• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತದಲ್ಲಿ ಇಳಿಮುಖ ಕಾಣುತ್ತಿರುವ ಎಟಿಎಂಗಳ ಸಂಖ್ಯೆ! ಈಗ ಎಲ್ಲಿಗೆ ಬಂದು ತಲುಪಿದೆ ಗೊತ್ತಾ?

Tulunadu News Posted On December 4, 2024
0


0
Shares
  • Share On Facebook
  • Tweet It

ಭಾರತ ಈಗ ಆಧುನಿಕ ತಂತ್ರಜ್ಞಾನದ ವಿಷಯದಲ್ಲಿ ಮಹತ್ತರ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕ ವ್ಯವಹಾರಗಳು ಈಗ ಬಹುತೇಕ ಯುಪಿಐ ಮೂಲಕವೇ ನಡೆಯುತ್ತಿರುವುದರಿಂದ ಜನರು ಬ್ಯಾಂಕಿಗೆ ಮತ್ತು ಎಟಿಎಂಗಳಿಗೆ ಬರುವುದು ಕಡಿಮೆಯಾಗುತ್ತಲೇ ಇದೆ. ಒಂದು ಕಾಲದಲ್ಲಿ ಜನರು ಹಣ ತುಂಬಲು ಮತ್ತು ಡ್ರಾ ಮಾಡಲು ಪ್ರತಿಯೊಂದಕ್ಕೂ ಬ್ಯಾಂಕುಗಳನ್ನೇ ಆಶ್ರಯಿಸಬೇಕಾಗಿತ್ತು. ಆದರೆ ಕಾಲಕ್ರಮೇಣ ಮೂರು ದಶಕಗಳಿಂದ ಬ್ಯಾಂಕುಗಳ ಸ್ಥಾನವನ್ನು ಹೆಚ್ಚುಕಡಿಮೆ ಎಟಿಎಂಗಳು ತುಂಬಿದ್ದವು. ದಿನದ 24 ಗಂಟೆಯೂ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುವುದು, ಡಿಪಾಸಿಟ್ ಮಾಡುವುದು ಎಲ್ಲವೂ ಸಾಧ್ಯವಾಗುತ್ತಿದ್ದ ಕಾರಣ ಜನರಿಗೂ ಅನುಕೂಲವಾಗುತ್ತಿತ್ತು.

ಆದರೆ ಅದರ ನಂತರ ಈ ದಶಕದಲ್ಲಿ ಎಟಿಎಂ ಸ್ಥಾನವನ್ನು ಯುಪಿಐ ತುಂಬುತ್ತಿವೆ. ಇಲ್ಲಿ ಹಾರ್ಡ್ ಕ್ಯಾಶಿನ ವಿಷಯವೇ ಇಲ್ಲ. ಚಿಕ್ಕಪುಟ್ಟ ಗೂಡಂಗಡಿಗಳಿಂದ ಹಿಡಿದು ಮಾಲ್ ತನಕ ಯುಪಿಐ ಇರುವುದರಿಂದ ಹಣವನ್ನು ಪರಸ್ಪರ ವಿಲೇವಾರಿ ಮಾಡಲು ಸುಲಭ ಮತ್ತು ಹೊತ್ತುಕೊಂಡು ಹೋಗುವ ಕೆಲಸವೂ ಇರುವುದಿಲ್ಲ. ಒಂದು ಮೊಬೈಲ್ ಫೋನಿನೊಳಗೆ ನಿಮ್ಮ ಬ್ಯಾಂಕು ಬಂದು ಕುಳಿತುಕೊಂಡಂತೆ ಆಗಿದೆ. ಈ ಹಂತದಲ್ಲಿ ಜನರು ಎಟಿಎಂ ಗಳಿಗೆ ಮೊರೆ ಹೋಗುವುದು ಕಡಿಮೆಯಾಗಿದೆ. ಇದರಿಂದ ಏನಾಗಲಿದೆ?

ಒಂದು ಕಾಲದಲ್ಲಿ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಎಟಿಎಂ ಕ್ರಮೇಣ ಅರೆನಗರಗಳಿಗೂ, ನಂತರ ಗ್ರಾಮೀಣ ಭಾಗಗಳಿಗೂ ತಲುಪಿತ್ತು. ಆದರೆ ಒಂದು ಎಟಿಎಂ ಗೂಡನ್ನು ಪ್ರತಿ ತಿಂಗಳು ನಿರ್ವಹಣೆ ಮಾಡಲು ಸಾಕಷ್ಟು ಖರ್ಚು ಬರುತ್ತದೆ. ವಿದ್ಯುತ್, ಸ್ವಚ್ಚತೆ, ಸ್ಟೇಶನರಿ, ಹಣ ನಿರ್ವಹಣೆ ಮಾಡುವ ಕಂಪೆನಿಯ ಹೊರಗುತ್ತಿಗೆ, ವಾಚಮೆನ್ ಹೀಗೆ ವಿವಿಧ ಹೊರೆ ಬ್ಯಾಂಕುಗಳಿಗೆ ತಗಲುವುದರಿಂದ ಅದನ್ನು ತಪ್ಪಿಸಲು ಬ್ಯಾಂಕುಗಳು ತಮ್ಮ ಎಟಿಎಂ ಸಂಖ್ಯೆಯನ್ನು ಇಳಿಸುವ ತಂತ್ರಗಳನ್ನು ರೂಪಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ 2023 ರ ಸೆಪ್ಟೆಂಬರ್ ನಲ್ಲಿ ಸುಮಾರು 2,19,000 ಇದ್ದ ಎಟಿಎಂಗಳ ಸಂಖ್ಯೆ ಮರುವರ್ಷ 2024 ರ ಸೆಪ್ಟೆಂಬರ್ ನಲ್ಲಿ 2,15,000 ಕ್ಕೆ ಇಳಿದಿದೆ. ಒಟ್ಟಿನಲ್ಲಿ ಹೊಸ ತಂತ್ರಜ್ಞಾನಗಳು ಬಂದಂತೆಲ್ಲ ಹಿಂದಿನ ಟೆಕ್ನಾಲಜಿಗಳು ಹೇಗೆ ಬದಿಗೆ ಸರಿಯುತ್ತವೆ ಎನ್ನುವುದಕ್ಕೆ ಎಟಿಎಂ ತಾಜಾ ಉದಾಹರಣೆ. ಮುಂದಿನ ಕೆಲವು ವರ್ಷಗಳ ಇದರ ಸಂಖ್ಯೆ ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ.

0
Shares
  • Share On Facebook
  • Tweet It




Trending Now
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
  • Popular Posts

    • 1
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 2
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search