• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾನೂನಿನ ಕುಣಿಕೆಯಿಂದ ಸುಲಭವಾಗಿ ಪಾರಾದ ಕಾಗೆ ಬಿರಿಯಾನಿ ದಂಪತಿ!

Tulunadu News Posted On December 24, 2024
0


0
Shares
  • Share On Facebook
  • Tweet It

ತಮಿಳುನಾಡಿನಲ್ಲಿ ತಿರುವಳ್ಳೂರು ಎನ್ನುವ ಪ್ರದೇಶದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಹೋಟೇಲೊಂದರಲ್ಲಿ ಬಿರಿಯಾನಿ ತಯಾರಿಸಲು ಕಾಗೆಗಳ ಮಾಂಸ ಬಳಸಲಾಗುತ್ತಿತ್ತು ಎಂಬ ಸಂಶಯ ಬಂದ ಕಾರಣ ಅರಣ್ಯಾಧಿಕಾರಿಗಳು ಹೋಟೇಲಿನ ಮೇಲೆ ದಾಳಿ ಮಾಡಿದ್ದಾರೆ. ಆಗ ಅಲ್ಲಿ ಬಿರಿಯಾನಿ ತಯಾರಾಗುತ್ತಿತ್ತು. ಬಿರಿಯಾನಿಗೆ ಏನು ಹಾಕುತ್ತಿದ್ದೀರಿ ಎಂದು ಅಧಿಕಾರಿಗಳು ಕೇಳಿದ್ದಾರೆ. ಅಲ್ಲಿ ಒಳಗೆ ನೋಡಿದರೆ ಅರಣ್ಯಾಧಿಕಾರಿಗಳಿಗೆ ಆಶ್ಚರ್ಯವಾಗಿದೆ. ಏಕೆಂದರೆ ಅಲ್ಲಿ ಕೋಳಿಗಳು ಇರಬೇಕಾದ ಜಾಗದಲ್ಲಿ ಕಾಗೆಗಳು ಇದ್ದವು. ತಕ್ಷಣ ಅಧಿಕಾರಿಗಳು ಇವರನ್ನು ಬಂಧಿಸಿದ್ದಾರೆ.
ಆದರೆ ಕಾನೂನಿನಲ್ಲಿ ಕಾಗೆಗಳನ್ನು ಕೊಂದರೆ ಶಿಕ್ಷೆ ಏನು?
ಏಕೆಂದರೆ 1972 ರ ಅರಣ್ಯ ಇಲಾಖೆ ಸಂರಕ್ಷಣಾ ಕಾಯ್ದೆಯಡಿ ಕಾಗೆಗಳನ್ನು ಕೀಟಗಳೆಂದು ವರ್ಗೀಕರಿಸಲಾಗಿದೆ. ಕೀಟಗಳನ್ನು ಕೊಂದರೆ ಶಿಕ್ಷೆ ಏನು ಎಂದು ಹೇಳಲಾಗಿಲ್ಲ. ಪರಿಣಾಮವಾಗಿ ರಮೇಶ್ ಮತ್ತು ಭೂಚಮ್ಮ ಅವರನ್ನು ಬಂಧಿಸದೇ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.
ಕಾಗೆ ಮಾಂಸ ಸೇವಿಸುವುದರಿಂದ ತಿನ್ನುವವರಿಗೆ ಏನಾದರೂ ಅಪಾಯ ಆಗುತ್ತದೆಯೋ ಇಲ್ವೋ ಬೇರೆ ವಿಷಯ. ಆದರೆ ಇದರಿಂದ ಪರಿಸರದ ಮೇಲೆ ಪ್ರಭಾವ ಬೀಳುವುದಂತೂ ಖಂಡಿತ. ಯಾಕೆಂದರೆ ಪ್ರಕೃತಿಯಲ್ಲಿ ಕಾಗೆಗಳ ಸಂತತಿ ಕಡಿಮೆಯಾಗುತ್ತಾ ಇದೆ. ಹೀಗೆ ಒಂದೊಂದೇ ಪಕ್ಷಿಗಳು ಅಳಿವಿನಂಚಿನತ್ತ ಸಾಗಿದರೆ ಆಗ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಮಾನವನ ಅವಶ್ಯಕತೆಗಳು ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸೂಕ್ಷ್ಮತೆಯ ಪ್ರಶ್ನೆಯಾಗಿರುವ ಈ ಪಕ್ಷಿಗಳ ಉಳಿವಿಗಾಗಿ ಅವುಗಳನ್ನು ಕೊಲ್ಲುವುದು ಸರಿಯಲ್ಲ.
ಸದ್ಯ ಆರೋಪಿಗಳ ವಶದಲ್ಲಿದ್ದ 11 ಕಾಗೆಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯ ತನಕ ದನ, ನಾಯಿ ಬಿರಿಯಾನಿಗಳ ನಡುವೆ ಕಾಗೆ ಬಿರಿಯಾನಿಯೂ ಸೇರಿಕೊಂಡು ಆ ಹೋಟೇಲಿನಲ್ಲಿ ಬಿರಿಯಾನಿ ತಿಂದವರ ಪಾಡು ಹೇಗಿದೆಯೋ ದೇವರಿಗೆ ಗೊತ್ತು.
0
Shares
  • Share On Facebook
  • Tweet It




Trending Now
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
Tulunadu News October 21, 2025
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
  • Popular Posts

    • 1
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search