• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಶಿವಾಜಿ ಮತ್ತು ಮಲ್ಲಮ್ಮ ವಿಷಯದಲ್ಲಿ ಸಿನೆಮಾ ಪ್ರಿಯರ ನಡುವೆ ಕಾಳಗ ಯಾಕೆ?

Tulunadu News Posted On December 4, 2024
0


0
Shares
  • Share On Facebook
  • Tweet It

ರಿಷಬ್ ಶೆಟ್ಟಿಯವರು ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾದಲ್ಲಿ ಅಭಿನಯಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುವ ವಿಷಯ ಬಹಿರಂಗವಾಗುತ್ತಲೇ ಇದಕ್ಕೆ ಕರ್ನಾಟಕದಲ್ಲಿ ಸಿನೆಮಾ ಪ್ರಿಯರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಅರಸರ, ಮಹಾನ್ ನಾಯಕರ ಕಥೆಯಾಧಾರಿತ ಸಿನೆಮಾಗಳಲ್ಲಿ ನಟಿಸಲು ಆದ್ಯತೆ ನೀಡುವುದು ಬಿಟ್ಟು ಹೊರಗಿನ ರಾಜ್ಯಗಳ ಅರಸರ ಸಿನೆಮಾಗಳಲ್ಲಿ ನಟಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ರಿಷಬ್ ಶೆಟ್ಟಿಯವರನ್ನು ಕನ್ನಡ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಕಡೆ ಇರುವ ಹಾಗೆ ಚಿತ್ರರಂಗದಲ್ಲಿಯೂ ಒಳಗೊಳಗೆ ಮತ್ಸರದ ಬೀಜ ಇದ್ದೇ ಇರುತ್ತದೆ. ಆದ್ದರಿಂದ ಒಬ್ಬರು ಬೆಳೆಯಲು ಹೊರಟಾಗ ಅವರನ್ನು ಟೀಕಿಸಿ, ಕಾಲು ಎಳೆದು ಸಂತೋಷಪಡುವ ವಿಘ್ನ ಸಂತೋಷಿಗಳು ಇದ್ದೇ ಇರುತ್ತಾರೆ. ಈಗ ಬಹುದೊಡ್ಡ ಬಜೆಟ್ ಚಿತ್ರ ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾ ಬಾಲಿವುಡ್ ಅಂಗಣದಲ್ಲಿ ನಿರ್ಮಾಣವಾಗಲಿದೆ ಮತ್ತು ಅದರಲ್ಲಿ ಕನ್ನಡಿಗ ಹೀರೋ ಎಂದ ಕೂಡಲೇ ಇದು ಒಂದಿಷ್ಟು ಹೆಚ್ಚಿಗೆ ಸೋಶಿಯಲ್ ಮೀಡಿಯಾ ಸಂಘರ್ಷಕ್ಕೆ ಕಾರಣವಾಗಿದೆ. ಯಾವುದೇ ರೀತಿಯ ವಿರೋಧಗಳು ನಿಜಕ್ಕೂ ಒಳ್ಳೆಯದೇ. ಯಾಕೆಂದರೆ ಇದರಿಂದ ಸತ್ಯ ಹೊರಗೆ ಬರಲು ಅನುಕೂಲವಾಗುತ್ತದೆ.

