬಂಧಿತನಾಗಿದ್ದಾನೆ.  ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ನಿಜ್ಜಾರ್ ನನ್ನು ಭಾರತದ ಸರಕಾರದ ಪ್ರಚೋದನೆಯಿಂದಲೇ ಹತ್ಯೆ ಮಾಡಲಾಗಿದೆ ಎಂದು ಕೆನಡಾ ಪ್ರಧಾನಿ ಹೇಳಿ ಭಾರತ ಅದನ್ನು ನಿರಾಕರಿಸಿತ್ತು. ನಂತರ ಕೆನಡಾ ತನ್ನ ಹೇಳಿಕೆಯ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲದೇ ಇದ್ದ ಕಾರಣ ತನ್ನ ಸಾಕ್ಷ್ಯದಿಂದ ಹಿಂದೆ ಸರಿದಿತ್ತು.
0
Shares
  • Share On Facebook
  • Tweet It




Trending Now
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
  • Popular Posts

    • 1
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 2
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 3
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 4
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 5
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ

  • Privacy Policy
  • Contact
© Tulunadu Infomedia.

Press enter/return to begin your search