ಅಷ್ಟಕ್ಕೂ ಶಿವಾಜಿ ಮಹಾರಾಜರಿಗೂ ಕನ್ನಡಕ್ಕೂ ಬಾಂಧವ್ಯ ಇತ್ತಾ? ಇತ್ತು ಎನ್ನುವುದಕ್ಕೆ ಒಂದು ದೃಷ್ಣಾಂತವನ್ನು ನೀಡಬಹುದು. ಆ ಕಥೆಯನ್ನು ಓದುವಾಗಲೇ ಮನಸ್ಸು ಆದ್ರವಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ದಂಡಯಾತ್ರೆ ಆರಂಭಿಸಿದ ಶಿವಾಜಿ ಅದರಲ್ಲಿ ಯಶಸ್ವಿಗೊಂಡು ತಮ್ಮ ರಾಜಧಾನಿಗೆ ಮರಳುವಾಗ ಬೆಳಗಾವಿಯಲ್ಲಿ ಅವನ ಸೈನಿಕರಿಗೆ ಈಶಪ್ರಭು ಎನ್ನುವ ರಾಜನ ಸಾಮ್ರಾಜ್ಯ ಎದುರಾಗುತ್ತದೆ. ಈಶಪ್ರಭುವಿಗೆ ಶಿವಾಜಿ ಮೇಲೆ ಗೌರವ ಇತ್ತು. ಆದರೆ ಶಿವಾಜಿ ಮಹಾರಾಜರ ಸೇನಾಧಿಪತಿ ಸಕುಜಿ ತನ್ನ ಸೈನ್ಯದೊಂದಿಗೆ ಈಶಪ್ರಭುವಿನ ಮೇಲೆ ದಾಳಿ ಮಾಡುತ್ತಾನೆ. ಯುದ್ಧರಂಗದಲ್ಲಿ ಈಶಪ್ರಭು ವೀರ ಮರಣ ಅಪ್ಪುತ್ತಾರೆ. ಪತಿಯನ್ನು ಕಳೆದುಕೊಂಡ ರಾಣಿ ಮಲ್ಲಮ್ಮ ಕೆಚ್ಚೆದೆಯಿಂದ ಯುದ್ಧ ಮಾಡಿ ಸೆರೆಯಾಗಿ ಶಿವಾಜಿಯ ಎದುರು ಬಂದು ನಿಲ್ಲಬೇಕಾಗುತ್ತದೆ. ಒಟ್ಟು 27 ದಿನ ನಡೆದ ಯುದ್ಧದ ವಿಷಯ, ಮಲ್ಲಮ್ಮಳ ಶೌರ್ಯ ಕೇಳಿ ತಿಳಿದುಕೊಂಡ ಶಿವಾಜಿ ತಮ್ಮ ಸೇನಾಧಿಪತಿ ಸಕುಜಿಯ ಮೇಲೆ ಕೋಪಗೊಂಡು ಆತನ ಕಣ್ಣನೇ ಕಿತ್ತು ಆನೆಯ ಕಾಲಿನ ಕೆಳಗೆ ಹಾಕಿ ಸಾಯಿಸಿದ ಎಂದು ಹೇಳಲಾಗುತ್ತದೆ.

ಮಲ್ಲಮ್ಮಳನ್ನು ತಂಗಿಯಾಗಿ ಸ್ವೀಕರಿಸಿದ ಶಿವಾಜಿ ಈ ಯುದ್ಧದಿಂದಾಗಿ ಹಾನಿಗೊಳಗಾದ ಬೆಳವಾಡಿಯ ಕೋಟೆಯ ಪುನರ್ ನಿರ್ಮಾಣದ ವೆಚ್ಚವನ್ನು ತಾವೇ ಭರಿಸಿದ್ದಾರೆ. ರಾಣಿ ಮಲ್ಲಮ್ಮ ಅಣ್ಣ ತಂಗಿಯ ದ್ಯೋತಕವಾಗಿ ಶಿವಾಜಿ ಮಹಾರಾಜರಿಗೆ ರಕ್ಷೆ ಕಟ್ಟುತ್ತಾರೆ. ನಂತರ ಮಲ್ಲಮ್ಮಳ ಮಗ ನಾಗಭೂಷಣನ ಪಟ್ಟಾಭಿಷೇಕವನ್ನು ಖುದ್ದು ಶಿವಾಜಿಯೇ ನಿಂತು ಮಾಡಿಸುತ್ತಾರೆ. ನಂತರ ಬೆಳವಾಡಿ ಮತ್ತು ಮರಾಠಾ ರಾಜಮನೆತನಗಳ ನಡುವೆ ಗಾಢವಾದ ಸ್ವರಾಜ್ಯ ರಾಷ್ಟ್ರ ನಿರ್ಮಾಣ ಸಂಕಲ್ಪ ಬೆಳೆಯುತ್ತದೆ.
ಹೀಗೆ ಶಿವಾಜಿ ಮಹಾರಾಜರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇತ್ತು. ಹೀಗಿರುವಾಗ ನಾವು ಈ ವಿಷಯದಲ್ಲಿ ಪರಸ್ಪರ ಅಪನಂಬಿಕೆ ಹೊಂದುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಈಗ ಇರುವ ಪ್ರಶ್ನೆ.

0
Shares
  • Share On Facebook
  • Tweet It




Trending Now
ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
Tulunadu News February 27, 2026
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
Tulunadu News February 25, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
  • Popular Posts

    • 1
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 2
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 3
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • 4
      ಕೇರಳ ಇನ್ನು ಮುಂದೆ ಕೇರಳಂ!

  • Privacy Policy
  • Contact
© Tulunadu Infomedia.

Press enter/return to begin your search